ದರ್ಶನ್ ಪ್ರಕರಣದ ಕುರಿತು ಮಾತನಾಡಿದ ನಟಿ
ಅವನಿಗೆ ಯಾಕೆ ಬೇಕಿತ್ತು ಮೆಸೇಜ್ ಮಾಡುವ ಕೆಲಸ
ಸೆಲಬ್ರಿಟಿಗೆ ಮೆಸೇಜ್ ಮಾಡಿ ಕಿರುಕುಳ ನೀಡುವ ಹಕ್ಕನ್ನು ಯಾರು ಕೊಟ್ರು?
ರೇಣುಕಾಸ್ವಾಮಿ ಹತ್ಯೆ ವಿಚಾರವಾಗಿ ದರ್ಶನ್ ವಿರುದ್ಧ ಸ್ಯಾಂಡಲ್ವುಡ್ನ ಬೆರಳೆಣಿಕೆಯ ತಾರೆಗಳು ಮಾತ್ರ ಮಾತು ಬಿಚ್ಚಿದ್ದಾರೆ. ಇದೊಂದು ಘೋರ ಕೃತ್ಯ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. ಇನ್ನುಳಿದ ತಾರೆಯರು ನಮಗ್ಯಾಕೆ ಬೇಕು ಈ ಉಸಾಬರಿ ಎಂದು ಸುಮ್ಮನಾಗಿದ್ದಾರೆ. ಆದರೆ ಸ್ಯಾಂಡಲ್ವುಡ್ ಹೊರತಾರೆಯ ಹೊರತಾಗಿ ವಿವಿಧ ಇಂಡಸ್ಟ್ರಿ ತಾರೆಯರು ಈ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಮಾಡಿದ ಕೃತ್ಯವನ್ನು ವಿರೋಧಿಸಿ ಬರೆದಿದ್ದರು. ಇದೀಗ ಟಾಲಿವುಡ್ ನಟಿ ಕಸ್ತೂರಿ ಶಂಕರ್ ಈ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ದರ್ಶನ್ ಮತ್ತು ಗ್ಯಾಂಗ್ ತನಿಖೆ ವೇಳೆ ಮತ್ತೊಂದು ಸ್ಫೋಟಕ ಸಂಗತಿ ಬಾಯ್ಬಿಟ್ಟ ಆರೋಪಿಗಳು! ಮತ್ತೆ ಹುಡುಕಾಟ
ಐಡ್ರೀಮ್ಪೋಸ್ಟ್ ಎಂದ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ರೇಣುಕಾಸ್ವಾಮಿ ಒಳ್ಳೆಯ ವ್ಯಕ್ತಿ ಅಲ್ಲ. ಆಕೆಗೆ ಕಿರುಕುಳ ನೀಡಿದ್ದಾನೆ. ಅವನ ಕೆಲಸ ಏನು? ಅವನಿಗೆ ಯಾಕೆ ಬೇಕಿತ್ತು ಮೆಸೇಜ್ ಮಾಡುವ ಕೆಲಸ. ದರ್ಶನ್ ಮಾಡಿರೋದು ತಪ್ಪು. ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುತ್ತಿದ್ದಾನೆ ಅಲ್ವ. ಹಾಗಿದ್ದ ಮೇಲೆ ಪೊಲೀಸ್ ಇದ್ದಾರೆ, ಕೋರ್ಟ್ ಇದೆ. ಖಾಸಗಿ ಜೀವನದಲ್ಲಿ ತೊಂದರೆ ಆದಾಗ ಮೊದಲ ಪತ್ನಿ ಇದ್ದಾರೆ. ಇದು ಅವರ ಕೆಲಸ. ಒಬ್ಬ ಸೆಲಬ್ರಿಟಿಗೆ ಮೆಸೇಜ್ ಮಾಡಿ ಕಿರುಕುಳ ನೀಡುವ ಹಕ್ಕನ್ನು ಪಬ್ಲಿಕ್ಗೆ ಯಾರು ಕೊಟ್ರು.
ಇದನ್ನೂ ಓದಿ: 6 ವರ್ಷಳಿಂದ ದರ್ಶನ್ ಹಳೇ ಮ್ಯಾನೇಜರ್ ಮಿಸ್ಸಿಂಗ್.. ‘ಡಿ’ ಗ್ಯಾಂಗ್ ಮೇಲೆ ಮತ್ತೊಂದು ಅನುಮಾನ!
ದರ್ಶನ್ ಕೇಸ್ ಇದಕ್ಕೆ ಹತ್ತಿರವಾಗಿದೆ. ಯಾಕಂದ್ರೆ ಆತ ಕೋಪಿಷ್ಠ ಮತ್ತು ಅವರ ಅಭಿಮಾನಿ ರೇಣುಕಾಸ್ವಾಮಿಗೆ ಹೊಡೆದು ಪಾಠ ಕಲಿಸಲು ಬಯಸಿದ್ದರು. ಆದರೆ ಆತನ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದರ್ಶನ್ ಪ್ರಕರಣದ ಕುರಿತು ಮಾತನಾಡಿದ ನಟಿ
ಅವನಿಗೆ ಯಾಕೆ ಬೇಕಿತ್ತು ಮೆಸೇಜ್ ಮಾಡುವ ಕೆಲಸ
ಸೆಲಬ್ರಿಟಿಗೆ ಮೆಸೇಜ್ ಮಾಡಿ ಕಿರುಕುಳ ನೀಡುವ ಹಕ್ಕನ್ನು ಯಾರು ಕೊಟ್ರು?
ರೇಣುಕಾಸ್ವಾಮಿ ಹತ್ಯೆ ವಿಚಾರವಾಗಿ ದರ್ಶನ್ ವಿರುದ್ಧ ಸ್ಯಾಂಡಲ್ವುಡ್ನ ಬೆರಳೆಣಿಕೆಯ ತಾರೆಗಳು ಮಾತ್ರ ಮಾತು ಬಿಚ್ಚಿದ್ದಾರೆ. ಇದೊಂದು ಘೋರ ಕೃತ್ಯ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. ಇನ್ನುಳಿದ ತಾರೆಯರು ನಮಗ್ಯಾಕೆ ಬೇಕು ಈ ಉಸಾಬರಿ ಎಂದು ಸುಮ್ಮನಾಗಿದ್ದಾರೆ. ಆದರೆ ಸ್ಯಾಂಡಲ್ವುಡ್ ಹೊರತಾರೆಯ ಹೊರತಾಗಿ ವಿವಿಧ ಇಂಡಸ್ಟ್ರಿ ತಾರೆಯರು ಈ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಮಾಡಿದ ಕೃತ್ಯವನ್ನು ವಿರೋಧಿಸಿ ಬರೆದಿದ್ದರು. ಇದೀಗ ಟಾಲಿವುಡ್ ನಟಿ ಕಸ್ತೂರಿ ಶಂಕರ್ ಈ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ದರ್ಶನ್ ಮತ್ತು ಗ್ಯಾಂಗ್ ತನಿಖೆ ವೇಳೆ ಮತ್ತೊಂದು ಸ್ಫೋಟಕ ಸಂಗತಿ ಬಾಯ್ಬಿಟ್ಟ ಆರೋಪಿಗಳು! ಮತ್ತೆ ಹುಡುಕಾಟ
ಐಡ್ರೀಮ್ಪೋಸ್ಟ್ ಎಂದ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ರೇಣುಕಾಸ್ವಾಮಿ ಒಳ್ಳೆಯ ವ್ಯಕ್ತಿ ಅಲ್ಲ. ಆಕೆಗೆ ಕಿರುಕುಳ ನೀಡಿದ್ದಾನೆ. ಅವನ ಕೆಲಸ ಏನು? ಅವನಿಗೆ ಯಾಕೆ ಬೇಕಿತ್ತು ಮೆಸೇಜ್ ಮಾಡುವ ಕೆಲಸ. ದರ್ಶನ್ ಮಾಡಿರೋದು ತಪ್ಪು. ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುತ್ತಿದ್ದಾನೆ ಅಲ್ವ. ಹಾಗಿದ್ದ ಮೇಲೆ ಪೊಲೀಸ್ ಇದ್ದಾರೆ, ಕೋರ್ಟ್ ಇದೆ. ಖಾಸಗಿ ಜೀವನದಲ್ಲಿ ತೊಂದರೆ ಆದಾಗ ಮೊದಲ ಪತ್ನಿ ಇದ್ದಾರೆ. ಇದು ಅವರ ಕೆಲಸ. ಒಬ್ಬ ಸೆಲಬ್ರಿಟಿಗೆ ಮೆಸೇಜ್ ಮಾಡಿ ಕಿರುಕುಳ ನೀಡುವ ಹಕ್ಕನ್ನು ಪಬ್ಲಿಕ್ಗೆ ಯಾರು ಕೊಟ್ರು.
ಇದನ್ನೂ ಓದಿ: 6 ವರ್ಷಳಿಂದ ದರ್ಶನ್ ಹಳೇ ಮ್ಯಾನೇಜರ್ ಮಿಸ್ಸಿಂಗ್.. ‘ಡಿ’ ಗ್ಯಾಂಗ್ ಮೇಲೆ ಮತ್ತೊಂದು ಅನುಮಾನ!
ದರ್ಶನ್ ಕೇಸ್ ಇದಕ್ಕೆ ಹತ್ತಿರವಾಗಿದೆ. ಯಾಕಂದ್ರೆ ಆತ ಕೋಪಿಷ್ಠ ಮತ್ತು ಅವರ ಅಭಿಮಾನಿ ರೇಣುಕಾಸ್ವಾಮಿಗೆ ಹೊಡೆದು ಪಾಠ ಕಲಿಸಲು ಬಯಸಿದ್ದರು. ಆದರೆ ಆತನ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ