Advertisment

ಬಂಧನದ ಭೀತಿಯಲ್ಲಿ ವರ್ತೂರ್ ಪ್ರಕಾಶ್; ಕೊನೆಗೂ ವಿಚಾರಣೆಗೆ ಹಾಜರಾದ ಮಾಜಿ ಸಚಿವ

author-image
Ganesh
Updated On
ವರ್ತೂರು ಪ್ರಕಾಶ್​ ಆಪ್ತೆ ಪೊಲೀಸರ ಅತಿಥಿ.. ಕೋಟಿ, ಕೋಟಿ ಪಂಗನಾಮ? ಅಸಲಿಗೆ ಆಗಿದ್ದೇನು?
Advertisment
  • ಪ್ರಕಾಶ್ ಹೆಸರಲ್ಲಿ ಜ್ಯುವೆಲರಿ ಶಾಪ್​ಗೆ ಶ್ವೇತಾಗೌಡ ವಂಚನೆ ಕೇಸ್
  • ಮೂರು ಬಾರಿ ನೋಟಿಸ್ ಕೊಟ್ಟಿದ್ದ ಪುಲಿಕೇಶಿನಗರ ಪೊಲೀಸ್ರು
  • ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ವರ್ತೂರ್​​ ಪ್ರಕಾಶ್​

ಬೆಂಗಳೂರು: ವರ್ತೂರ್ ಪ್ರಕಾಶ್ ಹೆಸರಲ್ಲಿ ಜ್ಯುವೆಲರಿ ಶಾಪ್​ಗೆ ವಂಚಿಸಿದ ಕೇಸ್​ನಲ್ಲಿ ಆರೋಪಿ ಶ್ವೇತಾ ಗೌಡ ಬಂಧನ ಆಗಿದೆ. ಇದೀಗ ಬಂಧನದ ಭೀತಿಯಲ್ಲಿರುವ ವರ್ತೂರ್ ಪ್ರಕಾಶ್ ವಿಚಾರಣೆಗೆ ಹಾಜರಾಗಿದ್ದಾರೆ.

Advertisment

ವಿಚಾರಣೆಗೆ ಬರುವಂತೆ ಪುಲಿಕೇಶಿನಗರ ಪೊಲೀಸರು ಮೂರು ಬಾರಿ ನೋಟಿಸ್ ನೀಡಿದ್ದರು. ಇಂದು ಬೆಳಗ್ಗೆ ಪೊಲೀಸ್​ ವಿಚಾರಣೆಗೆ ಹಾಜರಾಗಿದ್ದಾರೆ. ಮತ್ತೊಂದು ಕಡೆ ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಿರಿಯ ಪುತ್ರ ನಿತಿನ್​ಗೂ ಪೊಲೀಸ್ ಅಧಿಕಾರಿಗಳು​ ನೋಟಿಸ್​ ಜಾರಿ ಮಾಡಿದ್ದಾರೆ.

ಬಂಧಿತ ಆರೋಪಿತೆ ಶ್ವೇತಗೌಡ ನೀಡಿರುವ ಹೇಳಿಕೆ ಆಧರಿಸಿ ನೋಟಿಸ್ ನೀಡಲಾಗಿದೆ. ಶ್ವೇತಾ ಕೇವಲ ವರ್ತೂರ್ ಪ್ರಕಾಶ್​ ಮಾತ್ರವಲ್ಲದೇ ಕಿರಿಯ ಪುತ್ರ ನಿತಿನ್ ಜೊತೆಯೂ ಸತತ ಸಂಪರ್ಕದಲ್ಲಿದ್ದಾಳೆ. ಹಾಗಾಗಿ ಪ್ರಕರಣದಲ್ಲಿ ನಿತಿನ್ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಸ್ನೇಹಿತೆ ಸೋಗಿನಲ್ಲಿ ಚಿನ್ನದ ಉದ್ಯಮಿಗೆ ವಂಚನೆ ಕೇಸ್; ಇಂದು ಪೊಲೀಸರ ಎದುರು ವರ್ತೂರು​ ಪ್ರಕಾಶ್ ಹಾಜರ್

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment