Advertisment

ಶಾಲೆಗೆ ಬಾರದ ವಿದ್ಯಾರ್ಥಿಯನ್ನು ಪ್ರಶ್ನಿಸಿದ್ದೇ ತಪ್ಪಾಯ್ತು ! ಶಿಕ್ಷಕಿಯ ಮೇಲೆ ವಿದ್ಯಾರ್ಥಿಯ ತಂದೆಯಿಂದ ಹಲ್ಲೆ !

ವಿದ್ಯಾರ್ಥಿ ಚರಣ್ ಶಾಲೆಗೆ ಬಾರದೇ ಇರೋದನ್ನು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿಯ ತಂದೆ ಚೌಡಪ್ಪ, ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಶಾಲೆಯಲ್ಲಿ ಶಿಕ್ಷಕಿ ಮಂಜುಳ ಪಾಠ ಮಾಡುತ್ತಿದ್ದಾಗ ಬಂದು, ಶಿಕ್ಷಕಿಯನ್ನು ಬೈದು, ಆಕೆಯನ್ನು ಹಿಡಿದು ಬಾಗಿಲಿಗೆ ತಳ್ಳಿದ್ದಾನೆ. ಇದರಿಂದ ಶಿಕ್ಷಕಿ ಮಂಜುಳ ತಲೆಗೆ ಪೆಟ್ಟಾಗಿದೆ. ಚೌಡಪ್ಪ ಗ್ರಾಮದಿಂದ ಪರಾರಿಯಾಗಿದ್ದಾನೆ.

author-image
Chandramohan
kolar teacher manjula attacked

ಹಲ್ಲೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಶಿಕ್ಷಕಿ ಮಂಜುಳ

Advertisment
  • ಮಾಲೂರು ತಾಲ್ಲೂಕಿನಲ್ಲಿ ಶಿಕ್ಷಕಿ ಮಂಜುಳ ಮೇಲೆ ಹಲ್ಲೆ
  • ವಿದ್ಯಾರ್ಥಿಯ ತಂದೆ ಚೌಡಪ್ಪನಿಂದ ಶಿಕ್ಷಕಿ ಮಂಜುಳ ಮೇಲೆ ಹಲ್ಲೆ
  • ಇಷ್ಟಕ್ಕೂ ಶಿಕ್ಷಕಿ ಮಾಡಿದ ತಪ್ಪಾದ್ರೂ ಏನು ಗೊತ್ತಾ?

ಶಾಲೆಗೆ ಬಾರದ ವಿದ್ಯಾರ್ಥಿಯನ್ನು ಪ್ರಶ್ನೆ ಮಾಡಿದ್ದಕ್ಕೆ ವಿದ್ಯಾರ್ಥಿಯ ತಂದೆ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದಾರೆ.  ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ  ಕ್ಷೇತ್ರನಹಳ್ಳಿ ಗ್ರಾಮದಲ್ಲಿ  ಈ  ಘಟನೆ ನಡೆದಿದೆ. ಕ್ಷೇತ್ರನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಜುಳ ಮೇಲೆ ವಿದ್ಯಾರ್ಥಿಯೊಬ್ಬನ ತಂದೆ ಚೌಡಪ್ಪ ಎಂಬಾತ ಹಲ್ಲೆ ನಡೆಸಿದ್ದಾನೆ. ಚೌಡಪ್ಪ ತಳ್ಳಿದ ವೇಳೆ, ಶಾಲೆಯ  ಬಾಗಿಲು ಶಿಕ್ಷಕಿಯ ತಲೆಗೆ ತಗುಲಿ ಗಾಯವಾಗಿದೆ.  ಚೌಡಪ್ಪ ಪುತ್ರ ಚರಣ್​ ಎಂಬ ವಿದ್ಯಾರ್ಥಿ ಎರಡು ದಿನ ಶಾಲೆಗೆ ಬಾರದ್ದನ್ನು ಶಿಕ್ಷಕಿ ಪ್ರಶ್ನೆ ಮಾಡಿದ್ದರು.  ಇದಕ್ಕೆ ಕೋಪಗೊಂಡಿದ್ದ ವಿದ್ಯಾರ್ಥಿ ಚರಣ್ ತಂದೆ ಚೌಡಪ್ಪ ಶಾಲೆಗೆ ಬಂದು ಏಕಾಏಕಿ ಹಲ್ಲೆ ನಡೆಸಿದ್ದಾರೆ.  ಶಿಕ್ಷಕಿ ಮಂಜುಳ ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಶಿಕ್ಷಕಿ ಮಂಜುಳ ಮೇಲೆ ಹಲ್ಲೆ ನಡೆಸಿದ ಚೌಡಪ್ಪ, ತನ್ನ ಕುಟುಂಬ ಸಮೇತ ಗ್ರಾಮದಿಂದ ನಾಪತ್ತೆಯಾಗಿದ್ದಾನೆ. ಕ್ಷೇತ್ರನಹಳ್ಳಿ ಗ್ರಾಮದ ಶಾಲೆಗೆ ಮಾಸ್ತಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Advertisment
student father attacks Teacher
Advertisment
Advertisment
Advertisment