ಅಂತಿಮ ಪಂದ್ಯ, ಮತ್ತೆ ಎಲ್ಲರ ಹೃದಯ ಗೆದ್ದ ವೈಭವ್ ಸೂರ್ಯವಂಶಿ.. ಏನ್ ಮಾಡಿದರು?

author-image
Bheemappa
Updated On
ವೈಭವ್​ ಸೂರ್ಯವಂಶಿ ಸಿಡಿಲಬ್ಬರದ ಸೆಂಚುರಿ.. ಜೈಸ್ವಾಲ್​ ಅರ್ಧಶತಕ; ಗುಜರಾತ್​ಗೆ ಭಾರೀ ಅವಮಾನ
Advertisment
  • ಐಪಿಎಲ್​ ಸೀಸನ್​ 18ರ ಅಂತಿಮ ಪಂದ್ಯವಾಡಿದ ರಾಜಸ್ಥಾನ
  • ಚೆನ್ನೈ ವಿರುದ್ಧದ ಪಂದ್ಯದಲ್ಲಿ ವೈಭವ್ ಸ್ಫೋಟಕ ಬ್ಯಾಟಿಂಗ್
  • ಗೆಲುವಿನೊಂದಿಗೆ ಸೀಸನ್​-18ಕ್ಕೆ ಗುಡ್​ಬೈ ಹೇಳಿದ ರಾಯಲ್ಸ್​

ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಅರ್ಧಶತಕದಿಂದ ಚೆನ್ನೈ ಸೂಪರ್ ಕಿಂಗ್ಸ್​ ಜೊತೆಗಿನ ಅಂತಿಮ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 6 ವಿಕೆಟ್​​ಗಳಿಂದ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಗೆಲುವಿನೊಂದಿಗೆ ರಾಜಸ್ಥಾನ ತಂಡ, ಸೀಸನ್​ 18ಕ್ಕೆ ವಿದಾಯ ಹೇಳಿದೆ. ಇನ್ನು ಪಂದ್ಯ ಮುಗಿದ ಮೇಲೆ ವೈಭವ್ ಸೂರ್ಯವಂಶಿ ಎಲ್ಲರ ಹೃದಯ ಗೆದ್ದಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಸಿಎಸ್‌ಕೆ ಹಾಗೂ ಆರ್‌ಆರ್‌ ನಡುವಿನ ಪಂದ್ಯ ಮುಗಿದ ಬಳಿಕ ಎರಡೂ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘನ ಮಾಡಿಕೊಳ್ಳುತ್ತಿದ್ದರು. ಈ ಸಮಯದಲ್ಲಿ ವೈಭವ್ ಸೂರ್ಯವಂಶಿ, ಸಿಎಸ್‌ಕೆ ನಾಯಕ ಎಂಎಸ್‌ ಧೋನಿಯ ಬಳಿಗೆ ಹೋದ ತಕ್ಷಣ, ಅವರಿಗೆ ಹಸ್ತಲಾಘನ ನೀಡಲಿಲ್ಲ. ಬದಲಿಗೆ ಮೊದಲು ಧೋನಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ವೈಭವ್ ಅವರ ಈ ನಡೆಯನ್ನು ನೋಡಿದ ಧೋನಿ, ಯುವ ಆಟಗಾರನ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.

ಇದನ್ನೂ ಓದಿ:ಮಂತ್ರಾಲಯ ಹುಂಡಿ ಎಣಿಕೆ; ಕೇವಲ 20 ದಿನದಲ್ಲಿ ಹರಿದು ಬಂದ ಕೋಟಿ ಕೋಟಿ ಹಣ, ಚಿನ್ನ, ಬೆಳ್ಳಿ

publive-image

ಸದ್ಯ ಸೂರ್ಯವಂಶಿ ಅವರ ಸರಳತೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿವೆ. ಇನ್ನು ಕೊನೆ ಪಂದ್ಯದಲ್ಲಿ ರಾಜಸ್ಥಾನ್ ಟಾಸ್ ಗೆಲ್ಲುವುದರ ಜೊತೆ ಪಂದ್ಯವನ್ನು ವಶಕ್ಕೆ ಪಡೆಯಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ್ದ ಎಂ.ಎಸ್​ ಧೋನಿ ನೇತೃತ್ವದ ಚೆನ್ನೈ ನಿಗದಿತ 20 ಓವರ್​​ಗಳಲ್ಲಿ 8 ವಿಕೆಟ್​ಗೆ 188 ರನ್​ಗಳ ಗುರಿ ನೀಡಿತ್ತು.

ಚೆನ್ನೈ ತಂಡದಲ್ಲಿ ಯುವ ಬ್ಯಾಟರ್ ಆಯುಷ್​ ಅವರ 43 ರನ್​ ಬಿಟ್ಟರೇ ಉಳಿದ ಯಾವ ಬ್ಯಾಟ್ಸ್​ಮನ್​ ಕೂಡ ಈ ಗಡಿಯನ್ನು ದಾಟಲಿಲ್ಲ. ಇದರಿಂದ ಚೆನ್ನೈನ ಬ್ಯಾಟಿಂಗ್ ವೈಫಲ್ಯ ಗೊತ್ತಾಗುತ್ತದೆ. ಇನ್ನು ಈ ಗುರಿ ಬೆನ್ನಟ್ಟಿದ ರಾಜಸ್ಥಾನ ಒಳ್ಳೆಯ ಆರಂಭ ಪಡೆಯಿತು. ವೈಭವ್ ಸೂರ್ಯವಂಶಿಯ ಸಿಡಿಲಬ್ಬರದ ಬ್ಯಾಟಿಂಗ್​ನಿಂದ 17.4 ಓವರ್​ಗಳಲ್ಲಿ 188 ರನ್​ಗಳಿಸಿ ವಿಜಯ ಪತಾಕೆ ಹಾರಿಸಿತು. ರಾಜಸ್ಥಾನ ರಾಯಲ್ಸ್​ ಈ ಸೀಸನ್​ನಲ್ಲಿ ಯುವ ಆಟಗಾರ ಸೂರ್ಯವಂಶಿಯನ್ನು ಪರಿಚಯಿಸಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment