/newsfirstlive-kannada/media/post_attachments/wp-content/uploads/2025/06/Vachanananda_Swamiji.jpg)
ಲೇಹ್: ಪವಿತ್ರ ದೇವಭೂಮಿ ಲೇಹ್-ಲಡಾಖ್​​ನ ಅಸ್ಟ್ರಾ ಟರ್ಪ್ ಕ್ರೀಡಾಂಗಣದಲ್ಲಿ ನಡೆದ 11ನೇಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಹರಿಹರ ಪಂಚಮಸಾಲಿ ಜಗದ್ಗುರು ಪೀಠ ಹಾಗೂ ಶ್ವಾಸಯೋಗ ಸಂಸ್ಥೆಯ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿಯವರು ಭಾಗವಹಿಸಿ, ವಿಶ್ವಶಾಂತಿ ಸಂದೇಶ ಹರಡಿದರು.
/newsfirstlive-kannada/media/post_attachments/wp-content/uploads/2025/06/Vachanananda_Swamiji_2.jpg)
ಕೇಂದ್ರ ಆಯುಷ್ ಇಲಾಖೆ, ಭಾರತ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶ ಲಡಾಖ್ ಈ ಮೂರು ಸಹಯೋಗದಲ್ಲಿ 11ನೇಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಲೇಹ್-ಲಡಾಖ್​​ನ ಅಸ್ಟ್ರಾ ಟರ್ಪ್ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ಒಂದು ಭೂಮಿ, ಒಂದು ಆರೋಗ್ಯ ಎಂಬ ಥೀಮ್​​ನೊಂದಿಗೆ ವಿಶ್ವಶಾಂತಿ ಸಂದೇಶವನ್ನು ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿಯವರು ಸಾರಿದರು.
/newsfirstlive-kannada/media/post_attachments/wp-content/uploads/2025/06/Vachanananda_Swamiji_1.jpg)
11ನೇಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಿಕ್ಕು ಸಂಘಸೇನಾಜೀ, ಸದ್ಗುರು ಬೃಹ್ಮೆಶಾನಂದ ಸ್ವಾಮೀಜಿ, ಕೇಂದ್ರ ಸಚಿವರಾದ ಅರ್ಜುನ್​ ರಾಮ್ ಮೇಘವಾಲ್, ಮಾಜಿ ಲೆಪ್ಟಿನಂಟ್ ಗರ್ವರ್ನರ್ ಡಾ.ಕಿರಣ್ ಬೇಡಿ ಹಾಗೂ ಲಡಾಖ್​ ಸರ್ಕಾರದ ಸಚಿವರು, ಅಧಿಕಾರಿಗಳು ಸೇರಿದಂತೆ ಶಾಲಾ ಮಕ್ಕಳು, ಜನರು ಭಾಗಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us