newsfirstkannada.com

ಮಾಜಿ ಸಚಿವ ರೇವಣ್ಣ ಆಪ್ತ ಕೃಷ್ಣೇಗೌಡರ ಬರ್ಬರ ಕೊಲೆ ಕೇಸ್​​.. ಇಬ್ಬರು ಅರೆಸ್ಟ್

Share :

Published January 31, 2024 at 6:08pm

    ಮಾಜಿ ಸಚಿವ ರೇವಣ್ಣ ಅವರ ಆಪ್ತ ಕೃಷ್ಣೇಗೌಡ ಕೊಲೆ ಕೇಸ್

    ಕೃಷ್ಣೇಗೌಡ ಬರ್ಬರ ಕೊಲೆ ಕೇಸ್​​ನಲ್ಲಿ ಆರೋಪಿಗಳು ಅರೆಸ್ಟ್​!

    ಬರೋಬ್ಬರಿ 5 ತಿಂಗಳ ಹಿಂದೆಯಷ್ಟೇ ನಡೆದಿದ್ದ ಭೀಕರ ಹತ್ಯೆ

ಹಾಸನ: ಮಾಜಿ ಸಚಿವ ರೇವಣ್ಣ ಅವರ ಆಪ್ತ ಕೃಷ್ಣೇಗೌಡ ಕೊಲೆ ಕೇಸ್​ ಸಂಬಂಧ ಇಬ್ಬರ ಬಂಧನವಾಗಿದೆ. ಬರೋಬ್ಬರಿ 5 ತಿಂಗಳ ಬಳಿಕ ಪೊಲೀಸ್ರು ಆರೋಪಿಗಳನ್ನು ಬಂಧಿಸಿದ್ದಾರೆ. ಯೋಗಾನಂದ (38), ಅನಿಲ್​​​ (32) ಬಂಧನಕ್ಕೆ ಒಳಗಾದವರು.

ಕಳೆದ ವರ್ಷ ಆಗಸ್ಟ್​​​ 9ನೇ ತಾರೀಕು ಕೃಷ್ಣೇಗೌಡರ ಭೀಕರ ಕೊಲೆ ಆಗಿತ್ತು. ಹಣಕಾಸು ವಿಚಾರಕ್ಕೆ ಸುಫಾರಿ ಕೊಟ್ಟು ಆರೋಪಿ ಯೋಗಾನಂದು ಕೊಲೆ ಮಾಡಿಸಿದ್ದ. ಕೊಲೆ ಮಾಡಿದ್ದ 11 ಮಂದಿ ಹಂತಕರು ಬಂಧನ ಆಗಿದ್ರೂ ಯೋಗಾನಂದು ಮಾತ್ರ ತಲೆಮರೆಸಿಕೊಂಡಿದ್ದ.

ತುಮಕೂರು ಜಿಲ್ಲೆಯ ತುರುವೇಕರೆ ಬಳಿ ತೋಟದ ಮನೆಯಲ್ಲಿ ಅಡಗಿದ್ದ ಇಬ್ಬರು ಆರೋಪಿಗಳನ್ನ ಸಿಐಡಿ ಹಾಗೂ ಹಾಸನ ಪೊಲೀಸರು ಬಂಧಿಸಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ ಪ್ರಕರಣವನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಈಜ ಸಿಐಡಿ, ಹಾಸನ ಪೊಲೀಸ್ರು ಜಂಟಿ ಆಪರೇಷನ್​ ಮಾಡಿ ಅರೆಸ್ಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಜಿ ಸಚಿವ ರೇವಣ್ಣ ಆಪ್ತ ಕೃಷ್ಣೇಗೌಡರ ಬರ್ಬರ ಕೊಲೆ ಕೇಸ್​​.. ಇಬ್ಬರು ಅರೆಸ್ಟ್

https://newsfirstlive.com/wp-content/uploads/2024/01/Revanna_-Krishnegowda.jpg

    ಮಾಜಿ ಸಚಿವ ರೇವಣ್ಣ ಅವರ ಆಪ್ತ ಕೃಷ್ಣೇಗೌಡ ಕೊಲೆ ಕೇಸ್

    ಕೃಷ್ಣೇಗೌಡ ಬರ್ಬರ ಕೊಲೆ ಕೇಸ್​​ನಲ್ಲಿ ಆರೋಪಿಗಳು ಅರೆಸ್ಟ್​!

    ಬರೋಬ್ಬರಿ 5 ತಿಂಗಳ ಹಿಂದೆಯಷ್ಟೇ ನಡೆದಿದ್ದ ಭೀಕರ ಹತ್ಯೆ

ಹಾಸನ: ಮಾಜಿ ಸಚಿವ ರೇವಣ್ಣ ಅವರ ಆಪ್ತ ಕೃಷ್ಣೇಗೌಡ ಕೊಲೆ ಕೇಸ್​ ಸಂಬಂಧ ಇಬ್ಬರ ಬಂಧನವಾಗಿದೆ. ಬರೋಬ್ಬರಿ 5 ತಿಂಗಳ ಬಳಿಕ ಪೊಲೀಸ್ರು ಆರೋಪಿಗಳನ್ನು ಬಂಧಿಸಿದ್ದಾರೆ. ಯೋಗಾನಂದ (38), ಅನಿಲ್​​​ (32) ಬಂಧನಕ್ಕೆ ಒಳಗಾದವರು.

ಕಳೆದ ವರ್ಷ ಆಗಸ್ಟ್​​​ 9ನೇ ತಾರೀಕು ಕೃಷ್ಣೇಗೌಡರ ಭೀಕರ ಕೊಲೆ ಆಗಿತ್ತು. ಹಣಕಾಸು ವಿಚಾರಕ್ಕೆ ಸುಫಾರಿ ಕೊಟ್ಟು ಆರೋಪಿ ಯೋಗಾನಂದು ಕೊಲೆ ಮಾಡಿಸಿದ್ದ. ಕೊಲೆ ಮಾಡಿದ್ದ 11 ಮಂದಿ ಹಂತಕರು ಬಂಧನ ಆಗಿದ್ರೂ ಯೋಗಾನಂದು ಮಾತ್ರ ತಲೆಮರೆಸಿಕೊಂಡಿದ್ದ.

ತುಮಕೂರು ಜಿಲ್ಲೆಯ ತುರುವೇಕರೆ ಬಳಿ ತೋಟದ ಮನೆಯಲ್ಲಿ ಅಡಗಿದ್ದ ಇಬ್ಬರು ಆರೋಪಿಗಳನ್ನ ಸಿಐಡಿ ಹಾಗೂ ಹಾಸನ ಪೊಲೀಸರು ಬಂಧಿಸಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ ಪ್ರಕರಣವನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಈಜ ಸಿಐಡಿ, ಹಾಸನ ಪೊಲೀಸ್ರು ಜಂಟಿ ಆಪರೇಷನ್​ ಮಾಡಿ ಅರೆಸ್ಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More