ದರ್ಶನ್​ಗೆ ಕೊಟ್ಟಂತೆ ನಮಗೂ ಬೇಲ್ ಕೊಡಿ.. ಜೀವ ತೆಗೆದ ಆರೋಪಿ ಬೇಡಿಕೆ; ಈ ಬಗ್ಗೆ ನೇಹಾ ಹಿರೇಮಠ ತಂದೆ ಏನಂದ್ರು?

ನಟ ದರ್ಶನ್ ಅವರಿಗೆ ಯಾವ ರೀತಿ ಜಾಮೀನು ಕೊಡಲಾಗಿದೆ. ಅದರಂತೆ ನಮಗೂ ಬೇಲ್ ಕೊಡಿ ಎಂದು ಆರೋಪಿ ಬೇಡಿಕೆ ಇಟ್ಟಿದ್ದಾನಂತೆ. ದರ್ಶನ್ ಅವರ ಬೇಲ್ ಆಧಾರ ಇಟ್ಟುಕೊಂಡು ಬೇಡಿಕೆ ಇಡುವುದು ಸಮಂಜಸವಲ್ಲ ಎಂದು ನೇಹಾಳ ತಂದೆ ನಿರಂಜನ್ ಹಿರೇಮಠ ಅವರು ಹೇಳಿದ್ದಾರೆ.

author-image
Bhimappa
Advertisment

ನಟ ದರ್ಶನ್ ಅವರಿಗೆ ಯಾವ ರೀತಿ ಜಾಮೀನು ಕೊಡಲಾಗಿದೆ. ಅದರಂತೆ ನಮಗೂ ಬೇಲ್ ಕೊಡಿ ಎಂದು ಆರೋಪಿ ಬೇಡಿಕೆ ಇಟ್ಟಿದ್ದಾನೆ. ದರ್ಶನ್ ಅವರ ಬೇಲ್ ಆಧಾರ ಇಟ್ಟುಕೊಂಡು ಬೇಡಿಕೆ ಇಡುವುದು ಸಮಂಜಸವಲ್ಲ ಎಂದು ನೇಹಾಳ ತಂದೆ ನಿರಂಜನ್ ಹಿರೇಮಠ ಅವರು ಹೇಳಿದ್ದಾರೆ.

ನೇಹಾ ಹಿರೇಮಠ ಅವರು 23 ವರ್ಷದ ಕಾಲೇಜು ವಿದ್ಯಾರ್ಥಿನಿ ಆಗಿದ್ದರು. 2024ರ ಏಪ್ರಿಲ್ 18ರಂದು ಬಿವಿಬಿ ಕಾಲೇಜಿನಲ್ಲಿ ಆಕೆಯ ಸಹಪಾಠಿ ಫಯಾಜ್ ಖೋಂಡುನಾಯಕ್‌ ಎನ್ನುವ ವಿದ್ಯಾರ್ಥಿ ಚಾಕುವಿನಿಂದ ಇರಿದು ಜೀವ ತೆಗೆದಿದ್ದನು. ಕಾಲೇಜಿನಲ್ಲಿ ಕ್ಲಾಸ್ ಮುಗಿಸಿ ನೇಹಾ ಹಿರೇಮಠ ಹೊರಗಡೆ ಬರುತ್ತಿದ್ದಂತೆ ಚಾಕು ಇರಿಯಲಾಗಿತ್ತು.

ಘಟನೆ ನಡೆದ ದಿನದಿಂದ ಈವರೆಗೂ ನೇಹಾ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎಂದು ಅವರ ಪೋಷಕರು, ಹಲವು ಸಂಘಗಳು ಹೋರಾಟ ಮಾಡುತ್ತಿವೆ. ನೇಹಾ ಕುಟುಂಬಸ್ಥರು ಮಗಳ ಆತ್ಮಕ್ಕೆ ಶಾಂತಿ ಸಿಗಬೇಕು ಎಂದರೆ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು. ಇದು ಇನ್ಯಾರಿಗೂ ಆಗಬಾರದು ಎಂದು ನೇಹಾಳ ತಂದೆ ನಿರಂಜನ್ ಹಿರೇಮಠ ಕೋರ್ಟ್​ಗೆ ಮನವಿ ಮಾಡಿದ್ದಾರೆ.

Neha Hiremath case
Advertisment