ವಿದ್ಯಾರ್ಥಿಗಳಿಗೆ ಯಶಸ್ಸಿನ ದಿನ, ಮಹಿಳೆಯರು ದುಬಾರಿ ವಸ್ತುಗಳ ಖರೀದಿ; ಇಲ್ಲಿದೆ ಇಂದಿನ ರಾಶಿ ಭವಿಷ್ಯ!

author-image
admin
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಪ್ರೇಮಿಗಳಿಗೆ ಶುಭವಿದೆ ಆದರೆ ಮದುವೆ ಬಗ್ಗೆ ಅಡ್ಡಿಯಾಗಬಹುದು
  • ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆ ಕಾಡಲಿದೆ ಅಗತ್ಯವಾಗಿ ಪರಿಹರಿಸಿಕೊಳ್ಳಿ
  • ನಿಮ್ಮ ಜಾಣ್ಮೆ, ಶಕ್ತಿ, ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅವಕಾಶವಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಉತ್ತರಾಷಾಢ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ

ಮೇಷ ರಾಶಿ

publive-image

  • ಮಾನಸಿಕವಾದ ನೋವು ನಿಮ್ಮ ದೌರ್ಬಲ್ಯವಾಗಬಹುದು
  • ಮನೆಯಲ್ಲಿ ಅತಿಯಾದ ಒಂಟಿತನ ಒಳ್ಳೆಯದಲ್ಲ
  • ಪ್ರೇಮಿಗಳಿಗೆ ಶುಭವಿದೆ ಆದರೆ ಮದುವೆ ಬಗ್ಗೆ ಅಡ್ಡಿಯಾಗಬಹುದು
  • ಸ್ನೇಹಿತರ ಸಹಾಯ, ಸಹಕಾರ ಲಭ್ಯವಾಗಲಿದೆ
  • ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆ ಕಾಡಲಿದೆ ಅಗತ್ಯವಾಗಿ ಪರಿಹರಿಸಿಕೊಳ್ಳಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

publive-image

  • ಸ್ನೇಹಿತ ವರ್ಗದಿಂದ ಉತ್ತಮವಾದ ಸುದ್ದಿ ಕೇಳುತ್ತೀರಿ
  • ಮನೆಯ ವಾತಾವರಣ ಚೆನ್ನಾಗಿರಲಿದೆ
  • ಇಂದು ಅಂದುಕೊಂಡ ದೊಡ್ಡ ವ್ಯವಹಾರ ಸುಲಭವಾಗಿ ಆಗಲಿದೆ
  • ಮಹಿಳೆಯರು ದುಬಾರಿ ವಸ್ತುಗಳನ್ನು ಖರೀದಿಸಬಹುದು
  • ಮಕ್ಕಳು ವಿಶೇಷವಾದ ಚಟುವಟಿಕೆಗಳ ಬಗ್ಗೆ ಆಸಕ್ತಿ ವಹಿಸಬೇಕು
  • ದಾಂಪತ್ಯ ಜೀವನ ಚೆನ್ನಾಗಿರಲಿದೆ
  • ಮನೆ ದೇವರ ಪ್ರಾರ್ಥನೆ ಮಾಡಿ

ಮಿಥುನ

publive-image

  • ನಿಮ್ಮ ಜಾಣ್ಮೆ, ಶಕ್ತಿ, ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅವಕಾಶವಿದೆ
  • ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿನ ದಿನ
  • ಯಾವುದೇ ರೀತಿಯ ನಕಾರಾತ್ಮಕ ಚಿಂತನೆಗಳು ಬೇಡ
  • ತಾಯಿಯಿಂದ ಕೆಲವು ಸಮಸ್ಯೆಗಳಾಗಬಹುದು
  • ಉನ್ನತ ಅಧಿಕಾರಿಗಳ ಜೊತೆ ಉತ್ತಮವಾಗಿ ನಡೆದುಕೊಳ್ಳಿ
  • ಈ ದಿನ ಒಟ್ಟಾರೆ ಸಾಧಾರಣವಾಗಿರುತ್ತದೆ
  • ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ಹಿರಿಯರ ವ್ಯವಹಾರದಿಂದ ನಿಧಾನವಾಗಬಹುದು
  • ಮಾನಸಿಕವಾದ ಒತ್ತಡದಿಂದ ತಪ್ಪಿಸಿಕೊಳ್ಳಿ
  • ವಿವಾದಾತ್ಮಕ ವಿಷಯಗಳಿಂದ ದೂರವಿರಿ
  • ಪ್ರೇಮಿಗಳಿಗೆ ಸವಾಲುಗಳಿದ್ದರೂ ಶುಭವಿದೆ
  • ಮನೆಯಲ್ಲಿ ಹೊಂದಾಣಿಕೆ ಇರಲಿ
  • ಅಂಧತ್ವದಿಂದ ಯಾರನ್ನು ನಂಬಬೇಡಿ
  • ನವಗ್ರಹರನ್ನು ಆರಾಧನೆ ಮಾಡಿ ವಿಶೇಷವಾಗಿ ಚಂದ್ರ ಗ್ರಹನನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ವಿದ್ಯಾರ್ಥಿಗಳಿಗೆ ಉತ್ತಮವಾದ ಫಲಿತಾಂಶವಿದೆ
  • ಮನೆಯಲ್ಲಿ ಅಶಾಂತಿಗೆ ನೀವು ಕಾರಣರಾಗಬೇಡಿ
  • ಪ್ರೇಮಿಗಳಲ್ಲಿ ಪರಸ್ಪರ ಅನುಮಾನ ಉಂಟಾಗಿ ಸಮಸ್ಯೆ ಆಗಬಹುದು
  • ನಿಮ್ಮ ಹಣ, ಚಿನ್ನದ ಬಗ್ಗೆ ಜಾಗ್ರತೆವಹಿಸಿ
  • ವ್ಯಾಪಾರಸ್ಥರಿಗೆ ಉತ್ತಮವಾದ ದಿನ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ಇಂದು ತುಂಬಾ ಒತ್ತಡವಿರುವ ದಿನ
  • ತಾಳ್ಮೆಯಿಂದ ಎಲ್ಲವನ್ನು ಬಗೆಹರಿಸಿಕೊಳ್ಳಿ ಶುಭವಿದೆ
  • ನಿಮ್ಮ ವಿವಾದಗಳನ್ನು ಪರಿಹಾರ ಮಾಡಿಕೊಳ್ಳಿ
  • ಸಾಂಸಾರಿಕವಾಗಿ ಉತ್ತಮ ಹೊಂದಾಣಿಕೆ ಇರಲಿ
  • ಮಕ್ಕಳ ಬಗ್ಗೆ ತುಂಬಾ ವೈಶಮ್ಯ ಬೆಳೆಯಬಹುದು
  • ಆರೋಗ್ಯದಲ್ಲಿ ತುಂಬಾ ಏರುಪೇರು ಉಂಟಾಗಬಹುದು ಎಚ್ಚರ
  • ಕುಲದೇವತಾ ಪ್ರಾರ್ಥನೆ ಮಾಡಿ

ತುಲಾ

publive-image

  • ಮನೆಯವರ ಜೊತೆ ಆನಂದದಿಂದಿರುವ ಸಮಯ
  • ಸಹೋದ್ಯೋಗಿಗಳಿಂದ ಬೆಂಬಲ ಸಿಗುತ್ತದೆ
  • ಇಂದು ಬೇರೆಯವರ ಅಶಿಸ್ತನ್ನು ನೀವು ಸಹಿಸುವುದಿಲ್ಲ
  • ಮನೆಯಲ್ಲಿ ಸಡಗರದ ವಾತಾವರಣ ಇರಲಿದೆ
  • ಮಕ್ಕಳ ಅಭ್ಯುದಯಕ್ಕಾಗಿ ಚಿಂತಿಸಿ ನಿರ್ಧಾರ ಮಾಡಿ
  • ಸಂಕೀರ್ಣ ವಿಚಾರಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಕಾರ್ಯಕ್ಷೇತ್ರದಲ್ಲಿ ಉತ್ತಮ ನಿರ್ವಹಣೆ ಮಾಡಲು ಅವಕಾಶವಿದೆ
  • ಇಂದು ಹೊಸ ಉದ್ಯೋಗಕ್ಕೆ ಅವಕಾಶವಿದೆ
  • ಮದುವೆ ವಿಚಾರದಲ್ಲಿ ಬೇಸರವಾಗಬಹುದು
  • ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲವಿದೆ
  • ಇಂದು ಆರ್ಥಿಕವಾಗಿ ಲಾಭದ ದಿನ
  • ತಾಯಿ ಮಕ್ಕಳಲ್ಲಿ ಹೊಂದಾಣಿಕೆ ತುಂಬಾ ಅಗತ್ಯ ಇರುವ ದಿನ
  • ಈಶ್ವರನ ಆರಾಧನೆ ಮಾಡಿ

ಧನಸ್ಸು

publive-image

  • ಹೆಚ್ಚು ರಕ್ತದ ಒತ್ತಡ ಇರುವವರಿಗೆ ಸ್ವಲ್ಪ ಸಮಸ್ಯೆ ಆಗಬಹುದು ಜಾಗ್ರತೆ
  • ಕೆಲಸದಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತೀರಿ
  • ಸಂಬಂಧಿಕರ ಮದುವೆ ವಿಚಾರದಲ್ಲಿ ನಿಮಗೆ ಅವಮಾನ ಆಗಬಹುದು
  • ಬೇರೆಯವರ ವಿಚಾರದಿಂದ ದೂರ ಉಳಿಯುವುದೇ ಉತ್ತಮ
  • ವೈದ್ಯರಿಗೆ, ಔಷಧಿಗೆ ತುಂಬಾ ಹಣ ಖರ್ಚು ಮಾಡುವ ದಿನ
  • ಅಸೂಯೆಯಿಂದ ಜನರು ನಿಮ್ಮ ಕೆಲಸಗಳಿಗೆ ಅಡ್ಡಿ ಮಾಡುತ್ತಾರೆ
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಸಾರ್ವಜನಿಕ ಕಾರ್ಯದಲ್ಲಿ ಭಾಗಿ ಆಗುತ್ತೀರಿ
  • ಜವಾಬ್ದಾರಿ ಕೆಲಸಗಳಿಗೆ ಅಡ್ಡಿಯಾಗಬಹುದು
  • ಯಾರೊಂದಿಗೂ ವಾದ-ವಿವಾದಗಳು ಬೇಡ
  • ಯಾರಿಗೆ ಸಹಾಯ, ಗೌರವ ನೀಡುತ್ತಿರೋ ಅವರೇ ಶತ್ರುಗಳಾಗುತ್ತಾರೆ
  • ನಿಮ್ಮ ಮಾತಿಗೆ ಬೆಲೆ ಕಡಿಮೆಯಾಗಬಹುದು
  • ಜನರು ನಿಮ್ಮನ್ನ ನಂಬಿದರೆ ಉಳಿಸಿಕೊಳ್ಳಿ
  • ಶಕ್ತಿದೇವತಾ ಪ್ರಾರ್ಥನೆ ಮಾಡಿ

ಕುಂಭ

publive-image

  • ಶಿಕ್ಷಣದಲ್ಲಿ ಉತ್ತಮ ಫಲಿತಾಂಶವಿದೆ
  • ನಿಮ್ಮದಲ್ಲದ ಕೆಲಸಕ್ಕೆ ಭಾಗಿಗಳಾಗಬೇಡಿ
  • ಅಪರಿಚಿತರ ಬಗ್ಗೆ ಜಾಗೃತಿ ಇರಲಿ
  • ನಿಮ್ಮ ಕೆಲಸವನ್ನು ಪ್ರಮಾಣಿಕತೆಯಿಂದ ಮಾಡಿ
  • ತಂದೆ, ತಾಯಿ ಜೊತೆ ವಿನಾಕಾರಣ ನಿಷ್ಠೂರವಾಗುತ್ತೀರಿ
  • ಸಾಂಸಾರಿಕ ವಿಚಾರದಲ್ಲಿ ಬೇರೆಯವರಿಂದ ಸಮಸ್ಯೆ ಆಗಬಹುದು
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ಮೀನ 

publive-image

  • ಕಾನೂನು ವಿಚಾರದಲ್ಲಿ ಸ್ವಲ್ಪ ತೊಡಕ್ಕಿದೆ ಗಮನಿಸಿ
  • ನಡೆಯುತ್ತಿರುವ ಕೆಲಸಗಳು ತಕ್ಷಣ ನಿಲ್ಲಬಹುದು
  • ಹಣದ ವಿಚಾರದಲ್ಲಿ ಕುಟುಂಬದಲ್ಲಿ ಅಶಾಂತಿ ವಾತಾವರಣ
  • ಸಹೋದರ ವರ್ಗದಲ್ಲಿ ತೊಂದರೆಯಾಗಬಹುದು
  • ಬೇರೆಯವರಿಂದ ಅವಮಾನಿತರಾಗುತ್ತೀರಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ                   

Advertisment