/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಉತ್ತರಾಷಾಢ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ
ಮೇಷ ರಾಶಿ
- ಮಾನಸಿಕವಾದ ನೋವು ನಿಮ್ಮ ದೌರ್ಬಲ್ಯವಾಗಬಹುದು
- ಮನೆಯಲ್ಲಿ ಅತಿಯಾದ ಒಂಟಿತನ ಒಳ್ಳೆಯದಲ್ಲ
- ಪ್ರೇಮಿಗಳಿಗೆ ಶುಭವಿದೆ ಆದರೆ ಮದುವೆ ಬಗ್ಗೆ ಅಡ್ಡಿಯಾಗಬಹುದು
- ಸ್ನೇಹಿತರ ಸಹಾಯ, ಸಹಕಾರ ಲಭ್ಯವಾಗಲಿದೆ
- ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆ ಕಾಡಲಿದೆ ಅಗತ್ಯವಾಗಿ ಪರಿಹರಿಸಿಕೊಳ್ಳಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ
- ಸ್ನೇಹಿತ ವರ್ಗದಿಂದ ಉತ್ತಮವಾದ ಸುದ್ದಿ ಕೇಳುತ್ತೀರಿ
- ಮನೆಯ ವಾತಾವರಣ ಚೆನ್ನಾಗಿರಲಿದೆ
- ಇಂದು ಅಂದುಕೊಂಡ ದೊಡ್ಡ ವ್ಯವಹಾರ ಸುಲಭವಾಗಿ ಆಗಲಿದೆ
- ಮಹಿಳೆಯರು ದುಬಾರಿ ವಸ್ತುಗಳನ್ನು ಖರೀದಿಸಬಹುದು
- ಮಕ್ಕಳು ವಿಶೇಷವಾದ ಚಟುವಟಿಕೆಗಳ ಬಗ್ಗೆ ಆಸಕ್ತಿ ವಹಿಸಬೇಕು
- ದಾಂಪತ್ಯ ಜೀವನ ಚೆನ್ನಾಗಿರಲಿದೆ
- ಮನೆ ದೇವರ ಪ್ರಾರ್ಥನೆ ಮಾಡಿ
ಮಿಥುನ
- ನಿಮ್ಮ ಜಾಣ್ಮೆ, ಶಕ್ತಿ, ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅವಕಾಶವಿದೆ
- ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿನ ದಿನ
- ಯಾವುದೇ ರೀತಿಯ ನಕಾರಾತ್ಮಕ ಚಿಂತನೆಗಳು ಬೇಡ
- ತಾಯಿಯಿಂದ ಕೆಲವು ಸಮಸ್ಯೆಗಳಾಗಬಹುದು
- ಉನ್ನತ ಅಧಿಕಾರಿಗಳ ಜೊತೆ ಉತ್ತಮವಾಗಿ ನಡೆದುಕೊಳ್ಳಿ
- ಈ ದಿನ ಒಟ್ಟಾರೆ ಸಾಧಾರಣವಾಗಿರುತ್ತದೆ
- ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ
ಕಟಕ
- ಹಿರಿಯರ ವ್ಯವಹಾರದಿಂದ ನಿಧಾನವಾಗಬಹುದು
- ಮಾನಸಿಕವಾದ ಒತ್ತಡದಿಂದ ತಪ್ಪಿಸಿಕೊಳ್ಳಿ
- ವಿವಾದಾತ್ಮಕ ವಿಷಯಗಳಿಂದ ದೂರವಿರಿ
- ಪ್ರೇಮಿಗಳಿಗೆ ಸವಾಲುಗಳಿದ್ದರೂ ಶುಭವಿದೆ
- ಮನೆಯಲ್ಲಿ ಹೊಂದಾಣಿಕೆ ಇರಲಿ
- ಅಂಧತ್ವದಿಂದ ಯಾರನ್ನು ನಂಬಬೇಡಿ
- ನವಗ್ರಹರನ್ನು ಆರಾಧನೆ ಮಾಡಿ ವಿಶೇಷವಾಗಿ ಚಂದ್ರ ಗ್ರಹನನ್ನು ಪ್ರಾರ್ಥನೆ ಮಾಡಿ
ಸಿಂಹ
- ವಿದ್ಯಾರ್ಥಿಗಳಿಗೆ ಉತ್ತಮವಾದ ಫಲಿತಾಂಶವಿದೆ
- ಮನೆಯಲ್ಲಿ ಅಶಾಂತಿಗೆ ನೀವು ಕಾರಣರಾಗಬೇಡಿ
- ಪ್ರೇಮಿಗಳಲ್ಲಿ ಪರಸ್ಪರ ಅನುಮಾನ ಉಂಟಾಗಿ ಸಮಸ್ಯೆ ಆಗಬಹುದು
- ನಿಮ್ಮ ಹಣ, ಚಿನ್ನದ ಬಗ್ಗೆ ಜಾಗ್ರತೆವಹಿಸಿ
- ವ್ಯಾಪಾರಸ್ಥರಿಗೆ ಉತ್ತಮವಾದ ದಿನ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಇಂದು ತುಂಬಾ ಒತ್ತಡವಿರುವ ದಿನ
- ತಾಳ್ಮೆಯಿಂದ ಎಲ್ಲವನ್ನು ಬಗೆಹರಿಸಿಕೊಳ್ಳಿ ಶುಭವಿದೆ
- ನಿಮ್ಮ ವಿವಾದಗಳನ್ನು ಪರಿಹಾರ ಮಾಡಿಕೊಳ್ಳಿ
- ಸಾಂಸಾರಿಕವಾಗಿ ಉತ್ತಮ ಹೊಂದಾಣಿಕೆ ಇರಲಿ
- ಮಕ್ಕಳ ಬಗ್ಗೆ ತುಂಬಾ ವೈಶಮ್ಯ ಬೆಳೆಯಬಹುದು
- ಆರೋಗ್ಯದಲ್ಲಿ ತುಂಬಾ ಏರುಪೇರು ಉಂಟಾಗಬಹುದು ಎಚ್ಚರ
- ಕುಲದೇವತಾ ಪ್ರಾರ್ಥನೆ ಮಾಡಿ
ತುಲಾ
- ಮನೆಯವರ ಜೊತೆ ಆನಂದದಿಂದಿರುವ ಸಮಯ
- ಸಹೋದ್ಯೋಗಿಗಳಿಂದ ಬೆಂಬಲ ಸಿಗುತ್ತದೆ
- ಇಂದು ಬೇರೆಯವರ ಅಶಿಸ್ತನ್ನು ನೀವು ಸಹಿಸುವುದಿಲ್ಲ
- ಮನೆಯಲ್ಲಿ ಸಡಗರದ ವಾತಾವರಣ ಇರಲಿದೆ
- ಮಕ್ಕಳ ಅಭ್ಯುದಯಕ್ಕಾಗಿ ಚಿಂತಿಸಿ ನಿರ್ಧಾರ ಮಾಡಿ
- ಸಂಕೀರ್ಣ ವಿಚಾರಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಿ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಕಾರ್ಯಕ್ಷೇತ್ರದಲ್ಲಿ ಉತ್ತಮ ನಿರ್ವಹಣೆ ಮಾಡಲು ಅವಕಾಶವಿದೆ
- ಇಂದು ಹೊಸ ಉದ್ಯೋಗಕ್ಕೆ ಅವಕಾಶವಿದೆ
- ಮದುವೆ ವಿಚಾರದಲ್ಲಿ ಬೇಸರವಾಗಬಹುದು
- ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲವಿದೆ
- ಇಂದು ಆರ್ಥಿಕವಾಗಿ ಲಾಭದ ದಿನ
- ತಾಯಿ ಮಕ್ಕಳಲ್ಲಿ ಹೊಂದಾಣಿಕೆ ತುಂಬಾ ಅಗತ್ಯ ಇರುವ ದಿನ
- ಈಶ್ವರನ ಆರಾಧನೆ ಮಾಡಿ
ಧನಸ್ಸು
- ಹೆಚ್ಚು ರಕ್ತದ ಒತ್ತಡ ಇರುವವರಿಗೆ ಸ್ವಲ್ಪ ಸಮಸ್ಯೆ ಆಗಬಹುದು ಜಾಗ್ರತೆ
- ಕೆಲಸದಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತೀರಿ
- ಸಂಬಂಧಿಕರ ಮದುವೆ ವಿಚಾರದಲ್ಲಿ ನಿಮಗೆ ಅವಮಾನ ಆಗಬಹುದು
- ಬೇರೆಯವರ ವಿಚಾರದಿಂದ ದೂರ ಉಳಿಯುವುದೇ ಉತ್ತಮ
- ವೈದ್ಯರಿಗೆ, ಔಷಧಿಗೆ ತುಂಬಾ ಹಣ ಖರ್ಚು ಮಾಡುವ ದಿನ
- ಅಸೂಯೆಯಿಂದ ಜನರು ನಿಮ್ಮ ಕೆಲಸಗಳಿಗೆ ಅಡ್ಡಿ ಮಾಡುತ್ತಾರೆ
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ಮಕರ
- ಸಾರ್ವಜನಿಕ ಕಾರ್ಯದಲ್ಲಿ ಭಾಗಿ ಆಗುತ್ತೀರಿ
- ಜವಾಬ್ದಾರಿ ಕೆಲಸಗಳಿಗೆ ಅಡ್ಡಿಯಾಗಬಹುದು
- ಯಾರೊಂದಿಗೂ ವಾದ-ವಿವಾದಗಳು ಬೇಡ
- ಯಾರಿಗೆ ಸಹಾಯ, ಗೌರವ ನೀಡುತ್ತಿರೋ ಅವರೇ ಶತ್ರುಗಳಾಗುತ್ತಾರೆ
- ನಿಮ್ಮ ಮಾತಿಗೆ ಬೆಲೆ ಕಡಿಮೆಯಾಗಬಹುದು
- ಜನರು ನಿಮ್ಮನ್ನ ನಂಬಿದರೆ ಉಳಿಸಿಕೊಳ್ಳಿ
- ಶಕ್ತಿದೇವತಾ ಪ್ರಾರ್ಥನೆ ಮಾಡಿ
ಕುಂಭ
- ಶಿಕ್ಷಣದಲ್ಲಿ ಉತ್ತಮ ಫಲಿತಾಂಶವಿದೆ
- ನಿಮ್ಮದಲ್ಲದ ಕೆಲಸಕ್ಕೆ ಭಾಗಿಗಳಾಗಬೇಡಿ
- ಅಪರಿಚಿತರ ಬಗ್ಗೆ ಜಾಗೃತಿ ಇರಲಿ
- ನಿಮ್ಮ ಕೆಲಸವನ್ನು ಪ್ರಮಾಣಿಕತೆಯಿಂದ ಮಾಡಿ
- ತಂದೆ, ತಾಯಿ ಜೊತೆ ವಿನಾಕಾರಣ ನಿಷ್ಠೂರವಾಗುತ್ತೀರಿ
- ಸಾಂಸಾರಿಕ ವಿಚಾರದಲ್ಲಿ ಬೇರೆಯವರಿಂದ ಸಮಸ್ಯೆ ಆಗಬಹುದು
- ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ
ಮೀನ
- ಕಾನೂನು ವಿಚಾರದಲ್ಲಿ ಸ್ವಲ್ಪ ತೊಡಕ್ಕಿದೆ ಗಮನಿಸಿ
- ನಡೆಯುತ್ತಿರುವ ಕೆಲಸಗಳು ತಕ್ಷಣ ನಿಲ್ಲಬಹುದು
- ಹಣದ ವಿಚಾರದಲ್ಲಿ ಕುಟುಂಬದಲ್ಲಿ ಅಶಾಂತಿ ವಾತಾವರಣ
- ಸಹೋದರ ವರ್ಗದಲ್ಲಿ ತೊಂದರೆಯಾಗಬಹುದು
- ಬೇರೆಯವರಿಂದ ಅವಮಾನಿತರಾಗುತ್ತೀರಿ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ