ಅತಿ ನಯವಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಕಳ್ಳರು ಅಂದರ್
ಸ್ನೇಹಿತನ ಪತ್ನಿಗಾಗಿ ಕಳ್ಳತನಕ್ಕೆ ಇಳಿದ ಖದೀಮ ಮಾಡಿದ್ದೇನು?
ಗಿರಿನಗರ ಪೊಲೀಸರ ಕೈಗೆ ಲಾಕ್ ಆದ ಇಬ್ಬರು ಸ್ನೇಹಿತರು
ಬೆಂಗಳೂರು: ಅಪ್ಪ-ಅಮ್ಮ, ಬಂಧು ಬಳಗ ಹೀಗೆ ಅದೆಷ್ಟೋ ರಕ್ತ ಸಂಬಂಧಗಳನ್ನೂ ಮೀರಿದ ರಿಲೇಷನ್ಶಿಪ್ ಅಂದ್ರೆ ಅದು ಫ್ರೆಂಡ್ಶಿಪ್. ಕಷ್ಟ ಅಂದಾಗ ಜೊತೆಯಾಗಿ ನಿಲ್ಲೋದು ಫ್ರೆಂಡ್ಸ್. ಆದರೆ ಫ್ರೆಂಡ್ಶಿಪ್ಗೋಸ್ಕರ ಅದರಲ್ಲೂ ಫ್ರೆಂಡ್ ಹೆಂಡ್ತಿಗೋಸ್ಕರ ಇಷ್ಟೆಲ್ಲಾ ರಿಸ್ಕ್ ತೊಗೊಂಥಾರಾ ಅನ್ಸುತ್ತೆ.
ಇದನ್ನೂ ಓದಿ: ಹಿಟ್ ಆ್ಯಂಡ್ ರನ್; ಬೈಕ್ಗೆ ಭಯಾನಕ ಡಿಕ್ಕಿ.. ರಸ್ತೆಯಲ್ಲೇ ಉಸಿರು ಚೆಲ್ಲಿದ ಯುವಕ
ಮಂಡ್ಯ ಮೂಲದ ಸತೀಶ್ ಒಬ್ಬ ವೃತ್ತಿಪರ ಕಳ್ಳ. ಇವನ ಮೇಲೆ ಕೊಲೆ ಯತ್ನ ಸೇರಿದಂತೆ 42 ಕೇಸ್ ಇದೆ. ಅಶೋಕ್ ಆಂಧ್ರ ಮೂಲದವನು, ಹಣ್ಣಿನ ವ್ಯಾಪಾರ ಮಾಡ್ತಿದ್ದ. ಇವನು ಡ್ರೈವರ್ ಆಗಿ ಕೆಲಸ ಮಾಡ್ಕೊಂಡಿದ್ದ. ಆದ್ರೆ ಹೀಗೆ ಕಳ್ಳತನಕ್ಕೆ ಇಳಿದು ಅಂದರ್ ಆಗಿದ್ದ. ಇವರಿಬ್ಬರ ಫ್ರೆಂಡ್ಶಿಪ್ ಶುರುವಾಗಿದ್ದು ಜೈಲಿನಲ್ಲಿ. ಅಶೋಕ್ಗೆ ಒಬ್ಬ ಪ್ರಾಣ ಸ್ನೇಹಿತ ಇರ್ತಾನೆ. ಆದರೆ ಆ ಸ್ನೇಹಿತನ ಹೆಂಡತಿಗೆ ಸ್ತನ ಕ್ಯಾನ್ಸರ್ ಇರುತ್ತೆ.
ಅಶೋಕ್ಗೆ ಸ್ನೇಹಿತನ ಹೆಂಡತಿ ತಾಯಿ ಪ್ರೀತಿ ತೋರಿಸಿ ಅಣ್ಣನಂತೆ ನೋಡಿಕೊಳ್ಳುತ್ತಿದ್ದರಂತೆ. ಹೀಗಾಗಿ, ಹೇಗಾದ್ರೂ ಮಾಡಿ ಟ್ರೀಟ್ಮೆಂಟ್ ಕೊಡಿಸಬೇಕು ಅಂತ ಡಿಸೈಡ್ ಆಗಿದ್ದ ಅಶೋಕ್, ಸತೀಶ್ ಜೊತೆ ಸೇರಿ ಕಳ್ಳತನಕ್ಕೆ ಇಳಿದಿದ್ದ. ಈಗ ಗಿರಿನಗರ ಪೊಲೀಸರ ಕೈಗೆ ಇಬ್ಬರು ಲಾಕ್ ಆಗಿದ್ದಾರೆ. ಸದ್ಯ ಆರೋಪಿಗಳಿಂದ ₹10 ಲಕ್ಷ ಬೆಲೆಬಾಳುವ 8 ಬೈಕ್ ಸೀಜ್ ಮಾಡಲಾಗಿದ್ದು, ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಉದ್ದೇಶ ನೂರಕ್ಕೆ ನೂರು ಸರಿ, ಆದ್ರೆ ಕಳ್ಳತನ ಹಾದಿ ಹಿಡಿದಿದ್ದು ನೂರಕ್ಕೆ ನೂರು ತಪ್ಪು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅತಿ ನಯವಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಕಳ್ಳರು ಅಂದರ್
ಸ್ನೇಹಿತನ ಪತ್ನಿಗಾಗಿ ಕಳ್ಳತನಕ್ಕೆ ಇಳಿದ ಖದೀಮ ಮಾಡಿದ್ದೇನು?
ಗಿರಿನಗರ ಪೊಲೀಸರ ಕೈಗೆ ಲಾಕ್ ಆದ ಇಬ್ಬರು ಸ್ನೇಹಿತರು
ಬೆಂಗಳೂರು: ಅಪ್ಪ-ಅಮ್ಮ, ಬಂಧು ಬಳಗ ಹೀಗೆ ಅದೆಷ್ಟೋ ರಕ್ತ ಸಂಬಂಧಗಳನ್ನೂ ಮೀರಿದ ರಿಲೇಷನ್ಶಿಪ್ ಅಂದ್ರೆ ಅದು ಫ್ರೆಂಡ್ಶಿಪ್. ಕಷ್ಟ ಅಂದಾಗ ಜೊತೆಯಾಗಿ ನಿಲ್ಲೋದು ಫ್ರೆಂಡ್ಸ್. ಆದರೆ ಫ್ರೆಂಡ್ಶಿಪ್ಗೋಸ್ಕರ ಅದರಲ್ಲೂ ಫ್ರೆಂಡ್ ಹೆಂಡ್ತಿಗೋಸ್ಕರ ಇಷ್ಟೆಲ್ಲಾ ರಿಸ್ಕ್ ತೊಗೊಂಥಾರಾ ಅನ್ಸುತ್ತೆ.
ಇದನ್ನೂ ಓದಿ: ಹಿಟ್ ಆ್ಯಂಡ್ ರನ್; ಬೈಕ್ಗೆ ಭಯಾನಕ ಡಿಕ್ಕಿ.. ರಸ್ತೆಯಲ್ಲೇ ಉಸಿರು ಚೆಲ್ಲಿದ ಯುವಕ
ಮಂಡ್ಯ ಮೂಲದ ಸತೀಶ್ ಒಬ್ಬ ವೃತ್ತಿಪರ ಕಳ್ಳ. ಇವನ ಮೇಲೆ ಕೊಲೆ ಯತ್ನ ಸೇರಿದಂತೆ 42 ಕೇಸ್ ಇದೆ. ಅಶೋಕ್ ಆಂಧ್ರ ಮೂಲದವನು, ಹಣ್ಣಿನ ವ್ಯಾಪಾರ ಮಾಡ್ತಿದ್ದ. ಇವನು ಡ್ರೈವರ್ ಆಗಿ ಕೆಲಸ ಮಾಡ್ಕೊಂಡಿದ್ದ. ಆದ್ರೆ ಹೀಗೆ ಕಳ್ಳತನಕ್ಕೆ ಇಳಿದು ಅಂದರ್ ಆಗಿದ್ದ. ಇವರಿಬ್ಬರ ಫ್ರೆಂಡ್ಶಿಪ್ ಶುರುವಾಗಿದ್ದು ಜೈಲಿನಲ್ಲಿ. ಅಶೋಕ್ಗೆ ಒಬ್ಬ ಪ್ರಾಣ ಸ್ನೇಹಿತ ಇರ್ತಾನೆ. ಆದರೆ ಆ ಸ್ನೇಹಿತನ ಹೆಂಡತಿಗೆ ಸ್ತನ ಕ್ಯಾನ್ಸರ್ ಇರುತ್ತೆ.
ಅಶೋಕ್ಗೆ ಸ್ನೇಹಿತನ ಹೆಂಡತಿ ತಾಯಿ ಪ್ರೀತಿ ತೋರಿಸಿ ಅಣ್ಣನಂತೆ ನೋಡಿಕೊಳ್ಳುತ್ತಿದ್ದರಂತೆ. ಹೀಗಾಗಿ, ಹೇಗಾದ್ರೂ ಮಾಡಿ ಟ್ರೀಟ್ಮೆಂಟ್ ಕೊಡಿಸಬೇಕು ಅಂತ ಡಿಸೈಡ್ ಆಗಿದ್ದ ಅಶೋಕ್, ಸತೀಶ್ ಜೊತೆ ಸೇರಿ ಕಳ್ಳತನಕ್ಕೆ ಇಳಿದಿದ್ದ. ಈಗ ಗಿರಿನಗರ ಪೊಲೀಸರ ಕೈಗೆ ಇಬ್ಬರು ಲಾಕ್ ಆಗಿದ್ದಾರೆ. ಸದ್ಯ ಆರೋಪಿಗಳಿಂದ ₹10 ಲಕ್ಷ ಬೆಲೆಬಾಳುವ 8 ಬೈಕ್ ಸೀಜ್ ಮಾಡಲಾಗಿದ್ದು, ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಉದ್ದೇಶ ನೂರಕ್ಕೆ ನೂರು ಸರಿ, ಆದ್ರೆ ಕಳ್ಳತನ ಹಾದಿ ಹಿಡಿದಿದ್ದು ನೂರಕ್ಕೆ ನೂರು ತಪ್ಪು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ