Advertisment

ಮಾಸ್ಕ್ ಮ್ಯಾನ್ ಚಿನ್ನಯ್ಯ ಬಂಧನಕ್ಕೆ ಸಂತಸ ವ್ಯಕ್ತಪಡಿಸಿದ ಧರ್ಮಸ್ಥಳ ಭಕ್ತಾದಿಗಳು

ಮಾಸ್ಕ್ ಮ್ಯಾನ್ ಬಂಧನಕ್ಕೆ ಧರ್ಮಸ್ಥಳದ ಭಕ್ತಾದಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಬುರುಡೆ ಹಿಡಿದುಕೊಂಡ ಬಂದಿದ್ದ ಚಿನ್ನಯ್ಯ ಎಲ್ಲ ಬುರುಡೆ ಬಿಟ್ಟು, ಜನರು, ಪೊಲೀಸರನ್ನು ಬೇಸ್ತುಬೀಳುವಂತೆ ಮಾಡಿದ್ದ. ಮಂಜುನಾಥಸ್ವಾಮಿ ಸುಳ್ಳು ದೂರು ನೀಡಿದವರನ್ನು ಸುಮ್ಮನೇ ಬಿಡಲ್ಲ ಎಂದಿದ್ದಾರೆ ಭಕ್ತಾದಿಗಳು.

author-image
Chandramohan
mask man face revealed022

ಮಾಸ್ಕ್ ಮ್ಯಾನ್ ಅಸಲಿ ಮುಖ ಬಹಿರಂಗ

Advertisment
  • ಮಾಸ್ಕ್ ಮ್ಯಾನ್ ಬಂಧನಕ್ಕೆ ಧರ್ಮಸ್ಥಳ ಭಕ್ತಾದಿಗಳ ಸಂತಸ
  • ಸುಳ್ಳು ದೂರು ಕೊಟ್ಟವರನ್ನು ದೇವರು ಸುಮ್ಮನೇ ಬಿಡಲ್ಲ ಎಂದ ಭಕ್ತರು

ಮಾಸ್ಕ್ ಮ್ಯಾನ್ ನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಸುಳ್ಳು ದೂರು ನೀಡಿದ ಆರೋಪ ಹಾಗೂ ಮೊದಲ ಬುರುಡೆಯನ್ನು ಎಲ್ಲಿಂದ ತಂದ ಎಂಬ ಮಾಹಿತಿಯನ್ನು ಪೊಲೀಸರಿಗೆ ನೀಡದೇ ಇರೋ ಕಾರಣದಿಂದ ಕೇಸ್ ದಾಖಲಿಸಿ, ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು ಎಸ್‌ಐಟಿ ಅಧಿಕಾರಿಗಳು ಇಂದು ಬೆಳಿಗ್ಗೆ ಬಂಧಿಸಿದ್ದಾರೆ. ಈಗ ಧರ್ಮಸ್ಥಳದ ಕೇಸ್ ನಲ್ಲಿ ದೂರುದಾರ, ಸಾಕ್ಷಿಯಾಗಿದ್ದ ಚಿನ್ನಯ್ಯ ಅಲಿಯಾಸ್ ಚೆನ್ನ ಈಗ ಎಸ್‌ಐಟಿಯ ಅತಿಥಿಯಾಗಿದ್ದಾನೆ. ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು ಬಂಧಿಸುತ್ತಿದ್ದಂತೆ, ಧರ್ಮಸ್ಥಳದಲ್ಲಿ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳದಲ್ಲಿ ಜೈ ಧರ್ಮಸ್ಥಳ ಎಂಬ ಪ್ಲೇಕಾರ್ಡ್ ಹಿಡಿದ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳ ಹಾಗೂ  ವೀರೇಂದ್ರ ಹೆಗಡೆಯವರಿಗೆ ಜೈಕಾರವನ್ನು  ಭಕ್ತರು ಕೂಗಿದ್ದಾರೆ. ಮಂಜುನಾಥ್ ಸ್ವಾಮಿ, ಅಣ್ಣಪ್ಪ ಸ್ವಾಮಿ ಯಾರನ್ನೂ ಬಿಡಲ್ಲ.  ಜನ್ಮ, ಜನ್ಮಕ್ಕೂ ಕರ್ಮದ ಪಾಪ ಅನುಭವಿಸುತ್ತಾರೆ ಎಂದು  ಭಕ್ತಾದಿಗಳು ಸುಳ್ಳು ದೂರು ನೀಡಿದ ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Advertisment

MASK_MAN_NEW





ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Mask man real face revealed
Advertisment
Advertisment
Advertisment