Advertisment

ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ಯುಪಿಯಲ್ಲಿ ಬಂಧನ.. ಸೆರೆಗೆ ಬಿದ್ದಿದ್ದು ಹೇಗೆ ಕಿರಾತಕ?

author-image
Gopal Kulkarni
Updated On
ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ಯುಪಿಯಲ್ಲಿ ಬಂಧನ.. ಸೆರೆಗೆ ಬಿದ್ದಿದ್ದು ಹೇಗೆ ಕಿರಾತಕ?
Advertisment
  • ಮೊರದಬಾದ್​​ನಲ್ಲಿ ಸೆರೆ ಸಿಕ್ಕ ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್
  • ದೇಶಾದ್ಯಂತ ಕಳ್ಳತನದ ಆರೋಪ ಹೊತ್ತಿದ್ದ ಫಹೀಮ್​ನನ್ನು ಬಂಧಿಸಿದ ಯುಪಿ ಪೊಲೀಸ್
  • ಇಡೀ ದೇಶದಲ್ಲಿ ಒಟ್ಟು 65 ಪ್ರಕರಣಗಳು ಫಹೀಮ್ ಬಂಧನದ ನಂತರ ಬೆಳಕಿಗೆ ಬಂದಿವೆ

ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ಆರೋಪಿ ಫಹೀಮ್ ಅಲಿಯಾಸ್ ಎಟಿಎಂನನ್ನು ಯುಪಿಯಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಬಂಧಿಸಿ ಆತನ ಮನೆಯನ್ನು ಬುಲ್ಡೋಜರ್​ನಿಂದ ನೆಲಸಮ ಮಾಡಲಾಗಿದೆ. ಇಡೀ ಭಾರತದಾದ್ಯಂತ ಮನೆಗಳ್ಳತನ ಮಾಡಿದ್ದ ಆರೋಪವನ್ನು ಈ ಆಸಾಮಿ ಫಹೀಮ್ ಹೊಂದಿದ್ದಾನೆ. ಈತನಿಗಾಗಿ ಕರ್ನಾಟಕ ಸೇರಿ ವಿವಿಧ ರಾಜ್ಯದ ಪೊಲೀಸರು ಹುಡುಕಾಟ ನಡೆಸಿದ್ದರು.

Advertisment

ಜೈಲು ಸೇರಿ ಪರೋಲ್ ಮೇಲೆ ಆಚೆ ಬಂದಿದ್ದ ಫಹೀಮ್ ಬಳಿಕ ಎಸ್ಕೇಪ್ ಆಗಿ ಮತ್ತೆ ಕಳ್ಳತನಕ್ಕೆ ಇಳಿದಿದ್ದ. ಏಪ್ರಿಲ್ 24 ರಂದು ಸಹಕಾರ ನಗರದಲ್ಲಿ ಮನೆಗಳ್ಳತನ ಮಾಡಿದ್ದ. ಮುಸುಕುಧಾರಿಯಾಗಿ ಬಂದು ಮನೆಗಳ್ಳತನ ಮಾಡಿತ್ತು ಇವನ ಜೊತೆ ಇವನ ಗ್ಯಾಂಗ್

ಇದನ್ನೂ ಓದಿ:ಕಾನ್ಸ್​​ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ; ಏನಿದು ಕಾಂಗ್ರೆಸ್ ಮುಖಂಡನ ಸಹೋದರರ ಮೇಲೆ ಗಂಭೀರ ಆರೋಪ?

ವೈದ್ಯ ಉಮಾಶಂಕರ್ ಎಂಬುವವರ ಮನೆಗೆ ನುಗ್ಗಿ 40 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು. ಕಳ್ಳತನದ ವೇಳೆ ಬಂದ ವೈದ್ಯನಿಗೆ ಗನ್ ತೋರಿಸಿ ಎಸ್ಕೇಪ್ ಆಗಿತ್ತು ಈ ಗ್ಯಾಂಗ್. ಪ್ರಕರಣದಲ್ಲಿ ಎ 1 ಆರೋಪಿಯಾಗಿದ್ದ ಫಹೀಮ್​. ಘಟನೆ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ಕೂಡ ದಾಖಲಾಗಿತ್ತು . ಆದರೆ ಬೆಂಗಳೂರು ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡಿದ್ದ ಫಹೀಮ್​ನನ್ನು ಸದ್ಯ ಉತ್ತರಪ್ರದೇಶದ ಮೊರದಾಬಾದ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಿ ಆತನ ಮನೆಯನ್ನು ನೆಲಸಮಗೊಳಿಸಿದ್ದಾರೆ.

Advertisment

ಇದನ್ನೂ ಓದಿ:ಬೆಂಗಳೂರು ಏರ್​ಪೋರ್ಟ್​​ ರಸ್ತೆಯಲ್ಲಿ ಸರಣಿ ಅಪಘಾತ; ಇಬ್ಬರ ಸಾ*ವಿಗೆ ಕಾರಣವಾಯ್ತು ಜಗಳ

ಈತನ ಬಂಧನದಿಂದ ಈಗ ದೇಶಾದ್ಯಂತ ಒಟ್ಟು 65 ಪ್ರಕರಣಗಳು ಬೆಳಕಿಗೆ ಬಂದಿವೆ. ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆಯಲು ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment