ತಮಿಳುನಾಡಿನಲ್ಲಿ ಮುಂದುವರಿದ ಕರುಣಾನಿಧಿ ಕುಟುಂಬದ ಪರಂಪರೆ
ಸದ್ಯದಲ್ಲಿಯೇ ಉದಯನಿಧಿಗೆ ಡಿಸಿಎಂ ಆಗಿ ಪಟ್ಟಕಟ್ಟಲು ವೇದಿಕೆ ಸಿದ್ಧ
ಅಪ್ಪನ ಹಾದಿಯಲ್ಲಿಯೇ ಸಾಗುತ್ತಿದ್ದಾರೆ ತಮಿಳುನಾಡಿ ಸಿಎಂ ಸ್ಟಾಲಿನ್
ಚೆನ್ನೈ: ತಮಿಳುನಾಡಿನ ರಾಜ್ಯ ರಾಜಕಾರಣದಲ್ಲಿ ಈಗ ಮತ್ತೊಂದು ಸನ್ ರೈಸ್. ಸನ್ ರೈಸ್ ಅಂದ್ರೆ ಸುರ್ಯೋದಯ ಅಲ್ಲ, ಪುತ್ರೋದಯ. ತಮಿಳುನಾಡಿಗೆ ಕುಟುಂಬ ರಾಜಕಾರಣ ಏನು ಹೊಸದಲ್ಲ. ಎಂ. ಕರುಣಾನಿಧಿಯಿಂದ ಕುಟುಂಬ ರಾಜಕಾರಣಕ್ಕೆ ತಮಿಳುನಾಡಿನಲ್ಲಿ ಬಹಳ ದಶಕಗಳ ಹಿಂದೆಯೇ ಬೀಜಾಂಕುರವಾಗಿದೆ. ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಎಲ್ಲಾ ಸೂಚನೆಯನ್ನು ನೀಡಿದ್ದಾರೆ ಅವರ ಪುತ್ರ ಎಂ.ಕೆ ಸ್ಟಾಲಿನ್.
ಇದನ್ನೂ ಓದಿ: ಭಾರತ ತಂಡದಲ್ಲಿಲ್ಲ RCB ಸ್ಟಾರ್ ಆಟಗಾರನಿಗೆ ಅವಕಾಶ.. ಬಿಸಿಸಿಐ ವಿರುದ್ಧ ಭಾರೀ ಆಕ್ರೋಶ!
ಸ್ಟಾಲಿನ್ ಪುತ್ರ ಉದಯನಿಧಿಗೆ ಸದ್ಯದಲ್ಲಿಯೇ ಡಿಸಿಎಂ ಪಟ್ಟ?
ಎಂ ಕರುಣಾನಿಧಿ ಕುಟುಂಬದ ಮತ್ತೊಂದು ಕುಡಿ ಮುಂದೊಂದು ದಿನ ತಮಿಳುನಾಡಿನ ಸಿಎಂ ಪಟ್ಟಕ್ಕೇರುವುದಕ್ಕೆ ಅದೇ ರೀತಿ ಏರಿಸುವುದಕ್ಕೆ ಎಲ್ಲಾ ವೇದಿಕೆಗಳು ಸಿದ್ಧವಾಗುತ್ತಿವೆ. ಸದ್ಯಕ್ಕೆ ಉತ್ತರಾಧಿಕಾರಿಯ ಪಟ್ಟ ದಕ್ಕಲಿದ್ದು ಭವಿಷ್ಯದಲ್ಲಿ ದ್ರಾವಿಡ ಮುನ್ನೇತ್ರ ಕಳಗಂನಲ್ಲಿ ನಮ್ಮದೇ ಕುಟುಂಬದ ದರ್ಬಾರ್ ಮುಂದುವರಿಯಲಿದೆ ಅನ್ನೋ ನೇರ ಸಂದೇಶವೊಂದು ತಮಿಳುನಾಡಿನಲ್ಲಿ ಹರಿದಿದೆ.
ಸದ್ಯ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಜಯಲಲಿತಾ ಸಾವಿನ ಬಳಿಕ ಡಿಎಂಕೆಗೆ ಟಕ್ಕರ್ ಕೊಡಬೇಕಾದ ನಾಯಕರು ಬೇರೆ ಯಾವುದೇ ಪಕ್ಷದಲ್ಲಿ ಬೆಳೆಯಲಿಲ್ಲ. ಎಐಡಿಎಂಕೆಯಲ್ಲಿ ಪ್ರಭಾವಿ ನಾಯಕರ ಕೊರತೆ, ಒಳಜಗಳ, ಗುಂಪುಗಾರಿಕೆ ಇವೆಲ್ಲವೂ ಡಿಎಂಕೆಯನ್ನು ಮತ್ತೊಮ್ಮೆ ಅಧಿಕಾರದ ಗದ್ದುಗೆಯನ್ನೇರಿಸಲು ಪೂರಕ ವಾತಾವರಣ ಸೃಷ್ಟಿಸಿದವು. ಪರ್ಯಾಯ ಪಕ್ಷವಿಲ್ಲದೆ, ಪರ್ಯಾಯ ನಾಯಕರಿಲ್ಲದೆ ಅನಿವಾರ್ಯವಾಗಿ ತಮಿಳುನಾಡಿನ ಪ್ರಜೆ ಮತ್ತೆ ಡಿಎಂಕೆಗೆ ಕೈಹಿಡಿದು ಅಧಿಕಾರದ ಗದ್ದುಗೆಯ ಬಳಿ ತಂದು ಬಿಟ್ಟ. ಎಂ ಕರುಣಾನಿಧಿಯ ಬಳಿಕ ಪಕ್ಷದ ಮೇಲೆ ಗಟ್ಟಿ ಹಿಡಿತ ಸಾಧಿಸಿದ್ದ ಎಂ ಕೆ ಸ್ಟಾಲಿನ್ ನಿರೀಕ್ಷೆಯಂತೆಯೇ ಸಿಎಂ ಪಟ್ಟ ಅಲಂಕರಿಸಿದ್ದರು. ಈ ಹಿಂದೆ ಕರುಣಾನಿಧಿಯ ತಮಿಳುನಾಡಿನ ಸಿಎಂ ಆದಾಗ ಅವರ ಸಂಪುಟದಲ್ಲಿ ಸ್ಥಾನ ಪಡೆದಿದ್ದರು ಅವರ ಪುತ್ರ ಎಂಕೆ ಸ್ಟಾಲಿನ್. ಈಗ ಅದೇ ಪರಂಪರೆ ಈಗ ಮುಂದುವರೆಯುತ್ತಿದೆ.
ಅಪ್ಪನ ಕ್ಯಾಬಿನೆಟ್ನಲ್ಲಿ ಮಂತ್ರಿಯಾಗಿದ್ದ ಸ್ಟಾಲಿನ್
2006 ರಲ್ಲಿ ಎಂ ಕರುಣಾನಿಧಿ ತಮಿಳುನಾಡಿನ ಮುಖ್ಯಮಂತ್ರಿಯಾದಾಗ ಅವರ ಪುತ್ರ ಎಂ ಕೆ ಸ್ಟಾಲಿನ್ ಕರುಣಾನಿಧಿ ಕ್ಯಾಬಿನೆಟ್ನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾರಾಗಿದ್ದರು. 2009ರಲ್ಲಿ ಇದೇ ಎಂ ಕೆ ಸ್ಟಾಲಿನ್ ಅವರ ತಂದೆಯ ಸಿಎಂ ಆದಾಗ ತಮಿಳುನಾಡಿನ ಮೊಟ್ಟ ಮೊದಲ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೆಲ್ಲವೂ ಈಗ ಇತಿಹಾಸ ಆದ್ರೆ ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಅದೇ ಇತಿಹಾಸ ಈಗ ಪುನಾವರ್ತನೆಯಾಗುತ್ತಲಿದೆ.
ಯಾವ ಎಂ ಕೆ ಸ್ಟಾಲಿನ್ ಅವರ ತಂದೆಯ ಕ್ಯಾಬಿನೆಟ್ನಲ್ಲಿ ಮಂತ್ರಿಯಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದರೋ ಅವರ ಪುತ್ರ ಉದಯನಿಧಿ ಕೂಡ ಸದ್ಯ ಅವರ ತಂದೆ ಎಂ.ಕೆ ಸ್ಟಾಲಿನ್ ಅವರ ಕ್ಯಾಬಿನೆಟ್ನಲ್ಲಿ ಯುವ ಕಲ್ಯಾಣಭಿವೃದ್ಧಿ ಹಾಗೂ ಕ್ರೀಡಾ ಸಚಿವರಾಗಿ ಸ್ಥಾನ ಪಡೆದಿದ್ದಾರೆ. ಈಗ ಬಾಕಿ ಇರೋದು ಮತ್ತೊಂದು ಪರಂಪರೆಯನ್ನು ಪೂರ್ಣಗೊಳಿಸುವುದು, ಅದು ಕರುಣಾನಿಧಿ ಸಿಎಂ ಆದ ಸಮಯದಲ್ಲಿ ಎಂಕೆ ಸ್ಟಾಲಿನ್ ಡಿಸಿಎಂ ಆಗಿದ್ದರು. ಈಗ ಸ್ಟಾಲಿನ್ ಸಿಎಂ ಸ್ಥಾನದಲ್ಲಿದ್ದಾರೆ, ಉದಯನಿಧಿ ಡಿಸಿಎಂ ಆಗುವುದೊಂದು ಬಾಕಿ ಇದೆ.
ಇತಿಹಾಸ ಮರುಕಳಿಸುವುದಕ್ಕೆ ಈಗ ವೇದಿಕೆಯೊಂದು ಸಿದ್ಧಗೊಂಡಿದೆ. ಸದ್ಯದಲ್ಲಿಯೇ ಸ್ಟಾಲಿನ್ ಪುತ್ರ ಉದಯನಿಧಿ ತಮಿಳುನಾಡಿನ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಅನ್ನೋ ಪಕ್ಕಾ ಸುದ್ದಿಗಳು ತಮಿಳುನಾಡು ರಾಜಕೀಯ ಪಡೆಸಾಲೆಯಲ್ಲಿ ಹರಿದಾಡುತ್ತಿವೆ. ಅಲ್ಲಿಗೆ ಕರುಣಾನಿಧಿ ಕುಟುಂಬದ ಮೂರನೇ ಕುಡಿಯೊಂದು ಭವಿಷ್ಯದಲ್ಲಿ ತಮಿಳುನಾಡಿನ ಆಡಳಿತ ಚುಕ್ಕಾಣಿಯನ್ನು ಹಿಡಿಯುವುದಕ್ಕೆ ಸ್ಟಾಲಿನ್ ಈಗಲೇ ಶ್ರೀಕಾರ ಬರೆಯುತ್ತಿದ್ದಾರೆ. ಸದ್ಯದಲ್ಲಿಯೇ ಅಂದ್ರೆ 2026ಕ್ಕೆ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಕರುಣಾನಿಧಿ ಕುಟುಂಬದ ಮೂರನೇ ತಲೆಮಾರನ್ನು ಮುನ್ನೆಲೆಗೆ ತರುವ ಮೂಲಕ ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಹಾಗೂ ಡಿಎಂಕೆ ಪಕ್ಷದಲ್ಲಿ ತಮ್ಮ ಕುಟುಂಬದ ಹಿಡಿತವನ್ನು ಮತ್ತಷ್ಟು ದಶಕಗಳವರೆಗೆ ವಿಸ್ತರಿಸುವ ಪ್ಲ್ಯಾನ್ನಲ್ಲಿ ಎಂಕೆ ಸ್ಟಾಲಿನ್ ಇದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತಮಿಳುನಾಡಿನಲ್ಲಿ ಮುಂದುವರಿದ ಕರುಣಾನಿಧಿ ಕುಟುಂಬದ ಪರಂಪರೆ
ಸದ್ಯದಲ್ಲಿಯೇ ಉದಯನಿಧಿಗೆ ಡಿಸಿಎಂ ಆಗಿ ಪಟ್ಟಕಟ್ಟಲು ವೇದಿಕೆ ಸಿದ್ಧ
ಅಪ್ಪನ ಹಾದಿಯಲ್ಲಿಯೇ ಸಾಗುತ್ತಿದ್ದಾರೆ ತಮಿಳುನಾಡಿ ಸಿಎಂ ಸ್ಟಾಲಿನ್
ಚೆನ್ನೈ: ತಮಿಳುನಾಡಿನ ರಾಜ್ಯ ರಾಜಕಾರಣದಲ್ಲಿ ಈಗ ಮತ್ತೊಂದು ಸನ್ ರೈಸ್. ಸನ್ ರೈಸ್ ಅಂದ್ರೆ ಸುರ್ಯೋದಯ ಅಲ್ಲ, ಪುತ್ರೋದಯ. ತಮಿಳುನಾಡಿಗೆ ಕುಟುಂಬ ರಾಜಕಾರಣ ಏನು ಹೊಸದಲ್ಲ. ಎಂ. ಕರುಣಾನಿಧಿಯಿಂದ ಕುಟುಂಬ ರಾಜಕಾರಣಕ್ಕೆ ತಮಿಳುನಾಡಿನಲ್ಲಿ ಬಹಳ ದಶಕಗಳ ಹಿಂದೆಯೇ ಬೀಜಾಂಕುರವಾಗಿದೆ. ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಎಲ್ಲಾ ಸೂಚನೆಯನ್ನು ನೀಡಿದ್ದಾರೆ ಅವರ ಪುತ್ರ ಎಂ.ಕೆ ಸ್ಟಾಲಿನ್.
ಇದನ್ನೂ ಓದಿ: ಭಾರತ ತಂಡದಲ್ಲಿಲ್ಲ RCB ಸ್ಟಾರ್ ಆಟಗಾರನಿಗೆ ಅವಕಾಶ.. ಬಿಸಿಸಿಐ ವಿರುದ್ಧ ಭಾರೀ ಆಕ್ರೋಶ!
ಸ್ಟಾಲಿನ್ ಪುತ್ರ ಉದಯನಿಧಿಗೆ ಸದ್ಯದಲ್ಲಿಯೇ ಡಿಸಿಎಂ ಪಟ್ಟ?
ಎಂ ಕರುಣಾನಿಧಿ ಕುಟುಂಬದ ಮತ್ತೊಂದು ಕುಡಿ ಮುಂದೊಂದು ದಿನ ತಮಿಳುನಾಡಿನ ಸಿಎಂ ಪಟ್ಟಕ್ಕೇರುವುದಕ್ಕೆ ಅದೇ ರೀತಿ ಏರಿಸುವುದಕ್ಕೆ ಎಲ್ಲಾ ವೇದಿಕೆಗಳು ಸಿದ್ಧವಾಗುತ್ತಿವೆ. ಸದ್ಯಕ್ಕೆ ಉತ್ತರಾಧಿಕಾರಿಯ ಪಟ್ಟ ದಕ್ಕಲಿದ್ದು ಭವಿಷ್ಯದಲ್ಲಿ ದ್ರಾವಿಡ ಮುನ್ನೇತ್ರ ಕಳಗಂನಲ್ಲಿ ನಮ್ಮದೇ ಕುಟುಂಬದ ದರ್ಬಾರ್ ಮುಂದುವರಿಯಲಿದೆ ಅನ್ನೋ ನೇರ ಸಂದೇಶವೊಂದು ತಮಿಳುನಾಡಿನಲ್ಲಿ ಹರಿದಿದೆ.
ಸದ್ಯ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಜಯಲಲಿತಾ ಸಾವಿನ ಬಳಿಕ ಡಿಎಂಕೆಗೆ ಟಕ್ಕರ್ ಕೊಡಬೇಕಾದ ನಾಯಕರು ಬೇರೆ ಯಾವುದೇ ಪಕ್ಷದಲ್ಲಿ ಬೆಳೆಯಲಿಲ್ಲ. ಎಐಡಿಎಂಕೆಯಲ್ಲಿ ಪ್ರಭಾವಿ ನಾಯಕರ ಕೊರತೆ, ಒಳಜಗಳ, ಗುಂಪುಗಾರಿಕೆ ಇವೆಲ್ಲವೂ ಡಿಎಂಕೆಯನ್ನು ಮತ್ತೊಮ್ಮೆ ಅಧಿಕಾರದ ಗದ್ದುಗೆಯನ್ನೇರಿಸಲು ಪೂರಕ ವಾತಾವರಣ ಸೃಷ್ಟಿಸಿದವು. ಪರ್ಯಾಯ ಪಕ್ಷವಿಲ್ಲದೆ, ಪರ್ಯಾಯ ನಾಯಕರಿಲ್ಲದೆ ಅನಿವಾರ್ಯವಾಗಿ ತಮಿಳುನಾಡಿನ ಪ್ರಜೆ ಮತ್ತೆ ಡಿಎಂಕೆಗೆ ಕೈಹಿಡಿದು ಅಧಿಕಾರದ ಗದ್ದುಗೆಯ ಬಳಿ ತಂದು ಬಿಟ್ಟ. ಎಂ ಕರುಣಾನಿಧಿಯ ಬಳಿಕ ಪಕ್ಷದ ಮೇಲೆ ಗಟ್ಟಿ ಹಿಡಿತ ಸಾಧಿಸಿದ್ದ ಎಂ ಕೆ ಸ್ಟಾಲಿನ್ ನಿರೀಕ್ಷೆಯಂತೆಯೇ ಸಿಎಂ ಪಟ್ಟ ಅಲಂಕರಿಸಿದ್ದರು. ಈ ಹಿಂದೆ ಕರುಣಾನಿಧಿಯ ತಮಿಳುನಾಡಿನ ಸಿಎಂ ಆದಾಗ ಅವರ ಸಂಪುಟದಲ್ಲಿ ಸ್ಥಾನ ಪಡೆದಿದ್ದರು ಅವರ ಪುತ್ರ ಎಂಕೆ ಸ್ಟಾಲಿನ್. ಈಗ ಅದೇ ಪರಂಪರೆ ಈಗ ಮುಂದುವರೆಯುತ್ತಿದೆ.
ಅಪ್ಪನ ಕ್ಯಾಬಿನೆಟ್ನಲ್ಲಿ ಮಂತ್ರಿಯಾಗಿದ್ದ ಸ್ಟಾಲಿನ್
2006 ರಲ್ಲಿ ಎಂ ಕರುಣಾನಿಧಿ ತಮಿಳುನಾಡಿನ ಮುಖ್ಯಮಂತ್ರಿಯಾದಾಗ ಅವರ ಪುತ್ರ ಎಂ ಕೆ ಸ್ಟಾಲಿನ್ ಕರುಣಾನಿಧಿ ಕ್ಯಾಬಿನೆಟ್ನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾರಾಗಿದ್ದರು. 2009ರಲ್ಲಿ ಇದೇ ಎಂ ಕೆ ಸ್ಟಾಲಿನ್ ಅವರ ತಂದೆಯ ಸಿಎಂ ಆದಾಗ ತಮಿಳುನಾಡಿನ ಮೊಟ್ಟ ಮೊದಲ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೆಲ್ಲವೂ ಈಗ ಇತಿಹಾಸ ಆದ್ರೆ ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಅದೇ ಇತಿಹಾಸ ಈಗ ಪುನಾವರ್ತನೆಯಾಗುತ್ತಲಿದೆ.
ಯಾವ ಎಂ ಕೆ ಸ್ಟಾಲಿನ್ ಅವರ ತಂದೆಯ ಕ್ಯಾಬಿನೆಟ್ನಲ್ಲಿ ಮಂತ್ರಿಯಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದರೋ ಅವರ ಪುತ್ರ ಉದಯನಿಧಿ ಕೂಡ ಸದ್ಯ ಅವರ ತಂದೆ ಎಂ.ಕೆ ಸ್ಟಾಲಿನ್ ಅವರ ಕ್ಯಾಬಿನೆಟ್ನಲ್ಲಿ ಯುವ ಕಲ್ಯಾಣಭಿವೃದ್ಧಿ ಹಾಗೂ ಕ್ರೀಡಾ ಸಚಿವರಾಗಿ ಸ್ಥಾನ ಪಡೆದಿದ್ದಾರೆ. ಈಗ ಬಾಕಿ ಇರೋದು ಮತ್ತೊಂದು ಪರಂಪರೆಯನ್ನು ಪೂರ್ಣಗೊಳಿಸುವುದು, ಅದು ಕರುಣಾನಿಧಿ ಸಿಎಂ ಆದ ಸಮಯದಲ್ಲಿ ಎಂಕೆ ಸ್ಟಾಲಿನ್ ಡಿಸಿಎಂ ಆಗಿದ್ದರು. ಈಗ ಸ್ಟಾಲಿನ್ ಸಿಎಂ ಸ್ಥಾನದಲ್ಲಿದ್ದಾರೆ, ಉದಯನಿಧಿ ಡಿಸಿಎಂ ಆಗುವುದೊಂದು ಬಾಕಿ ಇದೆ.
ಇತಿಹಾಸ ಮರುಕಳಿಸುವುದಕ್ಕೆ ಈಗ ವೇದಿಕೆಯೊಂದು ಸಿದ್ಧಗೊಂಡಿದೆ. ಸದ್ಯದಲ್ಲಿಯೇ ಸ್ಟಾಲಿನ್ ಪುತ್ರ ಉದಯನಿಧಿ ತಮಿಳುನಾಡಿನ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಅನ್ನೋ ಪಕ್ಕಾ ಸುದ್ದಿಗಳು ತಮಿಳುನಾಡು ರಾಜಕೀಯ ಪಡೆಸಾಲೆಯಲ್ಲಿ ಹರಿದಾಡುತ್ತಿವೆ. ಅಲ್ಲಿಗೆ ಕರುಣಾನಿಧಿ ಕುಟುಂಬದ ಮೂರನೇ ಕುಡಿಯೊಂದು ಭವಿಷ್ಯದಲ್ಲಿ ತಮಿಳುನಾಡಿನ ಆಡಳಿತ ಚುಕ್ಕಾಣಿಯನ್ನು ಹಿಡಿಯುವುದಕ್ಕೆ ಸ್ಟಾಲಿನ್ ಈಗಲೇ ಶ್ರೀಕಾರ ಬರೆಯುತ್ತಿದ್ದಾರೆ. ಸದ್ಯದಲ್ಲಿಯೇ ಅಂದ್ರೆ 2026ಕ್ಕೆ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಕರುಣಾನಿಧಿ ಕುಟುಂಬದ ಮೂರನೇ ತಲೆಮಾರನ್ನು ಮುನ್ನೆಲೆಗೆ ತರುವ ಮೂಲಕ ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಹಾಗೂ ಡಿಎಂಕೆ ಪಕ್ಷದಲ್ಲಿ ತಮ್ಮ ಕುಟುಂಬದ ಹಿಡಿತವನ್ನು ಮತ್ತಷ್ಟು ದಶಕಗಳವರೆಗೆ ವಿಸ್ತರಿಸುವ ಪ್ಲ್ಯಾನ್ನಲ್ಲಿ ಎಂಕೆ ಸ್ಟಾಲಿನ್ ಇದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ