/newsfirstlive-kannada/media/media_files/2025/08/23/sujatha_bhat-1-2025-08-23-08-29-55.jpg)
ಸುಳ್ಳು ದೂರು ನೀಡಿದ್ದ ಸುಜಾತ ಭಟ್
ಮಾಸ್ಕ್ ಮ್ಯಾನ್ ದೆಹಲಿ ಯಾತ್ರೆಯ ಕುರಿತು ಸ್ಫೋಟಕ ವಿಚಾರವನ್ನು ಸುಜಾತ ಭಟ್ ಈಗ ಪ್ರಸ್ತಾಪಿಸಿದ್ದಾರೆ. ಪ್ರತಿಯೊಂದು ಹಂತದಲ್ಲೂ ನಾನು ಮೋಸ ಹೋದೆ. ಅಂದು ದೆಹಲಿ ಹೋದಾಗ ಮಾಸ್ಕ್ ಮ್ಯಾನ್ ಜೊತೆಗಿದ್ದ. ಆದ್ರೆ ಈತನೇ ಮಾಸ್ಕ್ ಮ್ಯಾನ್ ಅಂತ ಗೊತ್ತಿರಲಿಲ್ಲ. ಈ ಗ್ಯಾಂಗ್ ನಲ್ಲಿದ್ದ ಒಬ್ಬರು ಮಾಸ್ಕ್ ಮ್ಯಾನ್ ನ ತೋರಿಸಿ ನನ್ನ ಬಾಡಿಗಾರ್ಡ್ ಎಂದು ಪರಿಚಯಿಸಿದ್ರು. ನಾನು ಕೂಡ ಆತ ಬಾಡಿ ಗಾರ್ಡ್ ಅಂದುಕೊಂಡಿದ್ದೆ ಎಂದಿದ್ದಾರೆ.
ಇನ್ನೂ ಈ ಸುಜಾತ ಭಟ್ ಮನೆಯಲ್ಲಿ ಒಂದು ದಿನ ಮಾಸ್ಕ್ ಮ್ಯಾನ್ ಇದ್ದನಂತೆ. ಮಾಸ್ಕ್ ಮ್ಯಾನ್ ಒಂದು ದಿನ ನನ್ನ ಮನೆಯಲ್ಲಿದ್ದ. ಆದರೇ, ಈತ ಮಾಸ್ಕ್ ಮ್ಯಾನ್ ಅಂತ ಗೊತ್ತಿರಲಿಲ್ಲ. ಆ ವ್ಯಕ್ತಿಯನ್ನು ಬಾಡಿಗಾರ್ಡ್ ಅಂತ ಅಂದುಕೊಂಡಿದ್ದೆ. ಕೋರ್ಟ್ ಗೆ ಬಂದಾಗ, ಮುಖ ರಿವೀಲ್ ಆದಾಗಲೇ, ನನಗೂ ಈತ ಮಾಸ್ಕ್ ಮ್ಯಾನ್ ಅಂತ ಗೊತ್ತಾಗಿದ್ದು. ಅಲ್ಲಿಯ ತನಕ ನನಗೂ ಮಾಸ್ಕ್ ಮ್ಯಾನ್ ಬಗ್ಗೆ ಗೊತ್ತಿರಲಿಲ್ಲ ಎಂದು ಸುಜಾತ ಭಟ್ ಹೇಳಿದ್ದಾರೆ.
ಧರ್ಮಸ್ಥಳದ ವೀರೆಂದ್ರ ಹೆಗಡೆಯವರ ಹತ್ತಿರ ಹೋಗಿ ಕ್ಷಮೆ ಕೇಳ್ತಿನಿ ಎಂದು ಸುಜಾತ ಭಟ್ ಹೇಳಿದ್ದಾರೆ. ಅನನ್ಯ ಭಟ್ ಕೇಸ್ ನಲ್ಲಿ ನಾನು ಪಾತ್ರಧಾರಿ. ಸೂತ್ರಧಾರಿಗಳು ಬೇರೆ ಇದ್ದಾರೆ. ಅವರ ಹೆಸರು ಹೇಳಲ್ಲ . ಅವರವರು ಮಾಡಿದ ಕರ್ಮ, ಅವರವರೇ ಅನುಭವಿಸುತ್ತಾರೆ. ನಾನು ಮಾಡಿದ ಕರ್ಮ ನಾನು ಅನುಭವಿಸುತ್ತೇನೆ. ನಾನು ಮಾಡಿದ ತಪ್ಪಿಗೆ ಧರ್ಮಸ್ಥಳಕ್ಕೆ ಹೋಗಿ ಕ್ಷಮೆ ಕೇಳುತ್ತೇನೆ. ವೀರೇಂದ್ರ ಹೆಗ್ಗಡೆಯವರ ಹತ್ತಿರ ಹೋಗಿ ಕ್ಷಮೆ ಕೇಳುತ್ತೇನೆ. ಯಾವಾಗ ಹೋಗ್ಬೇಕೆಂದು ಇನ್ನೂ ನಿರ್ಧಾರ ಮಾಡಿಲ್ಲ. ಕ್ಷಮೆ ಕೂಡ ಚಿಕ್ಕದು, ಕ್ಷಮಿಸಿದ್ರೆ ಸಾಕು ಎಂದು ಸುಜಾತ ಭಟ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.