ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ತೀರ್ಪು ಕಾನೂನಾತ್ಮಕವಾಗಿ ಬಂದಿದೆ. ಈ ಬಗ್ಗೆ ನನಗೂ ಹೆಚ್ಚು ಮಾಹಿತಿ ಇಲ್ಲ. ಎಲ್ಲರೂ ಕಾನೂನನ್ನೇ ಗೌರವಿಸಬೇಕು. ಎಲ್ಲರೂ ಅದರ ಚೌಕಟ್ಟಿನಲ್ಲಿ ಇರಬೇಕು. ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಘೋಷಣೆ ಆಗಿದೆ. ಅವರಿಗೆ ಅವಕಾಶಗಳು ಯಾವ ರೀತಿ ಇದಾವೆ ಎಂದು ಕಾದು ನೋಡೋಣ. ಯಾವ ಮಹಿಳೆಯೂ ಶೋಷಣೆಗೆ ಒಳಗಾಗದಾಗೆ ನೋಡಿಕೊಳ್ಳೋದು ನಮ್ಮ ಕರ್ತವ್ಯ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ ಅವರು ಹೇಳಿದ್ದಾರೆ.