ಪ್ರಜ್ವಲ್​ ರೇವಣ್ಣಗೆ ಶಿಕ್ಷೆ; BSY, ಅಶೋಕ್, ಸಿಟಿ ರವಿ ಯಾಕೆ ಮಾತಾಡ್ತಿಲ್ಲ?- ಡಿ.ಕೆ ಶಿವಕುಮಾರ್

ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡವನ್ನು ವಿಧಿಸಿದೆ. ಸದ್ಯ ಈ ಸಂಬಂಧ ಡಿ.ಕೆ ಶಿವಕುಮಾರ್ ಅವರ ಪ್ರತಿಕ್ರಿಯೆ ಕೇಳಲಾಗಿತ್ತು. ಈ ಬಗ್ಗೆ ಡಿಸಿಎಂ ಏನು ಹೇಳಿದರು ಎನ್ನುವುದು ಇಲ್ಲಿದೆ.

author-image
Bhimappa
Advertisment

ಪ್ರಜ್ವಲ್​ ರೇವಣ್ಣ ಬಗ್ಗೆ ನ್ಯಾಯಾಲಯವು ಕೊಟ್ಟ ತೀರ್ಪಿನ ಬಗ್ಗೆ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್​ನವರು ಉತ್ತರ ಕೊಡಬೇಕು.ನಾವು ಮಾತನಾಡಿದರೆ ರಾಜಕೀಯ ಎಂದು ಹೇಳುತ್ತಾರೆ. ಯಾವಾಗಲೂ ಕಾನೂನಿಗೆ ಗೌರವ ಕೊಡಬೇಕು. ಮೈತ್ರಿ ಪಕ್ಷದ ಆರ್​​. ಅಶೋಕ್ ಯಾಕೆ ಮಾತನಾಡುತ್ತಿಲ್ಲ. ಬಿಎಸ್​ ಯಡಿಯೂರಪ್ಪ, ವಿಜಯೇಂದ್ರ, ಸಿಟಿ ರವಿ ಅವರು ಮಾತನಾಡಬೇಕು. ಮೈತ್ರಿ ಪಕ್ಷದವರನ್ನು ಈ ಬಗ್ಗೆ ಕೇಳಿದರೆ ಅವರಿಗೆ ಉತ್ತರ ಕೊಡುವ ಶಕ್ತಿ, ಸಾಮರ್ಥ್ಯ ಎಲ್ಲವೂ ಇದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

Prajwal Revanna DK Shivakumar
Advertisment