Advertisment

ಇನ್ಪೋಸಿಸ್‌ನ ಡಾ. ಸುಧಾಮೂರ್ತಿ ಯಾಮಾರಿಸಲು ಸೈಬರ್ ವಂಚಕರ ಯತ್ನ, ಸುಧಾಮೂರ್ತಿ ಮಾಡಿದ್ದೇನು?

ಇನ್ಪೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಸೈಬರ್ ವಂಚಕರು ಕಾಟ ಕೊಟ್ಟಿದ್ದಾರೆ. ಸುಧಾಮೂರ್ತಿ ಅವರಿಂದ ಹಣ ಕಸಿಯಲು ನಾನಾ ನಾಟಕವಾಡಿದ್ದಾರೆ. ಸುಧಾಮೂರ್ತಿ ಅವರಿಂದ ವೈಯಕ್ತಿಕ ಮಾಹಿತಿ ಪಡೆಯಲು ಯತ್ನಿಸಿದ್ದಾನೆ. ಎಚ್ಚೆತ್ತುಕೊಂಡ ಸುಧಾಮೂರ್ತಿ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

author-image
Chandramohan
infosys sudha murthy

ಇನ್ಪೋಸಿಸ್ ಫೌಂಡೇಷನ್ ಮಾಜಿ ಮುಖ್ಯಸ್ಥೆ ಸುಧಾಮೂರ್ತಿ

Advertisment
  • ರಾಜ್ಯಸಭಾ ಸದಸ್ಯೆ ಸುಧಾಮೂರ್ತಿಗೆ ಸೈಬರ್ ವಂಚಕರ ಕಾಟ
  • ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ ಸುಧಾಮೂರ್ತಿ
  • ಸೈಬರ್ ವಂಚಕರು ಹೇಳಿದ್ದೇನು? ಸುಧಾಮೂರ್ತಿ ಮಾಡಿದ್ದೇನು?

ಬೆಂಗಳೂರಿನ  ಇನ್ಫೋಸಿಸ್ ಫೌಂಡೇಷನ್  ಮಾಜಿ ಮುಖ್ಯಸ್ಥೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿಗೆ ಸೈಬರ್ ವಂಚಕರು ಯಾಮಾರಿಸಲು ಯತ್ನಿಸಿ ವಿಫಲವಾಗಿದ್ದಾರೆ.  ದೂರ ಸಂಪರ್ಕ ಸಚಿವಾಲಯದ ಉದ್ಯೋಗಿ ಅಂತ ಹೇಳಿ ವಂಚನೆ ಯತ್ನ ಮಾಡಿದ್ದಾರೆ.  ಸೆಪ್ಟೆಂಬರ್ 5 ರಂದು ಕರೆ ಮಾಡಿದ್ದ ವಂಚಕರು,  ಸೈಬರ್ ವಂಚನೆಗೆ ಯತ್ನಿಸಿದ್ದಾರೆ. ನಿಮ್ಮ ನಂಬರ್ ಆಧಾರ್ ಗೆ ಲಿಂಕ್ ಮಾಡದೆ ನೋಂದಾಯಿಸಲಾಗಿದೆ ಎಂದು ಹೇಳಿ ವೈಯಕ್ತಿಕ ಮಾಹಿತಿ ಪಡೆಯಲು ಸೈಬರ್ ಖದೀಮ ಯತ್ನಿಸಿದ್ದ.  ಜೊತೆಗೆ ನಿಮ್ಮ ನಂಬರ್ ನಿಂದ ಅಶ್ಲೀಲ ವಿಡಿಯೋ ಕಳಿಸಲಾಗ್ತಿದೆ.  ಅದನ್ನು ನಿಲ್ಲಿಸಲಾಗಿದೆ ಎಂದು ಬೆದರಿಕೆ ಹಾಕಿದ್ದಾನೆ ಅಂತ ದೂರು ನೀಡಿದ್ದಾರೆ. ಟ್ರೂಕಾಲರ್  ನಲ್ಲಿ ಆ ನಂಬರ್ ಚೆಕ್ ಮಾಡಿದಾಗ ಟೆಲಿಕಾಂ ಡೆಪಾರ್ಟ್ ಮೆಂಟ್‌  ಅಂತ ಬಂದಿದೆ. ಡಾಕ್ಟರ್ ಸುಧಾಮೂರ್ತಿ ಅವರು  ಸೈಬರ್ ವಂಚಕರ ಟ್ರ್ಯಾಪ್ ಗೆ ಒಳಗಾಗದೆ ಪೊಲೀಸರಿಗೆ ದೂರು  ನೀಡಿದ್ದಾರೆ.  ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಧಾಮೂರ್ತಿ ಅವರು ಯಾವುದೇ ಹಣವನ್ನು ಸೈಬರ್ ವಂಚಕರಿಗೆ ನೀಡಿಲ್ಲ. ತಕ್ಷಣವೇ  ಎಚ್ಚೆತ್ತುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. 

Advertisment

cyber crimes




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

cyber fraud and digital arrest
Advertisment
Advertisment
Advertisment