ವೃತ್ತಿ, ನೌಕರಿ, ವಿದ್ಯಾರ್ಥಿಗಳಿಗೆ ಶುಭ ದಿನ, ದಂಪತಿಗಳು ಎಚ್ಚರದಿಂದಿರಿ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಅಪರಿಚಿತರನ್ನು ನಂಬಿದರೆ ದ್ರೋಹವಾಗುವ ಸಾಧ್ಯತೆಯಿದೆ, ಎಚ್ಚರಿಕೆ
  • ಸಂತೋಷವನ್ನು ಸರಿಯಾಗಿ ಅನುಭವಿಸಲು ಆಲಸ್ಯ ದೂರ ಮಾಡಿ
  • ಹಿರಿಯರ ಅಥವಾ ಮೇಲಾಧಿಕಾರಿಗಳ ಕೋಪಕ್ಕೆ ಗುರಿಯಾಗುವ ಸಾಧ್ಯತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಕಾನೂನಿನ ವಿಚಾರಗಳು ಬಹಳ ಜಟಿಲವಾಗಬಹುದು
  • ವಿದೇಶ ಪ್ರವಾಸದಲ್ಲಿ ತೊಂದರೆ ಸಾಧ್ಯತೆಯಿದೆ
  • ಬಂಧುಗಳ ಮಾತಿನಿಂದ ಬೇಸರವಾಗಬಹುದು
  • ವಿಚಾರ ಮಾಡದೇ ಯಾರ ಜೊತೆಗೂ ಸ್ನೇಹ ಮಾಡಬೇಡಿ
  • ಅಪರಿಚಿತರನ್ನು ನಂಬಿದರೆ ದ್ರೋಹವಾಗುವ ಸಾಧ್ಯತೆಯಿದೆ ಎಚ್ಚರಿಕೆ
  • ಹಣ ಕಳೆದುಕೊಳ್ಳುವ ಅಥವಾ ಕಳ್ಳತನದ ಸೂಚನೆಯಿದೆ ಹೆಚ್ಚು ಗಮನವಿರಲಿ
  • ಆಂಜನೇಯನ ಉಪಾಸನೆ ಮಾಡಿ

ವೃಷಭ

publive-image

  • ವೈವಾಹಿಕ ವಿಚಾರ ಅಥವಾ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಕಲಹ ಸಾಧ್ಯತೆಯಿದೆ
  • ಇಂದು ನಿಮ್ಮ ಆತ್ಮೀಯರಿಂದ ಬೇಸರವಾಗಬಹುದು
  • ನಿಮ್ಮ ಮನಸ್ಸಿನ ವ್ಯಾಕುಲತೆ ನಿಯಂತ್ರಣದಲ್ಲಿರಲಿ
  • ಇಂದು ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ
  • ನಿಮ್ಮ ಕಿರಿಯರನ್ನು ಗೌರವಿಸಿ
  • ಇಂದು ಬಿಳಿ ಬಟ್ಟೆ ಧರಿಸಿ ಮನಸ್ಸಿಗೆ ಸಂತೋಷ ಸಿಗುತ್ತದೆ
  • ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

ಮಿಥುನ

publive-image

  • ಹಳೆಯ ಸಮಸ್ಯೆ ಬಗೆಹರಿಯುವ ದಿನ
  • ಹಲವು ವಿಚಾರಗಳಿಗೆ ಕುಟುಂಬದವರ ಬೆಂಬಲ ಸಿಗುತ್ತದೆ
  • ಉದ್ಯೋಗ ಬದಲಾವಣೆಗೆ ಅವಕಾಶವಿದೆ
  • ಮಡದಿ-ಮಕ್ಕಳೊಂದಿಗೆ ಸಮಯ ಕಳೆಯಬಹುದು
  • ಸ್ನೇಹಿತರ ಆಕಸ್ಮಿಕ ಭೇಟಿ ಆಶ್ಚರ್ಯ ತರಬಹುದು
  • ಹೆಣ್ಣು ಮಕ್ಕಳು ತಮ್ಮ ಆಭರಣಗಳ ಬಗ್ಗೆ ಹೆಚ್ಚು ಗಮನಹರಿಸಿ
  • ಕಾರ್ತವೀಱರ್ಜುನನ್ನು ಸ್ಮರಣೆ ಮಾಡಿ

ಕಟಕ

publive-image

  • ನೌಕರರು ತಮ್ಮ ಮೇಲಾಧಿಕಾರಿಗಳಿಂದ ಹೊಗಳಿಕೆಯನ್ನ ನಿರೀಕ್ಷಿಸಬಹುದು
  • ಅಂದುಕೊಂಡ ಕೆಲಸವನ್ನ ಸಾಧಿಸುವ ದಿನ
  • ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಸಾಧ್ಯತೆ
  • ತುಂಬಾ ಸೋಮಾರಿತನ, ಆಲಸ್ಯ ಕಾಡಬಹುದು
  • ಸಂತೋಷವನ್ನು ಸರಿಯಾಗಿ ಅನುಭವಿಸಲು ಆಲಸ್ಯವನ್ನು ದೂರ ಮಾಡಿ
  • ಇಂದಿನ ಕಾರ್ಯ ಇಂದೇ ಮಾಡಿದರೆ ಒಳ್ಳೆಯದು
    ಮಾರುತಿಯನ್ನ ಆರಾಧನೆ ಮಾಡಿ

ಸಿಂಹ

publive-image

  • ಮಾನಸಿಕವಾದ ಭಯ ಕಾಡುವ ಸಾಧ್ಯತೆಯಿದೆ
  • ಸಮಯದ ದುರುಪಯೋಗವಾಗುವ ಸಾಧ್ಯತೆಯಿದೆ ಎಚ್ಚರ
  • ಹಿರಿಯರ ಅಥವಾ ಮೇಲಾಧಿಕಾರಿಗಳ ಕೋಪಕ್ಕೆ ಗುರಿಯಾಗುವ ಸಾಧ್ಯತೆ
  • ಕಮಿಷನ್ ಏಜೆಂಟ್​ಗಳಿಗೆ ಲಾಭದ ದಿನ
  • ಅಪೂರ್ಣವಾದ ಕಾರ್ಯಗಳ ಬಗ್ಗೆ ಚಿಂತನೆ ಮಾಡಿ ಶುಭವಾಗಬಹುದು
  • ಇಂದು ಹೊಟ್ಟೆಯ ನೋವು, ಉರಿ ಕಾಣಬಹುದು
  • ಬೇರೆಯವರ ಸಹಾಯವನ್ನು ಇಂದು ನಿರೀಕ್ಷೆ ಮಾಡಬೇಡಿ
    ಲಕ್ಷ್ಮೀನರಸಿಂಹನನ್ನು ಉಪಾಸನೆ ಮಾಡಿ

ಕನ್ಯಾ

publive-image

  • ನಿಮ್ಮ ವರ್ತನೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ
  • ನಿಮ್ಮ ಹವ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಬಹುದು
  • ಪ್ರೇಯಸಿ, ಪ್ರಿಯಕರನ ಬಗ್ಗೆ ನಂಬಿಕೆ ಇಡಬೇಕಾದ ದಿನ
  • ಬೆನ್ನು ನೋವು ಸಮಸ್ಯೆ ಕಾಡಬಹುದು, ದೂರದ ಪ್ರಯಾಣ ಮುಂದೂಡಿದರೆ ಒಳ್ಳೆಯದು
  • ವಿದ್ಯಾರ್ಥಿಗಳಿಗೆ ಬಹಳ ಕಠಿಣ ಪರಿಶ್ರಮದ ದಿನ
  • ಅಜೀರ್ಣ ಸಮಸ್ಯೆ ತೊಂದರೆಯಾಗಿ ಪರಿಣಮಿಸಬಹುದು
  • ಶಿವಾರಾಧನೆ ಮಾಡಿ

ತುಲಾ

publive-image

  • ವೃತ್ತಿ, ನೌಕರಿ,ವಿದ್ಯಾರ್ಥಿಯಾಗಿದ್ದರೆ ವಿದ್ಯಾಕ್ಷೇತ್ರದಲ್ಲಿ ಇಲ್ಲಿ ಶ್ಲಾಘನೆ ಸಿಗಲಿದೆ
  • ಪ್ರತಿಭೆಗೆ ತಕ್ಕ ಪ್ರತಿಫಲ ಸಿಗುವುದರಿಂದ ಸಂತೋಷವಾಗಿ ಈ ದಿನ ಕಳೆಯುತ್ತೀರಿ
  • ವ್ಯಾಪಾರ ನಿಮಿತ್ತ ಪ್ರವಾಸವನ್ನು ಮಾಡಬಹುದು
  • ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಸಮಾಧಾನ ಸಿಗಲಿದೆ
  • ಒಡ ಹುಟ್ಟಿದವರೊಡನೆ ಅನ್ಯೋನ್ಯತೆ ಹೆಚ್ಚಾಗುವ ದಿನ
  • ನಾಯಕತ್ವದ ಗುಣ ನಿಮ್ಮನ್ನು ಗೌರವವನ್ನು ಹೆಚ್ಚಿಸುತ್ತದೆ
  • ಗಣಪತಿಯ ಪ್ರಾರ್ಥನೆ ಮಾಡಿ
  • ಬಿಳಿ ಎಕ್ಕದ ಹೂ ಸಮರ್ಪಣೆ ಮಾಡಿ

ವೃಶ್ಚಿಕ

publive-image

  • ಕಲಾ ರಸಿಕರಿಗೆ, ಕಲಾವಿದರಿಗೆ ಉತ್ತಮವಾದ ಸಮಯ
  • ನಾಟಕ, ಚಲನಚಿತ್ರ ಬೇರೆ ಇನ್ಯಾವುದೇ ಕಲೆಯಲ್ಲಿ ಸಾಧನೆ ಮಾಡಿದವರಿಗೆ ಗೌರವ ಸಿಗುವ ದಿನ
  • ನಿಮ್ಮ ವೃತ್ತಿಯಲ್ಲಿ ಬಡ್ತಿ ಸಿಗುವ ದಿನ
  • ಗಂಭೀರ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಹೆಚ್ಚು ಗಮನ ಕೊಡಿ
  • ಮನೆಯ ಅಲಂಕಾರ ಅಥವಾ ನವೀಕರಣಕ್ಕೆ ಹೆಚ್ಚು ಹಣ ಖರ್ಚು ಮಾಡುವ ದಿನವಾಗಿದೆ
  • ಮಾನಸಿಕವಾಗಿ ಹೆಚ್ಚು ಒತ್ತಡವಿರುವ ದಿನ
  • ಅಗತ್ಯವಾಗಿ ಬೇರೆಯವರ ಕೆಲವು ಕೆಲಸಗಳನ್ನು ನೀವು ಮಾಡಬೇಕಾಗುತ್ತದೆ
  • ಚಂಡಿಕೇಶ್ವರನ ಪ್ರಾರ್ಥನೆ ಮಾಡಿ

ಧನಸ್ಸು

publive-image

  • ನವದಂಪತಿಗಳಿಗೆ ಪ್ರವಾಸದ ಯೋಗವಿರುವ ದಿನ
  • ಸಣ್ಣ ಪುಟ್ಟ ವಿಚಾರಗಳಿಗೆ ನೀವು ಗೊಂದಲವನ್ನು ಉಂಟು ಮಾಡಿಕೊಳ್ಳುತ್ತೀರಿ
  • ವಾದ-ವಿವಾದವನ್ನ ಮಾಡುತ್ತೀರಿ, ಸಂತೋಷಭರಿತವಾದ ಸಮಯ ಹಾಳಾಗಬಹುದು
  • ಸಮಸ್ಯೆಗೆ ಪರಿಹಾರ ದೊರಕುವುದು ತಡವಾಗಬಹುದು
  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭ ಮತ್ತು ಅದಾಯವಿರುವ ದಿನ
  • ಕುಟುಂಬದಲ್ಲಿ ಗೌರವ ಸಿಗುವುದು ಹೆಚ್ಚಾಗುತ್ತದೆ
  • ನೀರಿನ ಭಯ ಅಥವಾ ಜಲಕಂಟಕ ಕಾಡಬಹುದು ಗಮನಹರಿಸಿ
  • ವರುಣ ದೇವರನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಹೆಚ್ಚು ಹಣ ಖರ್ಚಾಗುವ ದಿನ
  • ಆದಾಯವನ್ನ ಗಮನಿಸದೆ ಖರ್ಚಿಗೆ ಮುಂದಾಗಬಾರದು
  • ಸಾಯಂಕಾಲದ ಹೊತ್ತಿಗೆ ಸಮಾಧಾನದ ಸೂಚನೆ ಇದೆ
  • ಕೆಟ್ಟ ಕನಸುಗಳು ಈ ದಿನ ನಿಮ್ಮನ್ನು ಕಾಡಬಹುದು
  • ಕುಟುಂಬದ ವಾತಾವರಣ ಶಾಂತಿಯುತವಾಗಿರುತ್ತೆ
  • ಆಯ್ಕೆಗಳು ಹೆಚ್ಚಾಗಿದ್ದರೆ ಗೊಂದಲ ಉಂಟಾಗಬಹುದು
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

publive-image

  • ನಿಮ್ಮ ಶಿಸ್ತು ಅಥವಾ ಸ್ವಭಾವ ಬೇರೆಯವರಿಗೆ ಅದರಲ್ಲೂ ಹೊಸಬರಿಗೆ ಮಾದರಿಯಾಗಬಹುದು
  • ವಿವಾಹಿತರು ಜಗಳ ಮಾಡಿಕೊಳ್ಳುವ ಸಾಧ್ಯತೆ ಇದೆ
  • ಹಿರಿಯರ ಬೆಂಬಲ ದೊರಕುತ್ತದೆ
  • ಮಕ್ಕಳ ಪ್ರಗತಿಯ ಬಗ್ಗೆ ಚಿಂತನೆ ನಡೆಸಿ
  • ಪ್ರೇಮಿಗಳಿಗೆ ಅವಮಾನ ಆಗುವುದು, ಬೇರೆಯವರಿಂದ ಬೆದರಿಕೆ ಬರಬಹುದು
  • ಇಂಜಿನಿಯರಿಂಗ್ ವಿದ್ಯಾರ್ಥಿಗಳು ಆಲಸ್ಯ ಮಾಡಬಾರದು
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ಮೀನ 

publive-image

  • ಧನಾತ್ಮಕವಾಗಿ ಚಿಂತಿನೆಯಲ್ಲಿರಬೇಕು ಅನ್ನೋ ಯೋಚನೆ ನಿಮ್ಮ ಮನಸ್ಸಲ್ಲಿ ಬರಬೇಕು
  • ಬೇರೆಯವರ ವಸ್ತುಗಳ ಬಗ್ಗೆ ಆಸಕ್ತಿ ತೋರಿಸಬಾರದು
  • ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಿ
  • ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಅನುಕೂಲವಾಗಲಿದೆ
  • ಪರೀಕ್ಷೆಗಳಲ್ಲಿ ಯಶಸ್ಸು ಕಾಣುವಂತ ದಿನ
  • ತಂದೆಯವರ ಸಲಹೆ ಒಳಿತಾಗಿರುತ್ತೆ
  • ಅಧಿಕಾರಿಗಳೊಂದಿಗೆ ಮಾತುಕತೆ ಬಹಳ ಚೆನ್ನಾಗಿರುತ್ತದೆ
  • ಹಿರಿಯರ ಆಶೀರ್ವಾದ ಪಡೆಯಿರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ                  

Advertisment