ನವ ವಿವಾಹಿತರಿಗೆ ಶುಭ ಸುದ್ದಿ, ಉದ್ಯೋಗಸ್ಥರಿಗೆ ಬಡ್ತಿ ಸಿಗುವ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು.

author-image
Veenashree Gangani
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ  4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಸಾಮಾಜಿಕ ಜೀವನದಲ್ಲಿ ತುಂಬಾ ಎಚ್ಚರಿಕೆಯಿಂದಿರಿ
  • ಕಾನೂನು ಕ್ರಮ ಕೆಲಸಕ್ಕೆ ಬಾರದೆ ಬೇಸರ ಆಗಬಹುದು
  • ಸಾಲ ಪಡೆದ ವ್ಯಕ್ತಿಗಳು ತಿರುಗಿಬೀಳಬಹುದು, ನಷ್ಟದ ಸೂಚನೆ
  • ಹೊಟ್ಟೆ ನೋವಿಗೆ ಸಂಬಂಧಿಸಿದ ತೊಂದರೆಯಾಗಬಹುದು
  • ಭಾವನಾತ್ಮಕ ನಿರ್ಧಾರಗಳಿಂದ ವ್ಯಥೆಯಾಗಬಹುದು
  • ವೈಯಕ್ತಿಕ ಜೀವನದಲ್ಲಿ ಬೇಸರ, ಅಶಾಂತಿ, ಕೋಪ
  • ವಿಷ್ಣುವಿಗೆ ಜೇನುತುಪ್ಪದ ಅಭಿಷೇಕ ಮಾಡಿಸಿ

ವೃಷಭ

RASHI_BHAVISHA_VRSHABA

  • ನಿಮ್ಮ ಸಲಹೆ ಬೇರೆಯವರಿಗೆ ಅನುಕೂಲವಾಗಲಿದೆ
  • ಅಪರಿಚಿತರಿಂದ ದ್ರೋಹ ಸಾಧ್ಯತೆ
  • ಯೋಚಿಸಿದ ಕಾರ್ಯಗಳು ಪೂರ್ಣವಾಗದೆ ಬೇಸರ
  • ಬೇರೆಯವರನ್ನು ಸಂಪೂರ್ಣ ಅವಲಂಭಿಸಬೇಡಿ
  • ವಿದೇಶದಿಂದ ಸಿಹಿ ಸುದ್ದಿ ಬರಬಹುದು
  • ಕೃಷಿ ಕೆಲಸ, ಜಮೀನು ಸಂಬಂಧೀ ಕೆಲಸಗಳಿಗೆ ನಷ್ಟ
  • ಗಣಪತಿಗೆ ಬಿಳೀ ಎಕ್ಕದ ಹೂ ನೀಡಿ

ಮಿಥುನ

RASHI_BHAVISHA_MITHUNA

  • ಸಮಾಜದಲ್ಲಿ ಪರೋಕ್ಷವಾಗಿ ಟೀಕೆ ಆಗಲಿದೆ ಅಪಖ್ಯಾತಿಗೆ ಒಳಗಾಗುತ್ತೀರಿ
  • ಪಾಲುಗಾರಿಕೆ ಮತ್ತು ಬಡ್ಡಿ ವ್ಯವಹಾರದಲ್ಲಿ ಲಾಭ ಸಿಗಲಿದೆ
  • ಆಸೆ, ತೃಪ್ತಿ, ಸಮಾಧಾನ ಇವು ವಿರುದ್ಧವಾದ ಫಲವನ್ನು ಕೊಡುವಂತಹದ್ದು
  • ವೃತ್ತಿ ಜೀವನದಲ್ಲಿ ಸಮಸ್ಯೆ ಕಾಡುವಂತಹದ್ದು
  • ಯಾವುದೇ ವಿಚಾರಕ್ಕೂ ಕೂಡ ಈ ದಿನ ಹಣ ಹೂಡಿಕೆ ಮಾಡಬೇಡಿ
  • ಶ್ರೀ ರಾಮನನ್ನು ಪ್ರಾರ್ಥನೆ ಮಾಡಿ

ಕಟಕ

RASHI_BHAVISHA_KATAKA

  • ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಬಹುದು
  • ನಿಮ್ಮ ಕರ್ತವ್ಯಕ್ಕೆ ಆದ್ಯತೆಯನ್ನು ಕೊಡಿ
  • ನಂಬಿದವರಿಂದ ವಂಚನೆ ಆಗುವ ಸಾಧ್ಯತೆ ಇದೆ
  • ಇಂದು ಸಿಹಿ ಸುದ್ದಿ ಕೇಳುತ್ತೀರಿ ಆದರೂ ಮನಸ್ಸಿಗೆ ಸಮಾಧಾನವಿರುವುದಿಲ್ಲ
  • ಪ್ರಾಮಾಣಿಕ ಪ್ರಯತ್ನಕ್ಕೆ ಮಾತ್ರ ಗೌರವ ಸಿಗುವ ದಿನ
  • ಮನಸ್ಥಿತಿಯನ್ನು ಸ್ವಲ್ಪ ಬದಲಾಯಿಸಿಕೊಂಡರೆ ಒಳ್ಳೆಯದು
  • ಧ್ಯಾನಕ್ಕೆ ಶರಣು ಹೋಗಿ

ಸಿಂಹ 

RASHI_BHAVISHA_SIMHA

  • ನಿಮ್ಮ ಕಾರ್ಯವೈಖರಿ, ನಡತೆ, ಸ್ವಭಾವ, ವರ್ತನೆ ಟೀಕೆಗೆ ಗುರಿಯಾಗುವಂತಹದ್ದು
  • ವಾಹನ ಚಾಲನೆಯಿಂದ ತೊಂದರೆ ಇದೆ ಎಚ್ಚರಿಕೆವಹಿಸಿ
  • ವಿವಾದಗಳಿಂದ ಅಂತರ ಕಾಯ್ದುಕೊಳ್ಳಬೇಕು
  • ಬಂಧುಗಳಲ್ಲಿ ಅಥವಾ ಸ್ನೇಹಿತರ ಮಧ್ಯದಲ್ಲಿ ಅನುಚಿತ ವರ್ತನೆ ಮಾಡಬೇಡಿ
  • ಆತುರದ ಕೆಲಸ ನಿರ್ಧಾರಗಳಿಂದ ಹಾನಿ ಉಂಟಾಗಬಹುದು
  • ನಕಾರಾತ್ಮಕ ಆಲೋಚನೆಯಿಂದ ದೂರವಿರಿ
  • ಪ್ರಾಣಿಗಳಿಗೆ ಆಹಾರ ನೀಡಿ

ಕನ್ಯಾ

RASHI_BHAVISHA_KANYA

  • ಕೆಲಸಕ್ಕಾಗಿ ಜನರ ಹುಡುಕಾಟ ಅದರಿಂದ ವೈಪಲ್ಯ ಹೊಂದುತ್ತೀರಿ
  • ಪ್ರಜ್ಞಾವಂತರ ಸಹವಾಸದಿಂದ ಲಾಭವಿದೆ
  • ನವ ವಿವಾಹಿತರಿಗೆ ಶುಭ ಸುದ್ದಿ ಸಿಗಲಿದೆ
  • ಆರೋಗ್ಯದಲ್ಲಿ ವ್ಯತ್ಯಾಸ ಕಾಣುತ್ತೀರಿ ಅದರಲ್ಲೂ ಗಂಟಲಿನ ಸಮಸ್ಯೆ ಕಾಡಬಹುದು
  • ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯವನ್ನಿಟ್ಟುಕೊಳ್ಳಿ
  • ಸಾಲಿಗ್ರಾಮ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ತುಲಾ

RASHI_BHAVISHA_TULA

  • ಸ್ವಭಾವದಿಂದ ಬೇರೆಯವರನ್ನು ಆಕರ್ಷಿಸುತ್ತೀರಿ
  • ಮಾತಿನಿಂದ ಬೇರೆಯವರಿಗೆ ಅಪಮಾನ ಆಗಬಹುದು ಅಥವಾ ಬೇರೆಯವರು ನಿಮ್ಮನ್ನು ಅವಮಾನಿಸಬಹುದು
  • ವಿದ್ಯಾರ್ಥಿಗಳು ತುಂಬಾ ಕಷ್ಟವನ್ನು ಅನುಭವಿಸುವ ದಿನ 
  • ಕುಟುಂಬ ಸಂಬಂಧಗಳು ಈ ದಿನ ಚೆನ್ನಾಗಿರುವುದಿಲ್ಲ
  • ಮಕ್ಕಳ ಚಟುವಟಿಕೆ, ಸ್ವಭಾವ ಬೇಸರ ತರುವ ದಿನವಾಗಿರುತ್ತದೆ
  • ಅವಿವಾಹಿತರ ಸಮಸ್ಯೆ ತಾರಕಕ್ಕೇರಬಹುದು
  • ದೇವಿ ಉಪಾಸನೆ ಮಾಡಿ

ವೃಶ್ಚಿಕ

RASHI_BHAVISHA_VRUSHCHIKA

  • ಉದ್ಯೋಗಸ್ಥರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ
  • ಇಂದು ಪ್ರೇಮಿಗಳಿಗೆ ಶುಭದಿನ
  • ಕುಟುಂಬದಲ್ಲಿ ಪ್ರವಾಸದ ಬಗ್ಗೆ ಚಿಂತಿಸಬಹುದು
  • ಆತ್ಮ ವಿಶ್ವಾಸ ಬೆಳೆಸಿಕೊಳ್ಳಲು ಸರಿಯಾದ ಸಮಯ 
  • ಒಡಹುಟ್ಟಿದವರೊಡನೆ ಘರ್ಷಣೆ ಆಗುವುದರಿಂದ ಅಶಾಂತಿಗೆ ಅವಕಾಶ ಆಗಬಹುದು
  • ಬೇರೆ ಯಾರಿಗೂ ಈ ದಿನ ಯಾವ ಭರವಸೆಯನ್ನು ನೀಡಬೇಡಿ
  • ಉಗ್ರ ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ

ಧನುಸ್ಸು

RASHI_BHAVISHA_DHANASU

  • ನಿಮ್ಮ ವೈಯಕ್ತಿಕ ವಿಚಾರದಲ್ಲಿ ಬೇರೆಯವರ ಹಸ್ತ ಕ್ಷೇಪ ಬೇಡ
  • ಸಣ್ಣ ಉದ್ಯಮಿಗಳಿಗೆ ಉತ್ತಮವಾದ ದಿನ
  • ತಾಯಿಯ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ
  • ಪತಿ-ಪತ್ನಿಯರ ಮಧ್ಯೆ ಸಾಮರಸ್ಯ ಕಡಿಮೆ ಇರಲಿದೆ
  • ಅಣ್ಣ ತಮ್ಮಂದಿರಲ್ಲಿ ಕಲಹ ಉಂಟಾಗಲಿದೆ
  • ನೌಕರಿಯ ವಿಚಾರದಲ್ಲಿ ಮನಸ್ಸಿಗೆ ಸಮಾಧಾನವಿರುವುದಿಲ್ಲ
  • ಅಯ್ಯಪ್ಪ ಸ್ವಾಮಿಯನ್ನು ವಿಭೂತಿಯಿಂದ ಅರ್ಚನೆ ಮಾಡಿಸಿ

ಮಕರ

RASHI_BHAVISHA_MAKARA

  • ವ್ಯಾವಹಾರಿಕವಾಗಿ, ನೌಕರಿಯಲ್ಲಿ, ವಿದ್ಯಾಕ್ಷೇತ್ರದಲ್ಲಿ ಗಣನೀಯವಾದ ಫಲಿತಾಂಶ ಲಭಿಸುತ್ತದೆ
  • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭಫಲ
  • ಹೊಸ ಸಂಪರ್ಕಗಳಿಂದ ಅನುಕೂಲವಾಗುವಂತಹದ್ದು
  • ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಅಗತ್ಯ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೀರಿ
  • ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ಕಾರ್ಯನಿಮಿತ್ತ ಪ್ರಯಾಣ ಮಾಡಬೇಕಾಗಬಹುದು
  • ಮಕ್ಕಳ ಜೊತೆಯಲ್ಲಿ ಆನಂದದ ಸಮಯ ಕಳೆಯಬಹುದು
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ಕುಂಭ

RASHI_BHAVISHA_KUMBHA

  • ವೃತ್ತಿ ಅಥವಾ ನೌಕರಿಯಲ್ಲಿ ತಕ್ಷಣ ಬದಲಾವಣೆ ಕಾಣುವ ದಿನ
  • ಅನಗತ್ಯ ವಿವಾದಗಳು ಸೃಷ್ಠಿಯಾಗುವುದರಿಂದ ಬೇಸರ ಆಗಲಿದೆ
  • ಬರಬೇಕಿದ್ದ ಬಾಕಿ ಹಣ ನಿಮ್ಮ ಕೈ ಸೇರಿ ಸಂತೋಷ ಆಗಲಿದೆ
  • ದೂರದ ಪ್ರಯಾಣ ಬೇಡ ಎನ್ನುವ ಸೂಚನೆ ಇದೆ ಕೊನೆಗೆ ರದ್ದಾಗಬಹುದು
  • ಕಾರ್ಯಕ್ಷೇತ್ರದಲ್ಲಿ ಗೌರವ, ಮನ್ನಣೆ ದೊರಕಲಿದೆ
  • ಸಂಬಂಧಿಕರಲ್ಲಿ ನಿಮ್ಮ ಬಾಂಧವ್ಯ ಗಟ್ಟಿಯಾಗುತ್ತದೆ
  • ದುರ್ಗಾದೇವಿಯನ್ನು ಪ್ರಾರ್ಥಿಸಿ

ಮೀನ

RASHI_BHAVISHA_MEENA

  • ಸಾಧಾರಣವಾದ ದಿನ ಯಾವುದೇ ರೀತಿಯ ಆತಂಕ ಬೇಡ
  • ಸ್ವಾಭಿಮಾನ ಹೆಚ್ಚಾಗುವ ವಾತಾವರಣ ಉಂಟಾಗಲಿದೆ
  • ಮನೆಯ ವಾತಾವರಣ ಗೌಪ್ಯವಾಗಿರುತ್ತದೆ
  • ಹಣದ ಚಿಂತೆ ನಿಮಗೆ ಕಾಡಬಹುದು
  • ಅನೇಕ ಜನ ನಿಮ್ಮನ್ನ ತಮ್ಮ ಸ್ವಾರ್ಥಕ್ಕಾಗಿ ಆಶ್ರಯವನ್ನು ಮಾಡಿ ಬರುತ್ತಾರೆ
  • ಕುಟುಂಬದ ಸದಸ್ಯರ ಜೊತೆ ಇರುವ ಭಿನ್ನಾಭಿಪ್ರಾಯ ಬೇಡ
  • ಹಿರಿಯರ ಆರ್ಶೀವಾದ ಪಡೆಯಿರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment