Advertisment

ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ 160 ಸೀಟು ಗೆಲ್ಲಿಸಿಕೊಡುವ ಗ್ಯಾರಂಟಿ ಆಫರ್‌ ಬಂದಿತ್ತು ಎಂದ ಶರದ್ ಪವಾರ್‌

ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಗೂ ಮುನ್ನ ನಮ್ಮನ್ನು ಇಬ್ಬರು ವ್ಯಕ್ತಿಗಳು ಭೇಟಿಯಾಗಿದ್ದರು. ನಮಗೆ 160 ಸೀಟುಗಳನ್ನು ಗೆಲ್ಲಿಸಿಕೊಡುವ ಆಫರ್ ಕೊಟ್ಟಿದ್ದರು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಇದು ಸಂಚಲನಕ್ಕೆ ಕಾರಣವಾಗಿದೆ.

author-image
Chandramohan
SHARAD PAWAR NCP
Advertisment
  • ಮಹಾ ಎಲೆಕ್ಷನ್‌ಗೂ ಮುನ್ನ 160 ಸೀಟು ಆಫರ್ ಬಂದಿತ್ತು ಎಂದ ಶರದ್ ಪವಾರ್‌
  • ಇಬ್ಬರು ವ್ಯಕ್ತಿಗಳು ನಮ್ಮನ್ನು ಭೇಟಿಯಾಗಿ ಈ ಆಫರ್ ನೀಡಿದ್ರು ಎಂದ ಪವಾರ್‌
  • ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಶರದ್ ಪವಾರ್‌

  ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗೂ ಮುನ್ನ ತಮ್ಮನ್ನು ಭೇಟಿಯಾಗಿದ್ದ ಇಬ್ಬರು ವ್ಯಕ್ತಿಗಳು ಮಹಾ ವಿಕಾಸ್ ಅಘಾಡಿಗೆ 160 ಸೀಟುಗಳು ಗ್ಯಾರಂಟಿಯಾಗಿ ಬರುವಂತೆ ಮಾಡುವ ಆಫರ್ ನೀಡಿದ್ದರು ಎಂದು ಎನ್‌ಸಿಪಿ(ಎಸ್‌ಪಿ) ನಾಯಕ ಶರದ್ ಪವಾರ್ ಹೇಳಿದ್ದಾರೆ. ಆ ಇಬ್ಬರನ್ನು ನಾನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪರಿಚಯಿಸಿದೆ.  ರಾಹುಲ್ ಗಾಂಧಿ ಆ ಆಫರ್  ಅನ್ನು ತಿರಸ್ಕರಿಸಿದ್ದರು.  ನಾವು ಇಂಥ ವಿಚಾರಗಳಲ್ಲಿ ಭಾಗಿಯಾಗಬಾರದು ಎಂದು  ಅನ್ನಿಸಿತು. ನಾವು ನೇರವಾಗಿ ಜನರ ಬಳಿಗೆ ಹೋಗಬೇಕೆಂದು ನಿರ್ಧರಿಸಿದ್ದೇವು ಎಂದು ಶರದ್ ಪವಾರ್ ಇಂದು ಮಹಾರಾಷ್ಟ್ರದ ನಾಗಪುರದಲ್ಲಿ ಹೇಳಿದ್ದಾರೆ. 
ರಾಹುಲ್ ಗಾಂಧಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಮತಕಳವು ಆರೋಪ ಮಾಡಿ ಕ್ಯಾಂಪೇನ್ ಆರಂಭಿಸಿದ್ದಾರೆ.  ಇದಕ್ಕೆ ಪುಷ್ಟಿ ನೀಡುವಂತೆ ಶರದ್ ಪವಾರ್ ಮಾತನಾಡಿದ್ದಾರೆ.  ಇದೇ ಮೊದಲ ಭಾರಿಗೆ ಶರದ್ ಪವಾರ್ ಕೂಡ ಕೇಂದ್ರ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ. 
ಇನ್ನೂ  ಬಿಜೆಪಿ ಪಕ್ಷವು ಶರದ್ ಪವಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ್ದು, ಒಂದು ವೇಳೆ ಅಂಥ ನಿಜವಾದ ಘಟನೆ ನಡೆದಿದ್ದರೇ, ಆಗಲೇ ಅಧಿಕಾರಿಗಳಿಗೆ ದೂರು ನೀಡಬೇಕಾಗಿತ್ತು ಎಂದಿದೆ.

Advertisment

CEC ECI 333


ಇನ್ನೂ ಶರದ್ ಪವಾರ್ ಹೇಳಿಕೆಯ ಸಮಯವನ್ನು ಸಿಎಂ ದೇವೇಂದ್ರ  ಫಡ್ನವೀಸ್ ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿಯನ್ನು ಭೇಟಿಯಾದ ಬಳಿಕ ಶರದ್ ಪವಾರ್ ಇದನ್ನು ನೆನಪಿಸಿಕೊಂಡಿದ್ದು ಏಕೆ? ಬಹಳಷ್ಟು ವರ್ಷಗಳಿಂದ ರಾಹುಲ್ ಗಾಂಧಿ ಇವಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಆಗ ಶರದ್ ಪವಾರ್ ಕೂಡ ಇವಿಎಂ ಬಗ್ಗೆ ಮಾತನಾಡುವುದು ತಪ್ಪು  ಎಂದಿದ್ದರು.  ಈ ಬದಲಾವಣೆಗೆ ಕಾರಣ ಶರದ್ ಪವಾರ್ ಅವರು ರಾಹುಲ್ ಗಾಂಧಿ ಭೇಟಿಯಾಗಿರುವುದು ಎಂದು ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Election Commission on Rahul Gandhi
Advertisment
Advertisment
Advertisment