/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
- ಕಾನೂನಿನ ವಿಚಾರಗಳು ಬಹಳ ಜಟಿಲವಾಗಬಹುದು
- ವಿದೇಶ ಪ್ರವಾಸದಲ್ಲಿ ತೊಂದರೆ ಸಾಧ್ಯತೆಯಿದೆ
- ಬಂಧುಗಳ ಮಾತಿನಿಂದ ಬೇಸರವಾಗಬಹುದು
- ವಿಚಾರ ಮಾಡದೇ ಯಾರ ಜೊತೆಗೂ ಸ್ನೇಹ ಮಾಡಬೇಡಿ
- ಅಪರಿಚಿತರನ್ನು ನಂಬಿದರೆ ದ್ರೋಹವಾಗುವ ಸಾಧ್ಯತೆಯಿದೆ ಎಚ್ಚರಿಕೆ
- ಹಣ ಕಳೆದುಕೊಳ್ಳುವ ಅಥವಾ ಕಳ್ಳತನದ ಸೂಚನೆಯಿದೆ ಹೆಚ್ಚು ಗಮನವಿರಲಿ
- ಆಂಜನೇಯನ ಉಪಾಸನೆ ಮಾಡಿ
ವೃಷಭ
- ವೈವಾಹಿಕ ವಿಚಾರ ಅಥವಾ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಕಲಹ ಸಾಧ್ಯತೆಯಿದೆ
- ಇಂದು ನಿಮ್ಮ ಆತ್ಮೀಯರಿಂದ ಬೇಸರವಾಗಬಹುದು
- ನಿಮ್ಮ ಮನಸ್ಸಿನ ವ್ಯಾಕುಲತೆ ನಿಯಂತ್ರಣದಲ್ಲಿರಲಿ
- ಇಂದು ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ
- ನಿಮ್ಮ ಕಿರಿಯರನ್ನು ಗೌರವಿಸಿ
- ಇಂದು ಬಿಳಿ ಬಟ್ಟೆ ಧರಿಸಿ ಮನಸ್ಸಿಗೆ ಸಂತೋಷ ಸಿಗುತ್ತದೆ
- ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ
ಮಿಥುನ
- ಹಳೆಯ ಸಮಸ್ಯೆ ಬಗೆಹರಿಯುವ ದಿನ
- ಹಲವು ವಿಚಾರಗಳಿಗೆ ಕುಟುಂಬದವರ ಬೆಂಬಲ ಸಿಗುತ್ತದೆ
- ಉದ್ಯೋಗ ಬದಲಾವಣೆಗೆ ಅವಕಾಶವಿದೆ
- ಮಡದಿ-ಮಕ್ಕಳೊಂದಿಗೆ ಸಮಯ ಕಳೆಯಬಹುದು
- ಸ್ನೇಹಿತರ ಆಕಸ್ಮಿಕ ಭೇಟಿ ಆಶ್ಚರ್ಯ ತರಬಹುದು
- ಹೆಣ್ಣು ಮಕ್ಕಳು ತಮ್ಮ ಆಭರಣಗಳ ಬಗ್ಗೆ ಹೆಚ್ಚು ಗಮನಹರಿಸಿ
- ಕಾರ್ತವೀಱರ್ಜುನನ್ನು ಸ್ಮರಣೆ ಮಾಡಿ
ಕಟಕ
- ನೌಕರರು ತಮ್ಮ ಮೇಲಾಧಿಕಾರಿಗಳಿಂದ ಹೊಗಳಿಕೆಯನ್ನ ನಿರೀಕ್ಷಿಸಬಹುದು
- ಅಂದುಕೊಂಡ ಕೆಲಸವನ್ನ ಸಾಧಿಸುವ ದಿನ
- ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಸಾಧ್ಯತೆ
- ತುಂಬಾ ಸೋಮಾರಿತನ, ಆಲಸ್ಯ ಕಾಡಬಹುದು
- ಸಂತೋಷವನ್ನು ಸರಿಯಾಗಿ ಅನುಭವಿಸಲು ಆಲಸ್ಯವನ್ನು ದೂರ ಮಾಡಿ
- ಇಂದಿನ ಕಾರ್ಯ ಇಂದೇ ಮಾಡಿದರೆ ಒಳ್ಳೆಯದು
ಮಾರುತಿಯನ್ನ ಆರಾಧನೆ ಮಾಡಿ
ಸಿಂಹ
- ಮಾನಸಿಕವಾದ ಭಯ ಕಾಡುವ ಸಾಧ್ಯತೆಯಿದೆ
- ಸಮಯದ ದುರುಪಯೋಗವಾಗುವ ಸಾಧ್ಯತೆಯಿದೆ ಎಚ್ಚರ
- ಹಿರಿಯರ ಅಥವಾ ಮೇಲಾಧಿಕಾರಿಗಳ ಕೋಪಕ್ಕೆ ಗುರಿಯಾಗುವ ಸಾಧ್ಯತೆ
- ಕಮಿಷನ್ ಏಜೆಂಟ್ಗಳಿಗೆ ಲಾಭದ ದಿನ
- ಅಪೂರ್ಣವಾದ ಕಾರ್ಯಗಳ ಬಗ್ಗೆ ಚಿಂತನೆ ಮಾಡಿ ಶುಭವಾಗಬಹುದು
- ಇಂದು ಹೊಟ್ಟೆಯ ನೋವು, ಉರಿ ಕಾಣಬಹುದು
- ಬೇರೆಯವರ ಸಹಾಯವನ್ನು ಇಂದು ನಿರೀಕ್ಷೆ ಮಾಡಬೇಡಿ
ಲಕ್ಷ್ಮೀನರಸಿಂಹನನ್ನು ಉಪಾಸನೆ ಮಾಡಿ
ಕನ್ಯಾ
- ನಿಮ್ಮ ವರ್ತನೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ
- ನಿಮ್ಮ ಹವ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಬಹುದು
- ಪ್ರೇಯಸಿ, ಪ್ರಿಯಕರನ ಬಗ್ಗೆ ನಂಬಿಕೆ ಇಡಬೇಕಾದ ದಿನ
- ಬೆನ್ನು ನೋವು ಸಮಸ್ಯೆ ಕಾಡಬಹುದು, ದೂರದ ಪ್ರಯಾಣ ಮುಂದೂಡಿದರೆ ಒಳ್ಳೆಯದು
- ವಿದ್ಯಾರ್ಥಿಗಳಿಗೆ ಬಹಳ ಕಠಿಣ ಪರಿಶ್ರಮದ ದಿನ
- ಅಜೀರ್ಣ ಸಮಸ್ಯೆ ತೊಂದರೆಯಾಗಿ ಪರಿಣಮಿಸಬಹುದು
- ಶಿವಾರಾಧನೆ ಮಾಡಿ
ತುಲಾ
- ವೃತ್ತಿ, ನೌಕರಿ,ವಿದ್ಯಾರ್ಥಿಯಾಗಿದ್ದರೆ ವಿದ್ಯಾಕ್ಷೇತ್ರದಲ್ಲಿ ಇಲ್ಲಿ ಶ್ಲಾಘನೆ ಸಿಗಲಿದೆ
- ಪ್ರತಿಭೆಗೆ ತಕ್ಕ ಪ್ರತಿಫಲ ಸಿಗುವುದರಿಂದ ಸಂತೋಷವಾಗಿ ಈ ದಿನ ಕಳೆಯುತ್ತೀರಿ
- ವ್ಯಾಪಾರ ನಿಮಿತ್ತ ಪ್ರವಾಸವನ್ನು ಮಾಡಬಹುದು
- ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಸಮಾಧಾನ ಸಿಗಲಿದೆ
- ಒಡ ಹುಟ್ಟಿದವರೊಡನೆ ಅನ್ಯೋನ್ಯತೆ ಹೆಚ್ಚಾಗುವ ದಿನ
- ನಾಯಕತ್ವದ ಗುಣ ನಿಮ್ಮನ್ನು ಗೌರವವನ್ನು ಹೆಚ್ಚಿಸುತ್ತದೆ
- ಗಣಪತಿಯ ಪ್ರಾರ್ಥನೆ ಮಾಡಿ
- ಬಿಳಿ ಎಕ್ಕದ ಹೂ ಸಮರ್ಪಣೆ ಮಾಡಿ
ವೃಶ್ಚಿಕ
- ಕಲಾ ರಸಿಕರಿಗೆ, ಕಲಾವಿದರಿಗೆ ಉತ್ತಮವಾದ ಸಮಯ
- ನಾಟಕ, ಚಲನಚಿತ್ರ ಬೇರೆ ಇನ್ಯಾವುದೇ ಕಲೆಯಲ್ಲಿ ಸಾಧನೆ ಮಾಡಿದವರಿಗೆ ಗೌರವ ಸಿಗುವ ದಿನ
- ನಿಮ್ಮ ವೃತ್ತಿಯಲ್ಲಿ ಬಡ್ತಿ ಸಿಗುವ ದಿನ
- ಗಂಭೀರ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಹೆಚ್ಚು ಗಮನ ಕೊಡಿ
- ಮನೆಯ ಅಲಂಕಾರ ಅಥವಾ ನವೀಕರಣಕ್ಕೆ ಹೆಚ್ಚು ಹಣ ಖರ್ಚು ಮಾಡುವ ದಿನವಾಗಿದೆ
- ಮಾನಸಿಕವಾಗಿ ಹೆಚ್ಚು ಒತ್ತಡವಿರುವ ದಿನ
- ಅಗತ್ಯವಾಗಿ ಬೇರೆಯವರ ಕೆಲವು ಕೆಲಸಗಳನ್ನು ನೀವು ಮಾಡಬೇಕಾಗುತ್ತದೆ
- ಚಂಡಿಕೇಶ್ವರನ ಪ್ರಾರ್ಥನೆ ಮಾಡಿ
ಧನಸ್ಸು
- ನವದಂಪತಿಗಳಿಗೆ ಪ್ರವಾಸದ ಯೋಗವಿರುವ ದಿನ
- ಸಣ್ಣ ಪುಟ್ಟ ವಿಚಾರಗಳಿಗೆ ನೀವು ಗೊಂದಲವನ್ನು ಉಂಟು ಮಾಡಿಕೊಳ್ಳುತ್ತೀರಿ
- ವಾದ-ವಿವಾದವನ್ನ ಮಾಡುತ್ತೀರಿ, ಸಂತೋಷಭರಿತವಾದ ಸಮಯ ಹಾಳಾಗಬಹುದು
- ಸಮಸ್ಯೆಗೆ ಪರಿಹಾರ ದೊರಕುವುದು ತಡವಾಗಬಹುದು
- ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭ ಮತ್ತು ಅದಾಯವಿರುವ ದಿನ
- ಕುಟುಂಬದಲ್ಲಿ ಗೌರವ ಸಿಗುವುದು ಹೆಚ್ಚಾಗುತ್ತದೆ
- ನೀರಿನ ಭಯ ಅಥವಾ ಜಲಕಂಟಕ ಕಾಡಬಹುದು ಗಮನಹರಿಸಿ
- ವರುಣ ದೇವರನ್ನು ಪ್ರಾರ್ಥನೆ ಮಾಡಿ
ಮಕರ
- ಹೆಚ್ಚು ಹಣ ಖರ್ಚಾಗುವ ದಿನ
- ಆದಾಯವನ್ನ ಗಮನಿಸದೆ ಖರ್ಚಿಗೆ ಮುಂದಾಗಬಾರದು
- ಸಾಯಂಕಾಲದ ಹೊತ್ತಿಗೆ ಸಮಾಧಾನದ ಸೂಚನೆ ಇದೆ
- ಕೆಟ್ಟ ಕನಸುಗಳು ಈ ದಿನ ನಿಮ್ಮನ್ನು ಕಾಡಬಹುದು
- ಕುಟುಂಬದ ವಾತಾವರಣ ಶಾಂತಿಯುತವಾಗಿರುತ್ತೆ
- ಆಯ್ಕೆಗಳು ಹೆಚ್ಚಾಗಿದ್ದರೆ ಗೊಂದಲ ಉಂಟಾಗಬಹುದು
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಕುಂಭ
- ನಿಮ್ಮ ಶಿಸ್ತು ಅಥವಾ ಸ್ವಭಾವ ಬೇರೆಯವರಿಗೆ ಅದರಲ್ಲೂ ಹೊಸಬರಿಗೆ ಮಾದರಿಯಾಗಬಹುದು
- ವಿವಾಹಿತರು ಜಗಳ ಮಾಡಿಕೊಳ್ಳುವ ಸಾಧ್ಯತೆ ಇದೆ
- ಹಿರಿಯರ ಬೆಂಬಲ ದೊರಕುತ್ತದೆ
- ಮಕ್ಕಳ ಪ್ರಗತಿಯ ಬಗ್ಗೆ ಚಿಂತನೆ ನಡೆಸಿ
- ಪ್ರೇಮಿಗಳಿಗೆ ಅವಮಾನ ಆಗುವುದು, ಬೇರೆಯವರಿಂದ ಬೆದರಿಕೆ ಬರಬಹುದು
- ಇಂಜಿನಿಯರಿಂಗ್ ವಿದ್ಯಾರ್ಥಿಗಳು ಆಲಸ್ಯ ಮಾಡಬಾರದು
- ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ
ಮೀನ
- ಧನಾತ್ಮಕವಾಗಿ ಚಿಂತಿನೆಯಲ್ಲಿರಬೇಕು ಅನ್ನೋ ಯೋಚನೆ ನಿಮ್ಮ ಮನಸ್ಸಲ್ಲಿ ಬರಬೇಕು
- ಬೇರೆಯವರ ವಸ್ತುಗಳ ಬಗ್ಗೆ ಆಸಕ್ತಿ ತೋರಿಸಬಾರದು
- ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಿ
- ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಅನುಕೂಲವಾಗಲಿದೆ
- ಪರೀಕ್ಷೆಗಳಲ್ಲಿ ಯಶಸ್ಸು ಕಾಣುವಂತ ದಿನ
- ತಂದೆಯವರ ಸಲಹೆ ಒಳಿತಾಗಿರುತ್ತೆ
- ಅಧಿಕಾರಿಗಳೊಂದಿಗೆ ಮಾತುಕತೆ ಬಹಳ ಚೆನ್ನಾಗಿರುತ್ತದೆ
- ಹಿರಿಯರ ಆಶೀರ್ವಾದ ಪಡೆಯಿರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ