newsfirstkannada.com

ವಿಶೇಷ ಸಾಹಸಕ್ಕೆ ಕೈಹಾಕಿದ ರಾಜ್ಯದ ಇಬ್ಬರು ಯುವಕರು; ‘ಸೈಕಲ್ ಸವಾರಿ’ ಎಲ್ಲಿಗೆ..?

Share :

Published February 2, 2024 at 11:31am

    ಸೈಕಲ್ ತುಳಿಯುತ್ತ ಅಯೋಧ್ಯೆ ರಾಮ ಮಂದಿರದತ್ತ ಪ್ರಯಾಣ

    ಯುವಕರಾದ ಪೃಥ್ವಿರಾಜ್, ಅಭಿಷೇಕ್​ಗೆ ಶುಭ ಹಾರೈಕೆ

    ಸುದೀರ್ಘ ಸೈಕಲ್ ಯಾತ್ರೆಗೆ ಚಾಲನೆ ಕೊಟ್ಟ ಮಾಜಿ ಶಾಸಕ

ಬಾಗಲಕೋಟೆಯ ಇಬ್ಬರು ಯುವಕರು ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ಸೈಕಲ್ ಮೇಲೆ ಹೊರಟಿದ್ದಾರೆ.

ಯುವಕರಾದ ಪೃಥ್ವಿರಾಜ್ ಅಂಬಿಗೇರ್ ಹಾಗೂ ಅಭಿಷೇಕ್ ಗಟನೂರ ಎಂಬವರು ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಸೈಕಲ್ ಯಾತ್ರೆಗೂ ಮುನ್ನ ಬಾಗಲಕೋಟೆ ನಗರದ ಲಕ್ಷ್ಮೀ ಗುಡಿ ಆವರಣದಲ್ಲಿ ಭಾರತ ಮಾತೆಗೆ ಪುಷ್ಪಾಂಜಲಿ ಸಲ್ಲಿಸಿದರು. ಈ ವೇಳೆ ಅಯೋಧ್ಯೆಯ ಸೈಕಲ್ ಯಾತ್ರೆಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಚಾಲನೆ ಕೊಟ್ಟರು.

ಮುಂದಿನ 30 ದಿನಗಳಲ್ಲಿ 1800 ಕಿಲೋ ಮೀಟರ್ ಪ್ರಯಾಣ ಮಾಡಲಿರುವ ರಾಮ ಭಕ್ತರಿಗೆ ಶ್ರೀ ಮಾತೃಭೂಮಿ ಯುವಕ ಸಂಘ, ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಕಾರ್ಯಕರ್ತರು ಬೀಳ್ಕೊಟ್ಟರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶೇಷ ಸಾಹಸಕ್ಕೆ ಕೈಹಾಕಿದ ರಾಜ್ಯದ ಇಬ್ಬರು ಯುವಕರು; ‘ಸೈಕಲ್ ಸವಾರಿ’ ಎಲ್ಲಿಗೆ..?

https://newsfirstlive.com/wp-content/uploads/2024/02/BGK-YOUTHS.jpg

    ಸೈಕಲ್ ತುಳಿಯುತ್ತ ಅಯೋಧ್ಯೆ ರಾಮ ಮಂದಿರದತ್ತ ಪ್ರಯಾಣ

    ಯುವಕರಾದ ಪೃಥ್ವಿರಾಜ್, ಅಭಿಷೇಕ್​ಗೆ ಶುಭ ಹಾರೈಕೆ

    ಸುದೀರ್ಘ ಸೈಕಲ್ ಯಾತ್ರೆಗೆ ಚಾಲನೆ ಕೊಟ್ಟ ಮಾಜಿ ಶಾಸಕ

ಬಾಗಲಕೋಟೆಯ ಇಬ್ಬರು ಯುವಕರು ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ಸೈಕಲ್ ಮೇಲೆ ಹೊರಟಿದ್ದಾರೆ.

ಯುವಕರಾದ ಪೃಥ್ವಿರಾಜ್ ಅಂಬಿಗೇರ್ ಹಾಗೂ ಅಭಿಷೇಕ್ ಗಟನೂರ ಎಂಬವರು ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಸೈಕಲ್ ಯಾತ್ರೆಗೂ ಮುನ್ನ ಬಾಗಲಕೋಟೆ ನಗರದ ಲಕ್ಷ್ಮೀ ಗುಡಿ ಆವರಣದಲ್ಲಿ ಭಾರತ ಮಾತೆಗೆ ಪುಷ್ಪಾಂಜಲಿ ಸಲ್ಲಿಸಿದರು. ಈ ವೇಳೆ ಅಯೋಧ್ಯೆಯ ಸೈಕಲ್ ಯಾತ್ರೆಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಚಾಲನೆ ಕೊಟ್ಟರು.

ಮುಂದಿನ 30 ದಿನಗಳಲ್ಲಿ 1800 ಕಿಲೋ ಮೀಟರ್ ಪ್ರಯಾಣ ಮಾಡಲಿರುವ ರಾಮ ಭಕ್ತರಿಗೆ ಶ್ರೀ ಮಾತೃಭೂಮಿ ಯುವಕ ಸಂಘ, ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಕಾರ್ಯಕರ್ತರು ಬೀಳ್ಕೊಟ್ಟರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More