/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಮೇಷ
/filters:format(webp)/newsfirstlive-kannada/media/media_files/2025/07/31/rashi_bhavisha_mesha-2025-07-31-22-55-03.jpg)
- ರಾಜಕಾರಣಿಗಳಿಗೆ ಬಹಳ ಉತ್ತಮ ದಿನ
- ಅತಿಯಾದ ಆತ್ಮವಿಶ್ವಾಸ ಯಾವ ಕಾರಣಕ್ಕೂ ಬೇಡ
- ನಿಮ್ಮ ಸ್ವಭಾವ ನಡೆತೆಗಳಿಂದ ಸ್ನೇಹಿತರು ಬಂಧುಗಳು ಕೋಪಗೊಳ್ಳಬಹುದು
- ನಿಮ್ಮ ಸ್ವಭಾವವನ್ನು ಸ್ವಲ್ಪ ಬದಲಾಯಿಸಿಕೊಂಡರೆ ಒಳ್ಳೆಯದು
- ವಿನಾಕಾರಣ ಬೇರೆ ರಾಜಕಾರಣಿಗಳೊಂದಿಗೆ ವಾದ-ವಿವಾದ ಬೇಡ ತೊಂದರೆ ಸಾಧ್ಯತೆ
- ಕಾಲಭೈರವನನ್ನು ಆರಾಧನೆ ಮಾಡಿ
ವೃಷಭ:
- ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ಸ್ವಲ್ಪ ಸುಧಾರಣೆಗಳನ್ನ ಮಾಡಿಕೊಂಡರೆ ಒಳ್ಳೆಯದು
- ತಪ್ಪು ಅರ್ಥವಾದ ನಂತರ ಪಶ್ಚಾತ್ತಾಪ ಪಡುತ್ತೀರಿ
- ಪ್ರಾಣಿಯಿಂದ ಗಾಯಗೊಳ್ಳುವ ಸೂಚನೆಯಿದೆ ಎಚ್ಚರಿಕೆವಹಿಸಿ
- ವಿದ್ಯಾರ್ಥಿಗಳು ಅತಿಯಾದ ಆತ್ಮವಿಶ್ವಾಸದಿಂದ ತಪ್ಪನ್ನೇ ಸರಿ ಎಂದು ವಾದ ಮಾಡಬಹುದು
- ಗಾಯತ್ರಿದೇವಿಯನ್ನು ಪ್ರಾರ್ಥಿಸಿ
ಮಿಥುನ
/filters:format(webp)/newsfirstlive-kannada/media/media_files/2025/07/31/rashi_bhavisha_mithuna-2025-07-31-22-55-03.jpg)
- ಮನೆಯಿಂದ ಹೊರಡುವಾಗ ಬಾಯಿ ಸಿಹಿ ಮಾಡಿಕೊಂಡು ಹೊರಡಿ
- ವಾಹನ ಹರಾಜಿನಲ್ಲಿ ಭಾಗವಹಿಸಬೇಡಿ ನಷ್ಟ ಆಗಬಹುದು
- ಸರ್ಕಾರದಿಂದ ಹರಾಜಾಗುವ ಭೂಮಿ ಮತ್ತು ವಸ್ತುಗಳ ಹರಾಜಿನಲ್ಲಿ ಭಾಗವಹಿಸಿದರೆ ಶುಭವಿದೆ
- ನಿಮ್ಮ ಮನೆಯ ವಾತಾವರಣ ಬಹಳ ಚೆನ್ನಾಗಿರುತ್ತದೆ
- ಭೂಮಿ ಆಸ್ತಿ ಖರೀದಿ ಮಾಡುತ್ತಿರಿ
- ಕುಲದೇವತಾ ಪ್ರಾರ್ಥನೆ ಮಾಡಿ
ಕಟಕ
/filters:format(webp)/newsfirstlive-kannada/media/media_files/2025/07/31/rashi_bhavisha_kataka-2025-07-31-22-55-03.jpg)
- ಇಂಜಿನಿಯರಿಂಗ್ ಕ್ಷೇತ್ರದಲ್ಲಿರುವವರಿಗೆ ಯಶಸ್ಸು ಗೌರವ ಸಿಗಲಿದೆ
- ವಿನಾಕಾರಣ ಆರೋಗ್ಯ ಹಾಳಾಗಬಹುದು ಜಾಗ್ರತೆವಹಿಸಿ
- ನಿಮ್ಮ ಹಲವು ದಿನದ ಕನಸು ಇಂದು ನೆರವೇರುವ ಸಾಧ್ಯತೆ
- ಲ್ಯಾಪ್​ಟಾಪ್​ ಮೊಬೈಲ್​ ಬಳಕೆಯನ್ನ ಅಗತ್ಯವಿದ್ದಷ್ಟು ಬಳಸಿ
- ಕಣ್ಣು ಮತ್ತು ತಲೆನೋವಿನ ಸಮಸ್ಯೆ ಅಧಿಕವಾಗಿ ಕಾಡಬಹುದು ಎಚ್ಚರಿಕೆ ಇರಲಿ
- ಅಶ್ವಿನಿ ದೇವತೆಗಳನ್ನ ಸ್ಮರಿಸಿ
ಸಿಂಹ
/filters:format(webp)/newsfirstlive-kannada/media/media_files/2025/07/31/rashi_bhavisha_simha-2025-07-31-22-55-03.jpg)
- ಅತಿ ಮಖ್ಯವಾದ ಕೆಲಸ ನಿಮ್ಮ ಬೇಜವಾಬ್ದಾರಿಯಿಂದ ಕೆಡುವ ಸಾಧ್ಯತೆ ಇದೆ
- ಹಣದ ನಷ್ಟ ಆಗಬಹುದು
- ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ
- ಸ್ತ್ರೀಯರು ತಮ್ಮ ಆಸೆ-ಆಕಾಂಕ್ಷೆಗಳನ್ನು ವ್ಯಕ್ತಪಡಿಸದಿದ್ದರೆ ಉತ್ತಮ
- ಹಿಂದೆ ಖರೀದಿಸಿದ ವಸ್ತುವಿನಿಂದ ನಿಷ್ಠೂರಕ್ಕೆ ಒಳಗಾಗುವ ಸಾಧ್ಯತೆ
- ಶಿವಲಿಂಗಕ್ಕೆ ತುಂಬೆ ಹೂವಿನಿಂದ ಅರ್ಚನೆ ಮಾಡಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬದವರು ತೆಗೆದುಕೊಂಡ ನಿರ್ಧಾರ ಮನೆಯ ವಾತಾವರಣವನ್ನು ಕಲುಷಿತ ಮಾಡಬಹುದು
- ನಿಮ್ಮ ಕೋಪದ ಮೇಲೆ ಹಿಡಿತ ಇರಲಿ
- ಇಂದು ನಿಮ್ಮ ತಾಳ್ಮೆ ಕಳೆದುಕೊಳ್ಳಬೇಡಿ
- ಯಾವುದೇ ಪರಿಸ್ಥಿತಿಯನ್ನ ವಿಕೋಪಕ್ಕೆ ಹೋಗಲು ಅವಕಾಶ ಕೊಡಬೇಡಿ
- ಮನೆಯವರು ತೆಗೆದುಕೊಂಡು ನಿರ್ಧಾರ ಬಗ್ಗೆ ಹೆಚ್ಚು ಗಮನವಿರಲಿ
- ಕೆಂಪು ಹೂವಿನಿಂದ ಕಾಳಿಕಾದೇವಿಯನ್ನ ಆರ್ಚನೆ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಕ್ಕಳು ನಿಮ್ಮ ಬಗ್ಗೆ ಮಾನಸಿಕವಾಗಿ ಬೇಸತ್ತು ದೂರವಾಗಬಹುದು ಎಚ್ಚರಿಕೆ ಇರಲಿ
- ಈ ದಿನ ಆಗತ್ಯವಾಗಿ ವಿಶ್ರಾಂತಿ ಮಾಡಿದರೆ ಒಳ್ಳೆಯದು
- ಇಂದು ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ
- ಹಿಂದೆ ಸೇವಿಸಿದ ಆಹಾರ ವಿಷಾಹಾರವಾಗಿ ಪರಿವರ್ತನೆಯಾಗುವ ಸಾಧ್ಯತೆ
- ಮನೆಮದ್ದನ್ನು ಉಪಯೋಗಿಸಿ ಗುಣಮುಖರಾಗಬಹುದು
- ಮೂಕಾಂಬಿಕೆಯನ್ನು ಧ್ಯಾನ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/media_files/2025/07/31/rashi_bhavisha_vrushchika-2025-07-31-22-55-03.jpg)
- ಈ ದಿನ ಒಳ್ಳೆಯ ವಿಚಾರಗಳಿಂದ ಪ್ರಾರಂಭವಾಗುತ್ತದೆ
- ನಿಮ್ಮ ಕೆಲಸ-ಕಾರ್ಯಗಳ ಗುಣಮಟ್ಟ ಹೆಚ್ಚಾಗುತ್ತದೆ
- ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಪ್ರಗತಿ ಕಾಣುವ ದಿನ
- ಹಿರಿಯರ ಆಶೀರ್ವಾದ ಮಾರ್ಗದರ್ಶನ ಪ್ರೀತಿ ಸಿಗುವ ದಿನ
- ಕಾಳಿಕಾದೇವಿಯನ್ನು ಪ್ರಾರ್ಥನೆ ಮಾಡಿ
ಧನಸ್ಸು
/filters:format(webp)/newsfirstlive-kannada/media/media_files/2025/07/31/rashi_bhavisha_dhanasu-2025-07-31-22-55-03.jpg)
- ಯಾವುದೇ ಪರಿಸ್ಥಿತಿಯಲ್ಲಿ ನೀವು ಉದ್ವಿಗ್ನಕ್ಕೆ ಒಳಗಾಗದಿದ್ದರೆ ಒಳ್ಳೆಯದು
- ಇಂದು ನಿಮ್ಮ ಮನಸ್ಸು ಶಾಂತ ಸ್ಥಿತಿಯಲ್ಲಿರಲಿ
- ಮನೆಯ ದಿನನಿತ್ಯದ ಖರ್ಚಿಗೆ ತೊಂದರೆಯಾಗಬಹುದು
- ಉದ್ವಿಗ್ನ ಪರಿಸ್ಥಿತಿ ಏರ್ಪಟಾದಾಗ ಅದನ್ನ ನಿಯಂತ್ರಿಸಲು ಸಾಧ್ಯವಾಗದೆ ಇರಬಹುದು
- ಇಂದು ಹಣದ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿರಲಿ
- ಸ್ವಾರ್ಥಿಗಳ ಮಾತಿಗೆ ಮರುಳಾಗಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ
- ಧನಲಕ್ಷ್ಮಿ ಪ್ರಾರ್ಥನೆ ಮಾಡಿ
ಮಕರ
/filters:format(webp)/newsfirstlive-kannada/media/media_files/2025/07/31/rashi_bhavisha_makara-2025-07-31-22-55-03.jpg)
- ನಿಮ್ಮ ವೃತ್ತಿಯಲ್ಲಿ ಕಗ್ಗಂಟಾದ ಕೆಲಸಗಳು ಇಂದು ಪೂರ್ಣಗೊಳ್ಳುವ ಸಾಧ್ಯತೆ
- ಇಂದು ಯಾವುದೇ ಒಳ್ಳೆಯ ಕೆಲಸಕ್ಕೆ ಕೈ ಹಾಕಿದ್ರೂ ಶುಭವಾಗುತ್ತದೆ
- ನಿಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಸ್ನೇಹಿತರು ಕುಟುಂಬದವರು ನಿಮ್ಮ ಬಗ್ಗೆ ಸಂತೋಷ ಪಡುತ್ತಾರೆ
- ನಿಮ್ಮ ಕುಟುಂಬದ ಜೊತೆ ಬಹಳ ಮೌಲ್ಯಯುತ ಸಮಯ ಕಳೆಯುವ ಸಾಧ್ಯತೆ
- ದಿನಪೂರ್ತಿ ಬಿಡುವಿಲ್ಲದೆ ನಿಮ್ಮ ಕೆಲಸಗಳಲ್ಲಿ ನಿರತರಾಗುವ ಸಾಧ್ಯತೆ ಹೆಚ್ಚು
- ಪರಶುರಾಮನನ್ನು ಪ್ರಾರ್ಥನೆ ಮಾಡಿ
ಕುಂಭ
/filters:format(webp)/newsfirstlive-kannada/media/media_files/2025/07/31/rashi_bhavisha_kumbha-2025-07-31-22-55-02.jpg)
- ಪರಸ್ಪರ ವಿವಾಹ ಅಪೇಕ್ಷಿಗಳ ವೈವಾಹಿಕ ವಿಚಾರದಲ್ಲಿ ಸಹಾಯಕ್ಕೆ ಹೋದರೆ ಅವಮಾನ ಸಾಧ್ಯತೆ
- ನಿಮ್ಮ ಕೋಪ ನಿಯಂತ್ರಣದಲ್ಲಿ ಇರಲಿ
- ಇಂದು ಯಾರಿಗೂ ಮನಸ್ಸಿಗೆ ನೋವಾಗದಂತೆ ವರ್ತಿಸಬೇಡಿ
- ನಿಮ್ಮ ಕುಟುಂಬಕ್ಕೆ ನಿಮ್ಮಿಂದ ಸೌಖ್ಯ ಆನಂದ ಸಿಗುವ ದಿನ
- ಇಂದು ಕೆಟ್ಟ ಭಾಷೆ ಬಳಸಬೇಡಿ
- ವಿಕಲಚೇತನರಿಗೆ ಹಣ್ಣನ್ನು ನೀಡಿ ಶುಭವಾಗುತ್ತದೆ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಪ್ರತಿಭೆಗೆ ಗೌರವ ಪುರಸ್ಕಾರ ದೊರೆಯುವ ದಿನ
- ಇಂದು ಸಂಘ-ಸಂಸ್ಥೆಗಳನ್ನು ಆರಂಭಿಸಲು ಶುಭದಿನ
- ಇಂದು ಆರ್ಥಿಕವಾಗಿಯೂ ಬಹಳ ಅನುಕೂಲಕರವಾಗಿದೆ
- ಸಂಬಂಧಿಕರ ಜೊತೆ ದೊಡ್ಡ ಕಾರ್ಯಗಳ ಬಗ್ಗೆ ಚರ್ಚೆ ಸಾಧ್ಯತೆ
- ದೂರದ ಪ್ರದೇಶಗಳಿಗೆ ಪ್ರಯಾಣ ಮಾಡುವುದರಿಂದ ಶುಭವಿದೆ
- ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಶುಭದಿನ
- ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಶುಭ
- ಪಕ್ಷಿಗಳಿಗೆ ಆಹಾರ ನೀರು ಕೊಡಿ ಶುಭವಾಗುತ್ತದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us