BBK11: ಬಿಗ್​ಬಾಸ್​ ಮನೆಯಲ್ಲಿ ಮತ್ತೊಮ್ಮೆ ಮಿತಿ ಮೀರಿದ ವರ್ತನೆ.. ಮೋಕ್ಷಿತಾ ಮೇಲೆ ಮಂಜು ಉಗ್ರಾವತಾರ!

author-image
Veena Gangani
Updated On
BBK11: ಬಿಗ್​ಬಾಸ್​ ಮನೆಯಲ್ಲಿ ಮತ್ತೊಮ್ಮೆ ಮಿತಿ ಮೀರಿದ ವರ್ತನೆ.. ಮೋಕ್ಷಿತಾ ಮೇಲೆ ಮಂಜು ಉಗ್ರಾವತಾರ!
Advertisment
  • ಸುಖಾ ಸುಮ್ಮನೆ ಮೋಕ್ಷಿತಾ ಮೇಲೆ ರೇಗಾಡಿದ್ರಾ ಉಗ್ರಂ?
  • ಬಿಗ್​ಬಾಸ್​ ಮನೆಯ ಎಲ್ಲರ ಕೆಂಗಣ್ಣಿಗೆ ಗುರಿಯಾದ ಮಂಜು
  • ಐಶಾರಾಮಿ ರೆಸಾರ್ಟ್​ ಆಗಿ ಬದಲಾಗಿದೆ ಬಿಗ್​ಬಾಸ್ ಸೀಸನ್ 11

ಕನ್ನಡದ ಬಿಗ್​ಬಾಸ್​ ಈಗ ಐಶಾರಾಮಿ ರೆಸಾರ್ಟ್ ಆಗಿ ಬದಲಾಗಿದೆ. ಬಿಗ್​ಬಾಸ್​ ಮನೆಯಷ್ಟೇ ಅಲ್ಲದೇ ಸ್ಪರ್ಧಿಗಳು ಕೂಡ ಚೇಂಜ್​ ಆಗಿದ್ದಾರೆ. ಒಂದು ತಂಡ ಐಶಾರಾಮಿ ರೆಸಾರ್ಟ್​ನಲ್ಲಿ ಕೆಲಸಗಾರರಾಗಿದ್ದರೆ, ಮತ್ತೊಂದು ತಂಡ ಅತಿಥಿಗಳಾಗಿದ್ದಾರೆ.

ಇದನ್ನೂ ಓದಿ:ಬೆಂಗಳೂರು-ಮೈಸೂರು‌ ಹೈವೇಯಲ್ಲಿ ಕಾರಿಗೆ ಮೊಟ್ಟೆ ಒಡೆದು, ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆ

publive-image

ಈ ವಾರ ಬಿಗ್​ಬಾಸ್​ ಮನೆ ಮಂದಿಗೆ ಟಾಸ್ಕ್​ವೊಂದನ್ನು ಕೊಟ್ಟಿದ್ದಾರೆ. ಈಗ ಬಿಗ್​ಬಾಸ್​ ಮನೆ ಸಂಪೂರ್ಣವಾಗಿ ರೆಸಾರ್ಟ್ ರೀತಿಯಲ್ಲೇ ಬದಲಾಗಿದೆ. ರೆಸಾರ್ಟ್​ಗೆ ಅತಿಥಿಯಾಗಿ ಬಂದ ಮಂಜಣ್ಣ ಉಗ್ರ ಅವತಾರಾ ತಾಳಿದ್ದಾರೆ. ರೆಸಾರ್ಟ್​ಗೆ ಬಂದ ಅತಿಥಿಗಳನ್ನು ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್​, ರಜತ್​ ಹಾಗೂ ಮೋಕ್ಷಿತಾ ಇದ್ದಾರೆ ನೋಡಿಕೊಳ್ಳಬೇಕು. ಅತಿಥಿಗಳು ಹೇಳಿದ ಕೆಲಸವನ್ನು ಚಾಚು ತಪ್ಪದೇ ಪಾಲಿಸಬೇಕಾಗಿತ್ತು.

publive-image

ಇದೇ ವೇಳೆ ಮ್ಯಾನೇಜರ್ ಎಲ್ಲ ಕತ್ತೆ ಮೇಯಿಸೋಕೆ ಬಂದಿದ್ದೀರಾ ಅಂತ ಪ್ರಶ್ನೆ ಮಾಡಿದ್ದಾರೆ. ಇದಾದ ಬಳಿಕ ಮೋಕ್ಷಿತಾ ಮೇಲೆ ಮಂಜು, ತಲೆ ತುಂಬಾ ಮಣ್ಣು ತುಂಬಿಕೊಂಡ್ರೆ ಏನೂ ಮಾಡೋದಕ್ಕೆ ಆಗೋದಿಲ್ಲ ಅಂತ ಹೇಳಿದ್ದಾರೆ. ಅಲ್ಲೇ ನಿಂತುಕೊಂಡಿದ್ದ ಧನರಾಜ್​ ನೀರನ್ನು ಮಂಜುಗೆ ಕೊಡಲು ಬಂದಿದ್ದಾರೆ. ಆಗ ಮಂಜು ಅದನ್ನು ಒಡೆದು ಹಾಕಿದ್ದಾರೆ. ಇದು ತ್ರಿವಿಕ್ರಮ್​ ಟೀಮ್​ ಕೋಪಕ್ಕೆ ಗುರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment