Advertisment

ಇಂದು ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ; 5 ಸಾವಿರ ಹನುಮ ಮಾಲಾಧಾರಿಗಳು ಭಾಗಿ

author-image
Gopal Kulkarni
Updated On
ಇಂದು ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ; 5 ಸಾವಿರ ಹನುಮ ಮಾಲಾಧಾರಿಗಳು ಭಾಗಿ
Advertisment
  • ಇಂದು ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ ಆರಂಭ
  • 5 ಸಾವಿರಕ್ಕೂ ಹೆಚ್ಚು ಹನುಮ ಮಾಲಾಧಾರಿಗಳು ಭಾಗಿ
  • ಯಾವುದೇ ಅಹಿತಕರ ಘಟನೆ ನಡೆಯದಂತೆ ಹೈ ಅಲರ್ಟ್

ಇಂದು ಮಂಡ್ಯ ನಗರದ ಶ್ರೀರಂಗಪಟ್ಟಣ ಸಂಪೂರ್ಣವಾಗಿ ಕೇಸರಿಮಯವಾಗಲಿದೆ. ಇಂದು ಶ್ರೀರಂಗಪಟ್ಟಣದಲ್ಲಿ ಹನುಮಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ನಡೆಯಲಿದ್ದು, ಶ್ರೀರಂಗನ ಸನ್ನಿಧಿ ಸಂಪೂರ್ಣ ಕೇಸರಿಮಯವಾಗಿದೆ. ಕೇಸರಿ ಬಂಟಿಂಗ್ಸ್ ಮತ್ತು ಫ್ಲೆಕ್ಸ್​ಗಳು ರಾರಾಜಿಸುತ್ತಿವೆ. ಯಾತ್ರೆ ಸಾಗುವ ಪಟ್ಟಣದ ಮುಖ್ಯ ಬೀದಿಗೆ ಕೇಸರಿ ಬಂಟಿಂಗ್ಸ್​ ಹಾಕಿ ಅಲಂಕಾರ ಮಾಡಲಾಗಿದೆ.

Advertisment

ಇದನ್ನೂ ಓದಿ:ಕಣ್ಣುಗಳು ಮಂದವಾಗಿವೆ ಅಂತ ಆತಂಕಬೇಡ.. ಬಂದಿದೆ ನಾರಾಯಣ ನೇತ್ರಾಲಯದ ‘ಔರಾ ವಿಷನ್’

ಈ ಸಂಕೀರ್ತನಾ ಯಾತ್ರೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳು ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಗಂಜಾಮ್​ನ ಹನುಮ ದೇಗುಲದಿಂದ ರಂಗನಾಥ ದೇಗುಲದವರೆಗೂ 5 ಕಿಲೋ ಮೀಟ್​ ಮಾರ್ಗದಲ್ಲಿ ಸಂಕೀರ್ತನಾ ಯಾತ್ರೆ ನಡೆಯಲಿದೆ.

publive-image

ಇನ್ನು ಪಟ್ಟಣ ಮೂಡಲಬಾಗಿಲು ಆಂಜನೇಯ ದೇಗುಲ ಪುನರ್​ನಿರ್ಮಾಣ ಮಾಡುವುದು ಈ ಯಾತ್ರೆಯ ಸಂಕಲ್ಪವಾಗಿದ್ದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಕಡೆ ಬಂದೋಬಸ್ತ್​ ಮಾಡಿಕೊಂಡಿದೆ. ಎಲ್ಲೆಡೆಯೂ ಹೈ ಅಲರ್ಟ್​​ ಇದ್ದು. ಯಾತ್ರೆ ಸಾಗುವ ದಾರಿಯುದ್ದಕ್ಕೂ ಸುಮಾರು 100 ಸಿಸಿ ಕ್ಯಾಮಾರಗಳನ್ನು ಅಳವಡಿಸಲಾಗಿದೆ. ಕೆಎಸ್​​ಆರ್​ಪಿ, ಡಿಎಆರ್ ಸೇರಿ ಒಟ್ಟು ಒಂದೂವರೆ ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment