ಬಿಸಿಲ ಬೇಗೆಗೆ ಉತ್ತರ ಭಾರತ ತತ್ತರ; 24 ಗಂಟೆಯಲ್ಲಿ 34 ಜನರು ಸಾವು

author-image
Harshith AS
Updated On
ಬೆಂಗಳೂರು, ಕಲಬುರಗಿ, ಬೀದರ್​ನಲ್ಲಿ ರಣ ಬಿಸಿಲ ಕೇಕೆ..  42 °C ತಾಪಮಾನ ನಡುವೆ ಹೆಚ್ಚುತ್ತಿದೆ ಮಹಾಮಾರಿ ಕಾಯಿಲೆ
Advertisment
  • ಉತ್ತರದ ಜನರು ತತ್ತರ.. ಬಿಸಿಲು ತಾಪಮಾನ ಏರಿಕೆ ಕಷ್ಟದ ಬದುಕು
  • ಹೀಟ್​ ಸ್ಟ್ರೋಕ್​ಗೆ ಸಾವನ್ನಪ್ಪುತ್ತಿದ್ದಾರೆ ಉತ್ತರ ಭಾರತದ ಜನರು
  • ಬಲ್ಲಿಯಾ ಜಿಲ್ಲಾ ಆಸ್ಪತ್ರೆ ಬಿಸಿಲ ತಾಪಕ್ಕೆ 34 ಮಂದಿ ಸಾವು

ಲಖನೌ: ಬಿಸಿಲ ತಾಪಮಾನ ಏರಿಕೆಯಾಗಿ ಕಳೆದ 24 ಗಂಟೆಯಲ್ಲಿ 34 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಬಿಪರ್​ಜಾಯ್​ ಚಂಡ ಮಾರುತದ ಹೊರತಾಗಿ ಹೀಟ್​​ ಸ್ಟ್ರೋಕ್​ ಸಾವನ್ನಪ್ಪಿರುವುದನ್ನು ದುರಾದೃಷ್ಟಕರ ಸಂಗತಿಯಾಗಿದೆ.

ಅಲ್ಲಿನ ಬಲ್ಲಿಯಾ ಜಿಲ್ಲಾ ಆಸ್ಪತ್ರೆಯಲ್ಲಿ ಬಿಸಿಲ ತಾಪಕ್ಕೆ 34 ಮಂದಿ ಸಾವನ್ನಪ್ಪಿದ್ದಾರೆ. 60 ವರ್ಷಕ್ಕಿಂತ ಹೆಚ್ಚಿನವರು ಹೀಟ್​ ಸ್ಟ್ರೋಕ್​ನಿಂದ ಆಸ್ಪತ್ರೆ ಸೇರುತ್ತಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಜೂ.15ರಂದು 23 ಮಂದಿ ಹಾಗೂ ಜೂ 16ರಂದು 11 ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ ಮೃತರಾದವರು ನಾನಾ ಕಾಯಿಲೆಗೂ ತುತ್ತಾಗಿದ್ದರು. ಇದರೊಂದಿಗೆ ಬಿಸಿಲಿನ ತಾಪವನ್ನು ಎದುರಿಸಲಾಗದೆ ಸಾವನ್ನಪ್ಪಿದ್ದಾರೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಜಯಂತ್​​ ಕುಮಾರ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment