ಬಿಗ್‌ ಬಾಸ್‌ ದೋಸ್ತಿಗಳ ಮಿಲನ.. ಧನರಾಜ್ ಆಚಾರ್‌ ಮನೆಗೆ ಭೇಟಿ ಕೊಟ್ಟ ತ್ರಿವಿಕ್ರಮ್‌; ಏನಿದು ಸರ್‌ಪ್ರೈಸ್‌?

author-image
admin
Updated On
ಬಿಗ್‌ ಬಾಸ್‌ ದೋಸ್ತಿಗಳ ಮಿಲನ.. ಧನರಾಜ್ ಆಚಾರ್‌ ಮನೆಗೆ ಭೇಟಿ ಕೊಟ್ಟ ತ್ರಿವಿಕ್ರಮ್‌; ಏನಿದು ಸರ್‌ಪ್ರೈಸ್‌?
Advertisment
  • ಧನರಾಜ್ ಅವರ ಮನೆಗೆ ಭೇಟಿ ಕೊಟ್ಟ ತ್ರಿವಿಕ್ರಮ್ ಫುಲ್ ಖುಷ್‌!
  • ಕಮಲಜ್ಜಿ ಕುಟುಂಬದ ಜೊತೆ ವಿಕ್ಕಿ ಕಾಲ ಕಳೆದ ಕ್ಷಣಗಳು ಹೇಗಿತ್ತು?
  • ಮಂಗಳೂರು ಹುಲಿ, ಕಮಲಜ್ಜಿ ಕುಟುಂಬದ ಬಗ್ಗೆ ತ್ರಿವಿಕ್ರಮ್‌ ಏನಂದ್ರು?

ಬಿಗ್ ಬಾಸ್ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್, ಟಾಪ್ 3 ಕಂಟೆಸ್ಟಂಟ್‌ ಧನರಾಜ್ ಆಚಾರ್ ಮನೆಗೆ ದಿಢೀರ್‌ ಭೇಟಿ ಕೊಟ್ಟು ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಮಂಗಳೂರಿಗೆ ತೆರಳಿದ್ದ ತ್ರಿವಿಕ್ರಮ್‌ ಅವರು ಪುತ್ತೂರಿನಲ್ಲಿರುವ ಧನರಾಜ್ ಅವರ ಮನೆಗೆ ಭೇಟಿ ಕೊಟ್ಟು ವಿಶೇಷವಾದ ಆತಿಥ್ಯ ಸ್ವೀಕರಿಸಿದರು.

publive-image

ಧನರಾಜ್ ಆಚಾರ್ ಅವರದ್ದು ಬಹಳ ದೊಡ್ಡ ಕುಟುಂಬ. ಕಮಲಜ್ಜಿ ಕುಟುಂಬದ ಎಲ್ಲಾ ಸದಸ್ಯರ ಜೊತೆ ಕಾಲ ಕಳೆದ ತ್ರಿವಿಕ್ರಮ್ ಅವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ತ್ರಿವಿಕ್ರಮ್ ಕಂಡು ಕಮಲಜ್ಜಿ ಕುಟುಂಬದ ಸದಸ್ಯರು ಸಂತೋಷವಾಗಿದ್ದು, ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಫೋಟೋಗೆ ಸಖತ್ ಪೋಸ್‌ ಕೊಟ್ಟಿದ್ದಾರೆ.

publive-image

ತ್ರಿವಿಕ್ರಮ್ ಆಗಮನದ ಬಗ್ಗೆ ಖುಷಿ ಹಂಚಿಕೊಂಡಿರುವ ಧನರಾಜ್ ಅವರು ನಮ್ಮ ಮನೆಯಲ್ಲಿ ಮಾಸ್ಟರ್ ತ್ರಿವಿಕ್ರಮ್. ಲವ್ ಯು ಮಾಸ್ಟರ್ ನೀವು ಬಂದಿದ್ದು ಖುಷಿ, ಖುಷಿ, ಖುಷಿ ಅಷ್ಟೇ. ಕಮಲಜ್ಜಿ ಕುಟುಂಬ ಮತ್ತು ವಿಕ್ಕಿ ಎಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮತ್ತೆ ಹುಟ್ಟೂರಿನ ಜನರ ಹೃದಯ ಗೆದ್ದ ಹನುಮಂತು; ಗ್ರಾಮ ದೇವತೆ ಜಾತ್ರೆಯಲ್ಲಿ ಹಳ್ಳಿಹೈದ..! 

ಧನರಾಜ್ ಆಚಾರ್ ಪ್ರೀತಿಗೆ ಮಾರು ಹೋದ ತ್ರಿವಿಕ್ರಮ್ ಅವರು ಕೂಡ ಕಮಲಜ್ಜಿ ಕುಟುಂಬದ ಬಗ್ಗೆ ಮಧುರವಾದ ಮಾತುಗಳನ್ನ ಪೋಸ್ಟ್ ಮಾಡಿದ್ದಾರೆ. ಮನೆಯೇ ಮಂತ್ರಾಲಯ ಅಂತಾರೆ. ಆದರೆ ಈ ಮಂತ್ರಾಲಯದಲ್ಲಿ ಹಲವು ಮುಗ್ಧ ಮನಸಿನ ದೈವವನ್ನು ಕಂಡೆ. ಥ್ಯಾಂಕ್ಯು ಮಂಗಳೂರು ಹುಲಿ ಎಂದು ಧನರಾಜ್ ಆಚಾರ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment