Advertisment

ಬೀರೂರಿನ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣೀಕ ಭವಿಷ್ಯವಾಣಿ ಏನು ಗೊತ್ತಾ?

ಚಿಕ್ಕಮಗಳೂರಿನ ಕಡೂರು ತಾಲ್ಲೂಕಿನ ಬೀರೂರಿನ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಕಾರ್ಣಿಕ ಇಂದು ಮುಂಜಾನೆ ಹೊರಬಿದ್ದಿದೆ. ಈ ಭಾರಿ ಧರೆಗೆ ವರುಣನ ಆಗಮನವಾಯಿತು. ವಿಶ್ವಕ್ಕೆ ಶಾಂತಿಯ ಭಂಗವಾಯಿತು ಎಂದು ಕಾರ್ಣಿಯ ಭವಿಷ್ಯವಾಣಿ ನುಡಿದಿದೆ.

author-image
Chandramohan
Biruru karnika bhavishya vani

ಬೀರೂರು ಮೈಲಾರಲಿಂಗೇಶ್ವರಸ್ವಾಮಿಯ ಕಾರ್ಣಿಕ ಭವಿಷ್ಯವಾಣಿ

Advertisment
  • ಬೀರೂರು ಮೈಲಾರಲಿಂಗೇಶ್ವರಸ್ವಾಮಿಯ ಕಾರ್ಣಿಕ ಭವಿಷ್ಯವಾಣಿ
  • ಕಾರ್ಣೀಕ ನುಡಿದ ಭವಿಷ್ಯವಾಣಿ ಏನು ಗೊತ್ತಾ?


ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ  ಬೀರೂರು  ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ಭವಿಷ್ಯ ನುಡಿದಿದೆ.  ಇಂದು  ಬೆಳಗಿನ ಜಾವ  ಕಾರ್ಣಿಕದ ಭವಿಷ್ಯ ನುಡಿ ಹೊರ ಬಿದ್ದಿದೆ. ಬೀರೂರಿನ ಮಹಾನವಮಿ ಬಯಲಿನಲ್ಲಿ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ಭವಿಷ್ಯ ನುಡಿದಿದೆ. 
ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ
ಧರ್ಮ - ಅಧರ್ಮ ಸಂಕಷ್ಟವಾಯಿತು
ವಿಶ್ವಕ್ಕೆ ಶಾಂತಿಯ ಭಂಗವಾಯಿತು
ಧರೆಗೆ ವರುಣನ ಆಗಮನವಾಯಿತು
ಸರ್ವರು ಎಚ್ಚರದಿಂದಿರಬೇಕು ಪರಾಕ್

Advertisment

 ಹೀಗೆ ದೇವಸ್ಥಾನದ ಅರ್ಚಕ ದಶರಥ ಪೂಜಾರ್ ಅವರು ಕಾರ್ಣಿಕ ನುಡಿ ನುಡಿದಿದ್ದಾರೆ. 
ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸಿದ್ದರು. ಇಲ್ಲಿನ ಕಾರ್ಣಿಕ ನುಡಿ ವರ್ಷದೊಳಗೆ ನಡೆಯುತ್ತೆ ಎಂಬ ನಂಬಿಕೆ ಇದೆ.  ಕಡೂರು ತಾಲೂಕಿನ ಬೀರೂರಿನಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನ ಇದೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

BIRURU KARNIKA BHAVISHYA VANI
Advertisment
Advertisment
Advertisment