/newsfirstlive-kannada/media/post_attachments/wp-content/uploads/2025/05/bagalakete.jpg)
ಚಿಕ್ಕಮಗಳೂರು: ಮದುವೆ ಆಗಿ ಇಬ್ಬರು ಮಕ್ಕಳು ಇದ್ರು ಮತ್ತೊಬ್ಬ ಪುರುಷನ ಜೊತೆಗೆ ಸೇರಿಕೊಂಡು ಪತಿಯನ್ನೇ ಪತ್ನಿ ಬಲಿ ಪಡೆದ ಘಟನೆ ಎನ್.ಆರ್.ಪುರ ತಾಲೂಕಿನ ಕರಗುಂದ ಬಳಿ ನಡೆದಿದೆ. ಸುದರ್ಶನ್ 35 ಮೃತ ಗಂಡ.
ಇದನ್ನೂ ಓದಿ: ರಾಜ್ಯದಲ್ಲಿ 47 ಕೊರೊನಾ ಕೇಸ್.. ಪಾಸಿಟಿವಿಟಿ ರೇಟ್ ಹೆಚ್ಚಾದ್ರೆ ಎಲ್ಲರಿಗೂ ಟೆನ್ಷನ್; ಯಾಕೆ ಗೊತ್ತಾ?
ಸುದರ್ಶನ್ ಹಾಗೂ ಕಮಲ 10 ವರ್ಷದ ಹಿಂದೆ ಲವ್ ಮ್ಯಾರೇಜ್ ಆಗಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ 2 ಮಕ್ಕಳು ಕೂಡ ಇವೆ. 2 ಮಕ್ಕಳಾದ ಮೇಲೆ ಕಮಲಾಳಿಗೆ ಶಿವರಾಜ್ ಎಂಬುವವನ ಜೊತೆ ಪ್ರೇಮಾಂಕುರ ಆಗಿದೆ. ಲವರ್ ಜೊತೆಗೆ ಇರಲು ಪತಿ ಅಡ್ಡಿಯಾಗುತ್ತಾನೆ ಅಂತ ಲವರ್ಗೆ ಸುಫಾರಿ ನೀಡಿ ಮದ್ಯದಲ್ಲಿ ನಿದ್ದೆ ಮಾತ್ರೆ ಹಾಕಿ ಪತಿಯ ಕತ್ತು ಹಿಸುಕಿದ್ದಾಳೆ. ಪ್ರಾಣಬಿಟ್ಟ ಪತಿಯ ದೇಹವನ್ನು ಕರಗುಂದ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ.
ಇದಾದ ಬಳಿಕ ಗಂಡನ ಸಾವಾಗಿದೆ ಅಂತ ತಾನೇ ಖುದ್ದು ಠಾಣೆಗೆ ಹೋಗಿ ಕಮಲ ದೂರು ಕೊಟ್ಟಿದ್ದಾಳೆ. ಈ ಪ್ರಕರಣ ದಾಖಲಿಸಿಕೊಂಡ ಎನ್.ಆರ್.ಪುರ ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಆಚೆ ಬಂದಿದೆ. ಈ ಸಂಬಂಧ ಕಮಲಾ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ