/newsfirstlive-kannada/media/post_attachments/wp-content/uploads/2023/06/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು
ವೈಶಾಖ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಉತ್ತರಾಷಾಢ ನಕ್ಷತ್ರ
ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ
ಮೇಷ ರಾಶಿ
- ನಿರುದ್ಯೋಗಿಗಳಿಗೆ ಸಮಸ್ಯೆಗಳು ಎದುರಾಗಬಹುದು
- ಹಣಕಾಸಿನ ಸ್ಥಿತಿ ಉತ್ತಮವಾಗುವ ಸೂಚನೆಯಿದೆ
- ಪ್ರಯಾಣ, ಆರೋಗ್ಯ ಎರಡನ್ನು ಗಮನಿಸಿ
- ಇಂದು ಯಶಸ್ಸಿನ ಹಾದಿ ಸಿಗುವ ಅವಕಾಶವಿದೆ
- ಬೇಸರಕ್ಕೆ ಸ್ವಲ್ಪ ತಡೆಯಾಗಿ ಅಲ್ಪಾನಂದ ಸಿಗಬಹುದು
- ನಿರಂತರವಾದ ಪ್ರಯತ್ನವಿರಲಿ ಒಳ್ಳೆಯದಾಗಲಿದೆ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ವೃಷಭ ರಾಶಿ
- ನಿಮ್ಮ ಯೋಗ್ಯತೆಗೆ, ಸಾಮರ್ಥ್ಯಕ್ಕೆ ತಕ್ಕ ಪ್ರತಿಫಲ ಸಿಗುವ ದಿನ
- ನೀವು ಪ್ರಗತಿಯ ಪತದಲ್ಲಿದ್ದೀರಿ ಎಂಬ ಅನುಭವ ಆಗಬಹುದು
- ದುಂದು ವೆಚ್ಚಕ್ಕೆ ಸ್ವಲ್ಪ ಕಡಿವಾಣ ಹಾಕಿ
- ನೌಕರಿಯಲ್ಲಿ ಅಸಮಾಧಾನ ಇರಲಿದೆ
- ಹಿರಿಯರ ಸಾತ್ವಿಕ ಕೋಪಕ್ಕೆ ಗುರಿಯಾಗುತ್ತೀರಿ
- ಸ್ವಯಂ ಉದ್ಯೋಗದವರಿಗೆ ಲಾಭದ ದಿನ
- ಕುಲದೇವತೆ ಪ್ರಾರ್ಥನೆ ಮಾಡಿ
ಮಿಥುನ ರಾಶಿ
- ರಾಜಕೀಯ ವಿಚಾರದಲ್ಲಿ ಆಸಕ್ತಿ ಬೇಡ, ರಾಜಕೀಯ ಮಾಡಬೇಡಿ
- ಶಾರೀರಿಕವಾಗಿ ಗಾಯವಾಗಬಹುದು ಜಾಗ್ರತೆವಹಿಸಿ
- ಅತಿಯಾದ ಕೋಪ ಇಂದು ಒಳ್ಳೆಯದಲ್ಲ
- ಹೊಸ ಆಸ್ತಿ ಖರೀದಿಗೆ ಮನಸ್ಸು ಮಾಡಬಹುದು
- ಇಂದು ಮಕ್ಕಳಿಗೆ ಅನುಕೂಲಕರ ದಿನ
- ‘ಬಂಧುಗಳಿಂದ ಶುಭವಾರ್ತೆ ಬರಬಹುದು
- ಪ್ರಯಾಣ ಮಾಡುವುದರಿಂದ ಶುಭವಿದೆ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿಕಟಕ ರಾಶಿ
- ಕಾರ್ಯಸಿದ್ಧಿಯಿಂದ ಸಮಾಧಾನ ಸಿಗಲಿದೆ
- ಬಂಧುಗಳ ಆಗಮನದಿಂದ ಸಂತೋಷ ಪಡುತ್ತೀರಿ
- ನಿರೀಕ್ಷಿತ ಕಾರ್ಯಗಳಿಂದ ಜಯವಿದೆ
- ಮಕ್ಕಳ ಸಹಕಾರದಿಂದ ತೃಪ್ತಿ ಸಿಗುತ್ತದೆ
- ಹಲವಾರು ಹೊಸ ಯೋಜನೆಗಳಿಗೆ ಚಿಂತನೆ ಮಾಡುತ್ತೀರಿ
- ಸಮಯ ಚೆನ್ನಾಗಿದೆ ಸಮಯವನ್ನು ಸದ್ವಿನಿಯೊಗ ಮಾಡಿಕೊಳ್ಳಿ
- ಈಶ್ವರನ ಆರಾಧನೆ ಮಾಡಿ
ಸಿಂಹ ರಾಶಿ
- ಧಲಾಭದಿಂದ ಸಂತೋಷ ಸಿಗಲಿದೆ
- ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೀರಿ
- ಬಂಧುಗಳಲ್ಲಿ ಸಂತಸವನ್ನು ಕಾಣಿತ್ತೀರಿ
- ಭೂಮಿ ಖರೀದಿಗೆ ಯೋಗವಿದೆ
- ವಿದ್ಯಾರ್ಥಿಗಳಿಗೆ ಕೆಲವು ಸವಾಲುಗಳು ಎದುರಾಗಬಹುದು
- ಪ್ರಯಾಣ ಮಾಡುವುದರಿಂದ ಶುಭವಿದೆ
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ಕನ್ಯಾ ರಾಶಿ
- ವಿದ್ಯಾರ್ಥಿಗಳಿಗೆ ಹಲವಾರು ಸವಾಲುಗಳು, ಸಮಸ್ಯೆಗಳು ಎದುರಾಗಬಹುದು
- ಹಳೆಯ ಆಸ್ತಿ ವಿಚಾರದಲ್ಲಿ ಗೊಂದಲ ಆಗಬಹುದು
- ಅಧಿಕವಾದ ಪ್ರಯಾಣಕ್ಕೆ ಅವಕಾಶವಿದೆ ಆದರೆ ಪ್ರಯಾಣ ಅಶುಭ
- ಕೆಲಸದ ಒತ್ತಡದಿಂದ ಆಯಾಸ, ಬೇಸರ ಉಂಟಾಗಬಹುದು
- ಬೇರೆಯವರ ಜೊತೆಯಲ್ಲಿ ಹೊಂದಾಣಿಕೆರಲ್ಲಿ ಒಳ್ಳೆಯದಾಗುತ್ತದೆ
- ಮಕ್ಕಳ ಜೊತೆಯಲ್ಲಿ ವಿಶ್ವಾಸವನ್ನು ಇಟ್ಟುಕೊಳ್ಳಿ
- ಚಂಡಿಕಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ತುಲಾ ರಾಶಿ
- ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುವುದರಿಂದ ತೃಪ್ತಿ ಸಿಗಲಿದೆ
- ಸ್ನೇಹಿತರ ಮಧ್ಯೆ ವಾದ-ವಿವಾದಗಳು ಏರ್ಪಡುತ್ತವೆ
- ಸಾಲ ಮರುಪಾವತಿಗೆ ಅವಕಾಶವಿದೆ
- ಇಂದು ಆಸ್ತಿ ಖರೀದಿಗೆ ಮುಂದಾಗಬಹುದು
- ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಹೊಂದಾಣಿಕೆ ಇರಲಿ
- ಸಾಂಸಾರಿಕವಾಗಿ ಕೆಲವು ಮಾತು ಬರಬಹುದು
- ಗೋ ಸೇವೆಯನ್ನು ಮಾಡಿ
ವೃಶ್ಚಿಕ ರಾಶಿ
- ವ್ಯವಹಾರದಲ್ಲಿ ದೊಡ್ಡ ಗೊಂದಲ ಉಂಟಾಗಲಿದೆ
- ಮಾನಸಿಕವಾಗಿ ಕಿರಿಕಿರಿ ಉಂಟಾಗಬಹುದು
- ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ಅಂದುಕೊಂಡ ಕೆಲಸವಾಗದೆ ಕೋಪ ಬರಬಹುದು
- ನಿರುದ್ಯೋಗಿಗಳಿಗೆ ಮಾನಸಿಕ ಹಿಂಸೆ ಉಂಟಾಗಲಿದೆ
- ಸ್ವಯಂ ಉದ್ಯೋಗ ಮಾಡಲು ಮಾನಸಿಕವಾದ ನಿರ್ಧಾರವನ್ನು ಮಾಡುತ್ತೀರಿ
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಧನಸ್ಸು ರಾಶಿ
- ಪ್ರವಾಸದಿಂದ ಆನಂದ ಪಡುತ್ತೀರಿ
- ಸಹೋದರರಿಂದ ಶುಭವಾರ್ತೆ ಬರಲಿದೆ
- ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು
- ಆಸ್ತಿ ವಿಚಾರದಲ್ಲಿರುವ ಸಮಸ್ಯೆ ಬಗೆ ಹರಿಯುವುದಿಲ್ಲ
- ಮನೋರೋಗದಿಂದ ಹೊರಬರಬೇಕು
ಮಕ್ಕಳಿಗೆ ಅನುಕೂಲ ಮಾಡುತ್ತೀರಿ
ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಕರ ರಾಶಿ
- ವಿದ್ಯಾರ್ಥಿಗಳಿಗೆ ವಿದ್ಯಾ ಕ್ಷೇತ್ರದಲ್ಲಿ ಸಮಸ್ಯೆ ಉಂಟಾಗಬಹುದು
- ಸಮಸ್ಯೆಯ ದಿನ ಎಚ್ಚರವಹಿಸಿ
- ತಾಯಿಯವರ ಹಣ ದುರುಪಯೋಗ ಆಗಲಿದೆ
- ವ್ಯವಹಾರಿಕವಾಗಿ ಬೆಳವಣಿಗೆ ಆಗಬಹುದು
- ಇಂದು ತಂದೆಯವರಿಗೆ ಆಘಾತವಾಗಬಹುದು
- ಮಕ್ಕಳಿಂದ ಉತ್ತಮವಾದ ವಾರ್ತೆ ಸಿಗಲಿದೆ
- ರಿಯಲ್ ಎಸ್ಟೇಟ್ ಏಜೆಂಟ್ಸ್ಗಳಿಗೆ ಶುಭವಿದೆ
- ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಸೂರ್ಯಗ್ರಹ ಪ್ರಾರ್ಥನೆ ಮಾಡಿ
ಕುಂಭ ರಾಶಿ
- ಬುದ್ಧಿವಂತಿಕೆಯನ್ನು ಪ್ರದರ್ಶಿಸಲು ಮುಂದಾಗುತ್ತೀರಿ
- ವ್ಯವಹಾರದಲ್ಲಿ ಮುನ್ನಡೆಯನ್ನು ಸಾಧಿಸುತ್ತೀರಿ
- ಮಾತು ಮೃದುವಾಗಿರಲಿ ಒರಟುತನ ಬೇಡ
- ಸ್ನೇಹಿತರ ಜೊತೆ ವ್ಯವಹಾರಿಕ ಭಿನ್ನಾಭಿಪ್ರಾಯ ಇರಲಿದೆ
- ಸಾಂಸಾರಿಕವಾಗಿ ಹೊಂದಾಣಿಕೆ ಇರಲಿ
- ಪಿತ್ರಾರ್ಜಿತವಾದ ಆಸ್ತಿ ಲಭ್ಯವಿದೆ ಅದರ ಸೂಚನೆ ಕೂಡ ಇದೆ
ಗಣಪತಿಯನ್ನು ಪ್ರಾರ್ಥನೆ ಮಾಡಿ
ಮೀನ ರಾಶಿ
- ಸರಕಾರಿ ಕೆಲಸಗಳಲ್ಲಿ ಅನುಕೂಲವಿದೆ
- ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶಗಳು ಇರಲಿದೆ
- ಭೂ ಸಂಬಂಧಿ ವ್ಯವಹಾರಕ್ಕೆ ಮನಸ್ಸು ಮಾಡುತ್ತೀರಿ
- ಬಂಧುಗಳಿಂದ ಕೆಲವು ಸಮಸ್ಯೆಗಳು ಎದುರಾಗಬಹುದು
- ಯಾವುದೇ ರೀತಿಯ ನಕಾರಾತ್ಮಕ ಚಿಂತನೆಗಳು ಬೇಡ
- ಸಾರ್ವಜನಿಕವಾಗಿ ಮನ್ನಣೆ ಸಿಗಬಹುದು
- ಶಿವಾರಾಧಾನೆ ಮಾಡಿ
ಇದನ್ನೂ ಓದಿ: RCB ಮ್ಯಾಚ್ಗೂ ಅಡ್ಡಿ.. ಬೆಂಗಳೂರಲ್ಲಿ 20ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ನೀರು.. ಎಲ್ಲೆಲ್ಲಿ ಏನೇನು ಆಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ