/newsfirstlive-kannada/media/post_attachments/wp-content/uploads/2025/06/Indore-Couple.jpg)
ಹನಿಮೂನ್ಗೆ ಹೋಗಿ ಪತ್ನಿಯಿಂದಲೇ ಹತ್ಯೆಯಾದ ರಾಜಾ ರಘುವಂಶಿ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಅಪ್ಡೇಟ್ಸ್ ಸಿಕ್ಕಿದೆ. ಹನಿಮೂನ್ಗೆ ಹೋಗುವ ಮೊದಲು ರಾಜಾ ರಘುವಂಶಿ ಚಿನ್ನದ ಆಭರಣಗಳನ್ನು ತೊಟ್ಟುಕೊಂಡು ಹೋಗಿದ್ದರು.
ಆದರೆ ಮೃತದೇಹದ ಮೇಲೆ ಯಾವುದೇ ಆಭರಣಗಳಿರಲಿಲ್ಲ. ಅದೆಲ್ಲ ಆರೋಪಿ ಪತ್ನಿ ಸೋನಂ ಕಿತ್ಕೊಂಡಿದ್ದಾರೆ ಎಂದು ರಘುವಂಶಿ ಕುಟುಂಬಸ್ಥರು ಆರೋಪಿಸಿದ್ದಾರೆ. ಚಿನ್ನದ ಉಂಗುರ, ಚಿನ್ನದ ಸರ, ಬ್ರಾಸ್ಲೆಟ್, ಪರ್ಸ್ನಲ್ಲಿದ್ದ ಹಣ ಎಲ್ಲವೂ ನಾಪತ್ತೆಯಾಗಿದೆ ಎಂದು ಕುಟುಂಬ ಆರೋಪಿಸಿದೆ.
ಇದನ್ನೂ ಓದಿ: ಬಾ ನಲ್ಲ ಮಧುಚಂದ್ರಕೆ.. ಮೇಘಾಲಯ ಹನಿಮೂನ್ ಹ*ತ್ಯೆ ಕೇಸ್ನ ಇಂಚಿಂಚೂ ಮಾಹಿತಿ ಬಹಿರಂಗ
ಈ ಸಂಬಂಧ ರಘುವಂಶಿಯ ಸೋದರ ದೂರು ದಾಖಲಿಸಿದ್ದು, ಎಫ್ಐಆರ್ನಲ್ಲಿ ಈ ವಿಚಾರ ಉಲ್ಲೇಖವಾಗಿದೆ. ಕೃತ್ಯ ನಡೆಸಿದವರು ರಾಜ ರಘುವಂಶಿ ಆಭರಣಗಳನ್ನು ಲೂಟಿ ಮಾಡಿದ್ದಾರೆ. ತನ್ನ ಪತ್ನಿ ಸೋನಂ ತಾನು ಎಲ್ಲ ಆಭರಣಗಳನ್ನು ಧರಿಸಿಕೊಂಡು ಹನಿಮೂಮ್ಗೆ ಬರಬೇಕೆಂದು ಬಯಸಿದ್ದಾಳೆ. ಅದಕ್ಕೆ ಚಿನ್ನಾಭರಣಗಳ ಸಮೇತ ಹನಿಮೂನ್ಗೆ ಹೋಗೋದಾಗಿ ಪ್ಲಾನ್ ಮಾಡಿದ್ದೇವೆ ಎಂದು ರಾಜು ರಘುವಂಶಿ ತನ್ನ ತಾಯಿ ಬಳಿ ಹಿಂದೆ ಹೇಳಿಕೊಂಡಿದ್ದನಂತೆ.
ಮತ್ತೊಂದು ಕಡೆ ರಾಜಾ ರಘುವಂಶಿಯ ಅಂತ್ಯ ಸಂಸ್ಕಾರದ ವಿಡಿಯೋವನ್ನು ಸಹೋದರಿ ಬಿಡುಗಡೆ ಮಾಡಿದ್ದಾರೆ. ಅಂತ್ಯಕ್ರಿಯೆ ವೇಳೆ ಆರೋಪಿಗಳಾದ ಸೋನಂ, ಆಕೆಯ ಪ್ರಿಯಕರ ರಾಜು ಕುಶ್ವಾಹಾ ಕೂಡ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಹನಿಮೂನ್ಗೆ ಒನ್ ವೇ ಟಿಕೆಟ್; ಮೇಘಾಲಯದಲ್ಲಿ ‘ಬಾ ನಲ್ಲ ಮಧುಚಂದ್ರಕೆ’ ಹೈಡ್ರಾಮಾ ಹೇಗಿತ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ