Advertisment

ಅತಿಯಾದ ಆತ್ಮವಿಶ್ವಾಸ ಬೇಡ; ಹಣದ ನಷ್ಟ ಸಾಧ್ಯತೆ; ಸ್ತ್ರೀಯರಿಗೆ ಶುಭಸುದ್ದಿ

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು ಕಾರ್ತಿಕ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಮಖಾ ನಕ್ಷತ್ರ ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

author-image
Ganesh Nachikethu
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

 ಮೇಷ 

RASHI_BHAVISHA_MESHA

  • ರಾಜಕಾರಣಿಗಳಿಗೆ ಬಹಳ ಉತ್ತಮ ದಿನ
  • ಅತಿಯಾದ ಆತ್ಮವಿಶ್ವಾಸ ಯಾವ ಕಾರಣಕ್ಕೂ ಬೇಡ
  • ನಿಮ್ಮ ಸ್ವಭಾವ ನಡೆತೆಗಳಿಂದ ಸ್ನೇಹಿತರು ಬಂಧುಗಳು ಕೋಪಗೊಳ್ಳಬಹುದು
  • ನಿಮ್ಮ ಸ್ವಭಾವವನ್ನು ಸ್ವಲ್ಪ ಬದಲಾಯಿಸಿಕೊಂಡರೆ ಒಳ್ಳೆಯದು
  • ವಿನಾಕಾರಣ ಬೇರೆ ರಾಜಕಾರಣಿಗಳೊಂದಿಗೆ ವಾದ-ವಿವಾದ ಬೇಡ ತೊಂದರೆ ಸಾಧ್ಯತೆ 
  •  ಕಾಲಭೈರವನನ್ನು ಆರಾಧನೆ ಮಾಡಿ

ವೃಷಭ:

RASHI_BHAVISHA_VRSHABA 

  • ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ಸ್ವಲ್ಪ ಸುಧಾರಣೆಗಳನ್ನ ಮಾಡಿಕೊಂಡರೆ ಒಳ್ಳೆಯದು
  • ತಪ್ಪು ಅರ್ಥವಾದ ನಂತರ ಪಶ್ಚಾತ್ತಾಪ ಪಡುತ್ತೀರಿ
  • ಪ್ರಾಣಿಯಿಂದ ಗಾಯಗೊಳ್ಳುವ ಸೂಚನೆಯಿದೆ ಎಚ್ಚರಿಕೆವಹಿಸಿ
  • ವಿದ್ಯಾರ್ಥಿಗಳು ಅತಿಯಾದ ಆತ್ಮವಿಶ್ವಾಸದಿಂದ ತಪ್ಪನ್ನೇ ಸರಿ ಎಂದು ವಾದ ಮಾಡಬಹುದು
  • ಗಾಯತ್ರಿದೇವಿಯನ್ನು ಪ್ರಾರ್ಥಿಸಿ

ಮಿಥುನ 

RASHI_BHAVISHA_MITHUNA

  • ಮನೆಯಿಂದ ಹೊರಡುವಾಗ ಬಾಯಿ ಸಿಹಿ ಮಾಡಿಕೊಂಡು ಹೊರಡಿ
  • ವಾಹನ ಹರಾಜಿನಲ್ಲಿ ಭಾಗವಹಿಸಬೇಡಿ ನಷ್ಟ ಆಗಬಹುದು
  • ಸರ್ಕಾರದಿಂದ ಹರಾಜಾಗುವ ಭೂಮಿ ಮತ್ತು ವಸ್ತುಗಳ ಹರಾಜಿನಲ್ಲಿ ಭಾಗವಹಿಸಿದರೆ ಶುಭವಿದೆ
  •  ನಿಮ್ಮ ಮನೆಯ ವಾತಾವರಣ ಬಹಳ ಚೆನ್ನಾಗಿರುತ್ತದೆ
  • ಭೂಮಿ ಆಸ್ತಿ ಖರೀದಿ ಮಾಡುತ್ತಿರಿ
  •  ಕುಲದೇವತಾ ಪ್ರಾರ್ಥನೆ ಮಾಡಿ
Advertisment

ಕಟಕ 

RASHI_BHAVISHA_KATAKA

  • ಇಂಜಿನಿಯರಿಂಗ್ ಕ್ಷೇತ್ರದಲ್ಲಿರುವವರಿಗೆ ಯಶಸ್ಸು ಗೌರವ ಸಿಗಲಿದೆ
  • ವಿನಾಕಾರಣ ಆರೋಗ್ಯ ಹಾಳಾಗಬಹುದು ಜಾಗ್ರತೆವಹಿಸಿ
  • ನಿಮ್ಮ ಹಲವು ದಿನದ ಕನಸು ಇಂದು ನೆರವೇರುವ ಸಾಧ್ಯತೆ
  • ಲ್ಯಾಪ್​ಟಾಪ್​ ಮೊಬೈಲ್​ ಬಳಕೆಯನ್ನ ಅಗತ್ಯವಿದ್ದಷ್ಟು ಬಳಸಿ
  • ಕಣ್ಣು ಮತ್ತು ತಲೆನೋವಿನ ಸಮಸ್ಯೆ ಅಧಿಕವಾಗಿ ಕಾಡಬಹುದು ಎಚ್ಚರಿಕೆ ಇರಲಿ
  • ಅಶ್ವಿನಿ ದೇವತೆಗಳನ್ನ ಸ್ಮರಿಸಿ

ಸಿಂಹ

RASHI_BHAVISHA_SIMHA

 

  • ಅತಿ ಮಖ್ಯವಾದ ಕೆಲಸ ನಿಮ್ಮ ಬೇಜವಾಬ್ದಾರಿಯಿಂದ ಕೆಡುವ ಸಾಧ್ಯತೆ ಇದೆ
  • ಹಣದ ನಷ್ಟ ಆಗಬಹುದು
  • ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ
  • ಸ್ತ್ರೀಯರು ತಮ್ಮ ಆಸೆ-ಆಕಾಂಕ್ಷೆಗಳನ್ನು ವ್ಯಕ್ತಪಡಿಸದಿದ್ದರೆ ಉತ್ತಮ
  • ಹಿಂದೆ ಖರೀದಿಸಿದ ವಸ್ತುವಿನಿಂದ ನಿಷ್ಠೂರಕ್ಕೆ ಒಳಗಾಗುವ ಸಾಧ್ಯತೆ
  •  ಶಿವಲಿಂಗಕ್ಕೆ ತುಂಬೆ ಹೂವಿನಿಂದ ಅರ್ಚನೆ ಮಾಡಿ

ಕನ್ಯಾ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಕುಟುಂಬದವರು ತೆಗೆದುಕೊಂಡ ನಿರ್ಧಾರ ಮನೆಯ ವಾತಾವರಣವನ್ನು ಕಲುಷಿತ ಮಾಡಬಹುದು
  • ನಿಮ್ಮ ಕೋಪದ ಮೇಲೆ ಹಿಡಿತ ಇರಲಿ
  • ಇಂದು ನಿಮ್ಮ ತಾಳ್ಮೆ ಕಳೆದುಕೊಳ್ಳಬೇಡಿ
  • ಯಾವುದೇ ಪರಿಸ್ಥಿತಿಯನ್ನ ವಿಕೋಪಕ್ಕೆ ಹೋಗಲು ಅವಕಾಶ ಕೊಡಬೇಡಿ
  • ಮನೆಯವರು ತೆಗೆದುಕೊಂಡು ನಿರ್ಧಾರ ಬಗ್ಗೆ ಹೆಚ್ಚು ಗಮನವಿರಲಿ
  • ಕೆಂಪು ಹೂವಿನಿಂದ ಕಾಳಿಕಾದೇವಿಯನ್ನ ಆರ್ಚನೆ ಮಾಡಿ
Advertisment

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಕ್ಕಳು ನಿಮ್ಮ ಬಗ್ಗೆ ಮಾನಸಿಕವಾಗಿ ಬೇಸತ್ತು ದೂರವಾಗಬಹುದು ಎಚ್ಚರಿಕೆ ಇರಲಿ
  • ಈ ದಿನ ಆಗತ್ಯವಾಗಿ ವಿಶ್ರಾಂತಿ ಮಾಡಿದರೆ ಒಳ್ಳೆಯದು 
  • ಇಂದು ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ 
  • ಹಿಂದೆ ಸೇವಿಸಿದ ಆಹಾರ ವಿಷಾಹಾರವಾಗಿ ಪರಿವರ್ತನೆಯಾಗುವ ಸಾಧ್ಯತೆ
  • ಮನೆಮದ್ದನ್ನು ಉಪಯೋಗಿಸಿ ಗುಣಮುಖರಾಗಬಹುದು
  • ಮೂಕಾಂಬಿಕೆಯನ್ನು ಧ್ಯಾನ ಮಾಡಿ

ವೃಶ್ಚಿಕ

RASHI_BHAVISHA_VRUSHCHIKA

  • ಈ ದಿನ ಒಳ್ಳೆಯ ವಿಚಾರಗಳಿಂದ ಪ್ರಾರಂಭವಾಗುತ್ತದೆ
  • ನಿಮ್ಮ ಕೆಲಸ-ಕಾರ್ಯಗಳ ಗುಣಮಟ್ಟ ಹೆಚ್ಚಾಗುತ್ತದೆ
  • ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಪ್ರಗತಿ ಕಾಣುವ ದಿನ 
  • ಹಿರಿಯರ ಆಶೀರ್ವಾದ ಮಾರ್ಗದರ್ಶನ ಪ್ರೀತಿ ಸಿಗುವ ದಿನ
  • ಕಾಳಿಕಾದೇವಿಯನ್ನು ಪ್ರಾರ್ಥನೆ ಮಾಡಿ

ಧನಸ್ಸು

RASHI_BHAVISHA_DHANASU

  • ಯಾವುದೇ ಪರಿಸ್ಥಿತಿಯಲ್ಲಿ ನೀವು ಉದ್ವಿಗ್ನಕ್ಕೆ ಒಳಗಾಗದಿದ್ದರೆ ಒಳ್ಳೆಯದು
  • ಇಂದು ನಿಮ್ಮ ಮನಸ್ಸು ಶಾಂತ ಸ್ಥಿತಿಯಲ್ಲಿರಲಿ
  • ಮನೆಯ ದಿನನಿತ್ಯದ ಖರ್ಚಿಗೆ ತೊಂದರೆಯಾಗಬಹುದು 
  • ಉದ್ವಿಗ್ನ ಪರಿಸ್ಥಿತಿ ಏರ್ಪಟಾದಾಗ ಅದನ್ನ ನಿಯಂತ್ರಿಸಲು ಸಾಧ್ಯವಾಗದೆ ಇರಬಹುದು
  • ಇಂದು ಹಣದ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿರಲಿ
  • ಸ್ವಾರ್ಥಿಗಳ ಮಾತಿಗೆ ಮರುಳಾಗಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ
  •  ಧನಲಕ್ಷ್ಮಿ ಪ್ರಾರ್ಥನೆ ಮಾಡಿ
Advertisment

ಮಕರ

RASHI_BHAVISHA_MAKARA

  • ನಿಮ್ಮ ವೃತ್ತಿಯಲ್ಲಿ ಕಗ್ಗಂಟಾದ ಕೆಲಸಗಳು ಇಂದು ಪೂರ್ಣಗೊಳ್ಳುವ ಸಾಧ್ಯತೆ
  • ಇಂದು ಯಾವುದೇ ಒಳ್ಳೆಯ ಕೆಲಸಕ್ಕೆ  ಕೈ ಹಾಕಿದ್ರೂ ಶುಭವಾಗುತ್ತದೆ
  • ನಿಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಸ್ನೇಹಿತರು ಕುಟುಂಬದವರು ನಿಮ್ಮ ಬಗ್ಗೆ ಸಂತೋಷ ಪಡುತ್ತಾರೆ
  • ನಿಮ್ಮ ಕುಟುಂಬದ ಜೊತೆ ಬಹಳ ಮೌಲ್ಯಯುತ ಸಮಯ ಕಳೆಯುವ ಸಾಧ್ಯತೆ
  •  ದಿನಪೂರ್ತಿ ಬಿಡುವಿಲ್ಲದೆ ನಿಮ್ಮ ಕೆಲಸಗಳಲ್ಲಿ ನಿರತರಾಗುವ ಸಾಧ್ಯತೆ ಹೆಚ್ಚು
  • ಪರಶುರಾಮನನ್ನು ಪ್ರಾರ್ಥನೆ ಮಾಡಿ

ಕುಂಭ

RASHI_BHAVISHA_KUMBHA

  • ಪರಸ್ಪರ ವಿವಾಹ ಅಪೇಕ್ಷಿಗಳ ವೈವಾಹಿಕ ವಿಚಾರದಲ್ಲಿ ಸಹಾಯಕ್ಕೆ ಹೋದರೆ ಅವಮಾನ ಸಾಧ್ಯತೆ
  • ನಿಮ್ಮ ಕೋಪ ನಿಯಂತ್ರಣದಲ್ಲಿ ಇರಲಿ
  • ಇಂದು ಯಾರಿಗೂ ಮನಸ್ಸಿಗೆ ನೋವಾಗದಂತೆ ವರ್ತಿಸಬೇಡಿ
  • ನಿಮ್ಮ ಕುಟುಂಬಕ್ಕೆ ನಿಮ್ಮಿಂದ ಸೌಖ್ಯ ಆನಂದ ಸಿಗುವ ದಿನ
  • ಇಂದು ಕೆಟ್ಟ ಭಾಷೆ ಬಳಸಬೇಡಿ 
  • ವಿಕಲಚೇತನರಿಗೆ ಹಣ್ಣನ್ನು ನೀಡಿ ಶುಭವಾಗುತ್ತದೆ

ಮೀನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಪ್ರತಿಭೆಗೆ ಗೌರವ ಪುರಸ್ಕಾರ ದೊರೆಯುವ ದಿನ
  • ಇಂದು ಸಂಘ-ಸಂಸ್ಥೆಗಳನ್ನು ಆರಂಭಿಸಲು ಶುಭದಿನ 
  • ಇಂದು ಆರ್ಥಿಕವಾಗಿಯೂ ಬಹಳ ಅನುಕೂಲಕರವಾಗಿದೆ
  • ಸಂಬಂಧಿಕರ ಜೊತೆ ದೊಡ್ಡ ಕಾರ್ಯಗಳ ಬಗ್ಗೆ ಚರ್ಚೆ ಸಾಧ್ಯತೆ
  • ದೂರದ ಪ್ರದೇಶಗಳಿಗೆ ಪ್ರಯಾಣ ಮಾಡುವುದರಿಂದ ಶುಭವಿದೆ
  • ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಶುಭದಿನ
  • ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಶುಭ
  •  ಪಕ್ಷಿಗಳಿಗೆ ಆಹಾರ ನೀರು ಕೊಡಿ ಶುಭವಾಗುತ್ತದೆ
Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment