/newsfirstlive-kannada/media/post_attachments/wp-content/uploads/2025/06/Meghalaya-for-honeymoon-case-1.jpg)
ಮೇಘಾಲಯದ ಚಿರಾಪುಂಜಿ ಬಳಿ ಇಂದೋರ್ನ ದಂಪತಿ ಹನಿಮೂನ್ ಹಾಗೂ ಪತಿ ಹ*ತ್ಯೆ ಕೇಸ್ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಪತಿ ಹ*ತ್ಯೆ ಕೇಸ್ನಲ್ಲಿ ನಾಪತ್ತೆಯಾಗಿದ್ದ ಪತ್ನಿಯೇ ಮಾಸ್ಟರ್ ಮೈಂಡ್ ಆಗಿದ್ದು, ಮೇಘಾಲಯ ಪೊಲೀಸರಿಗೆ ಶರಣಾಗಿದ್ದಾರೆ.
ಕಳೆದ ಜೂನ್ 6ರ ಶುಕ್ರವಾರ ರಾಜ ರಘುವಂಶಿ ಶವ ಪತ್ತೆಯಾಗಿತ್ತು. ಹನಿಮೂನ್ಗೆ ಬಂದಿದ್ದ ರಾಜ ರಘುವಂಶಿಯನ್ನು ಹ*ತ್ಯೆ ಮಾಡಿದ್ದು, ಪತ್ನಿ ನಾಪತ್ತೆಯಾಗಿದ್ದರು. ಈ ಕೇಸ್ನಲ್ಲಿ ಪತ್ನಿಯೇ ಸುಪಾರಿ ಕೊಟ್ಟಿದ್ದು, ಮಧ್ಯಪ್ರದೇಶದಿಂದ ನಾಲ್ಕು ಮಂದಿ ಹಂತಕರು ಮೇಘಾಲಯಕ್ಕೆ ಕರೆಸಿದ್ದು ಬೆಳಕಿಗೆ ಬಂದಿದೆ.
ಮದುವೆಯಾದ ಒಂದೇ ವಾರದಲ್ಲಿ ಹನಿಮೂನ್ಗೆಂದು ಹೋದ ರಾಜ ರಘುವಂಶಿ ದುರಂತ ಅಂತ್ಯವಾಗಿದ್ದು, ಪೊಲೀಸರು ನಾಲ್ವರು ಹಂತಕರ ಪೈಕಿ ಮೂವರನ್ನು ಬಂಧಿಸಿದ್ದಾರೆ. ರಾಜ ರಘುವಂಶಿ ಕುಟುಂಬಸ್ಥರು ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ಹನಿಮೂನ್ ಹ*ತ್ಯೆಗೆ ಕಾರಣವೇನು?
ಪತಿ ರಾಜ ರಘುವಂಶಿ ಹ*ತ್ಯೆ ಮಾಡಿದ ಪತ್ನಿ ಸೋನಮ್ಗೆ ರಾಜ ಕುಶ್ವಾಹಾ ಎಂಬಾತನ ಜೊತೆಗೆ ಅಕ್ರಮ ಸಂಬಂಧ ಇತ್ತು. ಈ ಕಾರಣದಿಂದಲೇ ಪತಿಯನ್ನು ಪತ್ನಿ ಹ*ತ್ಯೆಗೈದಿದ್ದಾರೆ. ಈ ಪ್ರಕರಣದಲ್ಲಿ ಸೋನಮ್ಗೆ ಸಹಾಯ ಮಾಡಿದ ಆಕಾಶ್, ವಿಶಾಲ್, ರಾಜ್ ಕುಶ್ವಾಹಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆನಂದ್ ಎಂಬ ಆರೋಪಿಯ ಬಂಧನ ಬಾಕಿ ಇದೆ.
ಸೋನಮ್ ಫೋನ್ ನಂಬರ್ ಅನ್ನು ಮೇಘಾಲಯ ಪೊಲೀಸರು ಟ್ರ್ಯಾಕ್ ಮಾಡಿದ್ದರು. ಈ ವೇಳೆ ಆರೋಪಿ ರಾಜ ಕುಶ್ವಾಹಾ ಜೊತೆ ಸೋನಮ್ ಗಂಟೆಗಟ್ಟಲೆ ಮಾತನಾಡಿರುವುದು ಬೆಳಕಿಗೆ ಬಂದಿತ್ತು. ಈ ಸುಳಿವಿನಿಂದ ಇದೊಂದು ಹನಿಮೂನ್ ಹ*ತ್ಯೆ ಅನ್ನೋದು ಖಚಿತವಾಗಿತ್ತು.
ರಾಜ ರಘುವಂಶಿ ಹ*ತ್ಯೆಯಲ್ಲಿ ಸೋನಮ್ ಬಾಯ್ ಫ್ರೆಂಡ್ ರಾಜು ಕುಶ್ವಾಹಾ ಕೂಡ ಭಾಗಿಯಾಗಿದ್ದ. ಹಂತಕರಿಗೆ ಸೋನಮ್ ಹಣ ನೀಡಿ ಕೊ*ಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ. ಮೇಘಾಲಯ ಪೊಲೀಸರು ಕೊಟ್ಟ ಮಾಹಿತಿ ಆಧಾರದ ಮೇಲೆ ಮಧ್ಯಪ್ರದೇಶ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಹನಿಮೂನ್ಗೆ ಬಂದ ಜೋಡಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್.. ಭಾರೀ ಸಂಚಲನ ಸೃಷ್ಟಿಸಿದ್ದ ಕೇಸ್ಗೆ ಪತ್ನಿಯೇ ವಿಲನ್..!
ಉತ್ತರಪ್ರದೇಶದ ಗಾಜಿಪುರದ ಡಾಭಾಕ್ಕೆ ಬಂದು ಸೋನಮ್ ಕುಟುಂಬದ ಜೊತೆಗೆ ಮಾತನಾಡಿದ್ದರು. ಡಾಭಾದವರ ಫೋನ್ ಪಡೆದು ತನ್ನ ಕುಟುಂಬದ ಜೊತೆಗೆ ಮಾತುಕತೆ ನಡೆಸಿದ್ದರು. ಬಳಿಕ ಗಾಜಿಪುರದ ಪೊಲೀಸ್ ಠಾಣೆಗೆ ಹೋಗಿ ಸೋನಮ್ ಶರಣಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ