Advertisment

ಮದ್ದೂರು ಕಲ್ಲು ತೂರಾಟ ಆರೋಪಿಗಳಿಗೆ 14 ದಿನ ಜೈಲಿಗೆ ಕಳಿಸಿದ ಕೋರ್ಟ್, ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ

ಮದ್ದೂರು ಕಲ್ಲು ತೂರಾಟ ಕೇಸ್ ನಲ್ಲಿ ಬಂಧಿತರಾದವರ ಸಂಖ್ಯೆ 22 ಕ್ಕೆ ಏರಿಕೆಯಾಗಿದೆ. ಆರೋಪಿಗಳನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದರು. ಕೋರ್ಟ್ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಇದರಿಂದಾಗಿ ಆರೋಪಿಗಳನ್ನು ಮಂಡ್ಯ ಜಿಲ್ಲೆಗೆ ಪೊಲೀಸರು ಬಿಟ್ಟು ಬಂದಿದ್ದಾರೆ.

author-image
Chandramohan
MND_GANESHA (1)

ಮದ್ದೂರು ಹಿಂಸಾಚಾರದ ಆರೋಪಿಗಳು ಜೈಲುಪಾಲು

Advertisment
  • ಮದ್ದೂರು ಹಿಂಸಾಚಾರದ ಆರೋಪಿಗಳು ಜೈಲುಪಾಲು
  • 22 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

ಮಂಡ್ಯ ಜಿಲ್ಲೆಯ  ಮದ್ದೂರು ಗಲಭೆ ಪ್ರಕರಣದಲ್ಲಿ ಬಂಧನವಾದವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಎಲ್ಲಾ 22 ಆರೋಪಿಗಳು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.  ಎರಡನೇ ಅಪರ ಸಿವಿಲ್ ನ್ಯಾಯಾಧೀಶರ ಮುಂದೆ  ಪೊಲೀಸರು ಹಾಜರುಪಡಿಸಿದ್ದರು. ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನ್ಯಾಯಾಧೀಶರು ಆದೇಶ ನೀಡಿದ್ದಾರೆ.  ಮದ್ದೂರು ತಾಲೂಕು ಎರಡನೇ ಅಪರ ಸಿವಿಲ್ ನ್ಯಾಯಾಧೀಶ ಗೋಪಾಲಕೃಷ್ಣ ಆದೇಶ  ನೀಡಿದ್ದಾರೆ. ಇದರಿಂದಾಗಿ  ಎಲ್ಲಾ ಆರೋಪಿಗಳನ್ನು ಮಂಡ್ಯ ಜೈಲಿಗೆ  ಕರೆದುಕೊಂಡು ಹೋಗಿ ಪೊಲೀಸರು ಬಿಟ್ಟಿದ್ದಾರೆ. 
ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಇವತ್ತು ಪ್ರತಿಭಟನಾಕಾರರು ಆಗ್ರಹಿಸಿದ್ದರು. ನಾಳೆ ಮದ್ದೂರು ಬಂದ್‌ಗೆ ಹಿಂದೂ ಪರ ಸಂಘಟನೆಗಳು ಕರೆ ನೀಡಿವೆ. 

Advertisment



MND_GANESH (2)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Madduru stone pelting case
Advertisment
Advertisment
Advertisment