ತರಕಾರಿ ರೇಟ್ ಕೇಳಿ ಬೆವರುತ್ತಿರೋ ಬೆಂಗಳೂರಿನ ಜನರು
ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದೆ ಬಿಸಿ ಉಷ್ಣಾಂಶ
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ತರಕಾರಿ ದುಬಾರಿ
ಬೆಂಗಳೂರು: ರಣಬಿಸಿಲ ಝಳ ನೆಲವನ್ನ ಬಾಯಿ ತೆರಿಸಿದೆ. ಗಿಡ ಮರಗಳೆಲ್ಲ ಒಣಗಿ ಹೋಗ್ತಿದೆ. ರೈತ ಮಳೆಗಾಗಿ ಆಕಾಶದತ್ತ ಮುಖ ಮಾಡಿದ್ರೆ ಸಿಟಿಮಂದಿ ಸಪ್ಪೆ ಮೊರೆ ಹಾಕಿದ್ದಾರೆ. ದುಪ್ಪಟ್ಟಾಗಿರೋ ತರಕಾರಿ ರೇಟ್ ಕೇಳಿ ಸಿಟಿ ಮಂದಿ ಬೆವರಿಳಿಸ್ತಿದ್ದಾರೆ. ಗಗನಕ್ಕೇರಿರೋ ತರಕಾರಿಗಿಂತ ಕೋಳಿ ಮಾಂಸದ ರೇಟು ಎಷ್ಟೋ ವಾಸಿ ಅನ್ನುವಂತಾಗಿದೆ.
ಗಗನಕ್ಕೇರಿರೋ ತರಕಾರಿ ದರ ಕೇಳಿ ಬೆವರುತ್ತಿರೋ ಗ್ರಾಹಕರು
ಬಿಸಿಲ ಬೇಗೆಗೆ ಜನ, ಜಾನುವಾರುಗಳು ತತ್ತರಿಸಿದೆ. ಜನರ ಗಂಟಲು ಒಣಗುತ್ತಿದೆ. ಮಳೆರಾಯನ ದರ್ಶನಕ್ಕಾಗಿ ಎದುರು ನೋಡ್ತಿರೋ ಸಿಟಿ ಮಂದಿಗೆ ಇದೀಗ ಶಾಕ್ ಎದುರಾಗಿದೆ. ಮುಂಗಾರು ಮಳೆಯ ಕೊರತೆಯಿಂದ ತರಕಾರಿ ದರ ಹೆಚ್ಚಾಗಿದ್ದು, ಗ್ರಾಹಕರು ಕಂಗಲಾಗಿದ್ದಾರೆ.1 ಕೆಜಿ ತಗೋಬೇಕೆಂದು ಮಾರ್ಕೆಟ್ಗೆ ಬಂದವರು ಇದೀಗ ಕಾಲು ಕೆಜಿ ತರಕಾರಿ ಖರೀದಿಸುವಂತಾಗಿದೆ.
ಇದನ್ನೂ ಓದಿ: 6 ವರ್ಷದ ಬಾಲಕಿ ಮೇಲೆ ನಾಯಿ ಡೆಡ್ಲಿ ಅಟ್ಯಾಕ್; ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ
ಧಗಧಗನೆ ಉರಿಯೋ ಸುಡೋ ಬಿಸಿಲಿಗೆ ತರಕಾರಿಗಳ ಫಸಲು ಇಳಿಕೆ ಕಂಡು ಎಲೆಗಳೆಲ್ಲಾ ಒಣಗಿ ಉದುರುತ್ತಿದೆ. ಬೇಡಿಕೆಗಿಂತ ಪೂರೈಕೆ ಕುಸಿತದ ಹಿನ್ನೆಲೆ ಬೆಲೆ ಏರಿಕೆ ಕಾಣುತ್ತಿದ್ದು, ಗ್ರಾಹಕರ ಕೈ ಸುಡ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದಲ್ಲಿ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆ ಕಂಡುಬಂದಿದ್ದು, ಬೀನ್ಸ್ ದರ 200ರೂ. ಗಡಿ ತಲುಪಿದೆ.
ಗಗನಕ್ಕೇರಿದ ತರಕಾರಿಗಳ ದರ
ಇನ್ನು, 2023ರಲ್ಲಿ ಮಳೆಯಿಲ್ಲದೆ ಬಹುತೇಕ ಕಡೆ ಕೃಷಿ ಬೆಳೆ ಹಾನಿಗೊಳಗಾಗಿತ್ತು. ಆದ್ರೆ ಈ ವರ್ಷ ಕಂಪ್ಲೀಟ್ ಉಲ್ಟಾ. ತರಕಾರಿ ಬೆಳೆಗಳಿಗೆ ನೀರಿನ ಅಭಾವ ಎದುರಾಗಿದೆ. ಬಿಸಿಲಿನ ಹೊಡೆತದಿಂದ ಫಸಲು ಕಡಿಮೆಯಾಗ್ತಿದ್ದು, ಬೆಲೆ ಏರಿಕೆಯಾಗಲು ಕಾರಣವಾಗಿದೆ. ಈ ರೀತಿ ರೇಟ್ ಹೆಚ್ಚಾದ್ರೆ ನಾವೆಂಗೆ ತರಕಾರಿ ತಿನ್ನೋದೆಂದು ಗ್ರಾಹಕರು ಅಸಮಾಧಾನ ಹೊರ ಹಾಕ್ತಿದ್ದಾರೆ. ಒಟ್ಟಿನಲ್ಲಿ ಬೇಸಿಗೆಯಲ್ಲಿ ಹೆಚ್ಚು ಬಳಸುವ ಸೌತೆಕಾಯಿ, ಕ್ಯಾರೆಟ್, ನಿಂಬೆ ಹಣ್ಣುಗಳ ಬೆಲೆ ಕೂಡ ಹೆಚ್ಚಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳಾಂತ್ಯದಲ್ಲಿ ದರದಲ್ಲಿ ಏರಿಕೆ ಉಂಟಾಗಿದೆ. ಮಳೆರಾಯನ ಎಂಟ್ರಿಯಾಗದೇ ಬಿಸಿ ವಾತಾವರಣ ಹೀಗೆ ಮುಂದುವರಿದ್ರೆ ಮತ್ತಷ್ಟು ತರಕಾರಿ ದುಬಾರಿಯಾಗೋದ್ರಲ್ಲಿ ಡೌಟೇ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತರಕಾರಿ ರೇಟ್ ಕೇಳಿ ಬೆವರುತ್ತಿರೋ ಬೆಂಗಳೂರಿನ ಜನರು
ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದೆ ಬಿಸಿ ಉಷ್ಣಾಂಶ
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ತರಕಾರಿ ದುಬಾರಿ
ಬೆಂಗಳೂರು: ರಣಬಿಸಿಲ ಝಳ ನೆಲವನ್ನ ಬಾಯಿ ತೆರಿಸಿದೆ. ಗಿಡ ಮರಗಳೆಲ್ಲ ಒಣಗಿ ಹೋಗ್ತಿದೆ. ರೈತ ಮಳೆಗಾಗಿ ಆಕಾಶದತ್ತ ಮುಖ ಮಾಡಿದ್ರೆ ಸಿಟಿಮಂದಿ ಸಪ್ಪೆ ಮೊರೆ ಹಾಕಿದ್ದಾರೆ. ದುಪ್ಪಟ್ಟಾಗಿರೋ ತರಕಾರಿ ರೇಟ್ ಕೇಳಿ ಸಿಟಿ ಮಂದಿ ಬೆವರಿಳಿಸ್ತಿದ್ದಾರೆ. ಗಗನಕ್ಕೇರಿರೋ ತರಕಾರಿಗಿಂತ ಕೋಳಿ ಮಾಂಸದ ರೇಟು ಎಷ್ಟೋ ವಾಸಿ ಅನ್ನುವಂತಾಗಿದೆ.
ಗಗನಕ್ಕೇರಿರೋ ತರಕಾರಿ ದರ ಕೇಳಿ ಬೆವರುತ್ತಿರೋ ಗ್ರಾಹಕರು
ಬಿಸಿಲ ಬೇಗೆಗೆ ಜನ, ಜಾನುವಾರುಗಳು ತತ್ತರಿಸಿದೆ. ಜನರ ಗಂಟಲು ಒಣಗುತ್ತಿದೆ. ಮಳೆರಾಯನ ದರ್ಶನಕ್ಕಾಗಿ ಎದುರು ನೋಡ್ತಿರೋ ಸಿಟಿ ಮಂದಿಗೆ ಇದೀಗ ಶಾಕ್ ಎದುರಾಗಿದೆ. ಮುಂಗಾರು ಮಳೆಯ ಕೊರತೆಯಿಂದ ತರಕಾರಿ ದರ ಹೆಚ್ಚಾಗಿದ್ದು, ಗ್ರಾಹಕರು ಕಂಗಲಾಗಿದ್ದಾರೆ.1 ಕೆಜಿ ತಗೋಬೇಕೆಂದು ಮಾರ್ಕೆಟ್ಗೆ ಬಂದವರು ಇದೀಗ ಕಾಲು ಕೆಜಿ ತರಕಾರಿ ಖರೀದಿಸುವಂತಾಗಿದೆ.
ಇದನ್ನೂ ಓದಿ: 6 ವರ್ಷದ ಬಾಲಕಿ ಮೇಲೆ ನಾಯಿ ಡೆಡ್ಲಿ ಅಟ್ಯಾಕ್; ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ
ಧಗಧಗನೆ ಉರಿಯೋ ಸುಡೋ ಬಿಸಿಲಿಗೆ ತರಕಾರಿಗಳ ಫಸಲು ಇಳಿಕೆ ಕಂಡು ಎಲೆಗಳೆಲ್ಲಾ ಒಣಗಿ ಉದುರುತ್ತಿದೆ. ಬೇಡಿಕೆಗಿಂತ ಪೂರೈಕೆ ಕುಸಿತದ ಹಿನ್ನೆಲೆ ಬೆಲೆ ಏರಿಕೆ ಕಾಣುತ್ತಿದ್ದು, ಗ್ರಾಹಕರ ಕೈ ಸುಡ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದಲ್ಲಿ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆ ಕಂಡುಬಂದಿದ್ದು, ಬೀನ್ಸ್ ದರ 200ರೂ. ಗಡಿ ತಲುಪಿದೆ.
ಗಗನಕ್ಕೇರಿದ ತರಕಾರಿಗಳ ದರ
ಇನ್ನು, 2023ರಲ್ಲಿ ಮಳೆಯಿಲ್ಲದೆ ಬಹುತೇಕ ಕಡೆ ಕೃಷಿ ಬೆಳೆ ಹಾನಿಗೊಳಗಾಗಿತ್ತು. ಆದ್ರೆ ಈ ವರ್ಷ ಕಂಪ್ಲೀಟ್ ಉಲ್ಟಾ. ತರಕಾರಿ ಬೆಳೆಗಳಿಗೆ ನೀರಿನ ಅಭಾವ ಎದುರಾಗಿದೆ. ಬಿಸಿಲಿನ ಹೊಡೆತದಿಂದ ಫಸಲು ಕಡಿಮೆಯಾಗ್ತಿದ್ದು, ಬೆಲೆ ಏರಿಕೆಯಾಗಲು ಕಾರಣವಾಗಿದೆ. ಈ ರೀತಿ ರೇಟ್ ಹೆಚ್ಚಾದ್ರೆ ನಾವೆಂಗೆ ತರಕಾರಿ ತಿನ್ನೋದೆಂದು ಗ್ರಾಹಕರು ಅಸಮಾಧಾನ ಹೊರ ಹಾಕ್ತಿದ್ದಾರೆ. ಒಟ್ಟಿನಲ್ಲಿ ಬೇಸಿಗೆಯಲ್ಲಿ ಹೆಚ್ಚು ಬಳಸುವ ಸೌತೆಕಾಯಿ, ಕ್ಯಾರೆಟ್, ನಿಂಬೆ ಹಣ್ಣುಗಳ ಬೆಲೆ ಕೂಡ ಹೆಚ್ಚಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳಾಂತ್ಯದಲ್ಲಿ ದರದಲ್ಲಿ ಏರಿಕೆ ಉಂಟಾಗಿದೆ. ಮಳೆರಾಯನ ಎಂಟ್ರಿಯಾಗದೇ ಬಿಸಿ ವಾತಾವರಣ ಹೀಗೆ ಮುಂದುವರಿದ್ರೆ ಮತ್ತಷ್ಟು ತರಕಾರಿ ದುಬಾರಿಯಾಗೋದ್ರಲ್ಲಿ ಡೌಟೇ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ