/newsfirstlive-kannada/media/post_attachments/wp-content/uploads/2024/09/UP_HOSPITAL.jpg)
ಲಕ್ನೋ: ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯಿಂದ 1 ರೂಪಾಯಿ ಹೆಚ್ಚಿಗೆ ಪಡೆದ ಕಾರಣ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನ ಹುದ್ದೆಯಿಂದ ತೆಗೆದು ಹಾಕಲಾಗಿದೆ. ಉತ್ತರ ಪ್ರದೇಶದಲ್ಲಿ ಪೂರ್ವ ಭಾಗದ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್ಸಿ)ದ ಗುತ್ತಿಗೆ ನೌಕರ ಕೆಲಸ ಕಳೆದುಕೊಂಡಿದ್ದಾನೆ ಎಂದು ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರಪ್ರದೇಶದ ಜಗದೌರ್ ಪ್ರದೇಶದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳೀಯ ಬಿಜೆಪಿ ಶಾಸಕ ಪ್ರೇಮ್ ಸಾಗರ್ ಪಟೇಲ್ ಅವರು ಭೇಟಿ ನೀಡಿ ತಪಾಸಣೆ ನಡೆಸಿದ್ದರು. ಸರ್ಕಾರಿ ಸ್ವಾಮ್ಯದ ಆರೋಗ್ಯ ಸೌಲಭ್ಯದಲ್ಲಿ ಅಕ್ರಮಗಳ ಬಗ್ಗೆ ಸಾರ್ವಜನಿಕರಿಂದ ಎಂಎಲ್ಎ ದೂರುಗಳನ್ನು ಸ್ವೀಕರಿಸುತ್ತಿದ್ದರು. ಹೀಗಾಗಿ ಶಾಸಕರು ತಪಾಸಣೆ ಮಾಡುವಾಗ 1 ರೂಪಾಯಿ ನಿಗದಿ ಶುಲ್ಕದ ಬದಲಿಗೆ ರೋಗಿಗಳಿಂದ 2 ರೂಪಾಯಿಗಳನ್ನ ತೆಗೆದುಕೊಳ್ಳಲಾಗಿದೆ. ಹೀಗಾಗಿ ಆಸ್ಪತ್ರೆಯ ಎಲ್ಲರ ಮುಂದೆಯೇ ನೌಕರ ಫಾರ್ಮಾಸಿಸ್ಟ್ಗೆ ಬುದ್ಧಿ ಮಾತು ಹೇಳಿ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:KL ರಾಹುಲ್ ಮೇಲೆ ಪತ್ನಿ ಅಥಿಯಾ ಶೆಟ್ಟಿಗೆ ದ್ವೇಷ.. ಇದಕ್ಕೆ ಅಸಲಿ ಕಾರಣವೇನು..?
ಹೆರಿಗೆ ಸಮಯದಲ್ಲಿ ವೈದ್ಯರು ಸರಿಯಾದ ಸಮಯಕ್ಕೆ ಬಾರದೇ ಇರುವುದು, ರಾತ್ರಿ ಪಾಳಿಯಲ್ಲಿ ವೈದ್ಯರು ಗೈರು ಹಾಜರಿ ಆಗುವುದು, ಅಪಘಾತದ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡದೇ ಇರುವುದು. ಖಾಸಗಿ ಮೆಡಿಕಲ್ಗಳಿಗೆ ಔಷಧಿ ಬರೆದು ಕಳುಹಿಸುವುದು ಸೇರಿ ಎಲ್ಲ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಇದರಿಂದ ವೈದ್ಯರು ಕಂಗಲಾಗಿದ್ದರು. ಇಂತಹವುಗಳು ಮತ್ತೆ ಮರುಕಳಿಸಬಾರದು ಎಂದು ಶಾಸಕರು ಹೇಳಿದ್ದಾರೆ.
देश को ऐसे नेताओं की सख्त जरूरत है.! ? ?
उत्तर प्रदेश के महाराजगंज ज़िले के सरकारी अस्पताल में BJP विधायक प्रेम सागर पटेल के औचक निरीक्षण में फार्मासिस्ट द्वारा पर्ची के लिए 1 की जगह 2 रुपए लिया जा रहा था। फिर क्या विधायक जी का गुस्सा देखिये, अफ़सरों को जमकर खरी खोटी सुनाई.! pic.twitter.com/KKXOEMBP6N
— Beerendra Patel (@Beeru3285)
देश को ऐसे नेताओं की सख्त जरूरत है.! 🙏 🫡
उत्तर प्रदेश के महाराजगंज ज़िले के सरकारी अस्पताल में BJP विधायक प्रेम सागर पटेल के औचक निरीक्षण में फार्मासिस्ट द्वारा पर्ची के लिए 1 की जगह 2 रुपए लिया जा रहा था। फिर क्या विधायक जी का गुस्सा देखिये, अफ़सरों को जमकर खरी खोटी सुनाई.! pic.twitter.com/KKXOEMBP6N— Beerendra Patel (@Beeru3285) September 17, 2024
">September 17, 2024
ಔಷಧಿಕಾರರಿಂದ ಪ್ರಿಸ್ಕ್ರಿಪ್ಷನ್ಗಳಿಗೆ ಅಧಿಕೃತ 1 ರೂಪಾಯಿ ಬದಲಿಗೆ ರೋಗಿಗಳಿಗೆ ₹2 ವಿಧಿಸಲಾಗುತ್ತಿದೆ ಎಂಬುದನ್ನು ಶಾಕಸರು ಸೂಕ್ಷ್ಮವಾಗಿ ಪತ್ತೆ ಮಾಡಿದ್ದಾರೆ. ಈ ವೇಳೆ ರೋಗಿಗಳು ಮತ್ತು ಅವರ ಕುಟುಂಬಗಳೊಂದಿಗೆ ಚರ್ಚೆ ನಡೆಸಿದರು. ಸದ್ಯ ಇವರು ತಪಾಸಣೆ ಮಾಡಿರುವ ಕೆಲಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ