Advertisment

ಶಿವನಸಮುದ್ರ ನಾಲೆಯಿಂದ ಕಾಡಾನೆ ಮೇಲೇತ್ತುವ ಅಪರೇಷನ್ ಸಕ್ಸಸ್ ! : ಕ್ರೇನ್ ಮೂಲಕ ಮೇಲೇತ್ತಿದ ಅರಣ್ಯ ಇಲಾಖೆ ಸಿಬ್ಬಂದಿ

ಮಂಡ್ಯದ ಶಿವನಸಮುದ್ರದ ಬಳಿ ನಾಲೆಯೊಂದಕ್ಕೆ ಕಾಡಾನೆಯೊಂದು ಕಳೆದ ನಾಲ್ಕು ದಿನಗಳ ಹಿಂದೆಯೇ ಬಿದ್ದಿದೆ. ಇಂದು ಕಾಡಾನೆಯನ್ನು ಕ್ರೇನ್ ಮೂಲಕ ಮೇಲೇತ್ತುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ನಡೆಸಿದ್ದು ಯಶಸ್ಸು ಸಾಧಿಸಿದೆ. ಕಾಡಾನೆಯನ್ನು ಟ್ರಕ್ ನಲ್ಲಿ ಅರಣ್ಯ ಇಲಾಖೆ ಬೇರೆಡೆಗೆ ಸಾಗಿಸಿದೆ.

author-image
Chandramohan
elephant rescue operation03

ಕಾವೇರಿ ನಾಲೆಗೆ ಬಿದ್ದಿದ್ದ ಕಾಡಾನೆ ರಕ್ಷಣಾ ಕಾರ್ಯಾಚರಣೆ ಯಶಸ್ವಿ

Advertisment
  • ನಾಲೆಗೆ ಬಿದ್ದಿದ್ದ ಕಾಡಾನೆ ರಕ್ಷಣಾ ಕಾರ್ಯಾಚರಣೆ ಯಶಸ್ವಿ
  • 3 ಗಂಟೆ ಕಾಲ ಕಾರ್ಯಾಚರಣೆ ನಡೆಸಿ ನಾಲೆಯಿಂದ ಮೇಲೇತ್ತಿದ ಅರಣ್ಯ ಇಲಾಖೆ
  • ಮಂಡ್ಯ ಜಿಲ್ಲೆಯ ಶಿವನ ಸಮುದ್ರ ಬಳಿ ಕಾವೇರಿ ನಾಲೆಗೆ ಬಿದ್ದಿದ್ದ ಕಾಡಾನೆ

ಮಂಡ್ಯ ಜಿಲ್ಲೆಯ ಶಿವನಸಮುದ್ರ ಬಳಿ ನಾಲೆಗೆ ಬಿದ್ದಿದ್ದ ಆನೆಯನ್ನು ಮೇಲೇತ್ತುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ನಾಲೆಗೆ ಬಿದ್ದು ನಾಲೆಯೊಳಗೆ ಓಡಾಡುತ್ತಿದ್ದ ಕಾಡಾನೆಗೆ ಮೊದಲಿಗೆ ಅರವಳಿಕೆ ಚುಚ್ಚುಮದ್ದು ನೀಡಲಾಯಿತು. ಇದರಿಂದ ಕಾಡಾನೆ ನಿತ್ರಾಣಗೊಂಡು ಕುಸಿದು ಬಿತ್ತು. ಅಷ್ಟರಲ್ಲಾಗಲೇ, ನಾಲೆಯೊಳಗೆ ಮರದ ಪಟ್ಟಿಯನ್ನು ಬಿಡಲಾಗಿತ್ತು. ಕಾಡಾನೆ, ಅರವಳಿಕೆ ಚುಚ್ಚುಮದ್ದು ನೀಡಿದ ಬಳಿಕ ಕುಸಿದು ಬಿದ್ದ ಬಳಿಕ ಕ್ರೇನ್ ಹಗ್ಗದ ಸಹಾಯದಿಂದ ಆನೆಯನ್ನು ಎತ್ತಿ ಮರದ ಪಟ್ಟಿಯ ಮೇಲೆ ಮಲಗಿಸಲಾಯಿತು. ಬಳಿಕ ಮರದ ಪಟ್ಟಿಯನ್ನು ಕ್ರೇನ್ ಸಹಾಯದಿಂದ ಎತ್ತಿ ಸೀದಾ ತೆರೆದ ಟ್ರಕ್‌ಗೆ ಹಾಕಲಾಯಿತು. ಬಳಿಕ ಟ್ರಕ್ ನಲ್ಲಿ ಕಾಡಾನೆಯನ್ನು ತೆಗೆದುಕೊಂಡು ಅರಣ್ಯ ಇಲಾಖೆ ಸಿಬ್ಬಂದಿ ಹೋಗಿದ್ದಾರೆ. ಶಿವನಸಮುದ್ರದ ಬಳಿಯ ಕಾಡಿಗೆ ಈ ಕಾಡಾನೆಯನ್ನು ಮತ್ತೆ ಬಿಡಲಾಗುತ್ತೆ. ಆನೆಗೆ ಪ್ರಜ್ಞೆ ಬರುವವರೆಗೂ ಅರಣ್ಯ ಇಲಾಖೆ ಅಧಿಕಾರಿಗಳು , ತಜ್ಞ ವೈದ್ಯರು ಚಿಕಿತ್ಸೆ ನೀಡುವರು. ಕಾಡಾನೆ ಸೊಂಡಿಲು, ಕಾಲು ಭಾಗದಲ್ಲಿ ಏನಾದರೂ ಫಂಗಸ್ ಆಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವರು. 

ಸತತ 3 ಗಂಟೆಗಳ ಕಾಲ ಕಾಡಾನೆಯ ರಕ್ಷಣೆಗೆ ಅಪರೇಷನ್ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳ ಪ್ರಯತ್ನ, ಶ್ರಮ ಯಶಸ್ವಿಯಾಗಿದೆ. ಕಾಡಾನೆಯನ್ನು ಸುರಕ್ಷಿತವಾಗಿ ಮೇಲೇತ್ತುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. 

Advertisment

elephant rescue operation02

Wild elephant rescue at Shivana samudra
Advertisment
Advertisment
Advertisment