ಚಂಡೀಗಡಕ್ಕೆ ದಂಡೆತ್ತಿ ಹೋದ RCB; ಇವತ್ತು ಇಬ್ಬರು ಸ್ಟಾರ್​​ ಸಿಡಿದೆದ್ರೆ ಗೆಲುವು ನಮ್ಮದೇ..!

author-image
Ganesh
Updated On
RCB vs PBKS: ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮೊದಲೇ ಶಾಕಿಂಗ್ ನ್ಯೂಸ್..!
Advertisment
  • RCB vs PBKS ರಿವೇಂಜ್ ಫೈಟ್​ಗೆ ಕೌಂಟ್​​ಡೌನ್
  • ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಸೋಲಿಸಿರುವ ಪಂಜಾಬ್
  • ಸೂಪರ್ ಸಂಡೇ ಫೈಟ್​ನಲ್ಲಿ ಗೆಲ್ಲೋದು ಯಾರು..?

ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಆರ್​ಸಿಬಿಗೆ ಪಂಜಾಬ್ ಪಂಚ್ ನೀಡಿತ್ತು. ಆದ್ರೀಗ ಪಂಜಾಬ್​​ಗೆ ತಿರುಗೇಟು ನೀಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚಂಡೀಗಡಕ್ಕೆ ದಂಡೆತ್ತಿ ಹೋಗಿದೆ. ತವರಿಲ್ಲೇ ಸೋಲಿಸಿದ ಪಂಜಾಬ್​ಗೆ, ಇವತ್ತು ಅವರದ್ದೇ ನೆಲದಲ್ಲಿ ಸೋಲಿಸುವ ಲೆಕ್ಕಾಚಾರದಲ್ಲಿದೆ.

ಆರ್​ಸಿಬಿ ಪಂಜಾಬ್ ರಿವೇಂಜ್ ಫೈಟ್​ಗೆ ಕೌಂಟ್​​ಡೌನ್

ಬೆಂಗಳೂರಲ್ಲಿ ಗೆದ್ದೇ ಗೆಲ್ತೀವಿ ಅನ್ನೋ ನಿರೀಕ್ಷೆಯಲ್ಲಿ ಅಖಾಡಕ್ಕಿಳಿದ್ದ ಆರ್​ಸಿಬಿ, ಮತ್ತೊಮ್ಮೆ ಮುಗ್ಗರಿಸಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್​​, ಪಂಚ್​ಗೆ ಹೋಮ್​ ಕಂಡೀಷನ್ಸ್​ನಲ್ಲೇ ಹ್ಯಾಟ್ರೀಕ್ ಸೋಲು ಅನುಭವಿಸಿದೆ. ಅಷ್ಟೇ ಅಲ್ಲ, ಪಂಜಾಬ್​ ಕಿಂಗ್ಸ್ ತಾಯ್ನಾಡದಲ್ಲೇ ಸೋಲಿನ ಪಂಚ್​ ನೀಡಲು ರಣತಂತ್ರ ರೂಪಿಸುತ್ತಿರುವ ಆರ್​ಸಿಬಿ, ರಿವೇಂಜ್ ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಹೀಗಾಗಿ ಸೂಪರ್ ಸಂಡೇಯ ಸೇಡಿನ ಸಮರದಲ್ಲಿ ಯಾರ್ ಗೆಲ್ತಾರೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಇದನ್ನೂ ಓದಿ: ಇಂದು RCB vs PBKS ಪಂದ್ಯ.. ಈ ಹೈವೋಲ್ಟೇಜ್​ ಮ್ಯಾಚ್​ ಎಷ್ಟು ಗಂಟೆಗೆ, ಎಲ್ಲಿ ನಡೆಯುತ್ತೆ?

publive-image

ಕೊಹ್ಲಿ, ಸಾಲ್ಟ್​ ಮೇಲೆ ಬೆಟ್ಟದಷ್ಟು ನಿರೀಕ್ಷೆ

ಚಿನ್ನಸ್ವಾಮಿಯಲ್ಲಿ ಕೊಹ್ಲಿ, ಫಿಲ್ ಸಾಲ್ಟ್​ ಸಾಲಿಡ್ ಓಪನಿಂಗ್ ನೀಡದಿರಬಹುದು. ಚಿನ್ನಸ್ವಾಮಿಯ ಹೊರತಾದ ಪಿಚ್​ಗಳಲ್ಲಿ ವಿರಾಟ್, ಫಿಲ್ ಸಾಲ್ಟ್​ ಅದ್ಬುತ ಇನ್ನಿಂಗ್ಸ್ ಕಟ್ಟಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್​ ಕೊಲ್ಕತ್ತಾ, ವಾಂಖೆಡೆ, ಜೈಪುರದಲ್ಲಿ ಸಿಡಿಸಿರುವ ಕೊಹ್ಲಿ, ಪಂಜಾಬ್ ಎದುರು ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಪಂಜಾಬ್​ ಎದುರು 1031 ರನ್ ಸಿಡಿಸಿರುವ ಕೊಹ್ಲಿ, ಇವತ್ತು ನರಕ ದರ್ಶನ ತೋರಿಸಿದರೂ ಅಚ್ಚರಿ ಇಲ್ಲ.

ಇದನ್ನೂ ಓದಿ: ಬೆಂಗಳೂರಲ್ಲಿ ತಪ್ಪಿದ ಭಾರೀ ಅನಾಹುತ.. ನಿಂತಿದ್ದ ಇಂಡಿಗೋ ವಿಮಾನಕ್ಕೆ ಗುದ್ದಿದ ಟೆಂಪೋ ಟ್ರಾವೆಲರ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment