CSK, RR ಮಧ್ಯೆ ಭರ್ಜರಿ ಟ್ರೇಡಿಂಗ್​ ಟಾಕ್; ಚೆನ್ನೈ ಫ್ರಾಂಚೈಸಿಯಿಂದ ಹೊರಬಿತ್ತು ಶಾಕಿಂಗ್​ ನ್ಯೂಸ್​..!

author-image
Ganesh
Updated On
CSK, RR ಮಧ್ಯೆ ಭರ್ಜರಿ ಟ್ರೇಡಿಂಗ್​ ಟಾಕ್; ಚೆನ್ನೈ ಫ್ರಾಂಚೈಸಿಯಿಂದ ಹೊರಬಿತ್ತು ಶಾಕಿಂಗ್​ ನ್ಯೂಸ್​..!
Advertisment
  • ಸಂಜು ಸ್ಯಾಮ್ಸನ್​ಗಾಗಿ ಎಂಥ ತ್ಯಾಗಕ್ಕಾದ್ರೂ ರೆಡಿ
  • ನಾಯಕನ ತ್ಯಾಗ ಮಾಡಲು ಮುಂದಾಯ್ತಾ ಚೆನ್ನೈ?
  • ಸೂಪರ್​ ಕಿಂಗ್ಸ್​​ನ ಪ್ಲಾನ್​-ಸಿ ಮತ್ತಷ್ಟು ಸೂಪರ್​

IPL ಸೀಸನ್​​ 18ರ ಅಂತ್ಯವಾಗಿ ತಿಂಗಳು ಉರುಳೋಕೆ ಮುನ್ನವೇ ಮುಂದಿನ ಸೀಸನ್​​ನ ಸಿದ್ಧತೆ ಶುರುವಾಗಿದೆ. ರಾಜಸ್ಥಾನ್​ ರಾಯಲ್ಸ್​ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿಗಳಲ್ಲಂತೂ ಬಿರುಸಿನ ಚಟುವಟಿಕೆಗಳು ನಡೀತಿವೆ. ಈ ಸೀಸನ್​ನಲ್ಲಿ ಹೀನಾಯ ಪರ್ಫಾಮೆನ್ಸ್​ ನೀಡಿದ ಚೆನ್ನೈ ತಂಡ ಬಲಿಷ್ಠ ತಂಡ ಕಟ್ಟೋಕೆ ಹೊಸ ಪ್ಲಾನ್​ ರೆಡಿಮಾಡಿದೆ. ನಾಯಕನನ್ನೆ ತ್ಯಾಗ ಮಾಡಲು ಯೆಲ್ಲೋ ಆರ್ಮಿ ಹೊರಟಿದೆ.

ಮುಂದಿನ ಸೀಸನ್​ಗೆ ಬಲಿಷ್ಠ ತಂಡ ಕಟ್ಟೋಕೆ ಈಗಾಗಲೇ ಸಿದ್ಧತೆ ಆರಂಭಿಸಿರೋ ಚೆನ್ನೈ ಸೂಪರ್​ ಕಿಂಗ್ಸ್​​ ತಂಡದ ಕಣ್ಣು ಸಂಜು ಸ್ಯಾಮ್ಸನ್​​ ಮೇಲೆ ಬಿದ್ದಿದೆ. ಸಂಜು ಕರೆತರೋಕೆ ಎಷ್ಟರಮಟ್ಟಿಗೆ ಸಿದ್ಧತೆ ನಡೆದಿದೆ ಅಂದ್ರೆ, ಎಂಥಾ ತ್ಯಾಗಕ್ಕಾದ್ರೂ ಚೆನ್ನೈ ಫ್ರಾಂಚೈಸಿ ರೆಡಿಯಾಗಿದೆ. ಒಬ್ಬ ಸಂಜು ಸ್ಯಾಮ್ಸನ್​​ಗಾಗಿ ಇಬ್ಬರು ಆಟಗಾರರನ್ನ ನೀಡುವ ಪ್ರಸ್ತಾವವನ್ನ ಈಗಾಗಲೇ ಚೆನ್ನೈ ಇಟ್ಟಿದೆ. ಶಿವಂ ದುಬೆ, ಆರ್​​.ಅಶ್ವಿನ್​​ನ ಬಿಟ್ಟುಕೊಡೋಕೆ ರೆಡಿಯಾಗಿರೋದು ಹಳೇ ಸುದ್ದಿ. ಇದೀಗ ಪ್ಲಾನ್​ ಬಿ ಕೂಡ ರೆಡಿಯಾಗಿದೆ.

ಇದನ್ನೂ ಓದಿ: 25 ಕೋಟಿ ಕಾರ್ಮಿಕರು, ರೈತರಿಂದ ಆಕ್ರೋಶ! ಭಾರತ್ ಬಂದ್​ನಲ್ಲಿ ಏನಿರುತ್ತೆ, ಏನಿರಲ್ಲ..?

publive-image

ಸಿಎಸ್​​ಕೆ ಫ್ರಾಂಚೈಸಿಯಿಂದ ಹೊರ ಬಿತ್ತು ಶಾಕಿಂಗ್​ ಸುದ್ದಿ

ಒಂದು ವೇಳೆ ಅಶ್ವಿನ್​, ದುಬೆಯನ್ನ ಬಿಟ್ಟು ಕೊಡೋ ಪ್ಲಾನ್ ಎ​ ವರ್ಕೌಟ್ ಆಗಲಿಲ್ಲ ಅಂದ್ರೆ ಪ್ಯಾನ್​​-ಬಿ ಕೂಡ ರೆಡಿಯಾಗಿದೆ. ಸಿಎಸ್​ಕೆ ಫ್ರಾಂಚೈಸಿ ಮಾಡಿರುವ ಪ್ಲಾನ್​ ಬಿ ಅಭಿಮಾನಿಗಳಲ್ಲಿ ಅಚ್ಚರಿ ತರಿಸದೇ ಇರಲ್ಲ. ಸಂಜು ಸ್ಯಾಮ್ಸನ್​ಗಾಗಿ ತಂಡದ ಹಾಲಿ ನಾಯಕ ಋತುರಾಜ್​​ ಗಾಯಕ್ವಾಡ್​​ನೇ ಬಿಟ್ಟು ಕೊಡೋಕೆ ಚೆನ್ನೈ ತಂಡ ರೆಡಿಯಾಗಿದೆ.

ಋತುರಾಜ್​ ಟ್ರೇಡ್​​ಗೆ ಮುಂದಾಗಿದ್ದೇಕೆ ಚೆನ್ನೈ ತಂಡ?

ಋತುರಾಜ್​ ಗಾಯಕ್ವಾಡ್​​ ಚೆನ್ನೈ ಫ್ರಾಂಚೈಸಿ ಇದೀಗ ಧೋನಿಯ ಉತ್ತರಾಧಿಕಾರಿ ಎಂದೇ ಬಿಂಬಿಸಿತ್ತು. ಇದೀಗ ನೋಡಿದ್ರೆ ನಾಯಕನನ್ನೇ ತ್ಯಾಗ ಮಾಡಲು ಹೊರಟಿದೆ. ತಂಡದ ಮುಂದಿನ ಭವಿಷ್ಯದ ದೃಷ್ಟಿಯಿಂದ ಋತುರಾಜ್​ ಗಾಯಕ್ವಾಡ್​ನ ಟ್ರೇಡ್​ ಮಾಡಿ ಸಂಜು ಸ್ಯಾಮ್ಸನ್​​ನ ಕರೆ ತರೋಕೆ ದೃಢ ನಿರ್ಧಾರ ಮಾಡಿದೆ. ಇಬ್ಬರ ಪ್ರೈಸ್​​ 18 ಕೋಟಿಯಾಗಿದ್ದು ಹಣಕಾಸಿನ ಲೆಕ್ಕಾಚಾರದಲ್ಲೂ ಪರ್ಫೆಕ್ಟ್​​ ಮ್ಯಾಚ್​ ಆಗುತ್ತೆ.

ಋತುರಾಜ್ ತ್ಯಾಗಕ್ಕೆ ಮುಂದಾಗಿದ್ದೇಕೆ?

  • ಋತುರಾಜ್​ ಕ್ಯಾಪ್ಟನ್​​ಶಿಪ್​ ಎಫೆಕ್ಟಿವ್​ ಇಲ್ಲ
  • T20 ಕ್ರಿಕೆಟ್​ಗೆ ಬೇಕಾದ ಅಗ್ರೆಶನ್​ ಇಲ್ಲ
  • ಅಪ್ರೋಚ್​ ಸಪ್ಪೆ, ಟ್ಯಾಕ್ಟಿಕ್ಸ್​ ಹೇಳಿಕೊಳ್ಳುವಂತಿಲ್ಲ
  • ಧೋನಿ ಉತ್ತರಾಧಿಕಾರಿಯಾಗಲು ಸಮರ್ಥ ಅನಿಸಿಲ್ಲ
  • ಕನ್ಸಿಸ್ಟೆನ್ಸಿ ಕಾಟ. ಪ್ಲೇಯರ್ಸ್​ ಫ್ರೆಂಡ್ಲಿ ಕ್ಯಾಪ್ಟನ್​ ಅಲ್ಲ

ಸೂಪರ್​ ಕಿಂಗ್ಸ್​ನ ಪ್ಲಾನ್​-ಸಿ ಮತ್ತಷ್ಟು ಸೂಪರ್
​​
ಪ್ಲ್ಯಾನ್​ ಬಿ ಅಡಿಯಲ್ಲಿ ಋತುರಾಜ್​ ಕೊಟ್ಟು ಸಂಜುವನ್ನ ಟ್ರೇಡ್​​ ಮಾಡಲು ಹೊರಟಿರೋ ಚೆನ್ನೈ ಮತ್ತೊಂದು ಬ್ಯಾಕ್​​ಅಪ್​ ಪ್ಲ್ಯಾನ್​ ಮಾಡಿದೆ. ಅಸಲಿಗೆ ಚೆನ್ನೈಗೆ ಬೇಕಾಗಿರೋದು ಒಬ್ಬ ಒಳ್ಳೆ ವಿಕೆಟ್​ ಕೀಪರ್​​. ವಿಕೆಟ್​ ಕೀಪರ್​​ಗೆ ಗಾಳ ಹಾಕಲು ಪ್ಲಾನ್ ಸಿ ಕೂಡ​ ರೆಡಿಯಾಗಿದೆ.

ಇದನ್ನೂ ಓದಿ: ಇವತ್ತು ಭಾರತ್ ಬಂದ್​​.. ಕಾರ್ಮಿಕ ಸಂಘಟನೆಗಳ ಡಿಮ್ಯಾಂಡ್ ಏನೇನು..?

publive-image

ಚೆನ್ನೈನ ಪ್ಲ್ಯಾನ್​-ಸಿ ಏನು?

ಧೋನಿ ಯಾವ ಕ್ಷಣದಲ್ಲಿ ನಿವೃತ್ತಿ ಹೇಳ್ತಾರೆ ಅನ್ನೋದನ್ನ ಹೇಳೋಕಾಗಲ್ಲ. ಹೀಗಾಗಿ ಚೆನ್ನೈ ಫ್ರಾಂಚೈಸಿ ಒಬ್ಬ ಸಮರ್ಥ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಹುಡುಕಾಟದಲ್ಲಿದೆ. ಒಂದು ವೇಳೆ ಸ್ಯಾಮ್ಸನ್​​ ಟ್ರೇಡಿಂಗ್​ ಪ್ಲಾನ್​ ಫೇಲ್​ ಆದ್ರೆ ಮತ್ತೊಂದು ಆಪ್ಶನ್​ ರೆಡಿಯಿದೆ. ರಾಜಸ್ಥಾನ್​ ತಂಡದಲ್ಲಿರೋ ದೃವ್​ ಜುರೇಲ್​ ವರ್ಗಾವಣೆಯ ಬಗ್ಗೆ ಚರ್ಚೆ ನಡೆದಿದೆ. ಜುರೇಲ್ ಒಬ್ಬ ಒಳ್ಳೆ ವಿಕೆಟ್​ ಕೀಪರ್​ ಮಾತ್ರವಲ್ಲ. ಟಿ20 ಕ್ರಿಕೆಟ್​ಗೆ ಹೇಳಿ ಮಾಡಿಸಿದ ಬ್ಯಾಟ್ಸ್​​​​ಮನ್​. ವಯಸ್ಸು ಇನ್ನೂ 24 ಆಗಿರೋದ್ರಿಂದ ಭವಿಷ್ಯದ ಆಟಗಾರ. ಹಲ ವರ್ಷಗಳ ಕಾಲ ತಂಡದಲ್ಲಿ ಇರಬಲ್ಲರು.

ರಾಜಸ್ಥಾನ್​ ಫ್ರಾಂಚೈಸಿಯಲ್ಲಿ ಏನ್ ನಡೀತಿದೆ?

ರಾಜಸ್ಥಾನ್​ ರಾಯಲ್ಸ್​ ಫ್ರಾಂಚೈಸಿಯಲ್ಲೂ ಚಟುವಟಿಕೆಗಳು ಗರಿಗೆದರಿವೆ. ಲಂಡನ್​ನಲ್ಲಿ ಈಗಾಗಲೇ ಒಂದು ರೌಂಡ್​ ಮೀಟಿಂಗ್​ ಮಾಡಿ ರಾಹುಲ್​ ದ್ರಾವಿಡ್​ ಹಾಗೂ ಫ್ರಾಂಚೈಸಿಯ ಮ್ಯಾನೇಜ್​ಮೆಂಟ್​ ಚರ್ಚೆ ನಡೆಸಿದ್ದಾರೆ. ಟ್ರೇಡಿಂಗ್​ನಲ್ಲಿ​ ಯಾರನ್ನ ಕೊಟ್ಟು, ಯಾರನ್ನ ತೆಗೆದುಕೊಳ್ಳ ಬೇಕು ಎಂಬ ಚರ್ಚೆ ನಡೆದಿದೆ. ಈ ವೇಳೆ ಸಂಜು ಸ್ಯಾಮ್ಸನ್​ ಚೆನ್ನೈಗೆ ಹೋಗಲು ಆಸಕ್ತಿ ಹೊಂದಿರೋ ಬಿಗ್​ ಅಪ್​​ಡೇಟ್​​ ಸಿಕ್ಕಿದೆ. ಸಂಜುವಿನ ಈ ನಿರ್ಧಾರದ ಹಿಂದೆ ನೇಮ್​ ಅಂಡ್ ಫೇಮ್​​ನ ಲೆಕ್ಕಾಚಾರವಿದೆ.

ಸಂಜುಗೆ ಆಸಕ್ತಿ ಯಾಕೆ..?

ಚೆನ್ನೈ ಸೂಪರ್​​​ ಕಿಂಗ್ಸ್​ ಐಪಿಎಲ್​ನ ಮೋಸ್ಟ್​ ಸಕ್ಸಸ್​​ಫುಲ್​ ಫ್ರಾಂಚೈಸಿ. 5 ಟ್ರೋಫಿ ಗೆದ್ದಿರೋ ತಂಡದ ಪರ ಮಿಂಚಿದ್ರೆ ಎಲ್ಲರೂ ಗಮನಿಸ್ತಾರೆ. ಸೌತ್​ ಇಂಡಿಯಾದ ಫ್ರಾಂಚೈಯಿಯಾಗಿರೋದ್ರಿಂದ ಭಾಷೆ, ಕಲ್ಚರ್​ ಎಲ್ಲಾ ಗೊತ್ತು ಹೊಂದಾಣಿಕೆ ಸುಲಭವಾಗುತ್ತೆ. ಹೆಚ್ಚಿನ ಮನ್ನಣೆಯೂ ಸಿಗೋ ನಿರೀಕ್ಷೆಯಿದೆ. ಪಕ್ಕದ ರಾಜ್ಯದ ಆಟಗಾರ ಆಗಿರೋದ್ರಿಂದ ಫ್ಯಾನ್ಸ್​ಗೆ ಬೇಗ ಒಪ್ಪಿಕೊಳ್ಳಲಿದ್ದಾರೆ. ವೈಯಕ್ತಿಕವಾಗಿಯೂ ಫ್ಯಾನ್​ ಬೇಸ್​ ಹೆಚ್ಚಾಗಲಿದೆ.

ಇದನ್ನೂ ಓದಿ: ಅತಿಯಾಗಿ ಮೊಬೈಲ್​ ಬಳಸುವ ಮುನ್ನ ಎಚ್ಚರ.. ಆರೋಗ್ಯಕ್ಕೆ ಅಪಾಯ ಗ್ಯಾರಂಟಿ..!

ಸಂಜುವಿನಂತೆ ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿ ಕೂಡ ಜನಪ್ರೀಯತೆಯ ಲೆಕ್ಕಾಚಾರ ಹಾಕಿದೆ. ಧೋನಿ ತಂಡದಿಂದ ದೂರಾದ್ರೆ ಕ್ರೌಡ್​ಫುಲ್ ಮಾಡೋ​ ಸಾಮರ್ಥ್ಯ ಋತುರಾಜ್​ಗಿಲ್ಲ ಅನ್ನೋದು ಚೆನ್ನೈ ತಂಡಕ್ಕೆ ಈಗಾಗಲೇ ಗೊತ್ತಾಗಿದೆ. ಪಕ್ಕದ ರಾಜ್ಯದ ಆಟಗಾರನಾಗಿರೋದ್ರಿಂದ ಸಂಜುವನ್ನ ಕರೆ ತಂದ್ರೆ ಫ್ಯಾನ್ಸ್​ ಬೇಗ ಒಪ್ಪಿಕೊಳ್ತಾರೆ ಅನ್ನೋ ನಿರೀಕ್ಷೆ ಚೆನ್ನೈ ಫ್ರಾಂಚೈಸಿಯಲ್ಲೂ ಇದೆ. ಸಮರ್ಥ ವಿಕೆಟ್​ ಕೀಪರ್​, ಕ್ಯಾಪ್ಟನ್​​ ಎಲ್ಲವೂ ತಂಡಕ್ಕೆ ಸಿಕ್ಕಂತಾಗುತ್ತೆ. ಹೀಗಾಗಿಯೇ ಕಂಪ್ಲೀಟ್​​ ಪ್ಯಾಕೇಜ್​​ ಸಂಜು​ ಖರೀದಿಗೆ ಕಸರತ್ತು ನಡೆಸ್ತಿದೆ. ಅಂತಿಮವಾಗಿ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ: ಪರಾರಿ ಆಗಿರುವ ಉಗ್ರನ ತಾಯಿಯೂ ಅರೆಸ್ಟ್.. ಬೆಂಗಳೂರಲ್ಲಿ ಉಗ್ರರ ಜೈಲು ಜಾಲ ಹೇಗೆ ನಡೀತಿತ್ತು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment