/newsfirstlive-kannada/media/post_attachments/wp-content/uploads/2025/04/attack.jpg)
ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ದಾಳಿ ಬೆನ್ನಲ್ಲೇ ಭಾರತೀಯ ಸೇನೆಯೂ ಓರ್ವ ಉಗ್ರ ಸಂಹಾರ ಮಾಡಿದೆ.
ಜಮ್ಮು ಕಾಶ್ಮೀರದ ಬಂಡಿಪುರದಲ್ಲಿ ಎಲ್ಇಟಿ ಟಾಪ್ ಕಮಾಂಡರ್ ಅಲ್ತಾಫ್ ಲಲ್ಲಿಯನ್ನು ಸೇನೆ ಹೊಡೆದುರುಳಿಸಿದೆ. ಈ ಅಲ್ತಾಫ್ ಲಲ್ಲಿ ಫಿನಿಶ್ ಎಲ್ಇಟಿ ಟಾಪ್ ಕಮಾಂಡರ್ ಆಗಿದ್ದ.
ಇಂದು ಬೆಳಿಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯೂ ಓರ್ವ ಉಗ್ರನ ಹತ್ಯೆ ಮಾಡಿದೆ. ಇನ್ನೂ ಇದೇ ಕಾರ್ಯಾಚರಣೆಯ ವೇಳೆ ಇಬ್ಬರು ಯೋಧರಿಗೆ ಗಾಯಗಳಾಗಿವೆ. ಸದ್ಯ ಇಬ್ಬರು ಯೋಧರು ಪ್ರಥಮ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಒಬ್ಬರಲ್ಲ, ಇಬ್ಬರು ಉಗ್ರರ ಮನೆ ಉಡೀಸ್.. ಸ್ಫೋಟ ಮಾಡಿ ಧ್ವಂಸಗೊಳಿಸಿದ ಕ್ಷಣ ಹೇಗಿದೆ..? Video
ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಪೈಶಾಚಿಕ ದಾಳಿಗೆ 26 ಅಮಾಯಕರು ಜೀವ ಕಳೆದುಕೊಂಡಿದ್ದರು. ಹೀಗಾಗಿ ಈ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆ ದಿಟ್ಟ ಹೆಜ್ಜೆಯನ್ನಿಟ್ಟಿದೆ. 26 ಪ್ರವಾಸಿಗರ ಬಲಿ ಪಡೆದಿದ್ದ ಇಬ್ಬರು ಶಂಕಿತರ ಮನೆಗಳನ್ನು ಉಡೀಸ್ ಮಾಡಲಾಗಿದೆ. ಕಾಶ್ಮೀರದ ಟ್ರಾಲ್ನಲ್ಲಿರೋ ಅಸೀಫ್ ಶೈಖ್ ಹಾಗೂ ಅನಂತ್ನಾಗ್ ಜಿಲ್ಲೆಯಲ್ಲಿದ್ದ ಉಗ್ರ ಆದಿಲ್ ಮನೆಯನ್ನು ಉಡೀಸ್ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ