newsfirstkannada.com

ದೇಹ ತೂಕವಿದ್ದರೆ ಸಾಲದು.. ನಟ ದರ್ಶನ್​ಗೆ ಮತ್ತೆ ಟಾಂಗ್ ಕೊಟ್ಟ ಉಮಾಪತಿ; ಏನಂದ್ರು?

Share :

Published February 23, 2024 at 5:02pm

    ದರ್ಶನ್ ವಿರುದ್ಧ ಮಹಿಳೆಯರು ಪ್ರತಿಭಟನೆ ಬಗ್ಗೆ ಉಮಾಪತಿ ಏನಂದ್ರು?

    ಕಂಟ್ರಾವರ್ಸಿಯಿಂದ ಅಭಿಮಾನಿಗಳಿಗೆ ಮೆಸೇಜ್​​ ಕೊಡುವಂತದ್ದೇನು ಇಲ್ಲ

    ಎಲ್ಲಾ ಹೊಟ್ಟೆ ತುಂಬಿದವರು, ನಾವು ಹಸಿದವರು ಎಂದ ನಿರ್ಮಾಪಕ

ಬೆಂಗಳೂರು: ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿ ನಡೆದ ‘ದರ್ಶನ್ ಬೆಳ್ಳಿ ಪರ್ವ’ ಕಾರ್ಯಕ್ರಮದಲ್ಲಿ ನಟ ದರ್ಶನ್​ ‘ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ.. ಹೋಗ್ರೋ ಎಂಬ ಹೇಳಿಕೆ ನೀಡಿದ್ದರು. ಇದೇ ಹೇಳಿಕೆಗೆ ಮಹಿಳೆಯರು ಆಕ್ರೋಶಗೊಂಡು ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಿದ್ದ ನಟ ದರ್ಶನ್​ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದಾರೆ.

ಇದನ್ನು ಓದಿ: ‘ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ’.. ದರ್ಶನ್​ ವಿರುದ್ಧ ಕೆಂಡಾಮಂಡಲ; ದಾಖಲಾಯ್ತು ದೂರು

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ಬಂದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಾಪಕ ಉಮಾಪತಿ ಗೌಡ ಅವರು, ಅದನ್ನ ನಾನು ನೋಡಿದ್ದೇನೆ. ನಟ ದರ್ಶನ್​ ಅವರು ಹೆಣ್ಣು ಮಕ್ಕಳ ಬಗ್ಗೆ ಪದ ಬಳಕೆ ಮಾಡಿದ್ದು ತಪ್ಪು. ಮಹಿಳೆಯರಿಗೆ ತೊಂದರೆ ಆಗುವ ರೀತಿಯಲ್ಲಿ ಏನೋ ಮಾತನಾಡಿದ್ದಾರಂತೆ. ಹೀಗಾಗಿ ಪ್ರತಿಭಟನೆ ಮಾಡಿದ್ದಾರೆ. ಯಾಕೆ ಈ ವಿವಾದವಾಯ್ತು ಎಂಬ ಬಗ್ಗೆ ನಮ್ಗೆ ಏನು ಗೊತ್ತಿಲ್ಲ. ಎಲ್ಲಾ ಹೊಟ್ಟೆ ತುಂಬಿದವರು, ನಾವು ಹಸಿದವರು. ಆ ರೀತಿ ಪದ ಬಳಕೆ ತಪ್ಪು. ನಾವೆಲ್ಲ ಯಾವುದೋ ಮೂಲೆಯಲ್ಲಿ ಕೆಲಸ ಮಾಡಿಕೊಂಡು ಇದ್ದೇವೆ.

ಹೀಗೆ ಮಾತನ್ನು ಮುಂದುವರೆಸಿದ ಅವರು, ಎಲ್ಲರಿಗೂ ಸಮಸ್ಯೆಗಳು ಬರುತ್ತವೆ ಸಾರ್.. ಆದರೆ ಅದನ್ನ ಹ್ಯಾಂಡಲ್ ಮಾಡುವ ರೀತಿ ಗೊತ್ತಿರಬೇಕು. ಸಮಾಜದಲ್ಲಿ ತೂಕವಿರುವ ವ್ಯಕ್ತಿ ಘನತೆಯಿಂದ ನಡೆದುಕೊಳ್ಳಬೇಕು. ನಾನು ಆವಾಗಲೇ ಹೇಳಿದ್ದೇನೆ‌ ದೇಹ ತೂಕ ಇದ್ದರೆ ಸಾಲದು ಮಾತು ತೂಕವಿರಬೇಕು. ನಾನು ತಪ್ಪು ಮಾಡಿದ್ರು ತಪ್ಪೇ, ಯಾರು ತಪ್ಪು ಮಾಡಿದ್ರು ತಪ್ಪೇ. ನಾವೆಲ್ಲ ಸಿನಿಮಾ ಮುಖಾಂತರ ಮೆಸೇಜ್​ ಕೊಡಬೇಕು. ಈ ರೀತಿ ಕಂಟ್ರಾವರ್ಸಿಯಿಂದ ಸಂದೇಶ​ ಕೊಡುವಂತದ್ದೇನು ಇಲ್ಲ ಎಂದು ನಟ ದರ್ಶನ್ ವಿರುದ್ಧ ನಿರ್ಮಾಪಕ ಉಮಾಪತಿ ಗೌಡ ಕಿಡಿಕಾರಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇಹ ತೂಕವಿದ್ದರೆ ಸಾಲದು.. ನಟ ದರ್ಶನ್​ಗೆ ಮತ್ತೆ ಟಾಂಗ್ ಕೊಟ್ಟ ಉಮಾಪತಿ; ಏನಂದ್ರು?

https://newsfirstlive.com/wp-content/uploads/2024/02/Darshan_Umapathy.jpg

    ದರ್ಶನ್ ವಿರುದ್ಧ ಮಹಿಳೆಯರು ಪ್ರತಿಭಟನೆ ಬಗ್ಗೆ ಉಮಾಪತಿ ಏನಂದ್ರು?

    ಕಂಟ್ರಾವರ್ಸಿಯಿಂದ ಅಭಿಮಾನಿಗಳಿಗೆ ಮೆಸೇಜ್​​ ಕೊಡುವಂತದ್ದೇನು ಇಲ್ಲ

    ಎಲ್ಲಾ ಹೊಟ್ಟೆ ತುಂಬಿದವರು, ನಾವು ಹಸಿದವರು ಎಂದ ನಿರ್ಮಾಪಕ

ಬೆಂಗಳೂರು: ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿ ನಡೆದ ‘ದರ್ಶನ್ ಬೆಳ್ಳಿ ಪರ್ವ’ ಕಾರ್ಯಕ್ರಮದಲ್ಲಿ ನಟ ದರ್ಶನ್​ ‘ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ.. ಹೋಗ್ರೋ ಎಂಬ ಹೇಳಿಕೆ ನೀಡಿದ್ದರು. ಇದೇ ಹೇಳಿಕೆಗೆ ಮಹಿಳೆಯರು ಆಕ್ರೋಶಗೊಂಡು ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಿದ್ದ ನಟ ದರ್ಶನ್​ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದಾರೆ.

ಇದನ್ನು ಓದಿ: ‘ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ’.. ದರ್ಶನ್​ ವಿರುದ್ಧ ಕೆಂಡಾಮಂಡಲ; ದಾಖಲಾಯ್ತು ದೂರು

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ಬಂದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಾಪಕ ಉಮಾಪತಿ ಗೌಡ ಅವರು, ಅದನ್ನ ನಾನು ನೋಡಿದ್ದೇನೆ. ನಟ ದರ್ಶನ್​ ಅವರು ಹೆಣ್ಣು ಮಕ್ಕಳ ಬಗ್ಗೆ ಪದ ಬಳಕೆ ಮಾಡಿದ್ದು ತಪ್ಪು. ಮಹಿಳೆಯರಿಗೆ ತೊಂದರೆ ಆಗುವ ರೀತಿಯಲ್ಲಿ ಏನೋ ಮಾತನಾಡಿದ್ದಾರಂತೆ. ಹೀಗಾಗಿ ಪ್ರತಿಭಟನೆ ಮಾಡಿದ್ದಾರೆ. ಯಾಕೆ ಈ ವಿವಾದವಾಯ್ತು ಎಂಬ ಬಗ್ಗೆ ನಮ್ಗೆ ಏನು ಗೊತ್ತಿಲ್ಲ. ಎಲ್ಲಾ ಹೊಟ್ಟೆ ತುಂಬಿದವರು, ನಾವು ಹಸಿದವರು. ಆ ರೀತಿ ಪದ ಬಳಕೆ ತಪ್ಪು. ನಾವೆಲ್ಲ ಯಾವುದೋ ಮೂಲೆಯಲ್ಲಿ ಕೆಲಸ ಮಾಡಿಕೊಂಡು ಇದ್ದೇವೆ.

ಹೀಗೆ ಮಾತನ್ನು ಮುಂದುವರೆಸಿದ ಅವರು, ಎಲ್ಲರಿಗೂ ಸಮಸ್ಯೆಗಳು ಬರುತ್ತವೆ ಸಾರ್.. ಆದರೆ ಅದನ್ನ ಹ್ಯಾಂಡಲ್ ಮಾಡುವ ರೀತಿ ಗೊತ್ತಿರಬೇಕು. ಸಮಾಜದಲ್ಲಿ ತೂಕವಿರುವ ವ್ಯಕ್ತಿ ಘನತೆಯಿಂದ ನಡೆದುಕೊಳ್ಳಬೇಕು. ನಾನು ಆವಾಗಲೇ ಹೇಳಿದ್ದೇನೆ‌ ದೇಹ ತೂಕ ಇದ್ದರೆ ಸಾಲದು ಮಾತು ತೂಕವಿರಬೇಕು. ನಾನು ತಪ್ಪು ಮಾಡಿದ್ರು ತಪ್ಪೇ, ಯಾರು ತಪ್ಪು ಮಾಡಿದ್ರು ತಪ್ಪೇ. ನಾವೆಲ್ಲ ಸಿನಿಮಾ ಮುಖಾಂತರ ಮೆಸೇಜ್​ ಕೊಡಬೇಕು. ಈ ರೀತಿ ಕಂಟ್ರಾವರ್ಸಿಯಿಂದ ಸಂದೇಶ​ ಕೊಡುವಂತದ್ದೇನು ಇಲ್ಲ ಎಂದು ನಟ ದರ್ಶನ್ ವಿರುದ್ಧ ನಿರ್ಮಾಪಕ ಉಮಾಪತಿ ಗೌಡ ಕಿಡಿಕಾರಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More