ಕೊಹ್ಲಿಗೆ ಅಭಿಮಾನಿಗಳಿಂದ ಸರ್ಪ್ರೈಸ್ ಗಿಫ್ಟ್​.. ಎಕ್ಸೈಟಿಂಗ್ ಪಂದ್ಯಕ್ಕೆ ಫ್ಯಾನ್ಸ್ ತಯಾರಿ ಹೇಗಿದೆ..?

author-image
Ganesh
Updated On
ವಿರಾಟ್​​ ಕೊಹ್ಲಿ ಬ್ಯಾಟಿಂಗ್​​ ಬೆಚ್ಚಿಬಿದ್ದ ಕೆಕೆಆರ್​​.. ಕಿಂಗ್​​ ಕೊಹ್ಲಿ ಮತ್ತೊಂದು ಅರ್ಧಶತಕ!
Advertisment
  • ಬಿಳಿ ಸಮುದ್ರವಾಗಿ ಬದಲಾಗಲಿದೆ ಚಿನ್ನಸ್ವಾಮಿ..!
  • IPL ಇತಿಹಾಸದಲ್ಲೇ ಮೊದಲು.. ಫ್ಯಾನ್ಸ್​ಗೆ ಸಲಾಂ
  • RCB ಅಭಿಮಾನಿಗಳ ನಿಷ್ಠೆ, ಅಭಿಮಾನಕ್ಕೆ ಹಿಡಿದ ಕನ್ನಡಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾಚ್ ಅಂದ್ರೆ ಸಾಕು, ಇಡೀ ಚಿನ್ನಸ್ವಾಮಿ ಸ್ಟೇಡಿಯಂ ಫುಲ್ ಪ್ಯಾಕ್ಡ್​ ಆಗಿರುತ್ತೆ. ಆರ್​ಸಿಬಿ.. ಆರ್​ಸಿಬಿ ಜಯಘೋಷಗಳು ಮುಗಿಲು ಮುಟ್ಟಿರುತ್ತೆ. ಬೌಂಡರಿ, ಸಿಕ್ಸರ್ ಸಿಡಿಸಿದಾಗ ಹುಚ್ಚೆದ್ದು ಕುಣಿಯುವ ಫ್ಯಾನ್ಸ್​, ಆಟಗಾರರ ಎನರ್ಜಿಯನ್ನ ಡಬಲ್ ಮಾಡ್ತಾರೆ. ಫ್ಯಾನ್ಸ್​ ಸಂಭ್ರಮಾಚಣೆ ನೋಡುಗರ ಮೈರೋಮಾಂಚಗೊಳಿಸುತ್ತೆ. ಕಣ್ಣಾಯಿಸಿದಷ್ಟು ಆರ್​ಸಿಬಿ ಜೆರ್ಸಿಯಿಂದ ಸ್ಟೇಡಿಯಂ ಕೆಂಪು ಸಮುದ್ರವಾಗಿರುತ್ತೆ. ಚಿನ್ನಸ್ವಾಮಿಯ ಈ ಕೆಂಪು ಸಮುದ್ರವನ್ನು ನೋಡೋದೆ ಚೆಂದ. ಆದ್ರೆ ಇವತ್ತು ಕೆಂಪು ಸಮುದ್ರದ ಬಣ್ಣ ಬದಲಾಗಲಿದೆ..

ಇದನ್ನೂ ಓದಿ: IPL ಟೀಮ್​ ಓನರ್ ಇಂದ ತಿಮ್ಮಪ್ಪನಿಗೆ ಭಾರೀ ಮೌಲ್ಯದ ಚಿನ್ನ, ವಜ್ರ ಖಚಿತ ಆಭರಣಗಳು ದಾನ ​​

publive-image

ಕೊಹ್ಲಿಗೆ ಸಪ್ರೈಸ್ ನೀಡಲು ಅಭಿಮಾನಿಗಳ ಪ್ಲ್ಯಾನ್

ಚಿನ್ನಸ್ವಾಮಿ ಎಂದಾಕ್ಷಣ ನೆನಪಾಗುವುದು ರೆಡ್ ಜೆರ್ಸಿ. ಇವತ್ತು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸಂಪೂರ್ಣ ಬಿಳಿಮಯವಾಗಲಿದೆ. ಇದಕ್ಕೆ ಕಾರಣ ವಿರಾಟ್​ ಕೊಹ್ಲಿ ಮೇಲಿನ ಅಭಿಮಾನಿಗಳ ಪ್ರೀತಿ, ಪ್ರೇಮ. ಕೆಲವು ದಿನಗಳ ಹಿಂದಷ್ಟೇ ವಿರಾಟ್​, ವಿದಾಯ ಪಂದ್ಯವನ್ನಾಡದೆ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಹೇಳಿ ಅಚ್ಚರಿ ಮೂಡಿಸಿದ್ದರು. ಇದರಿಂದ ಬೇಸರಗೊಂಡಿರುವ ಅಭಿಮಾನಿಗಳು, ಇವತ್ತು ಚಿನ್ನಸ್ವಾಮಿಯಲ್ಲಿ ಮರೆಯಲಾಗದ ನೆನಪೊಂದನ್ನ ನೀಡಲು ಮುಂದಾಗಿದ್ದಾರೆ. ಇವತ್ತಿನ ಕೆಕೆಆರ್​ ಪಂದ್ಯಕ್ಕೆ ಕೆಂಪು ಜೆರ್ಸಿ ಬದಲಿಗೆ ಬಿಳಿ ಬಣ್ಣದ ಜೆರ್ಸಿ ಧರಿಸುವಂತೆ ಕರೆ ನೀಡಿದ್ದಾರೆ. ಆ ಮೂಲಕ ವಿರಾಟ್​​​​ಗೆ ವಿಶೇಷ ಗೌರವ ಸಲ್ಲಿಸುವ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

IPL ಇತಿಹಾಸದಲ್ಲೇ ಮೊದಲು..!

2008ರಲ್ಲಿ ಉದಯವಾಗಿದ್ದ ಐಪಿಎಲ್, ಇದುವರೆಗೆ 18 ಸೀಸನ್​ಗಳನ್ನು ಕಂಡಿದೆ. ಈ 18 ವರ್ಷಗಳಲ್ಲಿ ಅದೆಷ್ಟೋ ಲೆಜೆಂಡರಿ ಆಟಗಾರರ ನಿವೃತ್ತಿ ಕೈಗೊಂಡಿದ್ದಿದೆ. ಸಚಿನ್ ತೆಂಡುಲ್ಕರ್, ಮಹೇಂದ್ರ ಸಿಂಗ್ ಧೋನಿಯವರಂತ ಆಟಗಾರರು ಮೂರು ಫಾರ್ಮೆಟ್​ನಿಂದ ಹೊರ ನಡೆದಾಗಲೂ, ಅಭಿಮಾನಿಗಳು ವಿಶೇಷ ಗೌರವ ನೀಡಿದಿಲ್ಲ. ಆದ್ರೀಗ ಇಂಥಹ ಅಪರೂಪದ ಕ್ಷಣಗಳಿಗೆ ಚಿನ್ನಸ್ವಾಮಿ ಸಾಕ್ಷಿಯಾಗ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕನ್ನಡಿಗರ ನಿಷ್ಠೆಗೆ ಹಿಡಿದ ಕೈಗನ್ನಡಿಯೂ ಆಗಿದೆ.

ಫ್ಯಾನ್ಸ್​ ಬಹುಮಾನಕ್ಕೆ ಕೊಹ್ಲಿ ನೀಡ್ತಾರಾ ರಿಟರ್ನ್​ ಗಿಫ್ಟ್?

ಬಿಸಿಸಿಐ ನಿವೃತ್ತಿಯ ಪಂದ್ಯವನ್ನು ಆಯೋಜಿಸಲಿಲ್ಲ. ಸದ್ಯ ಈ ಟ್ರೆಂಡ್​ ಕೂಡ ಭಾರತೀಯ ಕ್ರಿಕೆಟ್​ನಲ್ಲಿ ಇಲ್ಲ. ಇದೇ ಕಾರಣಕ್ಕೆ ಆರ್​ಸಿಬಿ ಫ್ಯಾನ್ಸ್​, ಬಿಸಿಸಿಐ ಟಕ್ಕರ್ ನೀಡಲು ಮುಂದಾಗಿದ್ದಾರೆ. ಹೀಗೆಲ್ಲಾ ಆರಾಧಿಸುವ, ಪ್ರೀತಿಸುವ ಅಭಿಮಾನಿಗಳಿಗೆ ಸಾಲಿಡ್ ಫಾರ್ಮ್​ನಲ್ಲಿರುವ ವಿರಾಟ್​, ಶತಕದ ರಿಟರ್ನ್ ಗಿಫ್ಟ್ ನೀಡಿದರು ಅಚ್ಚರಿ ಇಲ್ಲ. ಮಳೆರಾಯ ಅವಕೃಪೆಗೆ ಒಳದಾಗದಿದ್ರೆ ಸಾಕಷ್ಟೇ.

ಇದನ್ನೂ ಓದಿಆರ್​ಸಿಬಿಯಲ್ಲಿ ಈಗ ಮತ್ತೊಬ್ಬ ಕನ್ನಡಿಗ.. ಬ್ಯಾಟಿಂಗ್​ ವಿಭಾಗಕ್ಕೆ ಬಂದಿದೆ ಸೂಪರ್ ಪವರ್​..!

publive-image

ಕೊಹ್ಲಿ ಮೇಲಿನ ಪ್ರೀತಿ ಬ್ಯಾಟರ್​ಗಳಿಗೆ ಸಂಕಷ್ಟ

ಆರ್​ಸಿಬಿ ಅಭಿಮಾನಿಗಳು ಕೊಹ್ಲಿ ಮೇಲಿನ ಪ್ರೀತಿಗೆ, ಗೌರವ ಸಲ್ಲಿಕೆಗೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ನಿಜ. ಆ ಪ್ರೀತಿಯೇ ಬ್ಯಾಟರ್​ಗಳಿಗೆ ಬಿಸಿತುಪ್ಪವಾಗಿ ಪರಿಣಮಿಸುವ ಸಾಧ್ಯತೆ ಇದೆ. ಯಾಕಂದ್ರೆ ವೈಟ್​ಬಾಲ್ ಕ್ರಿಕೆಟ್​ನಲ್ಲಿ ಇಡೀ ಸ್ಟೇಡಿಯಂ ವೈಟ್​ ಮಯವಾದಲ್ಲಿ, ಬಾಲ್ ಪಿಕ್ ಮಾಡೋದು ನಿಜಕ್ಕೂ ಬಿಗೆಸ್ಟ್ ಚಾಲೆಂಜ್.

ಚೆಂಡು ಪಿಕ್ ಮಾಡೋದು ಕಷ್ಟ!

ಆರ್​​​ಸಿಬಿ ಅಭಿಮಾನಿಗಳೇ 17ನೇ ತಾರೀಖಿನ ಪಂದ್ಯಕ್ಕೆ ನೀವು ಬಿಳಿ ಜೆರ್ಸಿಯಲ್ಲಿ ಬರಲು ಯೋಚಿಸುತ್ತಿದ್ದೀರಾ? ಇದು ನಿಜವಾಗಿದ್ದರೆ, ನೀವು ಅದನ್ನ ಮಾಡಲು ಸಾಧ್ಯವಾದರೆ, ಅದ್ಭುತ ಮತ್ತು ಯುಗಯುಗಕ್ಕೊಂದು ನೋಡಲು ಸಿಗುವ ದೃಶ್ಯ. ಆದರೆ ವೈಟ್ ಬಾಕ್​ ಡ್ರಾಪ್​ನಲ್ಲಿ ಚೆಂಡನ್ನ ಪಿಕ್​​ ಮಾಡುವುದು ಕಷ್ಟಕರವಾಗುತ್ತೆ ಎಂದು ಕಾಮೆಂಟೇಟರ್ ಹರ್ಷಬೋಗ್ಲೆ ಅಭಿಪ್ರಾಯಪಟ್ಟಿದ್ದಾರೆ. ಕ್ರಿಕೆಟ್ ಪಂಡಿತ ಹರ್ಷ ಬೋಗ್ಲೆ ಹೇಳಿರುವುದು ನೂರಕ್ಕೆ ನೂರು ಸತ್ಯ. ಈ ಸವಾಲಿನ ನಡುವೆಯೂ ಮ್ಯಾಚ್ ಹೇಗೆ ನಡೆಯುತ್ತೆ ಅನ್ನೋ ಕ್ಯೂರಿಯಾಸಿಟಿ ಹುಟ್ಟಿಹಾಕಿರುವುದು ಸುಳ್ಳಲ್ಲ.

ಇದನ್ನೂ ಓದಿ: ಮಯಾಂಕ್​​ರನ್ನೇ ಆರ್​ಸಿಬಿ ಸೆಲೆಕ್ಟ್ ಮಾಡಿದ್ದು ಯಾಕೆ..? ಅಸಲಿ ಕಾರಣ ಇಲ್ಲಿದೆ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment