Advertisment

ಹೊಸ ವರ್ಷದಂದೇ ಬೈಕ್​ಗೆ ವಾಹನ ಡಿಕ್ಕಿ, ಜೀವ ಬಿಟ್ಟ ಇಬ್ಬರು.. ಬೆಂಗಳೂರಲ್ಲೂ ಪಾರ್ಟಿ ಗುಂಗಲ್ಲಿ ಅಪಘಾತ

author-image
Bheemappa
Updated On
ಹೊಸ ವರ್ಷದಂದೇ ಬೈಕ್​ಗೆ ವಾಹನ ಡಿಕ್ಕಿ, ಜೀವ ಬಿಟ್ಟ ಇಬ್ಬರು.. ಬೆಂಗಳೂರಲ್ಲೂ ಪಾರ್ಟಿ ಗುಂಗಲ್ಲಿ ಅಪಘಾತ
Advertisment
  • ನಾಲ್ವರು ಪ್ರಯಾಣಿಸುತ್ತಿದ್ದ ಕಾರು ವಿದ್ಯುತ್​ ಕಂಬಕ್ಕೆ ಭಯಾನಕ ಡಿಕ್ಕಿ
  • ಮಧ್ಯರಾತ್ರಿ ಬೈಕ್​ನಲ್ಲಿ ಹೋಗುವಾಗ ಗುದ್ದಿದ ಅಪರಿಚಿತ ವಾಹನ
  • ಯಮಲೂರು ಕಡೆಗೆ ಹೋಗುವಾಗ ನಿಯಂತ್ರಣ ತಪ್ಪಿ, ಅಪಘಾತ

ವಿಜಯಪುರ: ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಜೀವ ಬಿಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನಾಗೋಡ ಕ್ರಾಸ್ ಬಳಿ ನಡೆದಿದೆ.

Advertisment

ಘಟನೆಯಲ್ಲಿ ಜೀವ ಕಳೆದುಕೊಂಡವರನ್ನು ತುಷಾರ್ ಜಾಧವ್, ಸಂತೋಷ ಹಿಂಗೋಲಿ ಎಂದು ಗುರುತಿಸಲಾಗಿದೆ. ಇವರು ಕೆಲಸದ ನಿಮಿತ್ತ ಬೈಕ್​ನಲ್ಲಿ ಹೋಗುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಮತ್ತೊಂದು ವಾಹನ ಬೈಕ್​​ಗೆ ಭಯಾನಕವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಇಬ್ಬರು ಪ್ರಾಣ ಬಿಟ್ಟಿದ್ದಾರೆ. ಇನ್ನು ಈ ಸಂಬಂಧ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಡಿಕ್ಕಿ ಮಾಡಿಕೊಂಡು ಹೋಗಿರುವ ವಾಹನಕ್ಕಾಗಿ ತನಿಖೆ ಮಾಡಲಾಗುತ್ತಿದೆ.

publive-image

ಇದನ್ನೂ ಓದಿ: New Year; ರಾಜ್ಯಾದ್ಯಂತ ಅದ್ಧೂರಿ ವೆಲ್​ಕಮ್​.. ಎಲ್ಲೆಲ್ಲಿ ಹೇಗೆಲ್ಲಾ ಸೆಲೆಬ್ರೆಷನ್ ಮಾಡಲಾಯಿತು?

ಹೊಸ ವರ್ಷ ಆಚರಣೆ ಸಂಭ್ರಮದ ಬೆನ್ನಲ್ಲೆ ಬೆಂಗಳೂರಿನಲ್ಲೂ ಭೀಕರ ಅಪಘಾತ ಸಂಭವಿಸಿದೆ. ಕೋರಮಂಗಲದಲ್ಲಿ ಪಾರ್ಟಿ ಮುಗಿಸಿಕೊಂಡು ಓರ್ವ ಯುವತಿ, ಮೂವರು ಯುವಕರು ಕಾರಿನಲ್ಲಿ ವೇಗವಾಗಿ ತೆರಳುತ್ತಿದ್ದರು. ಯಮಲೂರು ಕಡೆಗೆ ಹೋಗುವಾಗ ನಿಯಂತ್ರಣ ತಪ್ಪಿ, ಕಾರು ಬೆಳ್ಳಂದೂರು ಕೆರೆ ತಿರುವಿನಲ್ಲಿರುವ ವಿದ್ಯುತ್ ಕಂಬಕ್ಕೆ ಭಯಾನಕವಾಗಿ ಡಿಕ್ಕಿ ಹೊಡೆದಿದೆ.

Advertisment

ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಸೀಟ್ ಮುಂಬದಿಯ ಏರ್ ಬ್ಯಾಗ್ ಓಪನ್ ಆಗಿದೆ. ಇದರಿಂದ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳು ಆಗಿವೆ. ಇನ್ನು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಕಾರಿನಲ್ಲಿದ್ದವರಿಗೆ ಬಿಬಿಎಂಪಿ ಮಾರ್ಷಲ್​ಗಳು ಸಹಾಯ ಮಾಡಿದ್ದಾರೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣ ಅಪಾಯದಂತಹ ಘಟನೆ ನಡೆದಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment