/newsfirstlive-kannada/media/media_files/2025/10/16/kruthika-case-2025-10-16-08-10-17.jpg)
ಪತ್ನಿಯ ಹತ್ಯೆ ಬಳಿಕ ಲವ್ವರ್ಗೆ ಮಹೇಂದ್ರ ರೆಡ್ಡಿ ಮೇಸೇಜ್!
ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ಡೆರ್ಮಾಟಾಲಜಿಸ್ಟ್ ಡಾ.ಕೃತಿಕಾ ರೆಡ್ಡಿ ಹತ್ಯೆಗೈದ ಸರ್ಜನ್ ಡಾ.ಮಹೇಂದ್ರ ರೆಡ್ಡಿಯ ಮೊಬೈಲ್ ಪೋನ್ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಶಾಕಿಂಗ್ ವಿಚಾರಗಳು ಬೆಳಕಿಗೆ ಬಂದಿವೆ. ಪತ್ನಿ ಕೃತಿಕಾ ರೆಡ್ಡಿಯನ್ನು ಹತ್ಯೆಗೈದ ಬಳಿಕ ತನ್ನ ಲವ್ವರ್ ಗೆ ಮಹೇಂದ್ರ ರೆಡ್ಡಿ , ಪೋನ್ ಪೇನಲ್ಲಿ ಮೇಸೇಜ್ ಮಾಡಿದ್ದು ಬೆಳಕಿಗೆ ಬಂದಿದೆ. ಹತ್ಯೆಯ ಬಳಿಕ ಮುಂಬೈನಲ್ಲಿದ್ದ ತನ್ನ ಲವ್ವರ್ಗೆ ನಾನು ನಿನಗಾಗಿ ನನ್ನ ಪತ್ನಿಯನ್ನು ಕೊಂದಿದ್ದೇನೆ(  I Killed my wife for you)  ಎಂದು ಮೇಸೇಜ್ ಮಾಡಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. 
 ಮಹೇಂದ್ರ ರೆಡ್ಡಿ ಓರ್ವ ಮಹಿಳೆಯ  ಜೊತೆ ರಿಲೇಷನ್ ಷಿಪ್ ನಲ್ಲಿ ಇದ್ದಿದ್ದು ಬೆಳಕಿಗೆ ಬಂದಿದೆ.  ಆಕೆಗೆ ಮೊದಲು ಮೊಬೈಲ್ ನಲ್ಲಿ ಮೇಸೇಜ್ ಮಾಡಿದ್ದಾನೆ. ಆದರೇ, ಆಕೆ ಈತನ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿದ್ದರು. ಆಗ ಮಹೇಂದ್ರ ರೆಡ್ಡಿ ಡಿಜಿಟಲ್ ಪೇಮೇಂಟ್ ಆಪ್ಲಿಕೇಶನ್ , ಪೋನ್ ಪೇ ಮೂಲಕ ಮೇಸೇಜ್ ಮಾಡಿದ್ದು ಬೆಳಕಿಗೆ ಬಂದಿದೆ.  
ಮಹೇಂದ್ರ ರೆಡ್ಡಿಯ ಪೋನ್ ಅನ್ನು ಪೋರೆನ್ಸಿಕ್ ವಿಶ್ಲೇಷಣೆ ನಡೆಸಿದಾಗ, ಪೋನ್ ಪೇ ಮೂಲಕ ತನ್ನ ಲವ್ವರ್ ಗೆ ಮೇಸೇಜ್ ಕಳಿಸಿರುವುದು ಬೆಳಕಿಗೆ ಬಂದಿದೆ. 
ಮಹೇಂದ್ರ ರೆಡ್ಡಿಯ ಲವ್ವರ್ ನನ್ನು ಕೂಡ ಬೆಂಗಳೂರು ಪೊಲೀಸರು ವಿಚಾರಣೆ ನಡೆಸಿ. ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆದರೇ, ಮಹೇಂದ್ರ ರೆಡ್ಡಿ ಲವ್ವರ್ ಗುರುತು ಅನ್ನು ಬಹಿರಂಗಪಡಿಸಿಲ್ಲ. 
/filters:format(webp)/newsfirstlive-kannada/media/media_files/2025/10/18/kruthika-reddy-2025-10-18-08-54-32.jpg)
ತನ್ನ ಪತ್ನಿ ಕೃತಿಕಾ ರೆಡ್ಡಿಯನ್ನು ಹತ್ಯೆಗೈದ 6 ತಿಂಗಳ ಬಳಿಕ ಮಹೇಂದ್ರ ರೆಡ್ಡಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.  ಏಪ್ರಿಲ್ 21 ರಂದೇ ಮಹೇಂದ್ರ ರೆಡ್ಡಿಯು ತನ್ನ ಪತ್ನಿ ಕೃತಿಕಾ ರೆಡ್ಡಿಯನ್ನು ಹತ್ಯೆಗೈದಿದ್ದ. 
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us