‘ಖರ್ಚು ನೋಡ್ಕೋತಿನಿ ಅಂತ್ಹೇಳಿ ಮೋಸ’.. ರಕ್ಷಕ್​ ಬುಲೆಟ್ ಬಗ್ಗೆ ಗಾಯಾಳು ತಂದೆ ಹೇಳಿದ್ದೇನು?

ಇರಲಾರದೆ ಇರುವೆ ಬಿಟ್ಕೊಳೋದು ಅಂತ ಒಂದು ಮಾತಿದೆ. ಆ ಮಾತಿಗೂ ಈ ರಕ್ಷಕ್​​ ಬುಲೆಟ್​ಗೂ ಏನೂ ವ್ಯತ್ಯಾಸ ಇಲ್ಲ. ಪ್ರಥಮ್​​ ಕೊಟ್ಟ ಕೇಸ್​ನಲ್ಲಿ ಠಾಣೆ ಮೆಟ್ಟಿಲು ಹತ್ತಿರುವ ರಕ್ಷಕ್​ಗೆ ​​ಆ್ಯಕ್ಸಿಡೆಂಟ್​​ ಕೇಸ್​​ ಹೆಗಲೇರಿದೆ. ಅಡ್ಡಾದಿಡ್ಡಿ ಗಾಡಿ ಓಡಿಸಿ, ಕಾಲುಮುರಿದ ಪ್ರಕರಣದಲ್ಲಿ ಎಫ್​​ಐಆರ್​​​ ದಾಖಲಾಗಿದೆ.

author-image
Veenashree Gangani
rakshak bullet(5)
Advertisment

ಇರಲಾರದೆ ಇರುವೆ ಬಿಟ್ಕೊಳೋದು ಅಂತ ಒಂದು ಮಾತಿದೆ. ಆ ಮಾತಿಗೂ ಈ ರಕ್ಷಕ್​​ ಬುಲೆಟ್​ಗೂ ಏನೂ ವ್ಯತ್ಯಾಸ ಇಲ್ಲ. ಪ್ರಥಮ್​​ ಕೊಟ್ಟ ಕೇಸ್​ನಲ್ಲಿ ಠಾಣೆ ಮೆಟ್ಟಿಲು ಹತ್ತಿರುವ ರಕ್ಷಕ್​ಗೆ ​​ಆ್ಯಕ್ಸಿಡೆಂಟ್​​ ಕೇಸ್​​ ಹೆಗಲೇರಿದೆ. ಅಡ್ಡಾದಿಡ್ಡಿ ಗಾಡಿ ಓಡಿಸಿ, ಕಾಲುಮುರಿದ ಪ್ರಕರಣದಲ್ಲಿ ಎಫ್​​ಐಆರ್​​​ ದಾಖಲಾಗಿದೆ.

ಇದನ್ನೂ ಓದಿ: ಅವಳಿ ಮಕ್ಕಳಿಗೆ ಅಮ್ಮ ಆಗ್ತಿದ್ದಾರೆ ಭಾವನಾ.. ಒಂಟಿಯಾಗಿ ತಾಯಿ ಆಗುವ ಬಗ್ಗೆ ನಟಿ ಹೇಳಿದ್ದೇನು..?

rakshak_bullet

ಆ ಪ್ರಥಮ್​ ಜೊತೆ ಕಿರಿಕ್​ ನಡುವೆ ಇದೆಲ್ಲಾ ಬೇಕಿತ್ತಾ? ಡ್ರ್ಯಾಗರ್ ತೋರಿಸಿ ಬೆದರಿಕೆ ಹಾಕಿದ ಆ ತಂಡದಲ್ಲಿ ರಕ್ಷಕ್​ ಅಲ್ಲಿದ್ದ ಅನ್ನೋದು ಪ್ರಥಮ್​​​ನ ಆರೋಪ. ಈ ಬೆನ್ನಲ್ಲೇ ಮತ್ತೊಂದು ಸುದ್ದಿ ಬಂದಿದೆ. ರಕ್ಷಕ್‌ ಎಡವಟ್ಟಿನಿಂದ ಯುವಕನೊಬ್ಬನ ಕಾಲು ಮುರಿತವಾಗಿದೆ. ಈ ಸಂಬಂಧ ಹೆಣ್ಣೂರು ಪೊಲೀಸ್​​​ ಠಾಣೆಯಲ್ಲಿ ಕೇಸ್​​ ಸಹ ದಾಖಲಾಗಿದೆ.

rakshak_bullet_car

ಅಪಘಾತದ ಹಿನ್ನೆಲೆ ಏನು?

ಶಿಡ್ಲಘಟ್ಟ ಮೂಲದ ಯುವಕ ವೇಣುಗೋಪಾಲ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ. ನಿನ್ನೆ ಬೆಳಗ್ಗೆ 11.30 ಸುಮಾರಿಗೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ವೇಣುಗೋಪಾಲ ಎಂಬ ಯುವಕನ ಬೈಕ್​ಗೆ ರಕ್ಷಕ್ ಕಾರು ಡಿಕ್ಕಿ ಆಗಿದೆ. ವೇಣುಗೋಪಾಲ ಮತ್ತು ಸ್ನೇಹಿತೆ ಬೈಕ್​ನಲ್ಲಿ ಬರುತ್ತಿದ್ದಾಗ ಆಕ್ಸಿಡೆಂಟ್ ನಡೆದಿದೆ. ಮಾನ್ಯತಾ ಟೆಕ್ ಪಾರ್ಕ್‌ನ ಶಿವರಾಜ್ ಕುಮಾರ್ ಮನೆ ತಿರುವಿನಲ್ಲಿ ಈ ಘಟನೆ ಜರುಗಿದ್ದು, ಆಕ್ಸಿಡೆಂಟ್ ನಂತರ ಟ್ಯಾಕ್ಸಿಯಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೆಬ್ಬಾಳ ಬಳಿಯ ಖಾಸಗಿ ಆಸ್ಪತ್ರೆಗೆ ಗಾಯಾಳು ಯುವಕನನ್ನ ದಾಖಲು ಮಾಡಲಾಗಿದೆ. ಆಕ್ಸಿಡೆಂಟ್​ ಅದ ಪರಿಣಾಮ ವೇಣುಗೋಪಾಲ್ ಎಡಗಾಲಿನ ಮೂಳೆ ಮುರಿತ ಆಗಿದೆ ಎನ್ನಲಾಗಿದೆ.
ಆಕ್ಸಿಡೆಂಟ್​​ ಬಳಿಕ ಬೇರೆ ಕಾರಿನಲ್ಲಿ ಯುವಕನನ್ನ ಆಸ್ಪತ್ರೆಗೆ ದಾಖಲಿಸಿದ್ದ ರಕ್ಷಕ್​​, ಕೊಟೇಷನ್ ಹಾಕುವಾಗ ಖರ್ಚು ಎಷ್ಟಾದ್ರು ನೋಡ್ಕೊತಿನಿ ಅಂದಿದ್ರಂತೆ. ಆದ್ರೆ ಈಗ ಸೆಟಲ್​ಮೆಂಟ್​ಗೆ ಬಂದೇ ಇಲ್ಲ. ಹೀಗಾಗಿ ಹೆಣ್ಣೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಗಿ ಪೋಷಕರು ಹೇಳಿದ್ದಾರೆ. 

‘ಯಾವತ್ತಿದ್ರೂ ಬುಲೆಟ್ ಸೌಂಡ್ ಇದ್ದೇ‘.. ವೇದಿಕೆ ಮೇಲೆ ಘರ್ಜಿಸಿದ ರಕ್ಷಕ್​; ಹೇಳಿದ್ದೇನು?

‘ಖರ್ಚು ನೋಡ್ಕೋತಿನಿ ಅಂತ ಮೋಸ’

ಈ ಬಗ್ಗೆ ಮಾತಾಡಿ ಗಾಯಾಳು ಪ್ರಕಾಶ್​ ತಂದೆ ವೇಣುಗೋಪಾಲ, ಒಂದೇ ಸಾರಿ ಸೆಟ್ಲಮೆಂಟ್ ಮಾಡ್ತೀನಿ ಅಂತ ಒಪ್ಪಿಕೊಂಡ್ರು. ಮತ್ತೆ ಆಮೇಲೆ ಹೇಳ್ತಾರೆ. ಈಗ 50 ಸಾವಿರ ಕೋಡ್ತೀನಿ, ಮತ್ತೆ ಎರಡು ತಿಂಗಳು ಬಿಟ್ಟು ದುಡ್ಡು ಕೊಡ್ತೀನಿ ಅಂದ್ರು. ಅವಾಗ ಮನಗೆ ಬೇಸರ ಆಯ್ತು. ಆ ಎರಡು ತಿಂಗಳು ಆದ್ಮೇಲೆ ದುಡ್ಡು ಕೊಡ್ತಾರೆ ಅನ್ನೋದಕ್ಕೆ ಗ್ಯಾರಂಟಿ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. 

ಒಟ್ಟಾರೆ, ಅಜಾಗರೂಕತೆಯಿಂದ ಕಾರು ಚಲಾಯಿಸಿ ಬೈಕ್‌ಗೆ  ಡಿಕ್ಕಿ ಹೊಡೆದ ಆರೋಪ ಹೊತ್ತ ರಕ್ಷಕ್​​​ಗೆ ಹೊಸ ಕೇಸ್​​ ಹೆಗಲೇರಿದೆ.. ನಿನ್ನೆಯಷ್ಟೇ ಪ್ರಥಮ್​​ ದೂರಿನನ್ವಯ ದೊಡ್ಡಬಳ್ಳಾಪುರ ಠಾಣೆಗೆ ಹೋಗಿ ವಿಚಾರಣೆ ಎದುರಿಸಿದ್ದು, ಅದಾದ ಬೆನ್ನಲ್ಲೆ ಮತ್ತೊಂದು ಕೇಸ್​​ನಲ್ಲಿ ಲಾಕ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rakshak Bullet
Advertisment