ಅಪಾಯದಲ್ಲಿ ತುಂಗಭದ್ರಾ ಡ್ಯಾಂ​.. ಜಲಾಶಯದ ಬಳಿ ಓಡೋಡಿ ಬಂದ ಶಾಸಕ ಗವಿಯಪ್ಪ, ರಾಘವೇಂದ್ರ ಹಿಟ್ನಾಳ್

author-image
AS Harshith
Updated On
ಅಪಾಯದಲ್ಲಿ ತುಂಗಭದ್ರಾ ಡ್ಯಾಂ​.. ಜಲಾಶಯದ ಬಳಿ ಓಡೋಡಿ ಬಂದ ಶಾಸಕ ಗವಿಯಪ್ಪ, ರಾಘವೇಂದ್ರ ಹಿಟ್ನಾಳ್
Advertisment
  • ತುಂಗಭದ್ರಾ ಜಲಾಶಯದ 19ನೇ ಚೈನ್​ಲಿಂಕ್​ ಗೇಟ್​ ಕಟ್
  • ಒಂದೇ ಗೇಟ್​ನಿಂದ 38 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ
  • ಸ್ವತಃ ತಾವೇ ಕಾರು ಚಲಾಯಿಸಿಕೊಂಡು ಡ್ಯಾಂಗೆ ಶಾಸಕ ಗವಿಯಪ್ಪ

ತುಂಗಭದ್ರಾ ಜಲಾಶಯದ 19ನೇ ಚೈನ್​ಲಿಂಕ್​ ಗೇಟ್​ ಕಟ್​ ಆಗಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಈಗಾಗಲೇ ಒಂದೇ ಗೇಟ್​ನಿಂದ 38 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಹರಿಯುತ್ತಿದೆ. ಗೇಟ್ ಕಟ್ ಆಗಿರುವ ಪರಿಣಾಮ ಎರಡು ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಫುಲ್​ ಅಲರ್ಟ್ ಆಗಿದ್ದಾರೆ.

publive-image

ಓಡೋಡಿ ಬಂದ ಶಾಸಕರು

ವಿಜಯನಗರ ಶಾಸಕ ಗವಿಯಪ್ಪ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಜಿತೆಗೆ 2 ಜಿಲ್ಲೆಗಳ ಎಸ್​ಪಿಗಳು, ಟಿಬಿ ಡ್ಯಾಂ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಸಚಿವ ತಂಗಡಗಿ ಮಧ್ಯರಾತ್ರಿಯೇ ಚಾಮರಾಜನಗರದಿಂದ ಹೊಸಪೇಟೆಗೆ ಬಂದು ಡ್ಯಾಂ ವೀಕ್ಷಿಸಿದ್ದಾರೆ. ಸದ್ಯ ಡ್ಯಾಮೇಜ್ ಆದ ಗೇಟ್ ಬಳಿ ಸಿಬ್ಬಂದಿ ಠಿಕಾಣಿ ಹೂಡಿದ್ದಾರೆ.

ಇದನ್ನೂ ಓದಿ: BREAKING: ಭರ್ತಿಯಾದ ತುಂಗಭದ್ರಾ ಡ್ಯಾಂ.. 19ನೇ ಚೈನ್​ಲಿಂಕ್​ ಗೇಟ್​ ಕಟ್​.. ನದಿ ಪಾತ್ರದ ಜನರಲ್ಲಿ ಆತಂಕ

ಶಾಸಕ ಗವಿಯಪ್ಪ ಕೂಡ ತುಂಗಭದ್ರಾ ಜಲಾಶಯದತ್ತ ಅವಸರದಲ್ಲೇ ಬಂದಿದ್ದಾರೆ. ಸ್ವತಃ ತಾವೇ ಕಾರು ಚಲಾಯಿಸಿಕೊಂಡು ಡ್ಯಾಂಗೆ ದೌಡಾಯಿಸಿದ್ದಾರೆ. ಬಳಿಕ ಡ್ಯಾಂ ವೀಕ್ಷಿಸಿದ್ದಾರೆ.

ಇದನ್ನೂ ಓದಿ: ವಿನೇಶ್ ಫೋಗಟ್‌ಗೆ ಆಶಾವಾದ.. ಬೆಳ್ಳಿ ಪದಕದ ಬಗ್ಗೆ ಆರ್ಬಿಟ್ರೇಷನ್ ಕೋರ್ಟ್ ಹೇಳಿದ್ದೇನು?

ಎಸ್ಪಿ ಹರಿಬಾಬು ಕೂಡ ಕಿತ್ಕೊಂಡು ಹೋಗಿರೋ ಗೇಟ್ ಜಾಗಕ್ಕೆ ಹೋಗಿಬಂದಿದ್ದಾರೆ. ಎಸ್ಪಿ ಹರಿಬಾಬು ಬಳಿ ವಿಜಯನಗರ ಶಾಸಕ ಗವಿಯಪ್ಪ ಮಾಹಿತಿ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment