/newsfirstlive-kannada/media/post_attachments/wp-content/uploads/2024/08/Tungabadra-dam-3.jpg)
ತುಂಗಭದ್ರಾ ಜಲಾಶಯದ 19ನೇ ಚೈನ್​ಲಿಂಕ್​ ಗೇಟ್​ ಕಟ್​ ಆಗಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಈಗಾಗಲೇ ಒಂದೇ ಗೇಟ್​ನಿಂದ 38 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಹರಿಯುತ್ತಿದೆ. ಗೇಟ್ ಕಟ್ ಆಗಿರುವ ಪರಿಣಾಮ ಎರಡು ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಫುಲ್​ ಅಲರ್ಟ್ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2024/08/Tungabadra-dam-1.jpg)
ಓಡೋಡಿ ಬಂದ ಶಾಸಕರು
ವಿಜಯನಗರ ಶಾಸಕ ಗವಿಯಪ್ಪ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಜಿತೆಗೆ 2 ಜಿಲ್ಲೆಗಳ ಎಸ್​ಪಿಗಳು, ಟಿಬಿ ಡ್ಯಾಂ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಸಚಿವ ತಂಗಡಗಿ ಮಧ್ಯರಾತ್ರಿಯೇ ಚಾಮರಾಜನಗರದಿಂದ ಹೊಸಪೇಟೆಗೆ ಬಂದು ಡ್ಯಾಂ ವೀಕ್ಷಿಸಿದ್ದಾರೆ. ಸದ್ಯ ಡ್ಯಾಮೇಜ್ ಆದ ಗೇಟ್ ಬಳಿ ಸಿಬ್ಬಂದಿ ಠಿಕಾಣಿ ಹೂಡಿದ್ದಾರೆ.
ಶಾಸಕ ಗವಿಯಪ್ಪ ಕೂಡ ತುಂಗಭದ್ರಾ ಜಲಾಶಯದತ್ತ ಅವಸರದಲ್ಲೇ ಬಂದಿದ್ದಾರೆ. ಸ್ವತಃ ತಾವೇ ಕಾರು ಚಲಾಯಿಸಿಕೊಂಡು ಡ್ಯಾಂಗೆ ದೌಡಾಯಿಸಿದ್ದಾರೆ. ಬಳಿಕ ಡ್ಯಾಂ ವೀಕ್ಷಿಸಿದ್ದಾರೆ.
ಇದನ್ನೂ ಓದಿ: ವಿನೇಶ್ ಫೋಗಟ್ಗೆ ಆಶಾವಾದ.. ಬೆಳ್ಳಿ ಪದಕದ ಬಗ್ಗೆ ಆರ್ಬಿಟ್ರೇಷನ್ ಕೋರ್ಟ್ ಹೇಳಿದ್ದೇನು?
ಎಸ್ಪಿ ಹರಿಬಾಬು ಕೂಡ ಕಿತ್ಕೊಂಡು ಹೋಗಿರೋ ಗೇಟ್ ಜಾಗಕ್ಕೆ ಹೋಗಿಬಂದಿದ್ದಾರೆ. ಎಸ್ಪಿ ಹರಿಬಾಬು ಬಳಿ ವಿಜಯನಗರ ಶಾಸಕ ಗವಿಯಪ್ಪ ಮಾಹಿತಿ ಪಡೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us