newsfirstkannada.com

‘ಹೋದ ವಾರ ಒಂದಷ್ಟು ವಿಷಯ ಹೇಳಿದ..’ ದ್ವಾರಕೀಶ್​​ ನೆನೆದು ಹಿರಿಯ ನಟ ಶ್ರೀನಾಥ್ ಕಂಬನಿ

Share :

Published April 16, 2024 at 3:33pm

    500 ರೂಪಾಯಿಯಿಂದ 100 ಕೋಟಿವರೆಗೂ ಕಂಡಿದ್ದಾನೆ ದ್ವಾರಕೀಶ್​

    ಸ್ವಲ್ಪ ಹೊತ್ತು ಮಲಗ್ತೇನೆ ಅಂತ ಹೇಳಿ ವಿದಾಯ ಹೇಳಿ ಹೋದ

    ದ್ವಾರಕೀಶ್ ಜೊತೆಗೆ ಇದ್ರೆ ಧೈರ್ಯ ಬರುತ್ತಿತ್ತು ಎಂದ ಶ್ರೀನಾಥ್​

ಕನ್ನಡದ ಹಿರಿಯ ನಟ ದ್ವಾರಕೀಶ್​​ ಇಂದು ಬೆಳಗ್ಗೆ ಕೊನೆರಯುಸಿರೆಳೆದಿದ್ದಾರೆ. 81ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇವರ ಸಾವಿನ ಸುದ್ದಿ ತಿಳಿದು ಹಿರಿಯ ನಟ ಶ್ರೀನಾಥ್ ಅವರ ಮನೆಗೆ ಬಂದಿದ್ದು, ಬಳಿಕ ಪಾರ್ಥಿವ ಶರೀರ ದರ್ಶನ ಪಡೆದಿದ್ದಾರೆ.

ನಾನು ಬಿದ್ದಾಗ ಸಾಕಷ್ಟು ಧೈರ್ಯ ತುಂಬಿದ್ದ

ದ್ವಾರಕೀಶ್​​ ಅವರ ಪಾರ್ಥಿವ ಶರೀರದ ದರ್ಶನ ಪಡೆದ ಬಳಿಕ ಶ್ರೀನಾಥ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ‘ಅವನು ಬದುಕಿನಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಏಳು ಬೀಳು ಕಂಡವನು. ನಾನು ಬಿದ್ದಾಗ ಸಾಕಷ್ಟು ಧೈರ್ಯ ತುಂಬಿದ್ದ. 500 ರೂಪಾಯಿಯಿಂದ 100 ಕೋಟಿವರೆಗೂ ಕಂಡಿದ್ದಾನೆ. ಪ್ರತಿಯೊಬ್ಬರಿಗೂ ಅವನು ನಡೆದು ಬಂದ ದಾರಿ ಆದರ್ಶವಾಗಬೇಕು. ಪ್ರತಿಯೊಂದನ್ನೂ ಅನುಭವಿಸಿದ್ದಾನೆ. ಅವನ ಜೊತೆಗೆ ಬೆಳೆದು ಬಂದವರು ನಾವು’ ಎಂದು ಹೇಳಿದ್ದಾರೆ.

ಮಲಗ್ತೇನೆ ಅಂತ ಹೇಳಿ ವಿದಾಯ ಹೇಳಿ

ಬಳಿಕ ಮಾತು ಮುಂದುವರೆಸಿದ ಅವರು, ‘ಹೋದ ವಾರ ಮಾತನಾಡುವಾಗಲು ಒಂದಷ್ಟು ವಿಷಯ ಹೇಳಿದ. ಕಲಿಯೋಕೆ ವಯಸ್ಸಿಲ್ಲ ಅನ್ನೋದನ್ನ ತೋರಿಸಿಕೊಟ್ಟ. ನಮ್ಮ ಚಿತ್ರರಂಗ ಯಾವ ಮಟ್ಟದಲ್ಲಿ ಬೆಳೆಯಬೇಕು ಅನ್ನೋದು ಅವನ ಕನಸಾಗಿತ್ತು. ಆ ಕನಸು ನನಸಾಗೋ ಬಗ್ಗೆ ಮಾತಾಡ್ತಿದ್ದ. ನಿನ್ನೆವರೆಗೂ ಆರೋಗ್ಯವಾಗಿದ್ದ, ಮನಸ್ಸಲ್ಲಿ ಇರಬಾರದು ಅಂತ ಬಂತೆನೋ. ಸ್ವಲ್ಪ ಹೊತ್ತು ಮಲಗ್ತೇನೆ ಅಂತ ಹೇಳಿ ವಿದಾಯ ಹೇಳಿ ಹೋದ. ಅವನು ಮಾತಾಡಿದ್ದು, ಕುಣಿದಿದ್ದು, ಅತ್ತಿದ್ದು, ನಕ್ಕಿದ್ದು ಎಲ್ಲಾ ಫ್ಲ್ಯಾಶ್ ಬ್ಯಾಕ್ ತಗೊಂಡು ಗುಡ್ ಬೈ ಹೇಳಿದ’ ಎಂದು ಹಿರಿಯ ನಟ ಶ್ರೀನಾಥ್​​ ಹೇಳಿದ್ದಾರೆ.

ಇದನ್ನೂ ಓದಿ: ಅದೇ ತಿಂಗಳು, ಅದೇ ದಿನಾಂಕ.. ಪತ್ನಿ ಸಾವನ್ನಪ್ಪಿದ ದಿನವೇ ದ್ವಾರಕೀಶ್​​ ನಿಧನ

ಬದುಕನ್ನ ಧೈರ್ಯವಾಗಿ ನಡೆಸೋದನ್ನ ಹೇಳಿಕೊಟ್ಟ

ದ್ವಾರಕೀಶ್ ಜೊತೆಗೆ ಇದ್ರೆ ಧೈರ್ಯ ಬರುತ್ತಿತ್ತು, ಬದುಕನ್ನ ಧೈರ್ಯವಾಗಿ ನಡೆಸೋದನ್ನ ಹೇಳಿಕೊಟ್ಟ. ಅವನ ಮಾತುಗಳನ್ನು ಈಗಿನ ಹುಡುಗರು ಅಳವಡಿಸಿಕೊಂಡು ಅವನ ಹಾಗೇ ಬೆಳೆಯಲಿ. 3 ವರ್ಷ ಕೆಳಗೆ ದ್ವಾರಕೀಶ್ ಪತ್ನಿ ಅಂಬುಜಮ್ಮ ಇದೇ ದಿನ ಪ್ರಾಣ ಬಿಟ್ರು ಎಂದು ಶ್ರೀನಾಥ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಹೋದ ವಾರ ಒಂದಷ್ಟು ವಿಷಯ ಹೇಳಿದ..’ ದ್ವಾರಕೀಶ್​​ ನೆನೆದು ಹಿರಿಯ ನಟ ಶ್ರೀನಾಥ್ ಕಂಬನಿ

https://newsfirstlive.com/wp-content/uploads/2024/04/Shriinath.jpg

    500 ರೂಪಾಯಿಯಿಂದ 100 ಕೋಟಿವರೆಗೂ ಕಂಡಿದ್ದಾನೆ ದ್ವಾರಕೀಶ್​

    ಸ್ವಲ್ಪ ಹೊತ್ತು ಮಲಗ್ತೇನೆ ಅಂತ ಹೇಳಿ ವಿದಾಯ ಹೇಳಿ ಹೋದ

    ದ್ವಾರಕೀಶ್ ಜೊತೆಗೆ ಇದ್ರೆ ಧೈರ್ಯ ಬರುತ್ತಿತ್ತು ಎಂದ ಶ್ರೀನಾಥ್​

ಕನ್ನಡದ ಹಿರಿಯ ನಟ ದ್ವಾರಕೀಶ್​​ ಇಂದು ಬೆಳಗ್ಗೆ ಕೊನೆರಯುಸಿರೆಳೆದಿದ್ದಾರೆ. 81ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇವರ ಸಾವಿನ ಸುದ್ದಿ ತಿಳಿದು ಹಿರಿಯ ನಟ ಶ್ರೀನಾಥ್ ಅವರ ಮನೆಗೆ ಬಂದಿದ್ದು, ಬಳಿಕ ಪಾರ್ಥಿವ ಶರೀರ ದರ್ಶನ ಪಡೆದಿದ್ದಾರೆ.

ನಾನು ಬಿದ್ದಾಗ ಸಾಕಷ್ಟು ಧೈರ್ಯ ತುಂಬಿದ್ದ

ದ್ವಾರಕೀಶ್​​ ಅವರ ಪಾರ್ಥಿವ ಶರೀರದ ದರ್ಶನ ಪಡೆದ ಬಳಿಕ ಶ್ರೀನಾಥ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ‘ಅವನು ಬದುಕಿನಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಏಳು ಬೀಳು ಕಂಡವನು. ನಾನು ಬಿದ್ದಾಗ ಸಾಕಷ್ಟು ಧೈರ್ಯ ತುಂಬಿದ್ದ. 500 ರೂಪಾಯಿಯಿಂದ 100 ಕೋಟಿವರೆಗೂ ಕಂಡಿದ್ದಾನೆ. ಪ್ರತಿಯೊಬ್ಬರಿಗೂ ಅವನು ನಡೆದು ಬಂದ ದಾರಿ ಆದರ್ಶವಾಗಬೇಕು. ಪ್ರತಿಯೊಂದನ್ನೂ ಅನುಭವಿಸಿದ್ದಾನೆ. ಅವನ ಜೊತೆಗೆ ಬೆಳೆದು ಬಂದವರು ನಾವು’ ಎಂದು ಹೇಳಿದ್ದಾರೆ.

ಮಲಗ್ತೇನೆ ಅಂತ ಹೇಳಿ ವಿದಾಯ ಹೇಳಿ

ಬಳಿಕ ಮಾತು ಮುಂದುವರೆಸಿದ ಅವರು, ‘ಹೋದ ವಾರ ಮಾತನಾಡುವಾಗಲು ಒಂದಷ್ಟು ವಿಷಯ ಹೇಳಿದ. ಕಲಿಯೋಕೆ ವಯಸ್ಸಿಲ್ಲ ಅನ್ನೋದನ್ನ ತೋರಿಸಿಕೊಟ್ಟ. ನಮ್ಮ ಚಿತ್ರರಂಗ ಯಾವ ಮಟ್ಟದಲ್ಲಿ ಬೆಳೆಯಬೇಕು ಅನ್ನೋದು ಅವನ ಕನಸಾಗಿತ್ತು. ಆ ಕನಸು ನನಸಾಗೋ ಬಗ್ಗೆ ಮಾತಾಡ್ತಿದ್ದ. ನಿನ್ನೆವರೆಗೂ ಆರೋಗ್ಯವಾಗಿದ್ದ, ಮನಸ್ಸಲ್ಲಿ ಇರಬಾರದು ಅಂತ ಬಂತೆನೋ. ಸ್ವಲ್ಪ ಹೊತ್ತು ಮಲಗ್ತೇನೆ ಅಂತ ಹೇಳಿ ವಿದಾಯ ಹೇಳಿ ಹೋದ. ಅವನು ಮಾತಾಡಿದ್ದು, ಕುಣಿದಿದ್ದು, ಅತ್ತಿದ್ದು, ನಕ್ಕಿದ್ದು ಎಲ್ಲಾ ಫ್ಲ್ಯಾಶ್ ಬ್ಯಾಕ್ ತಗೊಂಡು ಗುಡ್ ಬೈ ಹೇಳಿದ’ ಎಂದು ಹಿರಿಯ ನಟ ಶ್ರೀನಾಥ್​​ ಹೇಳಿದ್ದಾರೆ.

ಇದನ್ನೂ ಓದಿ: ಅದೇ ತಿಂಗಳು, ಅದೇ ದಿನಾಂಕ.. ಪತ್ನಿ ಸಾವನ್ನಪ್ಪಿದ ದಿನವೇ ದ್ವಾರಕೀಶ್​​ ನಿಧನ

ಬದುಕನ್ನ ಧೈರ್ಯವಾಗಿ ನಡೆಸೋದನ್ನ ಹೇಳಿಕೊಟ್ಟ

ದ್ವಾರಕೀಶ್ ಜೊತೆಗೆ ಇದ್ರೆ ಧೈರ್ಯ ಬರುತ್ತಿತ್ತು, ಬದುಕನ್ನ ಧೈರ್ಯವಾಗಿ ನಡೆಸೋದನ್ನ ಹೇಳಿಕೊಟ್ಟ. ಅವನ ಮಾತುಗಳನ್ನು ಈಗಿನ ಹುಡುಗರು ಅಳವಡಿಸಿಕೊಂಡು ಅವನ ಹಾಗೇ ಬೆಳೆಯಲಿ. 3 ವರ್ಷ ಕೆಳಗೆ ದ್ವಾರಕೀಶ್ ಪತ್ನಿ ಅಂಬುಜಮ್ಮ ಇದೇ ದಿನ ಪ್ರಾಣ ಬಿಟ್ರು ಎಂದು ಶ್ರೀನಾಥ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More