ಶುಭ ಭಾನುವಾರ.. ಚಿಂತೆ ಬೇಡ ನೀವು ಅಂದ್ಕೊಂಡಿದ್ದು ಆಗಿಯೇ ಆಗುತ್ತೆ..!

author-image
Ganesh
Updated On
ಶತ್ರುಗಳ ಕಾಟ; ಕೌಟುಂಬಿಕ ಸಮಸ್ಯೆ; ಮನೆವರಿಗೆಲ್ಲಾ ಅವಮಾನ; ಇಲ್ಲಿದೆ ಇಂದಿನ ಭವಿಷ್ಯ
Advertisment
  •  ನಿರಂತರವಾದ ಪ್ರಯತ್ನವಿರಲಿ ಒಳ್ಳೆಯದಾಗಲಿದೆ
  • ಯಾವ ರಾಶಿ ಅವರು ಇಂದು ಹುಷಾರಾಗಿರಬೇಕು..?
  • ಪ್ರೇಮಿಗಳಿಗೆ, ಪತಿ-ಪತ್ನಿಯರಿಗೆ ಶುಭನಾ, ಅಶುಭನಾ..?

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು
ವೈಶಾಖ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಉತ್ತರಾಷಾಢ ನಕ್ಷತ್ರ
ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ

ಮೇಷ ರಾಶಿ

publive-image

  • ನಿರುದ್ಯೋಗಿಗಳಿಗೆ ಸಮಸ್ಯೆಗಳು ಎದುರಾಗಬಹುದು
  •  ಹಣಕಾಸಿನ ಸ್ಥಿತಿ ಉತ್ತಮವಾಗುವ ಸೂಚನೆಯಿದೆ
  •  ಪ್ರಯಾಣ, ಆರೋಗ್ಯ ಎರಡನ್ನು ಗಮನಿಸಿ
  •  ಇಂದು ಯಶಸ್ಸಿನ ಹಾದಿ ಸಿಗುವ ಅವಕಾಶವಿದೆ
  •  ಬೇಸರಕ್ಕೆ ಸ್ವಲ್ಪ ತಡೆಯಾಗಿ ಅಲ್ಪಾನಂದ ಸಿಗಬಹುದು
  •  ನಿರಂತರವಾದ ಪ್ರಯತ್ನವಿರಲಿ ಒಳ್ಳೆಯದಾಗಲಿದೆ
  •  ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಷಭ ರಾಶಿ

publive-image

  • ನಿಮ್ಮ ಯೋಗ್ಯತೆಗೆ, ಸಾಮರ್ಥ್ಯಕ್ಕೆ ತಕ್ಕ ಪ್ರತಿಫಲ ಸಿಗುವ ದಿನ
  •  ನೀವು ಪ್ರಗತಿಯ ಪತದಲ್ಲಿದ್ದೀರಿ ಎಂಬ ಅನುಭವ ಆಗಬಹುದು
  •  ದುಂದು ವೆಚ್ಚಕ್ಕೆ ಸ್ವಲ್ಪ ಕಡಿವಾಣ ಹಾಕಿ
  •  ನೌಕರಿಯಲ್ಲಿ ಅಸಮಾಧಾನ ಇರಲಿದೆ
  •  ಹಿರಿಯರ ಸಾತ್ವಿಕ ಕೋಪಕ್ಕೆ ಗುರಿಯಾಗುತ್ತೀರಿ
  •  ಸ್ವಯಂ ಉದ್ಯೋಗದವರಿಗೆ ಲಾಭದ ದಿನ
  •  ಕುಲದೇವತೆ ಪ್ರಾರ್ಥನೆ ಮಾಡಿ

ಮಿಥುನ ರಾಶಿ

publive-image

  • ರಾಜಕೀಯ ವಿಚಾರದಲ್ಲಿ ಆಸಕ್ತಿ ಬೇಡ, ರಾಜಕೀಯ ಮಾಡಬೇಡಿ
  •  ಶಾರೀರಿಕವಾಗಿ ಗಾಯವಾಗಬಹುದು ಜಾಗ್ರತೆವಹಿಸಿ
  •  ಅತಿಯಾದ ಕೋಪ ಇಂದು ಒಳ್ಳೆಯದಲ್ಲ
  •  ಹೊಸ ಆಸ್ತಿ ಖರೀದಿಗೆ ಮನಸ್ಸು ಮಾಡಬಹುದು
  •  ಇಂದು ಮಕ್ಕಳಿಗೆ ಅನುಕೂಲಕರ ದಿನ
  •  ‘ಬಂಧುಗಳಿಂದ ಶುಭವಾರ್ತೆ ಬರಬಹುದು
  • ಪ್ರಯಾಣ ಮಾಡುವುದರಿಂದ ಶುಭವಿದೆ
  •  ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿಕಟಕ ರಾಶಿ

publive-image

  • ಕಾರ್ಯಸಿದ್ಧಿಯಿಂದ ಸಮಾಧಾನ ಸಿಗಲಿದೆ
  •  ಬಂಧುಗಳ ಆಗಮನದಿಂದ ಸಂತೋಷ ಪಡುತ್ತೀರಿ
  •  ನಿರೀಕ್ಷಿತ ಕಾರ್ಯಗಳಿಂದ ಜಯವಿದೆ
  •  ಮಕ್ಕಳ ಸಹಕಾರದಿಂದ ತೃಪ್ತಿ ಸಿಗುತ್ತದೆ
  •  ಹಲವಾರು ಹೊಸ ಯೋಜನೆಗಳಿಗೆ ಚಿಂತನೆ ಮಾಡುತ್ತೀರಿ
  •  ಸಮಯ ಚೆನ್ನಾಗಿದೆ ಸಮಯವನ್ನು ಸದ್ವಿನಿಯೊಗ ಮಾಡಿಕೊಳ್ಳಿ
  •  ಈಶ್ವರನ ಆರಾಧನೆ ಮಾಡಿ

ಸಿಂಹ ರಾಶಿ

publive-image

  • ಧಲಾಭದಿಂದ ಸಂತೋಷ ಸಿಗಲಿದೆ
  •  ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೀರಿ
  •  ಬಂಧುಗಳಲ್ಲಿ ಸಂತಸವನ್ನು ಕಾಣಿತ್ತೀರಿ
  •  ಭೂಮಿ ಖರೀದಿಗೆ ಯೋಗವಿದೆ
  •  ವಿದ್ಯಾರ್ಥಿಗಳಿಗೆ ಕೆಲವು ಸವಾಲುಗಳು ಎದುರಾಗಬಹುದು
  •  ಪ್ರಯಾಣ ಮಾಡುವುದರಿಂದ ಶುಭವಿದೆ
  •  ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಕನ್ಯಾ ರಾಶಿ

publive-image

  • ವಿದ್ಯಾರ್ಥಿಗಳಿಗೆ ಹಲವಾರು ಸವಾಲುಗಳು, ಸಮಸ್ಯೆಗಳು ಎದುರಾಗಬಹುದು
  •  ಹಳೆಯ ಆಸ್ತಿ ವಿಚಾರದಲ್ಲಿ ಗೊಂದಲ ಆಗಬಹುದು
  •  ಅಧಿಕವಾದ ಪ್ರಯಾಣಕ್ಕೆ ಅವಕಾಶವಿದೆ ಆದರೆ ಪ್ರಯಾಣ ಅಶುಭ
  •  ಕೆಲಸದ ಒತ್ತಡದಿಂದ ಆಯಾಸ, ಬೇಸರ ಉಂಟಾಗಬಹುದು
  •  ಬೇರೆಯವರ ಜೊತೆಯಲ್ಲಿ ಹೊಂದಾಣಿಕೆರಲ್ಲಿ ಒಳ್ಳೆಯದಾಗುತ್ತದೆ
  •  ಮಕ್ಕಳ ಜೊತೆಯಲ್ಲಿ ವಿಶ್ವಾಸವನ್ನು ಇಟ್ಟುಕೊಳ್ಳಿ
  •  ಚಂಡಿಕಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ತುಲಾ ರಾಶಿ

publive-image

  • ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುವುದರಿಂದ ತೃಪ್ತಿ ಸಿಗಲಿದೆ
  •  ಸ್ನೇಹಿತರ ಮಧ್ಯೆ ವಾದ-ವಿವಾದಗಳು ಏರ್ಪಡುತ್ತವೆ
  •  ಸಾಲ ಮರುಪಾವತಿಗೆ ಅವಕಾಶವಿದೆ
  •  ಇಂದು ಆಸ್ತಿ ಖರೀದಿಗೆ ಮುಂದಾಗಬಹುದು
  •  ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಹೊಂದಾಣಿಕೆ ಇರಲಿ
  •  ಸಾಂಸಾರಿಕವಾಗಿ ಕೆಲವು ಮಾತು ಬರಬಹುದು
  •  ಗೋ ಸೇವೆಯನ್ನು ಮಾಡಿ

ವೃಶ್ಚಿಕ ರಾಶಿ

publive-image

  • ವ್ಯವಹಾರದಲ್ಲಿ ದೊಡ್ಡ ಗೊಂದಲ ಉಂಟಾಗಲಿದೆ
  •  ಮಾನಸಿಕವಾಗಿ ಕಿರಿಕಿರಿ ಉಂಟಾಗಬಹುದು
  •  ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  •  ಅಂದುಕೊಂಡ ಕೆಲಸವಾಗದೆ ಕೋಪ ಬರಬಹುದು
  •  ನಿರುದ್ಯೋಗಿಗಳಿಗೆ ಮಾನಸಿಕ ಹಿಂಸೆ ಉಂಟಾಗಲಿದೆ
  •  ಸ್ವಯಂ ಉದ್ಯೋಗ ಮಾಡಲು ಮಾನಸಿಕವಾದ ನಿರ್ಧಾರವನ್ನು ಮಾಡುತ್ತೀರಿ
  •  ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಧನಸ್ಸು ರಾಶಿ

publive-image

  • ಪ್ರವಾಸದಿಂದ ಆನಂದ ಪಡುತ್ತೀರಿ
  •  ಸಹೋದರರಿಂದ ಶುಭವಾರ್ತೆ ಬರಲಿದೆ
  •  ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು
  •  ಆಸ್ತಿ ವಿಚಾರದಲ್ಲಿರುವ ಸಮಸ್ಯೆ ಬಗೆ ಹರಿಯುವುದಿಲ್ಲ
  •  ಮನೋರೋಗದಿಂದ ಹೊರಬರಬೇಕು
    ಮಕ್ಕಳಿಗೆ ಅನುಕೂಲ ಮಾಡುತ್ತೀರಿ
    ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ ರಾಶಿ

publive-image

  • ವಿದ್ಯಾರ್ಥಿಗಳಿಗೆ ವಿದ್ಯಾ ಕ್ಷೇತ್ರದಲ್ಲಿ ಸಮಸ್ಯೆ ಉಂಟಾಗಬಹುದು
  •  ಸಮಸ್ಯೆಯ ದಿನ ಎಚ್ಚರವಹಿಸಿ
  •  ತಾಯಿಯವರ ಹಣ ದುರುಪಯೋಗ ಆಗಲಿದೆ
  •  ವ್ಯವಹಾರಿಕವಾಗಿ ಬೆಳವಣಿಗೆ ಆಗಬಹುದು
  •  ಇಂದು ತಂದೆಯವರಿಗೆ ಆಘಾತವಾಗಬಹುದು
  •  ಮಕ್ಕಳಿಂದ ಉತ್ತಮವಾದ ವಾರ್ತೆ ಸಿಗಲಿದೆ
  •  ರಿಯಲ್ ಎಸ್ಟೇಟ್ ಏಜೆಂಟ್ಸ್​ಗಳಿಗೆ ಶುಭವಿದೆ
  •  ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಸೂರ್ಯಗ್ರಹ ಪ್ರಾರ್ಥನೆ ಮಾಡಿ

ಕುಂಭ ರಾಶಿ

publive-image

  • ಬುದ್ಧಿವಂತಿಕೆಯನ್ನು ಪ್ರದರ್ಶಿಸಲು ಮುಂದಾಗುತ್ತೀರಿ
  •  ವ್ಯವಹಾರದಲ್ಲಿ ಮುನ್ನಡೆಯನ್ನು ಸಾಧಿಸುತ್ತೀರಿ
  •  ಮಾತು ಮೃದುವಾಗಿರಲಿ ಒರಟುತನ ಬೇಡ
  •  ಸ್ನೇಹಿತರ ಜೊತೆ ವ್ಯವಹಾರಿಕ ಭಿನ್ನಾಭಿಪ್ರಾಯ ಇರಲಿದೆ
  •  ಸಾಂಸಾರಿಕವಾಗಿ ಹೊಂದಾಣಿಕೆ ಇರಲಿ
  •  ಪಿತ್ರಾರ್ಜಿತವಾದ ಆಸ್ತಿ ಲಭ್ಯವಿದೆ ಅದರ ಸೂಚನೆ ಕೂಡ ಇದೆ
    ಗಣಪತಿಯನ್ನು ಪ್ರಾರ್ಥನೆ ಮಾಡಿ

ಮೀನ ರಾಶಿ

publive-image

  • ಸರಕಾರಿ ಕೆಲಸಗಳಲ್ಲಿ ಅನುಕೂಲವಿದೆ
  •  ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶಗಳು ಇರಲಿದೆ
  •  ಭೂ ಸಂಬಂಧಿ ವ್ಯವಹಾರಕ್ಕೆ ಮನಸ್ಸು ಮಾಡುತ್ತೀರಿ
  •  ಬಂಧುಗಳಿಂದ ಕೆಲವು ಸಮಸ್ಯೆಗಳು ಎದುರಾಗಬಹುದು
  •  ಯಾವುದೇ ರೀತಿಯ ನಕಾರಾತ್ಮಕ ಚಿಂತನೆಗಳು ಬೇಡ
  •  ಸಾರ್ವಜನಿಕವಾಗಿ ಮನ್ನಣೆ ಸಿಗಬಹುದು
  •  ಶಿವಾರಾಧಾನೆ ಮಾಡಿ

ಇದನ್ನೂ ಓದಿ: RCB ಮ್ಯಾಚ್​​ಗೂ ಅಡ್ಡಿ.. ಬೆಂಗಳೂರಲ್ಲಿ 20ಕ್ಕೂ ಅಧಿಕ‌ ಮನೆಗಳಿಗೆ ನುಗ್ಗಿದ ನೀರು.. ಎಲ್ಲೆಲ್ಲಿ ಏನೇನು ಆಯ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment