/newsfirstlive-kannada/media/post_attachments/wp-content/uploads/2024/11/VENKATESH_IYER.jpg)
ಐಪಿಎಲ್ ಸೀಸನ್-18ಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಕಪ್ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಆರ್ಸಿಬಿ, ಈಗಾಗಲೇ ಅಭ್ಯಾಸ ಶಿಬಿರವನ್ನು ಆರಂಭಿಸಿದೆ. ಕೆಲ ತಂಡಗಳು ನಾಯಕನ ನೇಮಕದಲ್ಲಿ ಬ್ಯುಸಿಯಾಗಿವೆ. ಯಾರ್ ಆಗ್ತಾರೆ ಕ್ಯಾಪ್ಟನ್ ಎಂಬ ಬಿಸಿಬಿಸಿ ಚರ್ಚೆಗಳೂ ನಡೆಯುತ್ತಿವೆ.
ಹಾಲಿ ಚಾಂಪಿಯನ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕ್ಯಾಪ್ಟನ್ ವಿಚಾರದಲ್ಲಿ ಮಾತ್ರ, ಈತನೇ ಕ್ಯಾಪ್ಟನ್ ಆಗ್ತಾನೆ ಅನ್ನೋ ಡಿಸಿಷನ್ಗೆ ಬರಕ್ಕೆ ಹಾಕ್ತಿರಲಿಲ್ಲ. ಆದ್ರೀಗ ಕೆಕೆಆರ್ ತಂಡದ ಕ್ಯಾಪ್ಟನ್ಸಿ ಬ್ಯಾಟಲ್ಗೂ ಕ್ಲೈಮ್ಯಾಕ್ಸ್ ತಲುಪಿದೆ.
ಕೆಕೆಆರ್ ಕ್ಯಾಪ್ಟನ್ ಯಾರ್ ಆಗ್ತಾರೆ? ಮೆಗಾ ಹರಾಜು ಮುಗಿದಿದ್ದೆ ತಡ ಇಂಥದೊಂದು ಪ್ರಶ್ನೆ ಕೆಕೆಆರ್ ಪಾಳಯದಲ್ಲಿ ಎದುರಾಗಿತ್ತು. ಇದಕ್ಕೆ ಫುಲ್ ಸ್ಟಾಪ್ ಹಾಕುವ ಸಮಯ ಬಂದಂತಿದೆ. ಕ್ಯಾಪ್ಟನ್ಸಿ ಬ್ಯಾಟಲ್ನಲ್ಲಿ ವೆಂಕಟೇಶ್ ಅಯ್ಯರ್ ಗೆದ್ದಂತಿದೆ. ಈ ಬಗ್ಗೆ ಸ್ಟಾರ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಸ್ಫೋಟಕ ಸುಳಿವು ನೀಡಿದ್ದಾರೆ.
ಏನಂದ್ರು ಅಯ್ಯರ್?
ಕೆಕೆಆರ್ ತಂಡ ನನ್ನ ನಂಬಿಕೆ ಇಟ್ಟು ಖರೀದಿ ಮಾಡಿದೆ. ಅವರು ನನ್ನ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳೋದು ನನ್ನ ಜವಾಬ್ದಾರಿ. ನನಗೆ ಕ್ಯಾಪ್ಟನ್ಸಿ ಕೊಟ್ಟರೆ ಖಂಡಿತಾ ಮಾಡುತ್ತೇನೆ. ಅದು ನನ್ನ ಅದೃಷ್ಟ ಎಂದರು ವೆಂಕಟೇಶ್ ಅಯ್ಯರ್.
ಮೆಗಾ ಹರಾಜು ಮುಗಿದಿದ್ದೆ ತಡ, ಯಾರ್ ಯಾವ ತಂಡದ ನಾಯಕರಾಗ್ತಾರೆ ಅನ್ನೋ ಚಿತ್ರಣ ಸಿಕ್ಕಾಗಿತ್ತು. ಕ್ರಿಕೆಟ್ ವಿಶ್ಲೇಷಕರು, ಪಂಡಿತರು ಸಹಿತ ಪ್ರತಿ ತಂಡದ ಭವಿಷ್ಯ ನುಡಿದಿದ್ದರು. ಕೊಲ್ಕತ್ತಾ ತಂಡದ ನಾಯಕತ್ವದ ವಿಚಾರದಲ್ಲಿ ಕ್ಲಾರಿಟಿಯೇ ಇರಲಿಲ್ಲ. ಇದಕ್ಕೆ ಕಾರಣ 23.75 ಕೋಟಿಯ ಒಡೆಯ ವೆಂಟಕೇಶ್ ಅಯ್ಯರ್ಗೆ ನಾಯಕತ್ವದ ಸಿಗಬಹುದು ಅನ್ನೋ ಅಂದಾಜು ಒಂದಾದ್ರೆ, ಅನ್ಸೋಲ್ಡ್ ಟು ಸೋಲ್ಡ್ ಆಗಿದ್ದ ಅಜಿಂಕ್ಯಾ ರಹಾನೆಗೆ ನಾಯಕತ್ವ ಯಾಕೆ ನೀಡ್ತಾರೆ ಅನ್ನೋ ಲೆಕ್ಕಾಚಾರ. ರಹಾನೆ ಲೆಕ್ಕಾಚಾರಗಳೆಲ್ಲ ಸುಳ್ಳಾಗಿದ್ದು, ಅಯ್ಯರ್ಗೆ ಕ್ಯಾಪ್ಟನ್ಸಿ ಕನ್ಫರ್ಮ್ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್