RCBಗೆ ಇಂದು ಅಳಿವು ಉಳಿವಿನ ಪ್ರಶ್ನೆ.. ಫ್ಯಾನ್ಸ್​ಗಂತೂ ಟೆನ್ಶನ್​, ಗೆದ್ದರೆ ಬಿರಿಯಾನಿ ಊಟ ಪಕ್ಕಾ!

author-image
AS Harshith
Updated On
ಆರ್​​​ಸಿಬಿಯಿಂದ IPL ವಿನ್ನಿಂಗ್​ ಕ್ಯಾಪ್ಟನ್​ಗೆ ಬಿಗ್​ ಆಫರ್​​; ಬೆಂಗಳೂರಿಗೆ ಬಂತು ಹಾರ್ಸ್​ ಪವರ್​​
Advertisment
  • ಇಂದು ಬೆಂಗಳುರಿನಲ್ಲಿ ಆರ್​ಸಿಬಿ ಮತ್ತು ಹೈದರಾಬಾದ್​ ಮುಖಾಮುಖಿ
  • ಪಾಯಿಂಟ್​ ಟೇಬಲ್​ನಲ್ಲಿ ಕೊನೆಯ ಸ್ಥಾನ ಪಡೆದಿರುವ ಕನ್ನಡಿಗರ ಆರ್​ಸಿಬಿ
  • ಇಂದು ಗೆಲವು ಕಾಣಲು ಫ್ಯಾನ್ಸ್​ ಒತ್ತಡ.. ಆರ್​ಸಿಬಿ ಗೆದ್ದರೆ ಬೀಗರೂಟ ಗ್ಯಾರಂಟಿ

ಇಂದು ಸನ್​ರೈಸರ್ಸ್​ ವಿರುದ್ದ ಆರ್​ಸಿಬಿ ಮಹತ್ವದ ಪಂದ್ಯವನ್ನಾಡಳಿದೆ. ಈಗಾಗಲೇ 5 ಪಂದ್ಯಗಳಲ್ಲಿ ಸೋತಿರುವ ಆರ್​ಸಿಬಿ ಇದೀಗ ಅಳಿವು ಉಳಿವಿನ ಲೆಕ್ಕಚಾರ ಆರಂಭಿಸಿದ್ದು ,ಆರ್​ಸಿಬಿ ಪಾಲಿಗೆ ಗೆಲ್ಲಲೆಬೇಕಾದ ಅನಿವಾರ್ಯತೆ ಇದೆ.

ಗೆದ್ದರೆ ಪ್ಲೇ ಆಫ್​ ಸೋತರೆ ಮನೆಗೆ ಎಂಬ ಪರಿಸ್ಥಿತಿಯಲ್ಲಿರುವ ಆರ್​ಸಿಬಿ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈದರಬಾದ್​​ ಸನ್​ರೈಸರ್ಸ್​ ವಿರುದ್ದ ಸೆಣೆಸಾಡಲಿದೆ. ಫಾಫ್​ ಡು ಪೆಸ್ಲಿ ಸಾರಥ್ಯದಲ್ಲಿ ಆರ್​ಸಿಬಿ ಆಡಿರುವ 6 ಪಂದ್ಯಗಳ ಪೈಕಿ 5 ಪಂದ್ಯದಲ್ಲಿ ಸೋಲನ್ನ ಅನುಭವಿಸಿದೆ.

ಇನ್ನು 5 ಪಂದ್ಯಗಳಲ್ಲಿ 3 ಪಂದ್ಯವನ್ನ ಗೆದ್ದ ಸನ್​ರೈಸರ್ಸ್​ ತನ್ನ ಬ್ಯಾಟರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು , ಸನ್​ ರೈಸರ್ಸ್​ ಬ್ಯಾಟರ್​ಗಳನ್ನು ಕಟ್ಟಿಹಾಕುವ ಸವಾಲು ಆರ್​ಸಿಬಿ ಬೌಲರ್​ಗಳ ಮುಂದಿದೆ.

ಇದನ್ನೂ ಓದಿ: ಪೆಟ್ರೋಲ್ ದರ ಏರಿಕೆಯಾಗುತ್ತಾ? ಭಾರತದಲ್ಲೂ ಸಂಚಲನ ಸೃಷ್ಟಿಸಿದ ಇಸ್ರೇಲ್​​​-ಇರಾನ್​ ದೇಶಗಳ ಸಂಘರ್ಷ!

ಕಾವಿಯ ಮಾರನ್​ ಒಡೆತನದ ಹೈದರಾಬಾದ್​ ತಂಡ ಈಗಾಗಲೇ ಐದು ಪಂದ್ಯ ಎದುರಿಸಿದ್ದು, 2 ಪಂದ್ಯ ಸೋತಿದೆ. ಆದರೂ ಸಹ ಪಾಯಿಂಟ್​ ಟೇಬಲ್​ನಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದೆ. ಅತ್ತ ಆರ್​ಸಿಬಿ ಪಾಯಿಂಟ್​​ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ.

ಫ್ಯಾನ್ಸ್ ಒತ್ತಡ

ಸೋಲಿನ ಸುಳಿಯಲ್ಲಿ ಸುತ್ತುತ್ತಾ ಬಂದಿರುವ ಆರ್​ಸಿಬಿಗೆ ಅಭಿಮಾನಿಗಳು ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಇಂದಿನ ಪಂದ್ಯ ಕೂಡ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೈದರಾಬಾದ್​ ತಂಡವನ್ನು ಮಣ್ಣು ಮುಕ್ಕಿಸಬೇಕು ಎಂದು ಫ್ಯಾನ್ಸ್​ ಒತ್ತಡ ಹೇರುತ್ತಿದ್ದಾರೆ. ಆದರೆ ಇದೆಲ್ಲ ಇಂದು ಸಾಧ್ಯವಾ ಎಂದು ಕಾದು ನೋಡಬೇಕಿದೆ. ಒಂದು ವೇಳೆ ಗೆದ್ದರೆ ಈ ಸಂತಸವನ್ನು ಅಭಿಮಾನಿಗಳು ವಿಭಿನ್ನವಾಗಿ ಸೆಲೆಬ್ರೇಟ್​​ ಮಾಡಲು ಸಿದ್ದರಿದ್ದಾರೆ. ಬಿರಿಯಾನಿ ಊಟ, ಪಟಾಕಿ ಸಿಡಿಸಿ ಸಂಭ್ರಮಿಸಲು ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment