ಆಟಗಾರರಿಗೆಲ್ಲ ಶಾಲು ಹಾಗೂ ಹೂಮಾಲೆ ಹಾಕಿ ಸ್ವಾಗತ
ಗುಜರಾತ್ ಟೈಟನ್ಸ್ ಎದುರಿಸಲಿರುವ ಪ್ಯಾಟ್ ಕಮಿನ್ಸ್ ಪಡೆ
ವಿಶಾಖಪಟ್ಟಣಂನಲ್ಲಿ ಚೆನ್ನೈ ವಿರುದ್ಧ ಹೋರಾಡಲಿದೆ ಡೆಲ್ಲಿ
ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ಸನ್ರೈಸರ್ಸ್ ಹೈದ್ರಾಬಾದ್ ತಂಡ ಮುಂದಿನ ಪಂದ್ಯವನ್ನಾಡಲು ಅಹ್ಮದಾಬಾದ್ಗೆ ಬಂದಿಳಿದಿದೆ. ಹೈದ್ರಾಬಾದ್ನಿಂದ ಅಹ್ಮದಾಬಾದ್ಗೆ ಆಗಮಿಸಿದ ಆಟಗಾರರಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಆಟಗಾರರಿಗೆಲ್ಲ ಶಾಲು ಹಾಗೂ ಹೂಮಾಲೆ ಹಾಕುವ ಮೂಲಕ ಸ್ವಾಗತಿಸಲಾಯಿತು. ಪ್ಯಾಟ್ ಕಮಿನ್ಸ್ ನಾಯಕತ್ವದ ಆರೆಂಜ್ ಆರ್ಮಿ ನಾಳೆ, ಗುಜರಾತ್ ಟೈಟನ್ಸ್ ತಂಡವನ್ನ ಎದುರಿಸಲಿದೆ.
ಹೈದ್ರಾಬಾದ್ನಲ್ಲಿ ನಡೆದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ವಿರುದ್ಧ ಪ್ಯಾಟ್ ಕಮಿನ್ಸ್ ಭರ್ಜರಿ ಬ್ಯಾಟಿಂಗ್ ಮಾಡಿತ್ತು. ಇಡೀ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ 277 ರನ್ಗಳನ್ನ ಗಳಿಸಿ ಆರ್ಸಿಬಿ ರೆಕಾರ್ಡ್ ಬ್ರೇಕ್ ಮಾಡಿ ಹೊಸ ದಾಖಲೆ ಬರೆದರು. ಇವರ ಬ್ಯಾಟಿಂಗ್ ಆರ್ಭಟಕ್ಕೆ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಭಾರೀ ಅವಮಾನಕ್ಕೆ ಒಳಗಾಯಿತು ಎಂದು ಹೇಳಬಹುದು.
ಹ್ಯಾಟ್ರಿಕ್ ಗೆಲುವಿಗೆ ಚೆನ್ನೈ ಭರ್ಜರಿ ತಾಲೀಮು..!
ಚೆನ್ನೈ ಸೂಪರ್ ಕಿಂಗ್ಸ್ ತಂಡ 17ನೇ ಐಪಿಎಲ್ ಆವೃತ್ತಿಯಲ್ಲಿ ಸೋಲಿಲ್ಲದ ಸರದಾರ ಅನ್ನಿಸಿಕೊಂಡಿದೆ. ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿರೋ ಚೆನ್ನೈ ತಂಡ ಭರ್ಜರಿ ತಾಲೀಮು ನಡೆಸಿದೆ. ನಾಳೆ ವಿಶಾಖಪಟ್ಟಣಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದ್ದು, ಆಟಗಾರರು ಚೆಪಾಕ್ ಮೈದಾನದಲ್ಲಿ ಬೆವರು ಹರಿಸಿದ್ದಾರೆ. ಅಜಿಂಕ್ಯಾ ರಹಾನೆ, ರಚಿನ್ ರವೀಂದ್ರ, ಮುಸ್ತಾಫಿಜುರ್ ರೆಹಮಾನ್ ಸೇರಿದಂತೆ ಅನೇಕ ಆಟಗಾರರು ಟ್ರೈನಿಂಗ್ ಸೆಷನ್ನಲ್ಲಿ ಭಾಗಿಯಾಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಆಟಗಾರರಿಗೆಲ್ಲ ಶಾಲು ಹಾಗೂ ಹೂಮಾಲೆ ಹಾಕಿ ಸ್ವಾಗತ
ಗುಜರಾತ್ ಟೈಟನ್ಸ್ ಎದುರಿಸಲಿರುವ ಪ್ಯಾಟ್ ಕಮಿನ್ಸ್ ಪಡೆ
ವಿಶಾಖಪಟ್ಟಣಂನಲ್ಲಿ ಚೆನ್ನೈ ವಿರುದ್ಧ ಹೋರಾಡಲಿದೆ ಡೆಲ್ಲಿ
ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ಸನ್ರೈಸರ್ಸ್ ಹೈದ್ರಾಬಾದ್ ತಂಡ ಮುಂದಿನ ಪಂದ್ಯವನ್ನಾಡಲು ಅಹ್ಮದಾಬಾದ್ಗೆ ಬಂದಿಳಿದಿದೆ. ಹೈದ್ರಾಬಾದ್ನಿಂದ ಅಹ್ಮದಾಬಾದ್ಗೆ ಆಗಮಿಸಿದ ಆಟಗಾರರಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಆಟಗಾರರಿಗೆಲ್ಲ ಶಾಲು ಹಾಗೂ ಹೂಮಾಲೆ ಹಾಕುವ ಮೂಲಕ ಸ್ವಾಗತಿಸಲಾಯಿತು. ಪ್ಯಾಟ್ ಕಮಿನ್ಸ್ ನಾಯಕತ್ವದ ಆರೆಂಜ್ ಆರ್ಮಿ ನಾಳೆ, ಗುಜರಾತ್ ಟೈಟನ್ಸ್ ತಂಡವನ್ನ ಎದುರಿಸಲಿದೆ.
ಹೈದ್ರಾಬಾದ್ನಲ್ಲಿ ನಡೆದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ವಿರುದ್ಧ ಪ್ಯಾಟ್ ಕಮಿನ್ಸ್ ಭರ್ಜರಿ ಬ್ಯಾಟಿಂಗ್ ಮಾಡಿತ್ತು. ಇಡೀ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ 277 ರನ್ಗಳನ್ನ ಗಳಿಸಿ ಆರ್ಸಿಬಿ ರೆಕಾರ್ಡ್ ಬ್ರೇಕ್ ಮಾಡಿ ಹೊಸ ದಾಖಲೆ ಬರೆದರು. ಇವರ ಬ್ಯಾಟಿಂಗ್ ಆರ್ಭಟಕ್ಕೆ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಭಾರೀ ಅವಮಾನಕ್ಕೆ ಒಳಗಾಯಿತು ಎಂದು ಹೇಳಬಹುದು.
ಹ್ಯಾಟ್ರಿಕ್ ಗೆಲುವಿಗೆ ಚೆನ್ನೈ ಭರ್ಜರಿ ತಾಲೀಮು..!
ಚೆನ್ನೈ ಸೂಪರ್ ಕಿಂಗ್ಸ್ ತಂಡ 17ನೇ ಐಪಿಎಲ್ ಆವೃತ್ತಿಯಲ್ಲಿ ಸೋಲಿಲ್ಲದ ಸರದಾರ ಅನ್ನಿಸಿಕೊಂಡಿದೆ. ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿರೋ ಚೆನ್ನೈ ತಂಡ ಭರ್ಜರಿ ತಾಲೀಮು ನಡೆಸಿದೆ. ನಾಳೆ ವಿಶಾಖಪಟ್ಟಣಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದ್ದು, ಆಟಗಾರರು ಚೆಪಾಕ್ ಮೈದಾನದಲ್ಲಿ ಬೆವರು ಹರಿಸಿದ್ದಾರೆ. ಅಜಿಂಕ್ಯಾ ರಹಾನೆ, ರಚಿನ್ ರವೀಂದ್ರ, ಮುಸ್ತಾಫಿಜುರ್ ರೆಹಮಾನ್ ಸೇರಿದಂತೆ ಅನೇಕ ಆಟಗಾರರು ಟ್ರೈನಿಂಗ್ ಸೆಷನ್ನಲ್ಲಿ ಭಾಗಿಯಾಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ