ಕುಟುಂಬಸ್ಥರ ಸಮ್ಮುಖದಲ್ಲಿ ಮಗನ ಮದುವೆ ಮಾಡಿಸಿದ್ದ ತಂದೆ ಕಂಗಾಲು
ಗುಬ್ಬಿ ತಾಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ನಡೆಯಿತು ಮೋಸದ ಮದುವೆ
ಈ ಘಟನೆ ಸಂಬಂಧ ನಾಲ್ವರನ್ನ ಬಂಧಿಸಿದ ಗುಬ್ಬಿ ಪೊಲೀಸ್ ಅಧಿಕಾರಿಗಳು
ತುಮಕೂರು: ಈಗಿನ ಕಾಲದಲ್ಲಿ ಯಾರನ್ನು ನಂಬಬೇಕು ಅಂತ ತಿಳಿಯುವುದೇ ಇಲ್ಲ. ಅದೆಷ್ಟೋ ಮಂದಿಗೆ ಒಂದೇ ಮದುವೆಯಾದವರ ಜೊತೆ ನೆಟ್ಟಗೆ ಸಂಸಾರ ಮಾಡಲು ಆಗೋದಿಲ್ಲ. ಆದರೆ ಇಲ್ಲೊಬ್ಬ ಕಿಲಾಡಿ ಮಹಿಳೆ ಐದು ಮದುವೆಯಾಗಿ ಪೊಲೀಸರ ಅತಿಥಿಯಾಗಿದ್ದಾಳೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ಈ ಮೋಸ ನಡೆದಿದೆ. ಗ್ರಾಮದ ಪಾಲಾಕ್ಷಯ್ಯ ಅನ್ನೋರ ಮಗ ದಯಾನಂದಮೂರ್ತಿಗೆ 37 ವರ್ಷ ಆಗಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬ ದಯಾನಂದಮೂರ್ತಿಗೆ ಹೆಣ್ಣು ಹುಡುಕುತ್ತಿತ್ತು. ನೂರಾರು ಹೆಣ್ಣು ಹುಡುಕಿದರೂ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಪಾಲಾಕ್ಷಯ್ಯ ಅವರು ಹತ್ತಾರು ಮದುವೆ ಬ್ರೋಕರ್ಗಳ ಮೂಲಕ ಹೆಣ್ಣು ಹುಡುಕಿಸಿದ್ದರು. ಕೋಮಲಾ ಎಂಬ ಮಹಿಳೆ ಜೊತೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ಪಾಲಾಕ್ಷಯ್ಯ ತಮ್ಮ ಮಗನ ಮದುವೆಯನ್ನು ತರಾತುರಿಯಲ್ಲಿ ಮಾಡಿಸಿಬಿಟ್ಟಿದ್ದಾರೆ. ಮದುವೆಯಾದ ಎರಡು ದಿನಕ್ಕೆ ಕಿಲಾಡಿ ಮಹಿಳೆ ಮನೆಯಲ್ಲಿದ್ದ ಚಿನ್ನಾಭರಣವನ್ನು ದೋಚಿ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: ಹುಡುಗರೇ..‘ಮದ್ವೆ ಆಗಿಲ್ಲ’ ಅಂತಾ ಮೋಸ ಹೋಗಬೇಡಿ.. 3 ವರ್ಷದಲ್ಲಿ 5 ಮದ್ವೆಯಾದ ಹೆಣ್ಣಿನ ಸ್ಟೋರಿ ಓದಿ, ಎಚ್ಚೆತ್ತುಕೊಳ್ಳಿ!
ಆದರೆ ಖತರ್ನಾಕ್ ಗ್ಯಾಂಗ್ ಮದುವೆ ಹೆಸರಲ್ಲಿ ದೋಖಾ ಮಾಡಲು ನಕಲಿ ಆಧಾರ್ ಕಾರ್ಡ್ ಸೃಷ್ಟಿ ಮಾಡಿದ್ದರಂತೆ. ಈ ತಂಡ ಮದುವೆ ಹೆಸರಲ್ಲಿ ವಂಚನೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದರಂತೆ. ಇದಕ್ಕಾಗಿ ನಕಲಿ ಅಡ್ರೆಸ್ನಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಳ್ಳುತ್ತಿದ್ದರು. ಆಧಾರ್ ಕಾರ್ಡ್ ತೋರಿಸಿ ಗಂಡಿನ ಮನೆಯವರನ್ನ ನಂಬಿಸುತ್ತಿದ್ದರು. ಈ ಗ್ಯಾಂಗ್ ಒಟ್ಟು ನಾಲ್ವರಿಗೂ ಹೆಚ್ಚು ಜನರಿಗೆ ಮದುವೆ ಹೆಸರಿನಲ್ಲಿ ದೋಖಾ ಮಾಡಿದೆ. ಸಂಪ್ರದಾಯದಂತೆ ಮದುವೆ ಮಾಡಿಕೊಂಡು, ಬಳಿಕ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಂತೆ.
ಇನ್ನು, ಈ ಕೇಸ್ನ ಪ್ರಮುಖ ಆರೋಪಿಯೇ ಬ್ರೋಕರ್ ಲಕ್ಷ್ಮೀ. ಮದುಮಗಳಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಚಿಕ್ಕಪ್ಪ-ಚಿಕ್ಕಮ್ಮನ ಹೆಸರಿನಲ್ಲಿ ಬಂದಿದ್ದವರು ಕೂಡ ನಕಲಿ ವ್ಯಕ್ತಿಗಳು. ಸದ್ಯ ನಾಲ್ವರನ್ನ ಬಂಧಿಸಿದ ಗುಬ್ಬಿ ಪೊಲೀಸರು ಜೈಲಿಗಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕುಟುಂಬಸ್ಥರ ಸಮ್ಮುಖದಲ್ಲಿ ಮಗನ ಮದುವೆ ಮಾಡಿಸಿದ್ದ ತಂದೆ ಕಂಗಾಲು
ಗುಬ್ಬಿ ತಾಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ನಡೆಯಿತು ಮೋಸದ ಮದುವೆ
ಈ ಘಟನೆ ಸಂಬಂಧ ನಾಲ್ವರನ್ನ ಬಂಧಿಸಿದ ಗುಬ್ಬಿ ಪೊಲೀಸ್ ಅಧಿಕಾರಿಗಳು
ತುಮಕೂರು: ಈಗಿನ ಕಾಲದಲ್ಲಿ ಯಾರನ್ನು ನಂಬಬೇಕು ಅಂತ ತಿಳಿಯುವುದೇ ಇಲ್ಲ. ಅದೆಷ್ಟೋ ಮಂದಿಗೆ ಒಂದೇ ಮದುವೆಯಾದವರ ಜೊತೆ ನೆಟ್ಟಗೆ ಸಂಸಾರ ಮಾಡಲು ಆಗೋದಿಲ್ಲ. ಆದರೆ ಇಲ್ಲೊಬ್ಬ ಕಿಲಾಡಿ ಮಹಿಳೆ ಐದು ಮದುವೆಯಾಗಿ ಪೊಲೀಸರ ಅತಿಥಿಯಾಗಿದ್ದಾಳೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ಈ ಮೋಸ ನಡೆದಿದೆ. ಗ್ರಾಮದ ಪಾಲಾಕ್ಷಯ್ಯ ಅನ್ನೋರ ಮಗ ದಯಾನಂದಮೂರ್ತಿಗೆ 37 ವರ್ಷ ಆಗಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬ ದಯಾನಂದಮೂರ್ತಿಗೆ ಹೆಣ್ಣು ಹುಡುಕುತ್ತಿತ್ತು. ನೂರಾರು ಹೆಣ್ಣು ಹುಡುಕಿದರೂ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಪಾಲಾಕ್ಷಯ್ಯ ಅವರು ಹತ್ತಾರು ಮದುವೆ ಬ್ರೋಕರ್ಗಳ ಮೂಲಕ ಹೆಣ್ಣು ಹುಡುಕಿಸಿದ್ದರು. ಕೋಮಲಾ ಎಂಬ ಮಹಿಳೆ ಜೊತೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ಪಾಲಾಕ್ಷಯ್ಯ ತಮ್ಮ ಮಗನ ಮದುವೆಯನ್ನು ತರಾತುರಿಯಲ್ಲಿ ಮಾಡಿಸಿಬಿಟ್ಟಿದ್ದಾರೆ. ಮದುವೆಯಾದ ಎರಡು ದಿನಕ್ಕೆ ಕಿಲಾಡಿ ಮಹಿಳೆ ಮನೆಯಲ್ಲಿದ್ದ ಚಿನ್ನಾಭರಣವನ್ನು ದೋಚಿ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: ಹುಡುಗರೇ..‘ಮದ್ವೆ ಆಗಿಲ್ಲ’ ಅಂತಾ ಮೋಸ ಹೋಗಬೇಡಿ.. 3 ವರ್ಷದಲ್ಲಿ 5 ಮದ್ವೆಯಾದ ಹೆಣ್ಣಿನ ಸ್ಟೋರಿ ಓದಿ, ಎಚ್ಚೆತ್ತುಕೊಳ್ಳಿ!
ಆದರೆ ಖತರ್ನಾಕ್ ಗ್ಯಾಂಗ್ ಮದುವೆ ಹೆಸರಲ್ಲಿ ದೋಖಾ ಮಾಡಲು ನಕಲಿ ಆಧಾರ್ ಕಾರ್ಡ್ ಸೃಷ್ಟಿ ಮಾಡಿದ್ದರಂತೆ. ಈ ತಂಡ ಮದುವೆ ಹೆಸರಲ್ಲಿ ವಂಚನೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದರಂತೆ. ಇದಕ್ಕಾಗಿ ನಕಲಿ ಅಡ್ರೆಸ್ನಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಳ್ಳುತ್ತಿದ್ದರು. ಆಧಾರ್ ಕಾರ್ಡ್ ತೋರಿಸಿ ಗಂಡಿನ ಮನೆಯವರನ್ನ ನಂಬಿಸುತ್ತಿದ್ದರು. ಈ ಗ್ಯಾಂಗ್ ಒಟ್ಟು ನಾಲ್ವರಿಗೂ ಹೆಚ್ಚು ಜನರಿಗೆ ಮದುವೆ ಹೆಸರಿನಲ್ಲಿ ದೋಖಾ ಮಾಡಿದೆ. ಸಂಪ್ರದಾಯದಂತೆ ಮದುವೆ ಮಾಡಿಕೊಂಡು, ಬಳಿಕ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಂತೆ.
ಇನ್ನು, ಈ ಕೇಸ್ನ ಪ್ರಮುಖ ಆರೋಪಿಯೇ ಬ್ರೋಕರ್ ಲಕ್ಷ್ಮೀ. ಮದುಮಗಳಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಚಿಕ್ಕಪ್ಪ-ಚಿಕ್ಕಮ್ಮನ ಹೆಸರಿನಲ್ಲಿ ಬಂದಿದ್ದವರು ಕೂಡ ನಕಲಿ ವ್ಯಕ್ತಿಗಳು. ಸದ್ಯ ನಾಲ್ವರನ್ನ ಬಂಧಿಸಿದ ಗುಬ್ಬಿ ಪೊಲೀಸರು ಜೈಲಿಗಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ