newsfirstkannada.com

RCB ಸೋಲು ಸಂಭ್ರಮಿಸಿ ಟ್ರೋಲ್ ಮಾಡಿದ CSKಯ ತುಷಾರ್ ದೇಶಪಾಂಡೆ.. ಆಮೇಲೆ ಆಗಿದ್ದೇ ಬೇರೆ..

Share :

Published May 23, 2024 at 9:21am

    ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ RCBಗೆ ಸೋಲು

    ಆರ್​ಸಿಬಿ ಸೋಲನ್ನು ಸಂಭ್ರಮಿಸಿ ಟ್ರೋಲ್ ಮಾಡಿದ್ದ ದೇಶಪಾಂಡೆ

    ಆರ್​ಸಿಬಿ ಟ್ರೋಲ್ ಸಂಭ್ರಮಿಸಿ, ಅವರೇ ಟ್ರೋಲ್ ಆಗ್ತಿದ್ದಾರೆ ಈಗ

ಚೆನ್ನೈ ಸೂಪರ್ ಕಿಂಗ್ಸ್​ ವೇಗಿ ತುಷಾರ್ ದೇಶಪಾಂಡೆ ಆರ್​ಸಿಬಿಯನ್ನು ಟ್ರೋಲ್ ಮಾಡಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಸೋಲುತ್ತಿದ್ದಂತೆಯೇ, ತುಷಾರ್ ದೇಶಪಾಂಡೆ ಆರ್​​ಸಿಬಿಯನ್ನು ಗೇಲಿ ಮಾಡಿದ್ದಾರೆ.

ಇನ್​ಸ್ಟಾ ಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದ ದೇಶಪಾಂಡೆ ತೀವ್ರ ಚರ್ಚೆಗೆ ಕಾರಣ ಆಗ್ತಿದ್ದಂತೆಯೇ ಅದನ್ನು ಡಿಲೀಟ್ ಮಾಡಿದ್ದಾರೆ. ಅಷ್ಟರಲ್ಲಾಗಲೇ ಅಭಿಮಾನಿಗಳು ಅದನ್ನು ಸ್ಕ್ರೀನ್​ಶಾಟ್ ತೆಗೆದುಕೊಂಡಿದ್ದು, ಇದೀಗ ಅವರೇ ಟ್ರೋಲ್ ಆಗ್ತಿದ್ದಾರೆ.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಅಪಘಾತ.. ಇಬ್ಬರು ಮಹಿಳೆಯರು ಸಾವು.. 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಅಂದ್ಹಾಗೆ ದೇಶಪಾಂಡೆ ತಮ್ಮ ಇನ್​ಸ್ಟಾ ಸ್ಟೋರಿಯಲ್ಲಿ CSK ಅಭಿಮಾನಿಗಳ ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದರು. ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಫೋಟೋವು ಅವರ ಪೋಸ್ಟ್​ ಕಾಣ್ತಿದೆ. ರೈಲ್ವೇ ನಿಲ್ದಾಣದಲ್ಲಿ ರೈಲು ಬಂದು ನಿಂತಿದೆ. ಕನ್ನಡ, ಹಿಂದಿ ಮತ್ತು ಇಂಗಿಷ್​​ನಲ್ಲಿ ಬರೆದಿರುವ ಬೋರ್ಡ್ ಒಂದನ್ನ ಕಾಣಬಹುದು. ಅದರಲ್ಲಿ ಇಂಗ್ಲಿಷನ್​ನಲ್ಲಿ ‘BENGALURU CANT’ ಎಂದು ಬರೆಯಲಾಗಿದೆ. ಇಲ್ಲಿರುವ ಬರಹ ಮತ್ತು ಟ್ರೈನ್ ಬಂದು ನಿಂತಿರೋದನ್ನು ಆರ್​ಸಿಬಿ ಸೋಲಿಗೆ ಲಿಂಕ್ ಮಾಡಿದ್ದ ಪೋಸ್ಟ್ ಅನ್ನು ತುಷಾರ್ ದೇಶಪಾಂಡೆ ಶೇರ್ ಮಾಡಿದ್ದರು. ಇದು ಆರ್​ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಯಾವಾಗ ವಿವಾದ ಆಗುತ್ತೆ ಅನ್ನೋದನ್ನು ಎಚ್ಚೆತ್ತುಕೊಂಡರೋ, ಆಗಲೇ ಅದನ್ನು ಡಿಲೀಸ್ ಮಾಡಿದ್ದಾರೆ.

ಇದನ್ನೂ ಓದಿ:ಸೋತ ಆರ್​ಸಿಬಿ.. ನಾಯಕ ಫಾಫ್ ಡು ಪ್ಲೆಸ್ಸಿಸ್ ಹೇಳಿದ್ದೇನು..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB ಸೋಲು ಸಂಭ್ರಮಿಸಿ ಟ್ರೋಲ್ ಮಾಡಿದ CSKಯ ತುಷಾರ್ ದೇಶಪಾಂಡೆ.. ಆಮೇಲೆ ಆಗಿದ್ದೇ ಬೇರೆ..

https://newsfirstlive.com/wp-content/uploads/2024/05/Thushar-despande.jpg

    ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ RCBಗೆ ಸೋಲು

    ಆರ್​ಸಿಬಿ ಸೋಲನ್ನು ಸಂಭ್ರಮಿಸಿ ಟ್ರೋಲ್ ಮಾಡಿದ್ದ ದೇಶಪಾಂಡೆ

    ಆರ್​ಸಿಬಿ ಟ್ರೋಲ್ ಸಂಭ್ರಮಿಸಿ, ಅವರೇ ಟ್ರೋಲ್ ಆಗ್ತಿದ್ದಾರೆ ಈಗ

ಚೆನ್ನೈ ಸೂಪರ್ ಕಿಂಗ್ಸ್​ ವೇಗಿ ತುಷಾರ್ ದೇಶಪಾಂಡೆ ಆರ್​ಸಿಬಿಯನ್ನು ಟ್ರೋಲ್ ಮಾಡಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಸೋಲುತ್ತಿದ್ದಂತೆಯೇ, ತುಷಾರ್ ದೇಶಪಾಂಡೆ ಆರ್​​ಸಿಬಿಯನ್ನು ಗೇಲಿ ಮಾಡಿದ್ದಾರೆ.

ಇನ್​ಸ್ಟಾ ಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದ ದೇಶಪಾಂಡೆ ತೀವ್ರ ಚರ್ಚೆಗೆ ಕಾರಣ ಆಗ್ತಿದ್ದಂತೆಯೇ ಅದನ್ನು ಡಿಲೀಟ್ ಮಾಡಿದ್ದಾರೆ. ಅಷ್ಟರಲ್ಲಾಗಲೇ ಅಭಿಮಾನಿಗಳು ಅದನ್ನು ಸ್ಕ್ರೀನ್​ಶಾಟ್ ತೆಗೆದುಕೊಂಡಿದ್ದು, ಇದೀಗ ಅವರೇ ಟ್ರೋಲ್ ಆಗ್ತಿದ್ದಾರೆ.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಅಪಘಾತ.. ಇಬ್ಬರು ಮಹಿಳೆಯರು ಸಾವು.. 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಅಂದ್ಹಾಗೆ ದೇಶಪಾಂಡೆ ತಮ್ಮ ಇನ್​ಸ್ಟಾ ಸ್ಟೋರಿಯಲ್ಲಿ CSK ಅಭಿಮಾನಿಗಳ ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದರು. ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಫೋಟೋವು ಅವರ ಪೋಸ್ಟ್​ ಕಾಣ್ತಿದೆ. ರೈಲ್ವೇ ನಿಲ್ದಾಣದಲ್ಲಿ ರೈಲು ಬಂದು ನಿಂತಿದೆ. ಕನ್ನಡ, ಹಿಂದಿ ಮತ್ತು ಇಂಗಿಷ್​​ನಲ್ಲಿ ಬರೆದಿರುವ ಬೋರ್ಡ್ ಒಂದನ್ನ ಕಾಣಬಹುದು. ಅದರಲ್ಲಿ ಇಂಗ್ಲಿಷನ್​ನಲ್ಲಿ ‘BENGALURU CANT’ ಎಂದು ಬರೆಯಲಾಗಿದೆ. ಇಲ್ಲಿರುವ ಬರಹ ಮತ್ತು ಟ್ರೈನ್ ಬಂದು ನಿಂತಿರೋದನ್ನು ಆರ್​ಸಿಬಿ ಸೋಲಿಗೆ ಲಿಂಕ್ ಮಾಡಿದ್ದ ಪೋಸ್ಟ್ ಅನ್ನು ತುಷಾರ್ ದೇಶಪಾಂಡೆ ಶೇರ್ ಮಾಡಿದ್ದರು. ಇದು ಆರ್​ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಯಾವಾಗ ವಿವಾದ ಆಗುತ್ತೆ ಅನ್ನೋದನ್ನು ಎಚ್ಚೆತ್ತುಕೊಂಡರೋ, ಆಗಲೇ ಅದನ್ನು ಡಿಲೀಸ್ ಮಾಡಿದ್ದಾರೆ.

ಇದನ್ನೂ ಓದಿ:ಸೋತ ಆರ್​ಸಿಬಿ.. ನಾಯಕ ಫಾಫ್ ಡು ಪ್ಲೆಸ್ಸಿಸ್ ಹೇಳಿದ್ದೇನು..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More