ಯೂರಿಯಾ ಗೊಬ್ಬರ ಅಭಾವ; ಪ್ರಹ್ಲಾದ್​ ಜೋಶಿ ನೇತೃತ್ವದ ರಾಜ್ಯ ಬಿಜೆಪಿ ನಿಯೋಗದಿಂದ JP ನಡ್ಡಾಗೆ ಮನವಿ

author-image
Bheemappa
Updated On
ಯೂರಿಯಾ ಗೊಬ್ಬರ ಅಭಾವ; ಪ್ರಹ್ಲಾದ್​ ಜೋಶಿ ನೇತೃತ್ವದ ರಾಜ್ಯ ಬಿಜೆಪಿ ನಿಯೋಗದಿಂದ JP ನಡ್ಡಾಗೆ ಮನವಿ
Advertisment
  • ಕೇಂದ್ರ ಎಷ್ಟು ಲಕ್ಷ ಮೆಟ್ರಿಕ್ ಟನ್ ಯೂರಿಯಾ ಸರಬರಾಜು ಮಾಡಿದೆ?
  • ಸರಬರಾಜು ಆದ ಯೂರಿಯಾ ಗೊಬ್ಬರನ್ನು ರಾಜ್ಯ ಸರ್ಕಾರ ಎಲ್ಲಿಟ್ಟಿದೆ?
  • ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಯೂರಿಯಾ ಗೊಬ್ಬರ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಂಬಂಧ ಕೇಂದ್ರ ಸರ್ಕಾರದ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವರಾದ ಜೆ.ಪಿ ನಡ್ಡಾ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ನೇತೃತ್ವದ ರಾಜ್ಯ ಬಿಜೆಪಿ ಸಂಸದರ‌ ನಿಯೋಗ ಭೇಟಿ ಮಾಡಿದೆ.

publive-image

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಸಂಸದರಾದ ಡಾ.ಕೆ ಸುಧಾಕರ್, ಪಿ.ಸಿ. ಗದ್ದಿಗೌಡರ್, ಜಗದೀಶ್ ಶೆಟ್ಟರ್, ರಮೇಶ ಜಿಗಜಿಣಗಿ, ವಿಶೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಇತರೆ ಸಂಸದರು ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ಕರ್ನಾಟಕದಲ್ಲಿ ಯೂರಿಯಾ ಅಭಾವವೇ ಇಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಸರಬರಾಜು ಮಾಡಲಾಗಿದೆ. ಆದರೆ ಸರಬರಾಜು ಆಗಿರುವ ಯೂರಿಯಾ ಗೊಬ್ಬರವನ್ನು ರಾಜ್ಯ ಸರ್ಕಾರ ಸಂಗ್ರಹಣೆ ಮಾಡಿದೆ. ರೈತರಿಗೆ ಎಷ್ಟು ಬೇಕೋ ಅಷ್ಟೂ ಯೂರಿಯಾವನ್ನು ಈಗಾಗಲೇ ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ.

ಈಗ ಮತ್ತಷ್ಟು ಯೂರಿಯಾದ ಬೇಡಿಕೆ ರೈತರಿಂದ ಹೆಚ್ಚಾಗಿದೆ. ಅಗತ್ಯ ಇರುವಷ್ಟು ಯೂರಿಯಾ ಗೊಬ್ಬರ ಕರ್ನಾಟಕಕ್ಕೆ ಸರಬರಾಜು ಮಾಡುವಂತೆ ಮನವಿ ಮಾಡಲಾಗಿದೆ. ಕೇಂದ್ರ ಸಚಿವರಾದ ಪ್ರಹ್ಲಾದ್​ ಜೋಶಿ ಅವರ ನೇತೃತ್ವದ ರಾಜ್ಯ ಬಿಜೆಪಿ ಸಂಸದರ‌ ನಿಯೋಗ, ಕೇಂದ್ರ ಸರ್ಕಾರದ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ.

ಇದನ್ನೂ ಓದಿ: ದರ್ಶನ್ ಫ್ಯಾನ್ಸ್​​ ವಿರುದ್ಧ ಕಮಿಷನರ್​​ಗೆ ದೂರು ಕೊಟ್ಟ ರಮ್ಯಾ.. ವಿಜಯಲಕ್ಷ್ಮಿ, ರಕ್ಷಿತಾ ಪೋಸ್ಟ್​ ಬಗ್ಗೆ ನಟಿ ಏನಂದ್ರು?

publive-image

ರಾಜ್ಯದಲ್ಲಿ ಕೆಲ ದಿನಗಳಿಂದ ರೈತರು ಯೂರಿಯಾ ಗೊಬ್ಬರಕ್ಕಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ದಿನಗಟ್ಟಲೇ ಅಂಗಡಿಗಳ ಮುಂದೆ ಕಾದು ಕಾದು ಬರಿಗೈಯಲ್ಲಿ ವಾಪಸ್ ಆಗುತ್ತಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ರಾಜ್ಯ ಬಿಜೆಪಿ ನಿಯೋಗ ಕೂಡ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿತ್ತು. ಈ ಎಲ್ಲದರ ಬೆನ್ನಲ್ಲೇ ರೈತರಿಗೆ ಅನುಕೂಲ ಆಗಲೆಂದು ಸಚಿವ ಪ್ರಹ್ಲಾದ್​ ಜೋಶಿ ಅವರ ನೇತೃತ್ವದ ರಾಜ್ಯ ಬಿಜೆಪಿ ಸಂಸದರ‌ ನಿಯೋಗ ಯೂರಿಯಾ ಗೊಬ್ಬರಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment